<p><strong>ಕನಕಪುರ:</strong> ಪಡಿತರ ಚೀಟಿಗೆ ಸೀಮೆಎಣ್ಣೆ ವಿತರಿಸದಿರುವ ಕ್ರಮವನ್ನು ವಿರೋಧಿಸಿ ಸಾರ್ವಜನಿಕರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಹಿಂದಿನಿಂದಲೂ ಸೀಮೆಎಣ್ಣೆ ನೀಡುತ್ತಿದ್ದವರು ಈಗ ದಿಢೀರನೆ ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ಸೀಮೆಎಣ್ಣೆ ವಿತರಣೆಯನ್ನು ಪುನರರಾಂಭಿಸಿಬೇಕೆಂದು ಪಟ್ಟಣದ ಮಳಗಾಳಿನ ನೂರಕ್ಕೂ ಹೆಚ್ಚು ಪಡಿತರದಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.<br /> <br /> ಬೇರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿದ್ದುದರಿಂದ ಸಾರ್ವಜನಿಕರ ಸಂದರ್ಶನದ ವೇಳೆಗೆ ಬರುವಂತೆ ಪ್ರತಿಭಟನಾಕಾರರಿಗೆ ತಹಶೀಲ್ದಾರ್ ತಿಳಿಸಿದಾಗ ಕೋಪಗೊಂಡ ಅವರು ತಹಶೀಲ್ದಾರ್ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾದರು. <br /> <br /> ಪ್ರತಿಭಟನೆ ತಾರಕಕ್ಕೇರಿದಾಗ ತಹಶೀಲ್ದಾರರು ಪೊಲೀಸರ ಸಹಾಯ ಕೋರಿದರು. ಇನ್ಸ್ಪೆಕ್ಟರ್ ಮಂಜುನಾಥ್ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ, ತಹಶೀಲ್ದಾರರು ತಮ್ಮ ಕೆಲಸಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ಪ್ರತಿಭಟನಾ ಕಾರರ ದೂರುಗಳನ್ನು ಶಿರಸ್ತೇದಾರರು ಸ್ವೀಕರಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. <br /> <br /> <strong>ಬೋಗಸ್ ಕಾರ್ಡ್</strong>: ರಾಜ್ಯದಲ್ಲಿ ಅರ್ಹರಿಗಿಂತ ಬೋಗಸ್ ಕಾರ್ಡುದಾರರೇ ಹೆಚ್ಚಿದ್ದಾರೆ. ಹಾಗೂ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಸೀಮೆಎಣ್ಣೆ ಪಡೆಯುತ್ತಿದ್ದಾರೆ. ಇಲಾಖೆ ಇತ್ತೀಚೆಗೆ ನಡೆಸಿದ ಸದಸ್ಯತ್ವ ಪರಿಷ್ಕರಣೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಅದರಂತೆ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಸೀಮೆ ಎಣ್ಣೆ ನೀಡದಂತೆ ಸರ್ಕಾರ ಆದೇಶ ಮಾಡಿದ್ದು, ಅದರನ್ವಯ ಸೀಮೆಎಣ್ಣೆಯನ್ನು ನಿಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಪತ್ರಿಕೆಗೆ ತಿಳಿಸಿದರು.<br /> <br /> ಕನಕಪುರ ತಾಲ್ಲೂಕು ದೊಡ್ಡ ತಾಲ್ಲೂಕು ಆಗಿದೆ. ಕೆಲಸದ ಒತ್ತಡ ಹೆಚ್ಚಾಗಿದ್ದು, ಬೆಳಗಿನ ಸಮಯದಲ್ಲಿ ಹೋಬಳಿಗಳಿಗೆ ಭೇಟಿ ನೀಡಿ ಮಧ್ಯಾಹ್ನ ಸಾರ್ವಜನಿಕರ ಸಂದರ್ಶನ ಮಾಡಲಾಗುತ್ತಿದೆ. ಅದರ ವೇಳಾಪಟ್ಟಿಯನ್ನು ಕಚೇರಿಯ ಹೊರಗಡೆ ಪ್ರಕಟ ಮಾಡಲಾಗಿದೆ. ಆದರೂ ಸಾರ್ವಜನಿಕರು ಸಹಕರಿಸದೆ ಈ ರೀತಿ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಪಡಿತರ ಚೀಟಿಗೆ ಸೀಮೆಎಣ್ಣೆ ವಿತರಿಸದಿರುವ ಕ್ರಮವನ್ನು ವಿರೋಧಿಸಿ ಸಾರ್ವಜನಿಕರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಹಿಂದಿನಿಂದಲೂ ಸೀಮೆಎಣ್ಣೆ ನೀಡುತ್ತಿದ್ದವರು ಈಗ ದಿಢೀರನೆ ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ಸೀಮೆಎಣ್ಣೆ ವಿತರಣೆಯನ್ನು ಪುನರರಾಂಭಿಸಿಬೇಕೆಂದು ಪಟ್ಟಣದ ಮಳಗಾಳಿನ ನೂರಕ್ಕೂ ಹೆಚ್ಚು ಪಡಿತರದಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.<br /> <br /> ಬೇರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿದ್ದುದರಿಂದ ಸಾರ್ವಜನಿಕರ ಸಂದರ್ಶನದ ವೇಳೆಗೆ ಬರುವಂತೆ ಪ್ರತಿಭಟನಾಕಾರರಿಗೆ ತಹಶೀಲ್ದಾರ್ ತಿಳಿಸಿದಾಗ ಕೋಪಗೊಂಡ ಅವರು ತಹಶೀಲ್ದಾರ್ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾದರು. <br /> <br /> ಪ್ರತಿಭಟನೆ ತಾರಕಕ್ಕೇರಿದಾಗ ತಹಶೀಲ್ದಾರರು ಪೊಲೀಸರ ಸಹಾಯ ಕೋರಿದರು. ಇನ್ಸ್ಪೆಕ್ಟರ್ ಮಂಜುನಾಥ್ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ, ತಹಶೀಲ್ದಾರರು ತಮ್ಮ ಕೆಲಸಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ಪ್ರತಿಭಟನಾ ಕಾರರ ದೂರುಗಳನ್ನು ಶಿರಸ್ತೇದಾರರು ಸ್ವೀಕರಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. <br /> <br /> <strong>ಬೋಗಸ್ ಕಾರ್ಡ್</strong>: ರಾಜ್ಯದಲ್ಲಿ ಅರ್ಹರಿಗಿಂತ ಬೋಗಸ್ ಕಾರ್ಡುದಾರರೇ ಹೆಚ್ಚಿದ್ದಾರೆ. ಹಾಗೂ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಸೀಮೆಎಣ್ಣೆ ಪಡೆಯುತ್ತಿದ್ದಾರೆ. ಇಲಾಖೆ ಇತ್ತೀಚೆಗೆ ನಡೆಸಿದ ಸದಸ್ಯತ್ವ ಪರಿಷ್ಕರಣೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಅದರಂತೆ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಸೀಮೆ ಎಣ್ಣೆ ನೀಡದಂತೆ ಸರ್ಕಾರ ಆದೇಶ ಮಾಡಿದ್ದು, ಅದರನ್ವಯ ಸೀಮೆಎಣ್ಣೆಯನ್ನು ನಿಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಪತ್ರಿಕೆಗೆ ತಿಳಿಸಿದರು.<br /> <br /> ಕನಕಪುರ ತಾಲ್ಲೂಕು ದೊಡ್ಡ ತಾಲ್ಲೂಕು ಆಗಿದೆ. ಕೆಲಸದ ಒತ್ತಡ ಹೆಚ್ಚಾಗಿದ್ದು, ಬೆಳಗಿನ ಸಮಯದಲ್ಲಿ ಹೋಬಳಿಗಳಿಗೆ ಭೇಟಿ ನೀಡಿ ಮಧ್ಯಾಹ್ನ ಸಾರ್ವಜನಿಕರ ಸಂದರ್ಶನ ಮಾಡಲಾಗುತ್ತಿದೆ. ಅದರ ವೇಳಾಪಟ್ಟಿಯನ್ನು ಕಚೇರಿಯ ಹೊರಗಡೆ ಪ್ರಕಟ ಮಾಡಲಾಗಿದೆ. ಆದರೂ ಸಾರ್ವಜನಿಕರು ಸಹಕರಿಸದೆ ಈ ರೀತಿ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>