<p><strong>ಬೆಳಗಾವಿ: </strong>ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಜಿಲ್ಲೆಯ ಕುಡಚಿ ಸೇರಿದಂತೆ 13 ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತವಾಗಿವೆ. <br /> <br /> ಮಲಪ್ರಭಾ ಅಣೆಕಟ್ಟೆಯಲ್ಲಿ ನೀರಿನ ಹೊರ ಹರಿವು 4,109 ಕ್ಯೂಸೆಕ್ಗೆ ಇಳಿದಿರುವುದರಿಂದ ರಾಮದುರ್ಗ ಪಟ್ಟಣ ಹಾಗೂ ಕೆಲವು ಗ್ರಾಮಕ್ಕೆ ನುಗ್ಗಿದ್ದ ನೀರು ಶನಿವಾರ ಇಳಿದಿದೆ. ಜೊತೆಗೆ ತಾಲ್ಲೂಕಿನ ನಾಲ್ಕು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. <br /> <br /> ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂಧಗಂಗಾ ಹಾಗೂ ವೇದಗಂಗಾ ನದಿಯ ಪ್ರವಾಹವೂ ನಿಧಾನ ಗತಿಯಲ್ಲಿ ಕಡಿಮೆಯಾಗುತ್ತಿದೆ. <br /> <br /> ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ, ರಾಯಬಾಗ- ಚಿಂಚಲಿ ರಸ್ತೆ, ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರ ಸೇತುವೆ, ಅಥಣಿ ತಾಲ್ಲೂಕಿನ ಉಗಾರ ಬಿ.ಕೆ.- ಉಗಾರ ಕೆ.ಎಚ್. ರಸ್ತೆ, ಉಗಾರ ಬಿ.ಕೆ.- ಕುಸನಾಳ ರಸ್ತೆ, ಇಂಗಳಗಾಂವ- ತೀರ್ಥ ರಸ್ತೆ, ಸಪ್ತಸಾಗರ- ತೀರ್ಥ ರಸ್ತೆ, ಶಂಕ್ರಟ್ಟಿ- ಖವಟಕೊಪ್ಪ ರಸ್ತೆ, ರಾಮದುರ್ಗ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ, ರಾಮದುರ್ಗ- ಬೆಳಗಾವಿ ರಸ್ತೆ, ರಾಮದುರ್ಗ- ಕೊಣ್ಣೂರು ರಸ್ತೆ, ಅವರಾದಿ- ಬೆನ್ನೂರ ಸೇತುವೆ, ರೊಕ್ಕದಕಟ್ಟಿ ಸೇತುವೆ ಹಾಗೂ ಸವದತ್ತಿ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. <br /> <br /> ಚಿಕ್ಕೋಡಿ ತಾಲ್ಲೂಕಿನ 8, ಖಾನಾಪುರ ತಾಲ್ಲೂಕಿನ ಎರಡು, ಗೋಕಾಕ ತಾಲ್ಲೂಕಿನಲ್ಲಿ ಒಂದು ಸೇತುವೆ ಇನ್ನೂ ಮುಳುಗಿವೆ. ಬೆಳಗಾವಿ ತಾಲ್ಲೂಕಿನಲ್ಲಿ 8 ಮನೆಗಳು, ಹುಕ್ಕೇರಿ ತಾಲ್ಲೂಕಿನಲ್ಲಿ 8 ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಕುಸಿದಿರುವ ಬಗ್ಗೆ ವರದಿಯಾಗಿದೆ. <br /> <br /> <strong>ರಾಮದುರ್ಗ ವರದಿ<br /> </strong>ರಾಮದುರ್ಗ ಪಟ್ಟಣದ ತುಂಬೆಲ್ಲ ಶುಕ್ರವಾರ ಉಕ್ಕಿ ಹರಿದ ಮಲಪ್ರಭೆ ಶನಿವಾರ ಬೆಳಿಗ್ಗೆ ಹೊತ್ತಿಗೆ ಸಂಪೂರ್ಣ ಇಳಿಮುಖವಾಗಿದ್ದು, ನೀರಿನಲ್ಲಿ ಮುಳುಗಿದ್ದ ಮನೆಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.<br /> <br /> ಸವದತ್ತಿಯ ನವಿಲುತೀರ್ಥ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಶೇಖರಣೆಗೊಂಡಿದ್ದರಿಂದ ಆ ನೀರನ್ನು ನದಿಗೆ ಬಿಡಲಾಗಿತ್ತು. ಹೀಗೆ ಬಿಟ್ಟ ನೀರಿನಿಂದಲೇ ರಾಮದುರ್ಗದಲ್ಲಿನ ಮಲಪ್ರಭೆ ನದಿಗೆ ಒಳ ಹರಿವು ಹೆಚ್ಚಾಗಿತ್ತು. ಇದರಿಂದ ಪಟ್ಟಣದ ಕೆಲವು ಸ್ಥಳಗಳಿಗೆ ಹಾಗೂ ತಾಲ್ಲೂಕಿನ ಹಲವು ಹಳ್ಳಿಗಳಿಗೆ ನೀರು ಹೊಕ್ಕು ಹಲವು ಕುಟುಂಬಗಳು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದವು.<br /> <br /> ಮಲಪ್ರಭಾ ಜಲಾಶಯದಿಂದ ಶುಕ್ರವಾರ ನದಿಗೆ ಸುಮಾರು 12 ಸಾವಿರ ಕ್ಯೂಸೆಕ್ ನೀರನ್ನು ಹರಿ ಬಿಟ್ಟ ಪರಿಣಾಮ ಸಂಗಳ ಗ್ರಾಮದಲ್ಲಿ 5 ಮನೆಗಳು ಭಾಗಶಃ ಹಾನಿಗೀಡಾಗಿವೆ. ತಾಲ್ಲೂಕಿನಲ್ಲಿ ಸುಮಾರು 1306 ಹೆಕ್ಟೇರ್ನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ ಎಂದು ತಹಸೀಲ್ದಾರ ಗೀತಾ ಕೌಲಗಿ ಮತ್ತು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> <strong>ಚಿಕ್ಕೋಡಿ ವರದಿ <br /> </strong>ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಅಲ್ಲಿಯ ವಿವಿಧ ಜಲಾಶಯಗಳಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಪ್ರವಾಹ ಇಳಿಮುಖವಾಗಿದೆ. <br /> <br /> ಶನಿವಾರ ಮಹಾರಾಷ್ಟ್ರದಿಂದ ರಾಜಾಪುರ ಬ್ಯಾರೇಜು ಮೂಲಕ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳು ಕ್ರಮೇಣ ಇಳಿಯತೊಡಗಿವೆ. ತಾಲ್ಲೂಕಿನಲ್ಲಿ ಎಂಟು ಸೇತುವೆಗಳು ಇನ್ನೂ ಮುಳುಗಡೆಯಾಗಿದ್ದು, ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ. <br /> <br /> ಮಹಾರಾಷ್ಟ್ರದ ಕೊಯ್ನಾದಲ್ಲಿ 14 ಮಿ.ಮೀ ಮಾತ್ರ ಮಳೆಯಾಗಿದ್ದು, ನವಜಾ, ವಾರಣಾ, ಮಹಾಬಳೇಶ್ವರಗಳಲ್ಲಿ ಮಳೆ ಬಿದ್ದಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.<br /> <br /> <strong>ರಾಯಬಾಗ ವರದಿ </strong><br /> ಕೃಷ್ಣಾ ನದಿಯ ಪ್ರವಾಹ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕುಡಚಿ ಬಳಿಯ ರಸ್ತೆ ಸೇತುವೆ ಶನಿವಾರ ರಾತ್ರಿ ಸಂಚಾರಕ್ಕೆ ಮುಕ್ತವಾಗಿದೆ. <br /> <br /> ಸಂಜೆಯ ವೇಳೆಗೆ ಸೇತುವೆ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ಇರುವಾಗಲೇ ಸ್ಥಳೀಯರು ಸೇತುವೆ ಮೇಲೆ ಸಂಚರಿಸಲು ಆರಂಭಿಸಿದ್ದರು. <br /> <br /> ಪ್ರವಾಹದ ಇಳಿಕೆಯು ಗಂಟೆಗೆ 9 ಸೆಂಟಿಮೀಟರ್ನಷ್ಟು ಆಗುತ್ತಿದೆ ಎಂದು ಜಲಮಾಪನಾ ಅಧಿಕಾರಿ ಎಸ್.ಎ. ಹಿರೇಕೋಡಿ ತಿಳಿಸಿದ್ದಾರೆ.<br /> <br /> ಅದೇ ರೀತಿ ತಾಲ್ಲೂಕಿನ ಚಿಂಚಲಿ ಬಳಿಯ ಹಾಲಹಳ್ಳದ ರಸ್ತೆ ಸೇತುವೆ ಸಹ ಶನಿವಾರ ಬೆಳಿಗ್ಗೆ ಸಂಚಾರಕ್ಕೆ ಮುಕ್ತವಾಗಿದೆ. ಕೃಷ್ಣಾ ನದಿಯ ಪ್ರವಾಹ ಇಳಿಕೆಯಾದ ಹಿನ್ನೆಲೆಯಲ್ಲಿ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಜಿಲ್ಲೆಯ ಕುಡಚಿ ಸೇರಿದಂತೆ 13 ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತವಾಗಿವೆ. <br /> <br /> ಮಲಪ್ರಭಾ ಅಣೆಕಟ್ಟೆಯಲ್ಲಿ ನೀರಿನ ಹೊರ ಹರಿವು 4,109 ಕ್ಯೂಸೆಕ್ಗೆ ಇಳಿದಿರುವುದರಿಂದ ರಾಮದುರ್ಗ ಪಟ್ಟಣ ಹಾಗೂ ಕೆಲವು ಗ್ರಾಮಕ್ಕೆ ನುಗ್ಗಿದ್ದ ನೀರು ಶನಿವಾರ ಇಳಿದಿದೆ. ಜೊತೆಗೆ ತಾಲ್ಲೂಕಿನ ನಾಲ್ಕು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. <br /> <br /> ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂಧಗಂಗಾ ಹಾಗೂ ವೇದಗಂಗಾ ನದಿಯ ಪ್ರವಾಹವೂ ನಿಧಾನ ಗತಿಯಲ್ಲಿ ಕಡಿಮೆಯಾಗುತ್ತಿದೆ. <br /> <br /> ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ, ರಾಯಬಾಗ- ಚಿಂಚಲಿ ರಸ್ತೆ, ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರ ಸೇತುವೆ, ಅಥಣಿ ತಾಲ್ಲೂಕಿನ ಉಗಾರ ಬಿ.ಕೆ.- ಉಗಾರ ಕೆ.ಎಚ್. ರಸ್ತೆ, ಉಗಾರ ಬಿ.ಕೆ.- ಕುಸನಾಳ ರಸ್ತೆ, ಇಂಗಳಗಾಂವ- ತೀರ್ಥ ರಸ್ತೆ, ಸಪ್ತಸಾಗರ- ತೀರ್ಥ ರಸ್ತೆ, ಶಂಕ್ರಟ್ಟಿ- ಖವಟಕೊಪ್ಪ ರಸ್ತೆ, ರಾಮದುರ್ಗ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ, ರಾಮದುರ್ಗ- ಬೆಳಗಾವಿ ರಸ್ತೆ, ರಾಮದುರ್ಗ- ಕೊಣ್ಣೂರು ರಸ್ತೆ, ಅವರಾದಿ- ಬೆನ್ನೂರ ಸೇತುವೆ, ರೊಕ್ಕದಕಟ್ಟಿ ಸೇತುವೆ ಹಾಗೂ ಸವದತ್ತಿ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. <br /> <br /> ಚಿಕ್ಕೋಡಿ ತಾಲ್ಲೂಕಿನ 8, ಖಾನಾಪುರ ತಾಲ್ಲೂಕಿನ ಎರಡು, ಗೋಕಾಕ ತಾಲ್ಲೂಕಿನಲ್ಲಿ ಒಂದು ಸೇತುವೆ ಇನ್ನೂ ಮುಳುಗಿವೆ. ಬೆಳಗಾವಿ ತಾಲ್ಲೂಕಿನಲ್ಲಿ 8 ಮನೆಗಳು, ಹುಕ್ಕೇರಿ ತಾಲ್ಲೂಕಿನಲ್ಲಿ 8 ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಕುಸಿದಿರುವ ಬಗ್ಗೆ ವರದಿಯಾಗಿದೆ. <br /> <br /> <strong>ರಾಮದುರ್ಗ ವರದಿ<br /> </strong>ರಾಮದುರ್ಗ ಪಟ್ಟಣದ ತುಂಬೆಲ್ಲ ಶುಕ್ರವಾರ ಉಕ್ಕಿ ಹರಿದ ಮಲಪ್ರಭೆ ಶನಿವಾರ ಬೆಳಿಗ್ಗೆ ಹೊತ್ತಿಗೆ ಸಂಪೂರ್ಣ ಇಳಿಮುಖವಾಗಿದ್ದು, ನೀರಿನಲ್ಲಿ ಮುಳುಗಿದ್ದ ಮನೆಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.<br /> <br /> ಸವದತ್ತಿಯ ನವಿಲುತೀರ್ಥ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಶೇಖರಣೆಗೊಂಡಿದ್ದರಿಂದ ಆ ನೀರನ್ನು ನದಿಗೆ ಬಿಡಲಾಗಿತ್ತು. ಹೀಗೆ ಬಿಟ್ಟ ನೀರಿನಿಂದಲೇ ರಾಮದುರ್ಗದಲ್ಲಿನ ಮಲಪ್ರಭೆ ನದಿಗೆ ಒಳ ಹರಿವು ಹೆಚ್ಚಾಗಿತ್ತು. ಇದರಿಂದ ಪಟ್ಟಣದ ಕೆಲವು ಸ್ಥಳಗಳಿಗೆ ಹಾಗೂ ತಾಲ್ಲೂಕಿನ ಹಲವು ಹಳ್ಳಿಗಳಿಗೆ ನೀರು ಹೊಕ್ಕು ಹಲವು ಕುಟುಂಬಗಳು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದವು.<br /> <br /> ಮಲಪ್ರಭಾ ಜಲಾಶಯದಿಂದ ಶುಕ್ರವಾರ ನದಿಗೆ ಸುಮಾರು 12 ಸಾವಿರ ಕ್ಯೂಸೆಕ್ ನೀರನ್ನು ಹರಿ ಬಿಟ್ಟ ಪರಿಣಾಮ ಸಂಗಳ ಗ್ರಾಮದಲ್ಲಿ 5 ಮನೆಗಳು ಭಾಗಶಃ ಹಾನಿಗೀಡಾಗಿವೆ. ತಾಲ್ಲೂಕಿನಲ್ಲಿ ಸುಮಾರು 1306 ಹೆಕ್ಟೇರ್ನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ ಎಂದು ತಹಸೀಲ್ದಾರ ಗೀತಾ ಕೌಲಗಿ ಮತ್ತು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> <strong>ಚಿಕ್ಕೋಡಿ ವರದಿ <br /> </strong>ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಅಲ್ಲಿಯ ವಿವಿಧ ಜಲಾಶಯಗಳಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಪ್ರವಾಹ ಇಳಿಮುಖವಾಗಿದೆ. <br /> <br /> ಶನಿವಾರ ಮಹಾರಾಷ್ಟ್ರದಿಂದ ರಾಜಾಪುರ ಬ್ಯಾರೇಜು ಮೂಲಕ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳು ಕ್ರಮೇಣ ಇಳಿಯತೊಡಗಿವೆ. ತಾಲ್ಲೂಕಿನಲ್ಲಿ ಎಂಟು ಸೇತುವೆಗಳು ಇನ್ನೂ ಮುಳುಗಡೆಯಾಗಿದ್ದು, ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ. <br /> <br /> ಮಹಾರಾಷ್ಟ್ರದ ಕೊಯ್ನಾದಲ್ಲಿ 14 ಮಿ.ಮೀ ಮಾತ್ರ ಮಳೆಯಾಗಿದ್ದು, ನವಜಾ, ವಾರಣಾ, ಮಹಾಬಳೇಶ್ವರಗಳಲ್ಲಿ ಮಳೆ ಬಿದ್ದಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.<br /> <br /> <strong>ರಾಯಬಾಗ ವರದಿ </strong><br /> ಕೃಷ್ಣಾ ನದಿಯ ಪ್ರವಾಹ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕುಡಚಿ ಬಳಿಯ ರಸ್ತೆ ಸೇತುವೆ ಶನಿವಾರ ರಾತ್ರಿ ಸಂಚಾರಕ್ಕೆ ಮುಕ್ತವಾಗಿದೆ. <br /> <br /> ಸಂಜೆಯ ವೇಳೆಗೆ ಸೇತುವೆ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ಇರುವಾಗಲೇ ಸ್ಥಳೀಯರು ಸೇತುವೆ ಮೇಲೆ ಸಂಚರಿಸಲು ಆರಂಭಿಸಿದ್ದರು. <br /> <br /> ಪ್ರವಾಹದ ಇಳಿಕೆಯು ಗಂಟೆಗೆ 9 ಸೆಂಟಿಮೀಟರ್ನಷ್ಟು ಆಗುತ್ತಿದೆ ಎಂದು ಜಲಮಾಪನಾ ಅಧಿಕಾರಿ ಎಸ್.ಎ. ಹಿರೇಕೋಡಿ ತಿಳಿಸಿದ್ದಾರೆ.<br /> <br /> ಅದೇ ರೀತಿ ತಾಲ್ಲೂಕಿನ ಚಿಂಚಲಿ ಬಳಿಯ ಹಾಲಹಳ್ಳದ ರಸ್ತೆ ಸೇತುವೆ ಸಹ ಶನಿವಾರ ಬೆಳಿಗ್ಗೆ ಸಂಚಾರಕ್ಕೆ ಮುಕ್ತವಾಗಿದೆ. ಕೃಷ್ಣಾ ನದಿಯ ಪ್ರವಾಹ ಇಳಿಕೆಯಾದ ಹಿನ್ನೆಲೆಯಲ್ಲಿ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>