<p>ಗಣೇಶ ಚತುರ್ಥಿಯಂದು ಗಣೇಶನನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಣೇಶನನ್ನು ಕರೆತರುವುದರಿಂದ ವಿಸರ್ಜನೆ ಮಾಡುವ ವರೆಗೆ ಹಲವು ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ಸಮಯ, ಗಣೇಶನನ್ನು ತರುವ ಬಗೆ ಹಾಗೂ ವಿಸರ್ಜನೆ ಮಾಡುವ ಸಮಯದ ಕುರಿತು ಮಾಹಿತಿ ಇಲ್ಲಿದೆ.</p><p><strong>ಧಾರ್ಮಿಕ ವಿಚಾರ:</strong></p><p>ಆ.27 ರಂದು ಬುಧವಾರ ಚತುರ್ಥಿ ತಿಥಿ:ಘಟಕ:18:27 (ಹಗಲು 01:37ರವರೆಗೆ) ಶ್ರೀ ವರ ಸಿದ್ಧಿ ವಿನಾಯಕ ವ್ರತವನ್ನುಆಚರಿಸಲಾಗುತ್ತದೆ. ಅದಕ್ಕೂ ಮುಂಚೆ ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರುವಾಗ ಈ ಕೆಳಗಿನ ಅಂಶಗಳನ್ನು ಪಾಲಿಸಬೇಕು. ಅವುಗಳೆಂದರೆ, </p><p>ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.</p><p>ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವರು ಹಿಂದೂ ವೇಷ ಭೂಷಣವನ್ನು ಧರಿಸಿರಬೇಕು.</p><p>ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯ ಮುಖವು ತರುವವನ ಕಡೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸುಗುಣ ತತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ವ ಪ್ರಕ್ಷೇಪಿಸಿರುತ್ತದೆ. </p><ul><li><p>ಶ್ರೀ ಗಣೇಶನಿಗೆ ಜಯಕಾರ ಮತ್ತು ಅವನ ನಾಮ ಜಪ ಮಾಡುತ್ತ ಮೂರ್ತಿಯನ್ನು ಮನೆಗೆ ತರಬೇಕು.</p></li><li><p>ಮನೆಯ ಹೊಸ್ತಿಲಲ್ಲಿ ಮೂರ್ತಿಯನ್ನು ತರುವವರ ಕಾಲನ್ನು ಮನೆಯ ಮುತ್ತೈದೆ ತೊಳೆಯಬೇಕು. ನಂತರ ಒಳಕ್ಕೆ ಬರಮಾಡಿಕೊಳ್ಳಬೇಕು</p></li><li><p>ಮನೆಯನ್ನು ಪ್ರವೇಶಿಸುವ ಮೊದಲು ಮೂರ್ತಿಯ ಮುಖವನ್ನು ಮುಂದಿನ ಬದಿಗೆ ಮಾಡಬೇಕು ನಂತರ ಮೂರ್ತಿಗೆ ಆರತಿ ಬೆಳಗಬೇಕು.</p></li><li><p>ಮನೆಯಲ್ಲಿ ಯಾವ ಸ್ಥಳದಲ್ಲಿ ನೀವು ವಿನಾಯಕನನ್ನು ಇಟ್ಟು ಪೂಜಿಸುತ್ತಿರೋ ಆ ಸ್ಥಳದಲ್ಲಿ ಮಣೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಇಟ್ಟು ಅಕ್ಕಿಯ ಮೇಲೆ ಮೂರ್ತಿಯನ್ನು ಕೂರಿಸಬೇಕು.</p></li><li><p>ಗಣೇಶ ಚತುರ್ಥಿಯ ದಿನದಂದು ಶ್ರೀ ಗಣೇಶನಿಗೆ ಅಲಂಕಾರ ಮಾಡಿ ಪೂಜಿಸಬೇಕು. ಗಣೇಶನಿಗೆ ಶ್ರದ್ಧೆಯಿಂದ ವ್ರತವನ್ನು ಆಚರಿಸಬೇಕು.</p></li></ul><p><strong>ಗೌರಿ ಗಣಪತಿಗಳನ್ನು ಕಳಿಸಲು ಶುಭಮುಹೂರ್ತ:</strong></p><p>ಸೆ. 05 ರ ಶುಕ್ರವಾರ ದಂದು ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿ ತಿಥಿ: ಶ್ರಾವಣ ನಕ್ಷತ್ರದ ದಿನ ರಾತ್ರಿ 7 ರಿಂದ ರಿಂದ 9 ರವರೆಗೆ ಗೌರಿ ಮತ್ತು ಗಣಪತಿಯನ್ನು ವಿಸರ್ಜನೆ ಮಾಡಬಹುದು. ಕೇವಲ ಗಣಪತಿ ಹಬ್ಬ ಆಚರಿಸುವವರು ಹಬ್ಬವಾದ ಮಾರನೆಯ ದಿನ ಗಣೇಶನ ವಿಸರ್ಜನೆಯನ್ನು ಮಾಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಣೇಶ ಚತುರ್ಥಿಯಂದು ಗಣೇಶನನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಣೇಶನನ್ನು ಕರೆತರುವುದರಿಂದ ವಿಸರ್ಜನೆ ಮಾಡುವ ವರೆಗೆ ಹಲವು ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ಸಮಯ, ಗಣೇಶನನ್ನು ತರುವ ಬಗೆ ಹಾಗೂ ವಿಸರ್ಜನೆ ಮಾಡುವ ಸಮಯದ ಕುರಿತು ಮಾಹಿತಿ ಇಲ್ಲಿದೆ.</p><p><strong>ಧಾರ್ಮಿಕ ವಿಚಾರ:</strong></p><p>ಆ.27 ರಂದು ಬುಧವಾರ ಚತುರ್ಥಿ ತಿಥಿ:ಘಟಕ:18:27 (ಹಗಲು 01:37ರವರೆಗೆ) ಶ್ರೀ ವರ ಸಿದ್ಧಿ ವಿನಾಯಕ ವ್ರತವನ್ನುಆಚರಿಸಲಾಗುತ್ತದೆ. ಅದಕ್ಕೂ ಮುಂಚೆ ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರುವಾಗ ಈ ಕೆಳಗಿನ ಅಂಶಗಳನ್ನು ಪಾಲಿಸಬೇಕು. ಅವುಗಳೆಂದರೆ, </p><p>ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.</p><p>ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವರು ಹಿಂದೂ ವೇಷ ಭೂಷಣವನ್ನು ಧರಿಸಿರಬೇಕು.</p><p>ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯ ಮುಖವು ತರುವವನ ಕಡೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸುಗುಣ ತತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ವ ಪ್ರಕ್ಷೇಪಿಸಿರುತ್ತದೆ. </p><ul><li><p>ಶ್ರೀ ಗಣೇಶನಿಗೆ ಜಯಕಾರ ಮತ್ತು ಅವನ ನಾಮ ಜಪ ಮಾಡುತ್ತ ಮೂರ್ತಿಯನ್ನು ಮನೆಗೆ ತರಬೇಕು.</p></li><li><p>ಮನೆಯ ಹೊಸ್ತಿಲಲ್ಲಿ ಮೂರ್ತಿಯನ್ನು ತರುವವರ ಕಾಲನ್ನು ಮನೆಯ ಮುತ್ತೈದೆ ತೊಳೆಯಬೇಕು. ನಂತರ ಒಳಕ್ಕೆ ಬರಮಾಡಿಕೊಳ್ಳಬೇಕು</p></li><li><p>ಮನೆಯನ್ನು ಪ್ರವೇಶಿಸುವ ಮೊದಲು ಮೂರ್ತಿಯ ಮುಖವನ್ನು ಮುಂದಿನ ಬದಿಗೆ ಮಾಡಬೇಕು ನಂತರ ಮೂರ್ತಿಗೆ ಆರತಿ ಬೆಳಗಬೇಕು.</p></li><li><p>ಮನೆಯಲ್ಲಿ ಯಾವ ಸ್ಥಳದಲ್ಲಿ ನೀವು ವಿನಾಯಕನನ್ನು ಇಟ್ಟು ಪೂಜಿಸುತ್ತಿರೋ ಆ ಸ್ಥಳದಲ್ಲಿ ಮಣೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಇಟ್ಟು ಅಕ್ಕಿಯ ಮೇಲೆ ಮೂರ್ತಿಯನ್ನು ಕೂರಿಸಬೇಕು.</p></li><li><p>ಗಣೇಶ ಚತುರ್ಥಿಯ ದಿನದಂದು ಶ್ರೀ ಗಣೇಶನಿಗೆ ಅಲಂಕಾರ ಮಾಡಿ ಪೂಜಿಸಬೇಕು. ಗಣೇಶನಿಗೆ ಶ್ರದ್ಧೆಯಿಂದ ವ್ರತವನ್ನು ಆಚರಿಸಬೇಕು.</p></li></ul><p><strong>ಗೌರಿ ಗಣಪತಿಗಳನ್ನು ಕಳಿಸಲು ಶುಭಮುಹೂರ್ತ:</strong></p><p>ಸೆ. 05 ರ ಶುಕ್ರವಾರ ದಂದು ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿ ತಿಥಿ: ಶ್ರಾವಣ ನಕ್ಷತ್ರದ ದಿನ ರಾತ್ರಿ 7 ರಿಂದ ರಿಂದ 9 ರವರೆಗೆ ಗೌರಿ ಮತ್ತು ಗಣಪತಿಯನ್ನು ವಿಸರ್ಜನೆ ಮಾಡಬಹುದು. ಕೇವಲ ಗಣಪತಿ ಹಬ್ಬ ಆಚರಿಸುವವರು ಹಬ್ಬವಾದ ಮಾರನೆಯ ದಿನ ಗಣೇಶನ ವಿಸರ್ಜನೆಯನ್ನು ಮಾಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>