<p>ಓಂಕಾರ ಸೃಷ್ಟಿಯ ಮೂಲವೆಂಬ ನಂಬಿಕೆ ಇದೆ. ಓಂಕಾರ ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲ, ವೈಜ್ಞಾನಿಕ ಲಾಭಗಳು ದೊರೆಯಲಿವೆ. ಹಾಗಾದರೆ, ಓಂಕಾರದ ಮೂಲವೇನು? ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><p>ಓಂಕಾರ ಮಂತ್ರ ಪಠಣೆ ಮಾಡುವಾಗ ಮೂರು ಅಕ್ಷರಗಳ ಉಚ್ಚಾರಣೆಯಿದೆ. ಅವುಗಳೆಂದರೆ, ಆ ,ಉ ಮತ್ತು ಮ ಅಕ್ಷರಗಳಾಗಿವೆ. </p>.ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ.<p>ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಎಲ್ಲಾ ಮಂತ್ರಗಳ ಉಚ್ಚರಣೆಯು ಓಂಕಾರದಿಂದಲೇ ಪ್ರಾರಂಭವಾಗುತ್ತದೆ. ಓಂಕಾರದ ಪ್ರತಿ ಅಕ್ಷರವೂ ಒಂದೊಂದು ವಿಶೇಷತೆಯನ್ನು ಹೊಂದಿದೆ. </p><ul><li><p><strong>ಅ ಅಕ್ಷರ:</strong> ಚರಣದಲ್ಲಿ ಬ್ರಹ್ಮನ ಸಂಕೇತ, ಅರ್ಥಾತ್ ಬ್ರಹ್ಮ ಸೃಷ್ಟಿಕರ್ತ. </p></li><li><p><strong>ಉ ಅಕ್ಷರ:</strong> ಚರಣದಲ್ಲಿ ವಿಷ್ಣುವಿನ ಸಂಕೇತ, ಅರ್ಥಾತ್ ಸ್ಥಿತಿ ಎಂದರ್ಥ.</p></li><li><p><strong>ಮ ಅಕ್ಷರ:</strong> ಚರಣದಲ್ಲಿ ಶಿವನ ಸಂಕೇತ, ಅರ್ಥಾತ್ ಲಯ ಎಂದು ಹೇಳಲಾಗಿದೆ.</p></li></ul><p>ಓಂ ಎಲ್ಲಾ ಮಂತ್ರಗಳ ಮೂಲ ಹಾಗೂ ಶ್ರೇಷ್ಠವೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಧಾರ್ಮಿಕ ವೇದ ಗ್ರಂಥಗಳ ಪ್ರಕಾರ ಓಂಕಾರ ಮಂತ್ರಗಳ ಸೃಷ್ಟಿಯ ಮೂಲ ಮಂತ್ರವೆಂದು ಪರಿಗಣಿಸಲಾಗಿದೆ. </p><p>ಓಂಕಾರ ಮಂತ್ರದ ಪಠಣೆ ಪಾಪಗಳನ್ನು ತೊಡೆದು ಹಾಕಿ ಮನಸ್ಸನ್ನು ಶುದ್ಧಗೊಳಿಸುತ್ತದೆ. ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ. ಆಂತರಿಕ ಶುದ್ಧೀಕರಣ ಹಾಗೂ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ.</p>.Ugadi Horoscope: ನಿಮ್ಮ ಯುಗಾದಿ ರಾಶಿಫಲ ಹೇಗಿದೆ? ಇಲ್ಲಿ ವೀಕ್ಷಿಸಿ.<p><strong>ವೈಜ್ಞಾನಿಕವಾಗಿ ಓಂ ಮಂತ್ರದ ಲಾಭಗಳು</strong></p><ul><li><p>ಓಂ ಮಂತ್ರದ ಉಚ್ಚಾರಣೆಯಿಂದ ಗಂಟಲಿನ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟಾಗುತ್ತದೆ. ಇದರಿಂದಾಗಿ ತೊದಲಿಕೆ ದೂರವಾಗುತ್ತದೆ.</p></li><li><p>ಓಂಕಾರ ಮಂತ್ರದ ಪಠಣೆಯಿಂದ ಒತ್ತಡ ಕಡಿಮೆಯಾಗುತ್ತದೆ.</p></li><li><p>ಓಂಕಾರ ಮಂತ್ರವು ನರಮಂಡಲದ ಮೇಲೆ ಪ್ರಭಾವ ಬೀರಿ ಒತ್ತಡ, ಆತಂಕ ಹಾಗೂ ಕೋಪ ಕಡಿಮೆ ಮಾಡುತ್ತದೆ.</p></li><li><p>ಓಂಕಾರ ಮಂತ್ರದ ಪಠಣದಿಂದ ಶ್ವಾಸಕೋಶಕ್ಕೆ ಸಹಕಾರಿಯಾಗಲಿದೆ. ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.</p></li><li><p>ಓಂಕಾರ ಮಂತ್ರ ಪಠಿಸುವುದರಿಂದ ಮಿದುಳಿನ ತರಂಗಗಳು ಚುರುಕಾಗಿ ಮನಸ್ಸನ್ನು ವಿಶಾಲ ಸ್ಥಿತಿಗೆ ಕೊಂಡೊಯ್ಯುತ್ತದೆ.</p></li><li><p>ಓಂಕಾರ ಮಂತ್ರವನ್ನು ಪಠಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.</p></li><li><p>ಓಂಕಾರ ಮಂತ್ರ ಪಠಿಸುವುದರಿಂದ ಸ್ಮರಣೆ ಮತ್ತು ಏಕಾಗ್ರತೆ ಸದೃಢವಾಗುತ್ತದೆ.</p></li><li><p>ಓಂಕಾರ ಮಂತ್ರವನ್ನು ಪಠಿಸುವುದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿಯನ್ನು ಸದೃಢವಾಗಿಸಲು ಸಹಾಯವಾಗುತ್ತದೆ.</p></li><li><p>ಪುರಾಣ ಕಥೆಗಳ ಪ್ರಕಾರ ಋಷಿಮುನಿಗಳು ಈ ಓಂಕಾರ ಮಂತ್ರವನ್ನು ಪಠಿಸಿ ಬ್ರಹ್ಮ ಜ್ಞಾನ ಪಡೆದರು ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಓಂಕಾರ ಸೃಷ್ಟಿಯ ಮೂಲವೆಂಬ ನಂಬಿಕೆ ಇದೆ. ಓಂಕಾರ ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲ, ವೈಜ್ಞಾನಿಕ ಲಾಭಗಳು ದೊರೆಯಲಿವೆ. ಹಾಗಾದರೆ, ಓಂಕಾರದ ಮೂಲವೇನು? ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><p>ಓಂಕಾರ ಮಂತ್ರ ಪಠಣೆ ಮಾಡುವಾಗ ಮೂರು ಅಕ್ಷರಗಳ ಉಚ್ಚಾರಣೆಯಿದೆ. ಅವುಗಳೆಂದರೆ, ಆ ,ಉ ಮತ್ತು ಮ ಅಕ್ಷರಗಳಾಗಿವೆ. </p>.ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ.<p>ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಎಲ್ಲಾ ಮಂತ್ರಗಳ ಉಚ್ಚರಣೆಯು ಓಂಕಾರದಿಂದಲೇ ಪ್ರಾರಂಭವಾಗುತ್ತದೆ. ಓಂಕಾರದ ಪ್ರತಿ ಅಕ್ಷರವೂ ಒಂದೊಂದು ವಿಶೇಷತೆಯನ್ನು ಹೊಂದಿದೆ. </p><ul><li><p><strong>ಅ ಅಕ್ಷರ:</strong> ಚರಣದಲ್ಲಿ ಬ್ರಹ್ಮನ ಸಂಕೇತ, ಅರ್ಥಾತ್ ಬ್ರಹ್ಮ ಸೃಷ್ಟಿಕರ್ತ. </p></li><li><p><strong>ಉ ಅಕ್ಷರ:</strong> ಚರಣದಲ್ಲಿ ವಿಷ್ಣುವಿನ ಸಂಕೇತ, ಅರ್ಥಾತ್ ಸ್ಥಿತಿ ಎಂದರ್ಥ.</p></li><li><p><strong>ಮ ಅಕ್ಷರ:</strong> ಚರಣದಲ್ಲಿ ಶಿವನ ಸಂಕೇತ, ಅರ್ಥಾತ್ ಲಯ ಎಂದು ಹೇಳಲಾಗಿದೆ.</p></li></ul><p>ಓಂ ಎಲ್ಲಾ ಮಂತ್ರಗಳ ಮೂಲ ಹಾಗೂ ಶ್ರೇಷ್ಠವೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಧಾರ್ಮಿಕ ವೇದ ಗ್ರಂಥಗಳ ಪ್ರಕಾರ ಓಂಕಾರ ಮಂತ್ರಗಳ ಸೃಷ್ಟಿಯ ಮೂಲ ಮಂತ್ರವೆಂದು ಪರಿಗಣಿಸಲಾಗಿದೆ. </p><p>ಓಂಕಾರ ಮಂತ್ರದ ಪಠಣೆ ಪಾಪಗಳನ್ನು ತೊಡೆದು ಹಾಕಿ ಮನಸ್ಸನ್ನು ಶುದ್ಧಗೊಳಿಸುತ್ತದೆ. ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ. ಆಂತರಿಕ ಶುದ್ಧೀಕರಣ ಹಾಗೂ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ.</p>.Ugadi Horoscope: ನಿಮ್ಮ ಯುಗಾದಿ ರಾಶಿಫಲ ಹೇಗಿದೆ? ಇಲ್ಲಿ ವೀಕ್ಷಿಸಿ.<p><strong>ವೈಜ್ಞಾನಿಕವಾಗಿ ಓಂ ಮಂತ್ರದ ಲಾಭಗಳು</strong></p><ul><li><p>ಓಂ ಮಂತ್ರದ ಉಚ್ಚಾರಣೆಯಿಂದ ಗಂಟಲಿನ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟಾಗುತ್ತದೆ. ಇದರಿಂದಾಗಿ ತೊದಲಿಕೆ ದೂರವಾಗುತ್ತದೆ.</p></li><li><p>ಓಂಕಾರ ಮಂತ್ರದ ಪಠಣೆಯಿಂದ ಒತ್ತಡ ಕಡಿಮೆಯಾಗುತ್ತದೆ.</p></li><li><p>ಓಂಕಾರ ಮಂತ್ರವು ನರಮಂಡಲದ ಮೇಲೆ ಪ್ರಭಾವ ಬೀರಿ ಒತ್ತಡ, ಆತಂಕ ಹಾಗೂ ಕೋಪ ಕಡಿಮೆ ಮಾಡುತ್ತದೆ.</p></li><li><p>ಓಂಕಾರ ಮಂತ್ರದ ಪಠಣದಿಂದ ಶ್ವಾಸಕೋಶಕ್ಕೆ ಸಹಕಾರಿಯಾಗಲಿದೆ. ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.</p></li><li><p>ಓಂಕಾರ ಮಂತ್ರ ಪಠಿಸುವುದರಿಂದ ಮಿದುಳಿನ ತರಂಗಗಳು ಚುರುಕಾಗಿ ಮನಸ್ಸನ್ನು ವಿಶಾಲ ಸ್ಥಿತಿಗೆ ಕೊಂಡೊಯ್ಯುತ್ತದೆ.</p></li><li><p>ಓಂಕಾರ ಮಂತ್ರವನ್ನು ಪಠಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.</p></li><li><p>ಓಂಕಾರ ಮಂತ್ರ ಪಠಿಸುವುದರಿಂದ ಸ್ಮರಣೆ ಮತ್ತು ಏಕಾಗ್ರತೆ ಸದೃಢವಾಗುತ್ತದೆ.</p></li><li><p>ಓಂಕಾರ ಮಂತ್ರವನ್ನು ಪಠಿಸುವುದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿಯನ್ನು ಸದೃಢವಾಗಿಸಲು ಸಹಾಯವಾಗುತ್ತದೆ.</p></li><li><p>ಪುರಾಣ ಕಥೆಗಳ ಪ್ರಕಾರ ಋಷಿಮುನಿಗಳು ಈ ಓಂಕಾರ ಮಂತ್ರವನ್ನು ಪಠಿಸಿ ಬ್ರಹ್ಮ ಜ್ಞಾನ ಪಡೆದರು ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>