<p>ಜನವರಿ 25ರ ಭಾನುವಾರದಂದು ರಥಸಪ್ತಮಿ ಅಥವಾ ಸೂರ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನಾರಾಯಣ ಜನಿಸಿದನೆಂದು ಪುರಾಣ ಕಥೆಗಳು ಹೇಳುತ್ತವೆ. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಪೂಜೆ ಸಲ್ಲಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.</p><p>ಉತ್ತರಾಯಣ ಪುಣ್ಯಕಾಲದ ಆರಂಭದ ನಂತರ, ಸೂರ್ಯನು ತನ್ನ ಏಳು ಕುದುರೆಗಳ ರಥವನ್ನು ಉತ್ತರ ದಿಕ್ಕಿನತ್ತ ತಿರುಗಿಸಿ ಸಂಚರಿಸುವ ದಿನವೇ ರಥಸಪ್ತಮಿಯಾಗಿದೆ.</p><p>ಏಳು ಕುದುರೆಗಳು ಏಳು ವಾರಗಳನ್ನು ಹಾಗೂ ರಥದ ಹನ್ನೆರಡು ಚಕ್ರಗಳು ವರ್ಷದ 12 ರಾಶಿಗಳನ್ನು ಸಂಕೇತಿಸುತ್ತವೆ.</p>.ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ.<p><strong>ಸ್ನಾನಕ್ಕೆ ಬಿಳಿ ಎಕ್ಕ ಶ್ರೇಷ್ಠ</strong></p><p>ಈ ದಿನ ನೀರಿಗೆ ಬಿಳಿ ಎಕ್ಕದ ಏಳು ಎಲೆ ಹಾಗೂ ಸ್ವಲ್ಪ ಅರಿಸಿಣ ಸೇರಿಸಿ ಸ್ನಾನ ಮಾಡುವ ರೂಢಿಯಿದೆ. ನಂತರ ತಲೆಯ ಮೇಲೆ ಒಂದು ಎಕ್ಕದ ಎಲೆ, ಎರಡೂ ಭುಜಗಳ ಮೇಲೆ ಒಂದೊಂದು, ಮುಂಗಾಲಿನ ಮೇಲೆ ಎಲೆ ಇಟ್ಟುಕೊಂಡು ಸ್ನಾನ ಮಾಡುವುದು ಶ್ರೇಷ್ಠವಾಗಿದೆ.</p><p>ಸೂರ್ಯೋದಯದ ಸಮಯದಲ್ಲಿ ಸೂರ್ಯನಾರಾಯಣನಿಗೆ ದೀಪವನ್ನು ಬೆಳಗಿಸಿದರೆ ವರ್ಷ ಪೂರ್ತಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.</p><p>ರಥಸಪ್ತಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುವುದರಿಂದ ನಾರಾಯಣ ಹಾಗೂ ಲಕ್ಷ್ಮೀ ದೇವಿಯ ಕೃಪೆ ಪ್ರಾಪ್ತವಾಗುತ್ತದೆ. ಈ ದಿನ ಗೋಧಿ, ಸಕ್ಕರೆ ಹಾಗೂ ವಸ್ತ್ರ ದಾನದಿಂದ ಶುಭಪಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜನವರಿ 25ರ ಭಾನುವಾರದಂದು ರಥಸಪ್ತಮಿ ಅಥವಾ ಸೂರ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನಾರಾಯಣ ಜನಿಸಿದನೆಂದು ಪುರಾಣ ಕಥೆಗಳು ಹೇಳುತ್ತವೆ. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಪೂಜೆ ಸಲ್ಲಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.</p><p>ಉತ್ತರಾಯಣ ಪುಣ್ಯಕಾಲದ ಆರಂಭದ ನಂತರ, ಸೂರ್ಯನು ತನ್ನ ಏಳು ಕುದುರೆಗಳ ರಥವನ್ನು ಉತ್ತರ ದಿಕ್ಕಿನತ್ತ ತಿರುಗಿಸಿ ಸಂಚರಿಸುವ ದಿನವೇ ರಥಸಪ್ತಮಿಯಾಗಿದೆ.</p><p>ಏಳು ಕುದುರೆಗಳು ಏಳು ವಾರಗಳನ್ನು ಹಾಗೂ ರಥದ ಹನ್ನೆರಡು ಚಕ್ರಗಳು ವರ್ಷದ 12 ರಾಶಿಗಳನ್ನು ಸಂಕೇತಿಸುತ್ತವೆ.</p>.ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ.<p><strong>ಸ್ನಾನಕ್ಕೆ ಬಿಳಿ ಎಕ್ಕ ಶ್ರೇಷ್ಠ</strong></p><p>ಈ ದಿನ ನೀರಿಗೆ ಬಿಳಿ ಎಕ್ಕದ ಏಳು ಎಲೆ ಹಾಗೂ ಸ್ವಲ್ಪ ಅರಿಸಿಣ ಸೇರಿಸಿ ಸ್ನಾನ ಮಾಡುವ ರೂಢಿಯಿದೆ. ನಂತರ ತಲೆಯ ಮೇಲೆ ಒಂದು ಎಕ್ಕದ ಎಲೆ, ಎರಡೂ ಭುಜಗಳ ಮೇಲೆ ಒಂದೊಂದು, ಮುಂಗಾಲಿನ ಮೇಲೆ ಎಲೆ ಇಟ್ಟುಕೊಂಡು ಸ್ನಾನ ಮಾಡುವುದು ಶ್ರೇಷ್ಠವಾಗಿದೆ.</p><p>ಸೂರ್ಯೋದಯದ ಸಮಯದಲ್ಲಿ ಸೂರ್ಯನಾರಾಯಣನಿಗೆ ದೀಪವನ್ನು ಬೆಳಗಿಸಿದರೆ ವರ್ಷ ಪೂರ್ತಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.</p><p>ರಥಸಪ್ತಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುವುದರಿಂದ ನಾರಾಯಣ ಹಾಗೂ ಲಕ್ಷ್ಮೀ ದೇವಿಯ ಕೃಪೆ ಪ್ರಾಪ್ತವಾಗುತ್ತದೆ. ಈ ದಿನ ಗೋಧಿ, ಸಕ್ಕರೆ ಹಾಗೂ ವಸ್ತ್ರ ದಾನದಿಂದ ಶುಭಪಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>