<p>ಡಿಸೆಂಬರ್ 16ರಿಂದ ಜನವರಿ13ರ ನಡುವೆ ಬರುವ ಧನುರ್ಮಾಸ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರದಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಪೂಜೆ ಸಲ್ಲಿಸುವುದರ ಹಿಂದಿನ ಮಹತ್ವವೇನು? ಇದರ ಆಚರಣೆಯ ಹಿನ್ನೆಲೆ ಏನು? ಹಾಗೂ ಈ ಮಾಸದಲ್ಲಿ ಯಾವ ಕಾರಣಕ್ಕೆ ಶುಭ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ನೋಡೋಣ.</p>.ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ.ಶ್ರದ್ಧಾ–ಭಕ್ತಿಯ ಕಾಲಭೈರವ ಉತ್ಸವ. <ul><li><p>ಧನುರ್ಮಾಸದಲ್ಲಿ ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ವಿಷ್ಣು ಮತ್ತು ಲಕ್ಷ್ಮೀ ಹಾಗೂ ಇನ್ನಿತರ ದೇವರುಗಳನ್ನು ಆರಾಧಿಸುವುದು ಹಿಂದೂ ಪರಂಪರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.</p></li><li><p>ಧನುರ್ಮಾಸ ಪ್ರಮುಖವಾಗಿ ವಿಷ್ಣು ಮತ್ತು ಲಕ್ಷ್ಮೀಗೆ ಮೀಸಲಾಗಿಡಲಾಗಿದೆ. </p></li><li><p>ಈ ಮಾಸದಲ್ಲಿ ವಿಷ್ಣುವಿಗೆ ತುಳಸಿ ಪತ್ರೆ ಅರ್ಪಿಸಿ ಪೂಜಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗೆ ಪೂಜಿಸುವುದರಿಂದ ನಮ್ಮೆಲ್ಲಾ ಭಯಕೆಗಳು ಈಡೇರುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ.</p></li><li><p>ಈ ಮಾಸದಲ್ಲಿ ಅರಳಿ ಮರಕ್ಕೆ ಸಹ ಪೂಜೆ ಸಲ್ಲಿಸಲಾಗುತ್ತದೆ. ಅರಳಿ ಮರದ ಪ್ರತಿ ಭಾಗವು ದೇವರ ಅನುರೂಪ ಎಂಬ ನಂಬಿಕೆ ಇದೆ. ಹಾಗೆಯೇ ಕಾಂಡಗಳಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಹಾಗೂ ಮರದ ತುದಿಯಲ್ಲಿ ಶಿವ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.</p></li><li><p>ಧನುರ್ಮಾಸದಲ್ಲಿ ಅರಳಿ ಮರವನ್ನು ಪೂಜಿಸುವುದರಿಂದ ತ್ರಿಮೂರ್ತಿಗಳ ಆಶೀರ್ವಾದ ದೊರೆಯುತ್ತದೆ. ಇದರಿಂದಾಗಿ ಸಂತಾನ ಭಾಗ್ಯ ಹಾಗೂ ವಿವಾಹ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ಧನುರ್ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿ, ಧನ ಧಾನ್ಯಗಳನ್ನು ದಾನ ಮಾಡುವುದರಿಂದ ವಿಶೇಷ ಶುಭ ಫಲಗಳು ದೊರೆಯುತ್ತವೆ.</p></li><li><p>ಈ ಮಾಸದಲ್ಲಿ ಶುಭ ಕಾರ್ಯಗಳಾದ ವಿವಾಹ, ಗೃಹಪ್ರವೇಶ, ವಧು ವರರನ್ನು ಹುಡುಕುವುದು, ಹೊಸ ವಾಹನ ಖರೀದಿ, ಆಸ್ತಿ ಖರೀದಿ, ಮನೆಯ ಖರೀದಿ ಹಾಗೂ ವ್ಯಾಪಾರದ ಆರಂಭ ಮಾಡಬಾರದು ಎಂದು ಹೇಳಲಾಗುತ್ತದೆ.</p></li></ul><p><strong>ಶುಭ ಕಾರ್ಯಗಳನ್ನು ಯಾಕೆ ಮಾಡಬಾರದು:</strong> <br></p><ul><li><p>ಶುಭ ಕಾರ್ಯಗಳ ಅಧಿಪತಿಯಾದ ಗುರು ಧನಸ್ಸು ರಾಶಿಯ ಅಧಿಪತಿಯಾಗಿರುತ್ತಾನೆ. ಈ ಸಮಯದಲ್ಲಿ ಧನಸ್ಸು ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಆದ್ದರಿಂದ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯ ಮಾಡುವುದರಿಂದ ಹೆಚ್ಚಿನ ಶುಭಫಲಗಳು ದೊರೆಯುವುದಿಲ್ಲ ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.</p></li><li><p>ಆದ್ದರಿಂದ ಧನುರ್ಮಾಸದಲ್ಲಿ ದೇವರ ಪೂಜೆನ ಹಾಗೂ ಪ್ರಾರ್ಥನೆಗಳಿಗೆ ಮೀಸಲಿಡಲಾಗಿದೆ ಎಂದು ಪುರಾಣಗಳ ಕಥೆಗಳ ಪ್ರಕಾರ ನಂಬಿಕೆ ಇದೆ</p></li></ul>
<p>ಡಿಸೆಂಬರ್ 16ರಿಂದ ಜನವರಿ13ರ ನಡುವೆ ಬರುವ ಧನುರ್ಮಾಸ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರದಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಪೂಜೆ ಸಲ್ಲಿಸುವುದರ ಹಿಂದಿನ ಮಹತ್ವವೇನು? ಇದರ ಆಚರಣೆಯ ಹಿನ್ನೆಲೆ ಏನು? ಹಾಗೂ ಈ ಮಾಸದಲ್ಲಿ ಯಾವ ಕಾರಣಕ್ಕೆ ಶುಭ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ನೋಡೋಣ.</p>.ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ.ಶ್ರದ್ಧಾ–ಭಕ್ತಿಯ ಕಾಲಭೈರವ ಉತ್ಸವ. <ul><li><p>ಧನುರ್ಮಾಸದಲ್ಲಿ ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ವಿಷ್ಣು ಮತ್ತು ಲಕ್ಷ್ಮೀ ಹಾಗೂ ಇನ್ನಿತರ ದೇವರುಗಳನ್ನು ಆರಾಧಿಸುವುದು ಹಿಂದೂ ಪರಂಪರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.</p></li><li><p>ಧನುರ್ಮಾಸ ಪ್ರಮುಖವಾಗಿ ವಿಷ್ಣು ಮತ್ತು ಲಕ್ಷ್ಮೀಗೆ ಮೀಸಲಾಗಿಡಲಾಗಿದೆ. </p></li><li><p>ಈ ಮಾಸದಲ್ಲಿ ವಿಷ್ಣುವಿಗೆ ತುಳಸಿ ಪತ್ರೆ ಅರ್ಪಿಸಿ ಪೂಜಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗೆ ಪೂಜಿಸುವುದರಿಂದ ನಮ್ಮೆಲ್ಲಾ ಭಯಕೆಗಳು ಈಡೇರುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ.</p></li><li><p>ಈ ಮಾಸದಲ್ಲಿ ಅರಳಿ ಮರಕ್ಕೆ ಸಹ ಪೂಜೆ ಸಲ್ಲಿಸಲಾಗುತ್ತದೆ. ಅರಳಿ ಮರದ ಪ್ರತಿ ಭಾಗವು ದೇವರ ಅನುರೂಪ ಎಂಬ ನಂಬಿಕೆ ಇದೆ. ಹಾಗೆಯೇ ಕಾಂಡಗಳಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಹಾಗೂ ಮರದ ತುದಿಯಲ್ಲಿ ಶಿವ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.</p></li><li><p>ಧನುರ್ಮಾಸದಲ್ಲಿ ಅರಳಿ ಮರವನ್ನು ಪೂಜಿಸುವುದರಿಂದ ತ್ರಿಮೂರ್ತಿಗಳ ಆಶೀರ್ವಾದ ದೊರೆಯುತ್ತದೆ. ಇದರಿಂದಾಗಿ ಸಂತಾನ ಭಾಗ್ಯ ಹಾಗೂ ವಿವಾಹ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ಧನುರ್ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿ, ಧನ ಧಾನ್ಯಗಳನ್ನು ದಾನ ಮಾಡುವುದರಿಂದ ವಿಶೇಷ ಶುಭ ಫಲಗಳು ದೊರೆಯುತ್ತವೆ.</p></li><li><p>ಈ ಮಾಸದಲ್ಲಿ ಶುಭ ಕಾರ್ಯಗಳಾದ ವಿವಾಹ, ಗೃಹಪ್ರವೇಶ, ವಧು ವರರನ್ನು ಹುಡುಕುವುದು, ಹೊಸ ವಾಹನ ಖರೀದಿ, ಆಸ್ತಿ ಖರೀದಿ, ಮನೆಯ ಖರೀದಿ ಹಾಗೂ ವ್ಯಾಪಾರದ ಆರಂಭ ಮಾಡಬಾರದು ಎಂದು ಹೇಳಲಾಗುತ್ತದೆ.</p></li></ul><p><strong>ಶುಭ ಕಾರ್ಯಗಳನ್ನು ಯಾಕೆ ಮಾಡಬಾರದು:</strong> <br></p><ul><li><p>ಶುಭ ಕಾರ್ಯಗಳ ಅಧಿಪತಿಯಾದ ಗುರು ಧನಸ್ಸು ರಾಶಿಯ ಅಧಿಪತಿಯಾಗಿರುತ್ತಾನೆ. ಈ ಸಮಯದಲ್ಲಿ ಧನಸ್ಸು ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಆದ್ದರಿಂದ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯ ಮಾಡುವುದರಿಂದ ಹೆಚ್ಚಿನ ಶುಭಫಲಗಳು ದೊರೆಯುವುದಿಲ್ಲ ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.</p></li><li><p>ಆದ್ದರಿಂದ ಧನುರ್ಮಾಸದಲ್ಲಿ ದೇವರ ಪೂಜೆನ ಹಾಗೂ ಪ್ರಾರ್ಥನೆಗಳಿಗೆ ಮೀಸಲಿಡಲಾಗಿದೆ ಎಂದು ಪುರಾಣಗಳ ಕಥೆಗಳ ಪ್ರಕಾರ ನಂಬಿಕೆ ಇದೆ</p></li></ul>