<p>‘ಇದು ನೈಜ ಘಟನಾವಳಿಗಳನ್ನೇ ಆಧರಿಸಿ ಮಾಡುತ್ತಿರುವ ಸಿನಿಮಾ’ ಎಂದರು ನಿರ್ದೇಶಕ ಆರ್. ಗುರುದತ್. ಕಲ್ಪನೆಗಳಿಗಿಂತ ವಾಸ್ತವ ಸಂಗತಿಗಳೇ ಸಿನಿಮಾದಲ್ಲಿ ಹೆಚ್ಚಿರುತ್ತದೆ ಎನ್ನುವುದು ಅವರ ವಿವರಣೆ.<br /> <br /> ದಶಕಗಳ ಹಿಂದೆ ವಿಷ್ಣುವರ್ಧನ್ ‘ಖೈದಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಆ ಸಿನಿಮಾ ಮರು ಬಿಡುಗಡೆಯೂ ಆಗಿತ್ತು. ಗುರುದತ್ ನಿರ್ದೇಶಿಸುತ್ತಿರುವ ಚಿತ್ರದ ಹೆಸರೂ ‘ಖೈದಿ’. ಈ ಚಿತ್ರದಲ್ಲಿ ಹಲವು ವಿಶೇಷಗಳ ಲಾಭವನ್ನು ಪಡೆದುಕೊಳ್ಳುವ ಇರಾದೆ ಗುರುದತ್ ಅವರದು.<br /> <br /> ‘ಎ’, ‘ಎಕೆ 47’ ಚಿತ್ರಗಳಲ್ಲಿ ನಟಿಸಿದ್ದ ಚಾಂದಿನಿ ಒಂದೂವರೆ ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ನಾಯಕಿಯಾಗಿಯೇ ಮರಳಿದ್ದಾರೆ. ‘ಖೈದಿ’ಯ ‘ತಾಳೆ ಹೂವ ಪೊದೆಯಿಂದ...’ ಜನಪ್ರಿಯ ಹಾಡನ್ನು ರೀಮಿಕ್ಸ್ ಮಾಡಿ ಇಲ್ಲಿ ಬಳಸಲಾಗುತ್ತಿದೆ.<br /> <br /> ಗುರುದತ್ ಈ ಹಿಂದೆ ‘ಸೈಕೋ’ ಚಿತ್ರಕ್ಕೆ ಬಂಡವಾಳ ಹೂಡಿದ್ದವರು. ಹಲವು ಕಾರಣಗಳಿಂದ ಮತ್ತೆ ಸಿನಿಮಾ ಕೈಗೆತ್ತಿಕೊಳ್ಳದಿದ್ದ ಅವರು ‘ಖೈದಿ’ಯ ಮೂಲಕ ನಿರ್ದೇಶಕನ ಟೊಪ್ಪಿಯನ್ನು ಧರಿಸುತ್ತಿದ್ದಾರೆ.<br /> <br /> ‘ಖೈದಿ’ಯ ಉಪಶೀರ್ಷಿಕೆ ‘ಸಿಸ್ಟಮ್ ಎರರ್’. ಅದರ ಅರ್ಥವೇ ಹೇಳುವಂತೆ ವ್ಯವಸ್ಥೆಯಲ್ಲಿನ ಲೋಪದೋಷಗಳು, ಓರೆಕೋರೆಗಳನ್ನು ವಿಡಂಬಿಸುವ ಮತ್ತು ಮುಗ್ಧರನ್ನು ವ್ಯವಸ್ಥೆ ಹೇಗೆ ಬಲಿಪಶುಗಳನ್ನಾಗಿಸುತ್ತದೆ ಎನ್ನುವ ಸಂಗತಿಗಳನ್ನು ಸಿನಿಮಾ ತೆರೆದಿಡುತ್ತದೆ.<br /> <br /> ‘ಸೈಕೋ’, ‘ನಮಸ್ತೆ ಇಂಡಿಯಾ’ ಚಿತ್ರಗಳಲ್ಲಿ ನಟಿಸಿದ್ದ ಧನುಷ್, ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಲಂನಲ್ಲಿ ಬೆಳೆಯುವ ಜಾಲಿ ಹುಡುಗನ ಪಾತ್ರ ಅವರದು. ತಮ್ಮ ಕನಸಿನ ಪ್ರಾಜೆಕ್ಟ್ ಇದು ಎಂದು ಪುಳಕಿತರಾದರು ಅವರು.<br /> <br /> ನಟಿ ಚಾಂದಿನಿ ಮಾತಿನಲ್ಲಿ ಇಂಗ್ಲಿಷ್ ಹೆಚ್ಚಿದ್ದರೂ ಕನ್ನಡದೆಡೆಗಿನ ಅಭಿಮಾನವೇ ತುಂಬಿತ್ತು. ಚಿತ್ರರಂಗದಲ್ಲಿನ ಹಳೆಯ ಒಡನಾಟಗಳು, ನಂತರ ಉತ್ತರ ದಿಕ್ಕಿನತ್ತ ಪಯಣಿಸಿ, ಅಲ್ಲಿ ಸಿನಿಮಾ ಹಂಚಿಕೆ, ಮಾರ್ಕೆಟಿಂಗ್, ಬೋಧನೆ ಇತ್ಯಾದಿಗಳಲ್ಲಿ ತೊಡಗಿದ್ದು ಮುಂತಾದ ವಿಚಾರಗಳನ್ನು ಅವರು ಹಂಚಿಕೊಂಡರು.<br /> <br /> ಕನ್ನಡದಲ್ಲಿ ಉತ್ತಮ ಚಿತ್ರಗಳು ಹಿಂದಿನಿಂದಲೂ ಬರುತ್ತಿವೆ. ಆದರೆ ಅದರ ಮಾರುಕಟ್ಟೆ ಸೀಮಿತವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರಗಳು ಬೇರೆ ರಾಜ್ಯದವರಿಗೆ ತಲುಪುತ್ತಿಲ್ಲ. ನಮ್ಮ ಚಿತ್ರಗಳನ್ನು ಹೊರದೇಶಗಳಲ್ಲಿಯೂ ಬಿಡುಗಡೆ ಮಾಡುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ ಚಾಂದಿನಿ, ಸ್ವತಃ ಆ ಕೆಲಸ ಮಾಡುವ ಉತ್ಸುಕತೆಯನ್ನೂ ತೋರಿದರು.<br /> <br /> ಚಿತ್ರತಂಡದ ಹೆಚ್ಚಿನವರು ಪರಭಾಷಿಗರು. ಅವರ ಆಯ್ಕೆಗೆ ಕಾರಣಗಳನ್ನು ನೀಡುತ್ತಲೇ ಅದನ್ನು ಸಮರ್ಥಿಸಿಕೊಂಡರು ನಿರ್ದೇಶಕ ಗುರುದತ್. ಕೇರಳ ಮೂಲದ ಜಸ್ಟಿನ್ ಮತ್ತು ಕನ್ನಡದವರಾದ ಉದಯ್ ಜೊತೆಗೂಡಿ ಸಂಗೀತ ಹೊಸೆಯುತ್ತಿದ್ದಾರೆ.<br /> <br /> ನಿರ್ಮಾಪಕರಾದ ಕಲಾ ಭಕ್ತ ಮತ್ತು ನಯನ ಶರತ್, ಛಾಯಾಗ್ರಾಹಕ ರಾಜಶೇಖರನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇದು ನೈಜ ಘಟನಾವಳಿಗಳನ್ನೇ ಆಧರಿಸಿ ಮಾಡುತ್ತಿರುವ ಸಿನಿಮಾ’ ಎಂದರು ನಿರ್ದೇಶಕ ಆರ್. ಗುರುದತ್. ಕಲ್ಪನೆಗಳಿಗಿಂತ ವಾಸ್ತವ ಸಂಗತಿಗಳೇ ಸಿನಿಮಾದಲ್ಲಿ ಹೆಚ್ಚಿರುತ್ತದೆ ಎನ್ನುವುದು ಅವರ ವಿವರಣೆ.<br /> <br /> ದಶಕಗಳ ಹಿಂದೆ ವಿಷ್ಣುವರ್ಧನ್ ‘ಖೈದಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಆ ಸಿನಿಮಾ ಮರು ಬಿಡುಗಡೆಯೂ ಆಗಿತ್ತು. ಗುರುದತ್ ನಿರ್ದೇಶಿಸುತ್ತಿರುವ ಚಿತ್ರದ ಹೆಸರೂ ‘ಖೈದಿ’. ಈ ಚಿತ್ರದಲ್ಲಿ ಹಲವು ವಿಶೇಷಗಳ ಲಾಭವನ್ನು ಪಡೆದುಕೊಳ್ಳುವ ಇರಾದೆ ಗುರುದತ್ ಅವರದು.<br /> <br /> ‘ಎ’, ‘ಎಕೆ 47’ ಚಿತ್ರಗಳಲ್ಲಿ ನಟಿಸಿದ್ದ ಚಾಂದಿನಿ ಒಂದೂವರೆ ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ನಾಯಕಿಯಾಗಿಯೇ ಮರಳಿದ್ದಾರೆ. ‘ಖೈದಿ’ಯ ‘ತಾಳೆ ಹೂವ ಪೊದೆಯಿಂದ...’ ಜನಪ್ರಿಯ ಹಾಡನ್ನು ರೀಮಿಕ್ಸ್ ಮಾಡಿ ಇಲ್ಲಿ ಬಳಸಲಾಗುತ್ತಿದೆ.<br /> <br /> ಗುರುದತ್ ಈ ಹಿಂದೆ ‘ಸೈಕೋ’ ಚಿತ್ರಕ್ಕೆ ಬಂಡವಾಳ ಹೂಡಿದ್ದವರು. ಹಲವು ಕಾರಣಗಳಿಂದ ಮತ್ತೆ ಸಿನಿಮಾ ಕೈಗೆತ್ತಿಕೊಳ್ಳದಿದ್ದ ಅವರು ‘ಖೈದಿ’ಯ ಮೂಲಕ ನಿರ್ದೇಶಕನ ಟೊಪ್ಪಿಯನ್ನು ಧರಿಸುತ್ತಿದ್ದಾರೆ.<br /> <br /> ‘ಖೈದಿ’ಯ ಉಪಶೀರ್ಷಿಕೆ ‘ಸಿಸ್ಟಮ್ ಎರರ್’. ಅದರ ಅರ್ಥವೇ ಹೇಳುವಂತೆ ವ್ಯವಸ್ಥೆಯಲ್ಲಿನ ಲೋಪದೋಷಗಳು, ಓರೆಕೋರೆಗಳನ್ನು ವಿಡಂಬಿಸುವ ಮತ್ತು ಮುಗ್ಧರನ್ನು ವ್ಯವಸ್ಥೆ ಹೇಗೆ ಬಲಿಪಶುಗಳನ್ನಾಗಿಸುತ್ತದೆ ಎನ್ನುವ ಸಂಗತಿಗಳನ್ನು ಸಿನಿಮಾ ತೆರೆದಿಡುತ್ತದೆ.<br /> <br /> ‘ಸೈಕೋ’, ‘ನಮಸ್ತೆ ಇಂಡಿಯಾ’ ಚಿತ್ರಗಳಲ್ಲಿ ನಟಿಸಿದ್ದ ಧನುಷ್, ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಲಂನಲ್ಲಿ ಬೆಳೆಯುವ ಜಾಲಿ ಹುಡುಗನ ಪಾತ್ರ ಅವರದು. ತಮ್ಮ ಕನಸಿನ ಪ್ರಾಜೆಕ್ಟ್ ಇದು ಎಂದು ಪುಳಕಿತರಾದರು ಅವರು.<br /> <br /> ನಟಿ ಚಾಂದಿನಿ ಮಾತಿನಲ್ಲಿ ಇಂಗ್ಲಿಷ್ ಹೆಚ್ಚಿದ್ದರೂ ಕನ್ನಡದೆಡೆಗಿನ ಅಭಿಮಾನವೇ ತುಂಬಿತ್ತು. ಚಿತ್ರರಂಗದಲ್ಲಿನ ಹಳೆಯ ಒಡನಾಟಗಳು, ನಂತರ ಉತ್ತರ ದಿಕ್ಕಿನತ್ತ ಪಯಣಿಸಿ, ಅಲ್ಲಿ ಸಿನಿಮಾ ಹಂಚಿಕೆ, ಮಾರ್ಕೆಟಿಂಗ್, ಬೋಧನೆ ಇತ್ಯಾದಿಗಳಲ್ಲಿ ತೊಡಗಿದ್ದು ಮುಂತಾದ ವಿಚಾರಗಳನ್ನು ಅವರು ಹಂಚಿಕೊಂಡರು.<br /> <br /> ಕನ್ನಡದಲ್ಲಿ ಉತ್ತಮ ಚಿತ್ರಗಳು ಹಿಂದಿನಿಂದಲೂ ಬರುತ್ತಿವೆ. ಆದರೆ ಅದರ ಮಾರುಕಟ್ಟೆ ಸೀಮಿತವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರಗಳು ಬೇರೆ ರಾಜ್ಯದವರಿಗೆ ತಲುಪುತ್ತಿಲ್ಲ. ನಮ್ಮ ಚಿತ್ರಗಳನ್ನು ಹೊರದೇಶಗಳಲ್ಲಿಯೂ ಬಿಡುಗಡೆ ಮಾಡುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ ಚಾಂದಿನಿ, ಸ್ವತಃ ಆ ಕೆಲಸ ಮಾಡುವ ಉತ್ಸುಕತೆಯನ್ನೂ ತೋರಿದರು.<br /> <br /> ಚಿತ್ರತಂಡದ ಹೆಚ್ಚಿನವರು ಪರಭಾಷಿಗರು. ಅವರ ಆಯ್ಕೆಗೆ ಕಾರಣಗಳನ್ನು ನೀಡುತ್ತಲೇ ಅದನ್ನು ಸಮರ್ಥಿಸಿಕೊಂಡರು ನಿರ್ದೇಶಕ ಗುರುದತ್. ಕೇರಳ ಮೂಲದ ಜಸ್ಟಿನ್ ಮತ್ತು ಕನ್ನಡದವರಾದ ಉದಯ್ ಜೊತೆಗೂಡಿ ಸಂಗೀತ ಹೊಸೆಯುತ್ತಿದ್ದಾರೆ.<br /> <br /> ನಿರ್ಮಾಪಕರಾದ ಕಲಾ ಭಕ್ತ ಮತ್ತು ನಯನ ಶರತ್, ಛಾಯಾಗ್ರಾಹಕ ರಾಜಶೇಖರನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>