<p><strong>ಚಿಂತಾಮಣಿ: </strong>ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳಲ್ಲಿ ಸಿಗುವ ಸವ ಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಲೀಡ್ ಬ್ಯಾಂಕ್ ಅಧಿಕಾರಿ ಸುಂದರೇಶನ್ ಸಲಹೆ ನೀಡಿದ್ದಾರೆ. <br /> <br /> ನಗರದ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡಿದರು.<br /> <br /> ಫಲಾನುಭವಿಗಳನ್ನು ಅಲೆ ದಾಡಿಸದೆ ತಿಳಿವಳಿಕೆ ನೀಡಿ ಸಾಲ ನೀಡುವುದರಿಂದ ಬ್ಯಾಂಕ್ ಮತ್ತು ಇಲಾಖೆಗಳ ಮೇಲೆ ವಿಶ್ವಾಸ ಇಮ್ಮಡಿಸಿ ಒಳ್ಳೆಯ ವ್ಯವಹಾರ ನಡೆಯುತ್ತದೆ ಎಂದರು.<br /> <br /> ಸರ್ಕಾರದ ಯೋಜನೆಗಳ ಅನುಸಾರವಾಗಿ ನೀಡಬೇಕಾದ ಸೌಲಭ್ಯಗಳ ಕಡತಗಳನ್ನು ಇಲಾ ಖಾವಾರು ಹಾಗೂ ಬ್ಯಾಂಕ್ಗಳು ನೀಡಬೇಕಾಗಿದ್ದ ಸಾಲ ಮತ್ತು ಸಹಾಯಧನದ ಬಗ್ಗೆ ಪರಿಶೀಲಿಸಿ, ಕೆಲವು ಸೂಚನೆಗಳನ್ನು ನೀಡಿದರು. <br /> <br /> ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದನ್ನು ಕಂಡು ಅಸಮದಾನ ಸೂಚಿಸಿದರು. ಇಂತಹ ಪ್ರಮುಖವಾದ ಸಭೆಗೆ ಗೈರು ಹಾಜರಾಗುವ ಇಲಾಖಾಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದರ ಬಗ್ಗೆ ಕಿಡಿ ಕಾರಿದರು. <br /> <br /> ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಲಕೃಷ್ಣ, ಕಾರ್ಯ ನಿರ್ವಹಣಾ ಧಿಕಾರಿ ಬಸವರಾಜ್ ಮತ್ತು ಎಸ್ಜೆಎಸ್ವೈ ಅಧಿಕಾರಿ ನಾಗರಾಜರಾವ್ ಮತ್ತು ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳಲ್ಲಿ ಸಿಗುವ ಸವ ಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಲೀಡ್ ಬ್ಯಾಂಕ್ ಅಧಿಕಾರಿ ಸುಂದರೇಶನ್ ಸಲಹೆ ನೀಡಿದ್ದಾರೆ. <br /> <br /> ನಗರದ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡಿದರು.<br /> <br /> ಫಲಾನುಭವಿಗಳನ್ನು ಅಲೆ ದಾಡಿಸದೆ ತಿಳಿವಳಿಕೆ ನೀಡಿ ಸಾಲ ನೀಡುವುದರಿಂದ ಬ್ಯಾಂಕ್ ಮತ್ತು ಇಲಾಖೆಗಳ ಮೇಲೆ ವಿಶ್ವಾಸ ಇಮ್ಮಡಿಸಿ ಒಳ್ಳೆಯ ವ್ಯವಹಾರ ನಡೆಯುತ್ತದೆ ಎಂದರು.<br /> <br /> ಸರ್ಕಾರದ ಯೋಜನೆಗಳ ಅನುಸಾರವಾಗಿ ನೀಡಬೇಕಾದ ಸೌಲಭ್ಯಗಳ ಕಡತಗಳನ್ನು ಇಲಾ ಖಾವಾರು ಹಾಗೂ ಬ್ಯಾಂಕ್ಗಳು ನೀಡಬೇಕಾಗಿದ್ದ ಸಾಲ ಮತ್ತು ಸಹಾಯಧನದ ಬಗ್ಗೆ ಪರಿಶೀಲಿಸಿ, ಕೆಲವು ಸೂಚನೆಗಳನ್ನು ನೀಡಿದರು. <br /> <br /> ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದನ್ನು ಕಂಡು ಅಸಮದಾನ ಸೂಚಿಸಿದರು. ಇಂತಹ ಪ್ರಮುಖವಾದ ಸಭೆಗೆ ಗೈರು ಹಾಜರಾಗುವ ಇಲಾಖಾಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದರ ಬಗ್ಗೆ ಕಿಡಿ ಕಾರಿದರು. <br /> <br /> ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಲಕೃಷ್ಣ, ಕಾರ್ಯ ನಿರ್ವಹಣಾ ಧಿಕಾರಿ ಬಸವರಾಜ್ ಮತ್ತು ಎಸ್ಜೆಎಸ್ವೈ ಅಧಿಕಾರಿ ನಾಗರಾಜರಾವ್ ಮತ್ತು ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>