<p><strong>ಬೆಂಗಳೂರು:</strong> ‘ನಿಜಲಿಂಗ’ ಕಾದಂಬರಿ ರೂಪದ ಒಂದು ಮೆಗಾ ಧಾರಾವಾಹಿ. ಇಲ್ಲಿ ಯಾವುದೇ ಶಿಸ್ತುಬದ್ಧ ಕಥೆಯನ್ನು ಅಪೇಕ್ಷಿಸಲಾಗದು’ ಎಂದು ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.<br /> <br /> ಅಥಣಿಯ ಅನುಪಮ ಪ್ರಕಾಶನ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕುಂ. ವೀರಭದ್ರಪ್ಪ ಅವರ 18ನೇ ಕಾದಂಬರಿ ‘ನಿಜಲಿಂಗ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಧಾರಾವಾಹಿ ಹೇಗೆ ಒಂದು ಕಥೆಯಲ್ಲಿ ಅನೇಕ ಕಥಾನಕಗಳನ್ನು ಒಳಗೊಂಡಿರುತ್ತದೆಯೊ ಹಾಗೇ ಕುಂ.ವೀ. ಅವರ ಕಾದಂಬರಿಯು ನಾನಾ ವಿಷಯ ವಸ್ತುಗಳ ಸಮ್ಮಿಶ್ರಣ. ಎಲ್ಲಿಂದಲೊ ಶುರುವಾಗಿ ನಡುವೆತ್ತೊ ದಾಟಿ, ಮತ್ತೆಲ್ಲೊ ಮುಕ್ತಾಯವಾಗುತ್ತದೆ. ಪಾತ್ರಗಳು ನಾನಾ ರೂಪಗಳನ್ನು ಧರಿಸುತ್ತಾ ಹೋಗುತ್ತವೆ’ ಎಂದು ಅವರು ಹೇಳಿದರು.<br /> <br /> ‘ನಿಜಲಿಂಗ ಕಾದಂಬರಿಯಲ್ಲಿ ಸುಮಾರು 300 ಪಾತ್ರಗಳು ಬರುತ್ತವೆ. ಆ ಎಲ್ಲಾ ಪಾತ್ರಗಳ ಬಗ್ಗೆಯೂ ಕಾದಂಬರಿಯಲ್ಲಿ ಪರಿಚಯವಿದೆ. ಹೀಗೆ ಒಂದು ಕಾದಂಬರಿಯ ನೆಪದಲ್ಲಿ ನೂರಾರು ಕಥೆಗಳು ಈ ಪುಸ್ತಕದಲ್ಲಿ ಸಿಗುತ್ತವೆ. ಹಾಗಾಗಿ ಒಂದು ವಸ್ತುವನ್ನು ಹಿಡಿದು ಓದಿದರೆ ಈ ಪುಸ್ತಕ ಅರ್ಥವಾಗುವುದು ಕಷ್ಟ’ ಎಂದರು.<br /> <br /> ‘ಆಂಧ್ರ-ಕರ್ನಾಟಕ ಗಡಿ ಪ್ರದೇಶದ ವಿಶಿಷ್ಟ ಜನಜೀವನವನ್ನು ಅಷ್ಟೇ ವಿಶಿಷ್ಟ ಭಾಷೆಯ ಮೂಲಕ ಕಟ್ಟಿಕೊಟ್ಟ ಕುಂ.ವೀ ಅವರು ಈ ಕೃತಿಯ ಮೂಲಕ ಮಧ್ಯ ಕರ್ನಾಟಕ ಭಾಗದ ಚಿತ್ರಣವನ್ನು ಹೆಣೆಯಲು ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.<br /> <br /> ಪುಸ್ತಕದ ಬೆನ್ನುಡಿ ಬರೆದ ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ಮಾತನಾಡಿ, ‘ದೇಸಿ ಕಥೆ ಕಟ್ಟುವ ಕಲೆಗೆ 300 ವರ್ಷಗಳ ದೀರ್ಘ ಪರಂಪರೆ ಇದೆ. ಆ ನೆಲೆಯಲ್ಲಿ ಕಾಣುವ ಮೊದಲ ಕೃತಿ ಎಂದರೆ ‘ಸಾಂದರ್ಭಿಕ ಪರಿಣಯ’.<br /> <br /> ದೇವಸ್ಥಾನ ಕಟ್ಟುವ ಕಲೆ, ಗಜ ಲಕ್ಷಣ ಶಾಸ್ತ್ರ, ಶಕುನ ಶಾಸ್ತ್ರ ಹೀಗೆ ನಾನಾ ಬಗೆಯನ್ನು ಒಂದೇ ಕೃತಿಯಲ್ಲಿ ಹೇಳಲಾಗುತ್ತದೆ. ಆ ಕೃತಿ ಉಂಟು ಮಾಡಿದ ದಿಗ್ಭ್ರಮೆಯನ್ನು ‘ನಿಜಲಿಂಗ’ ಕೃತಿಯೂ ಮಾಡಿದೆ’ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಿಜಲಿಂಗ’ ಕಾದಂಬರಿ ರೂಪದ ಒಂದು ಮೆಗಾ ಧಾರಾವಾಹಿ. ಇಲ್ಲಿ ಯಾವುದೇ ಶಿಸ್ತುಬದ್ಧ ಕಥೆಯನ್ನು ಅಪೇಕ್ಷಿಸಲಾಗದು’ ಎಂದು ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.<br /> <br /> ಅಥಣಿಯ ಅನುಪಮ ಪ್ರಕಾಶನ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕುಂ. ವೀರಭದ್ರಪ್ಪ ಅವರ 18ನೇ ಕಾದಂಬರಿ ‘ನಿಜಲಿಂಗ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಧಾರಾವಾಹಿ ಹೇಗೆ ಒಂದು ಕಥೆಯಲ್ಲಿ ಅನೇಕ ಕಥಾನಕಗಳನ್ನು ಒಳಗೊಂಡಿರುತ್ತದೆಯೊ ಹಾಗೇ ಕುಂ.ವೀ. ಅವರ ಕಾದಂಬರಿಯು ನಾನಾ ವಿಷಯ ವಸ್ತುಗಳ ಸಮ್ಮಿಶ್ರಣ. ಎಲ್ಲಿಂದಲೊ ಶುರುವಾಗಿ ನಡುವೆತ್ತೊ ದಾಟಿ, ಮತ್ತೆಲ್ಲೊ ಮುಕ್ತಾಯವಾಗುತ್ತದೆ. ಪಾತ್ರಗಳು ನಾನಾ ರೂಪಗಳನ್ನು ಧರಿಸುತ್ತಾ ಹೋಗುತ್ತವೆ’ ಎಂದು ಅವರು ಹೇಳಿದರು.<br /> <br /> ‘ನಿಜಲಿಂಗ ಕಾದಂಬರಿಯಲ್ಲಿ ಸುಮಾರು 300 ಪಾತ್ರಗಳು ಬರುತ್ತವೆ. ಆ ಎಲ್ಲಾ ಪಾತ್ರಗಳ ಬಗ್ಗೆಯೂ ಕಾದಂಬರಿಯಲ್ಲಿ ಪರಿಚಯವಿದೆ. ಹೀಗೆ ಒಂದು ಕಾದಂಬರಿಯ ನೆಪದಲ್ಲಿ ನೂರಾರು ಕಥೆಗಳು ಈ ಪುಸ್ತಕದಲ್ಲಿ ಸಿಗುತ್ತವೆ. ಹಾಗಾಗಿ ಒಂದು ವಸ್ತುವನ್ನು ಹಿಡಿದು ಓದಿದರೆ ಈ ಪುಸ್ತಕ ಅರ್ಥವಾಗುವುದು ಕಷ್ಟ’ ಎಂದರು.<br /> <br /> ‘ಆಂಧ್ರ-ಕರ್ನಾಟಕ ಗಡಿ ಪ್ರದೇಶದ ವಿಶಿಷ್ಟ ಜನಜೀವನವನ್ನು ಅಷ್ಟೇ ವಿಶಿಷ್ಟ ಭಾಷೆಯ ಮೂಲಕ ಕಟ್ಟಿಕೊಟ್ಟ ಕುಂ.ವೀ ಅವರು ಈ ಕೃತಿಯ ಮೂಲಕ ಮಧ್ಯ ಕರ್ನಾಟಕ ಭಾಗದ ಚಿತ್ರಣವನ್ನು ಹೆಣೆಯಲು ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.<br /> <br /> ಪುಸ್ತಕದ ಬೆನ್ನುಡಿ ಬರೆದ ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ಮಾತನಾಡಿ, ‘ದೇಸಿ ಕಥೆ ಕಟ್ಟುವ ಕಲೆಗೆ 300 ವರ್ಷಗಳ ದೀರ್ಘ ಪರಂಪರೆ ಇದೆ. ಆ ನೆಲೆಯಲ್ಲಿ ಕಾಣುವ ಮೊದಲ ಕೃತಿ ಎಂದರೆ ‘ಸಾಂದರ್ಭಿಕ ಪರಿಣಯ’.<br /> <br /> ದೇವಸ್ಥಾನ ಕಟ್ಟುವ ಕಲೆ, ಗಜ ಲಕ್ಷಣ ಶಾಸ್ತ್ರ, ಶಕುನ ಶಾಸ್ತ್ರ ಹೀಗೆ ನಾನಾ ಬಗೆಯನ್ನು ಒಂದೇ ಕೃತಿಯಲ್ಲಿ ಹೇಳಲಾಗುತ್ತದೆ. ಆ ಕೃತಿ ಉಂಟು ಮಾಡಿದ ದಿಗ್ಭ್ರಮೆಯನ್ನು ‘ನಿಜಲಿಂಗ’ ಕೃತಿಯೂ ಮಾಡಿದೆ’ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>