<p><strong>ಲಾಹೋರ್ (ಪಿಟಿಐ):</strong> ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆಯಲ್ಲಿ ಲೋಪ ಗುರುತಿಸಿರುವ ಅವರ ವಕೀಲ ಅವೈಸ್ ಶೇಖ್, ಪಾಕ್ ಸರ್ಕಾರ ಸರಬ್ಜಿತ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.<br /> <br /> 1990ರ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮರಣ ದಂಡನೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆ ಹಾಗೂ ಅವರ ಕ್ಷಮಾದಾನ ಅರ್ಜಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ವೇಳೆ ನ್ಯಾಯಾಲಯಗಳಿಂದ ಅನೇಕ ಲೋಪಗಳು ಆಗಿದ್ದವು ಎಂದು ಶೇಖ್ ಹೇಳಿದ್ದಾರೆ.<br /> <br /> `ಸೂಕ್ತ ಪುರಾವೆಗಳು ಲಭ್ಯವಾಗದಿದ್ದಾಗ ಆರೋಪಿಗಳನ್ನು ನಿರಪರಾಧಿ ಎಂದು ನ್ಯಾಯಾಲಯಗಳು ಬಹುತೇಕ ಸಂದರ್ಭಗಳಲ್ಲಿ ಘೋಷಿಸುತ್ತವೆ. ಆದರೆ ಸರಬ್ಜಿತ್ ಪ್ರಕರಣದ ವಿಚಾರಣೆಯಲ್ಲಿ ಲೋಪವಾಗಿರುವುದರಿಂದ ಅವರು ಈ ಅವಕಾಶದಿಂದ ವಂಚಿತರಾಗಬೇಕಾಯಿತು~ ಎಂದು ಶೇಖ್ ತಿಳಿಸಿದ್ದಾರೆ.<br /> <br /> `ಮೊದಲನೆಯದಾಗಿ ಇದು ತಪ್ಪಾಗಿ ಗುರುತಿಸಿದ ಪ್ರಕರಣವಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಹೊಣೆಯಾದ ಮಂಜಿತ್ ಸಿಂಗ್ ಎಂಬಾತನ ಬದಲು ಗುಪ್ತಚರ ಸಂಸ್ಥೆಗಳು ಸರಬ್ಜಿತ್ ಸಿಂಗ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು~ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.<br /> <br /> `ಹೆಸರಿನಿಂದ ಏನೂ ವ್ಯತ್ಯಾಸವಾಗದು. ಸರಬ್ಜಿತ್ ತಪ್ಪೊಪ್ಪಿಕೊಂಡಿರುವುದು ಎಲ್ಲವನ್ನೂ ಹೇಳುತ್ತದೆ~ ಎಂದು ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸರಬ್ಜಿತ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಲಾಹೋರ್ ಹೈಕೋರ್ಟ್ ಆದೇಶ ನೀಡಿತ್ತು.</p>.<p>ಆದರೆ ಸರಬ್ಜಿತ್ ಕೋರ್ಟ್ ಮುಂದಾಗಲೀ, ತನಿಖಾ ಸಂಸ್ಥೆಯ ಮುಂದಾಗಲೀ ತಪ್ಪೊಪ್ಪಿಕೊಂಡಿರಲಿಲ್ಲ~ ಎಂದ ಅವರು ಇದಕ್ಕೆ ಸಮರ್ಥನೆ ನೀಡುವಂತೆ ವಿಶೇಷ ನ್ಯಾಯಾಧೀಶರು ದಾಖಲಿಸಿಕೊಂಡಿದ್ದ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ.<br /> <br /> `ಟಿ.ವಿ. ಕ್ಯಾಮೆರಾ ಎದುರು ಸರಬ್ಜಿತ್ ಸಿಂಗ್ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದು, ಇದಕ್ಕೆ ಕಾನೂನು ಮಾನ್ಯತೆ ಇಲ್ಲ~ ಎಂದ ಶೇಖ್, ನ್ಯಾಯಾಧೀಶರು ಸರಬ್ಜಿತ್ ಅವರನ್ನು ಪ್ರಶ್ನೆಗೊಳಪಡಿಸಿದ ವಿವರಗಳನ್ನು ನೀಡುತ್ತಾ, ಪ್ರಾಸಿಕ್ಯೂಶನ್ ತಮ್ಮ ವಿರುದ್ಧ ಮಾಡಿದ ಆರೋಪವನ್ನು ಸರಬ್ಜಿತ್ ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದಿದ್ದಾರೆ.<br /> <br /> ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಸರಬ್ಜಿತ್ ಅವರನ್ನು ಬಿಡುಗಡೆ ಮಾಡುವಂತೆ ಪಾಕ್ ಅಧ್ಯಕ್ಷರಿಗೆ ಶೇಖ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪಾಕ್ ಸರ್ಕಾರವು ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ ಕೆಲವೇ ತಾಸುಗಳಲ್ಲೇ ತಾನು ಬಿಡುಗಡೆ ಮಾಡುತ್ತಿರುವುದು ಸರಬ್ಜಿತ್ ಅಲ್ಲ; ಸುರ್ಜಿತ್ ಸಿಂಗ್ ಎಂದು ಹೇಳಿ ವಿವಾದ ಎಬ್ಬಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್ (ಪಿಟಿಐ):</strong> ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆಯಲ್ಲಿ ಲೋಪ ಗುರುತಿಸಿರುವ ಅವರ ವಕೀಲ ಅವೈಸ್ ಶೇಖ್, ಪಾಕ್ ಸರ್ಕಾರ ಸರಬ್ಜಿತ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.<br /> <br /> 1990ರ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮರಣ ದಂಡನೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆ ಹಾಗೂ ಅವರ ಕ್ಷಮಾದಾನ ಅರ್ಜಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ವೇಳೆ ನ್ಯಾಯಾಲಯಗಳಿಂದ ಅನೇಕ ಲೋಪಗಳು ಆಗಿದ್ದವು ಎಂದು ಶೇಖ್ ಹೇಳಿದ್ದಾರೆ.<br /> <br /> `ಸೂಕ್ತ ಪುರಾವೆಗಳು ಲಭ್ಯವಾಗದಿದ್ದಾಗ ಆರೋಪಿಗಳನ್ನು ನಿರಪರಾಧಿ ಎಂದು ನ್ಯಾಯಾಲಯಗಳು ಬಹುತೇಕ ಸಂದರ್ಭಗಳಲ್ಲಿ ಘೋಷಿಸುತ್ತವೆ. ಆದರೆ ಸರಬ್ಜಿತ್ ಪ್ರಕರಣದ ವಿಚಾರಣೆಯಲ್ಲಿ ಲೋಪವಾಗಿರುವುದರಿಂದ ಅವರು ಈ ಅವಕಾಶದಿಂದ ವಂಚಿತರಾಗಬೇಕಾಯಿತು~ ಎಂದು ಶೇಖ್ ತಿಳಿಸಿದ್ದಾರೆ.<br /> <br /> `ಮೊದಲನೆಯದಾಗಿ ಇದು ತಪ್ಪಾಗಿ ಗುರುತಿಸಿದ ಪ್ರಕರಣವಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಹೊಣೆಯಾದ ಮಂಜಿತ್ ಸಿಂಗ್ ಎಂಬಾತನ ಬದಲು ಗುಪ್ತಚರ ಸಂಸ್ಥೆಗಳು ಸರಬ್ಜಿತ್ ಸಿಂಗ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು~ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.<br /> <br /> `ಹೆಸರಿನಿಂದ ಏನೂ ವ್ಯತ್ಯಾಸವಾಗದು. ಸರಬ್ಜಿತ್ ತಪ್ಪೊಪ್ಪಿಕೊಂಡಿರುವುದು ಎಲ್ಲವನ್ನೂ ಹೇಳುತ್ತದೆ~ ಎಂದು ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸರಬ್ಜಿತ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಲಾಹೋರ್ ಹೈಕೋರ್ಟ್ ಆದೇಶ ನೀಡಿತ್ತು.</p>.<p>ಆದರೆ ಸರಬ್ಜಿತ್ ಕೋರ್ಟ್ ಮುಂದಾಗಲೀ, ತನಿಖಾ ಸಂಸ್ಥೆಯ ಮುಂದಾಗಲೀ ತಪ್ಪೊಪ್ಪಿಕೊಂಡಿರಲಿಲ್ಲ~ ಎಂದ ಅವರು ಇದಕ್ಕೆ ಸಮರ್ಥನೆ ನೀಡುವಂತೆ ವಿಶೇಷ ನ್ಯಾಯಾಧೀಶರು ದಾಖಲಿಸಿಕೊಂಡಿದ್ದ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ.<br /> <br /> `ಟಿ.ವಿ. ಕ್ಯಾಮೆರಾ ಎದುರು ಸರಬ್ಜಿತ್ ಸಿಂಗ್ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದು, ಇದಕ್ಕೆ ಕಾನೂನು ಮಾನ್ಯತೆ ಇಲ್ಲ~ ಎಂದ ಶೇಖ್, ನ್ಯಾಯಾಧೀಶರು ಸರಬ್ಜಿತ್ ಅವರನ್ನು ಪ್ರಶ್ನೆಗೊಳಪಡಿಸಿದ ವಿವರಗಳನ್ನು ನೀಡುತ್ತಾ, ಪ್ರಾಸಿಕ್ಯೂಶನ್ ತಮ್ಮ ವಿರುದ್ಧ ಮಾಡಿದ ಆರೋಪವನ್ನು ಸರಬ್ಜಿತ್ ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದಿದ್ದಾರೆ.<br /> <br /> ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಸರಬ್ಜಿತ್ ಅವರನ್ನು ಬಿಡುಗಡೆ ಮಾಡುವಂತೆ ಪಾಕ್ ಅಧ್ಯಕ್ಷರಿಗೆ ಶೇಖ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪಾಕ್ ಸರ್ಕಾರವು ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ ಕೆಲವೇ ತಾಸುಗಳಲ್ಲೇ ತಾನು ಬಿಡುಗಡೆ ಮಾಡುತ್ತಿರುವುದು ಸರಬ್ಜಿತ್ ಅಲ್ಲ; ಸುರ್ಜಿತ್ ಸಿಂಗ್ ಎಂದು ಹೇಳಿ ವಿವಾದ ಎಬ್ಬಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>