<p>ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪವಾಸ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆರೋಗ್ಯ ದೃಷ್ಟಿಯಿಂದಲೂ ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ, ನಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ವಾರದ 7 ದಿನಗಳಲ್ಲಿ ಯಾವ ದಿನ ಯಾವ ದೇವರನ್ನುಆರಾಧಿಸಿ ಉಪವಾಸ ಮಾಡಿದರೆ ಒಳಿತು ಎಂಬುದನ್ನು ಶಾಸ್ತ್ರಾನುಸಾರವಾಗಿ ತಿಳಿಯೋಣ.</p>.ಚತುರ್ಗ್ರಾಹಿ ಯೋಗ: 200 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಭಾರೀ ಅದೃಷ್ಟ.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಚಂದ್ರನಿಗೆ ಕೂಡಾ ಪೂಜೆ ಸಲ್ಲಿಸಬಹುದಾಗಿದೆ. ಜಾತಕದಲ್ಲಿ ಚಂದ್ರನ ದೋಷ ಇರುವವರು ಈ ದಿನ ಉಪವಾಸವನ್ನು ಕೈಗೊಂಡರೆ ಚಂದ್ರನಿಂದ ವಿಶೇಷ ಆಶೀರ್ವಾದ ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ.</p><p>ಮಂಗಳವಾರ ಉಪವಾಸ ಮಾಡುವುದರಿಂದ ಸ್ವಭಾವದಲ್ಲಿ ಸಂಯಮವು ಹೆಚ್ಚಾಗುತ್ತದೆ. ಈ ದಿನವನ್ನು ಆಂಜನೇಯನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಮಂಗಳನ ದೋಷವಿದ್ದರೆ ಅಂತಹವರಿಗೆ ಈ ಉಪವಾಸವು ತುಂಬಾ ಪ್ರಯೋಜನಕಾರಿಯಾಗಿದೆ. ಮಂಗಳವಾರ ಉಪವಾಸ ಕೈಗೊಳ್ಳುವವರು ಉಪ್ಪನ್ನು ಸೇವಿಸಬಾರದು. ಆರ್ಥಿಕ ಸಮಸ್ಯೆ ಪರಿಹರವಾಗಲು ಈ ದಿನದ ಉಪವಾಸ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.</p><p>ಬುಧುವಾರ ಉಪವಾಸ ಮಾಡುವುದು ಹೆಚ್ಚು ಲಾಭದಾಯಕವಾಗಿದೆ. ಈ ದಿನವನ್ನು ಬುಧ ಗ್ರಹ ಮತ್ತು ಗಣೇಶನಿಗೆ ಸಮರ್ಪಿಸಲಾಗಿದೆ. ಇಂದು ಉಪವಾಸವನ್ನು ಆಚರಿಸುವವರು ಗಣೇಶನನ್ನು ಭಕ್ತಿಯಿಂದ ಪೂಜಿಸಬೇಕು. ನವಗ್ರಹ ದೇವಾಲಯಕ್ಕೆ ಭೇಟಿ ನೀಡುವುದು ಉತ್ತಮವಾಗಿದೆ. ಹಸಿರು ವಸ್ತ್ರ, ಹಸಿರು ಬಳೆ ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.</p><p>ಗುರುವಾರ ಉಪವಾಸವನ್ನು ಆಚರಣೆ ಮಹಿಳೆಯರಿಗೆ ಸೂಕ್ತ. ಮಹಿಳೆಯರು ಈ ಉಪವಾಸವನ್ನು ಶ್ರದ್ಧೆಯಿಂದ ಆಚರಿಸಬೇಕು. ಹಳದಿ ಬಟ್ಟೆ ಧರಿಸಿ, ಹಳದಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಉಪವಾದಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜಾತಕದಲ್ಲಿ ಗುರು ಕೂಡ ಬಲಶಾಲಿಯಾಗುತ್ತಾನೆ. </p>.ಧನುರ್ಮಾಸ: ಈ ರಾಶಿಯವರಿಗೆ ಶುಭಫಲ.<p>ಶುಕ್ರವಾರವನ್ನು ಚಾಮುಂಡಿ ದೇವಿಯ ಆರಾಧನೆಯ ದಿನ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಉಪವಾಸದಿಂದ ಮಕ್ಕಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಉಪವಾಸವನ್ನು ಆಚರಿಸಿದರೆ ಪುರುಷರ ವೀರ್ಯವು ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. </p><p>ಭಾನುವಾರ ಉಪವಾಸ ಮಾಡುವುದರಿಂದ ಸೂರ್ಯನಾರಾಯಣನ ಕೃಪೆ ನಮ್ಮದಾಗಲಿದೆ. ಜ್ಯೋತಿಷದ ಪ್ರಕಾರ ಪ್ರತಿ ಭಾನುವಾರ ಉಪವಾಸವನ್ನು ಆಚರಿಸಿದರೆ ಜಾತಕದಲ್ಲಿ ಸೂರ್ಯನ ಸ್ಥಾನವು ಉತ್ತಮವಾಗಿರುತ್ತದೆ. </p><p>ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡುವುದರಿಂದ ದೂರ ಇರುವುದು ಉತ್ತಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪವಾಸ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆರೋಗ್ಯ ದೃಷ್ಟಿಯಿಂದಲೂ ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ, ನಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ವಾರದ 7 ದಿನಗಳಲ್ಲಿ ಯಾವ ದಿನ ಯಾವ ದೇವರನ್ನುಆರಾಧಿಸಿ ಉಪವಾಸ ಮಾಡಿದರೆ ಒಳಿತು ಎಂಬುದನ್ನು ಶಾಸ್ತ್ರಾನುಸಾರವಾಗಿ ತಿಳಿಯೋಣ.</p>.ಚತುರ್ಗ್ರಾಹಿ ಯೋಗ: 200 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಭಾರೀ ಅದೃಷ್ಟ.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಚಂದ್ರನಿಗೆ ಕೂಡಾ ಪೂಜೆ ಸಲ್ಲಿಸಬಹುದಾಗಿದೆ. ಜಾತಕದಲ್ಲಿ ಚಂದ್ರನ ದೋಷ ಇರುವವರು ಈ ದಿನ ಉಪವಾಸವನ್ನು ಕೈಗೊಂಡರೆ ಚಂದ್ರನಿಂದ ವಿಶೇಷ ಆಶೀರ್ವಾದ ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ.</p><p>ಮಂಗಳವಾರ ಉಪವಾಸ ಮಾಡುವುದರಿಂದ ಸ್ವಭಾವದಲ್ಲಿ ಸಂಯಮವು ಹೆಚ್ಚಾಗುತ್ತದೆ. ಈ ದಿನವನ್ನು ಆಂಜನೇಯನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಮಂಗಳನ ದೋಷವಿದ್ದರೆ ಅಂತಹವರಿಗೆ ಈ ಉಪವಾಸವು ತುಂಬಾ ಪ್ರಯೋಜನಕಾರಿಯಾಗಿದೆ. ಮಂಗಳವಾರ ಉಪವಾಸ ಕೈಗೊಳ್ಳುವವರು ಉಪ್ಪನ್ನು ಸೇವಿಸಬಾರದು. ಆರ್ಥಿಕ ಸಮಸ್ಯೆ ಪರಿಹರವಾಗಲು ಈ ದಿನದ ಉಪವಾಸ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.</p><p>ಬುಧುವಾರ ಉಪವಾಸ ಮಾಡುವುದು ಹೆಚ್ಚು ಲಾಭದಾಯಕವಾಗಿದೆ. ಈ ದಿನವನ್ನು ಬುಧ ಗ್ರಹ ಮತ್ತು ಗಣೇಶನಿಗೆ ಸಮರ್ಪಿಸಲಾಗಿದೆ. ಇಂದು ಉಪವಾಸವನ್ನು ಆಚರಿಸುವವರು ಗಣೇಶನನ್ನು ಭಕ್ತಿಯಿಂದ ಪೂಜಿಸಬೇಕು. ನವಗ್ರಹ ದೇವಾಲಯಕ್ಕೆ ಭೇಟಿ ನೀಡುವುದು ಉತ್ತಮವಾಗಿದೆ. ಹಸಿರು ವಸ್ತ್ರ, ಹಸಿರು ಬಳೆ ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.</p><p>ಗುರುವಾರ ಉಪವಾಸವನ್ನು ಆಚರಣೆ ಮಹಿಳೆಯರಿಗೆ ಸೂಕ್ತ. ಮಹಿಳೆಯರು ಈ ಉಪವಾಸವನ್ನು ಶ್ರದ್ಧೆಯಿಂದ ಆಚರಿಸಬೇಕು. ಹಳದಿ ಬಟ್ಟೆ ಧರಿಸಿ, ಹಳದಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಉಪವಾದಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜಾತಕದಲ್ಲಿ ಗುರು ಕೂಡ ಬಲಶಾಲಿಯಾಗುತ್ತಾನೆ. </p>.ಧನುರ್ಮಾಸ: ಈ ರಾಶಿಯವರಿಗೆ ಶುಭಫಲ.<p>ಶುಕ್ರವಾರವನ್ನು ಚಾಮುಂಡಿ ದೇವಿಯ ಆರಾಧನೆಯ ದಿನ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಉಪವಾಸದಿಂದ ಮಕ್ಕಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಉಪವಾಸವನ್ನು ಆಚರಿಸಿದರೆ ಪುರುಷರ ವೀರ್ಯವು ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. </p><p>ಭಾನುವಾರ ಉಪವಾಸ ಮಾಡುವುದರಿಂದ ಸೂರ್ಯನಾರಾಯಣನ ಕೃಪೆ ನಮ್ಮದಾಗಲಿದೆ. ಜ್ಯೋತಿಷದ ಪ್ರಕಾರ ಪ್ರತಿ ಭಾನುವಾರ ಉಪವಾಸವನ್ನು ಆಚರಿಸಿದರೆ ಜಾತಕದಲ್ಲಿ ಸೂರ್ಯನ ಸ್ಥಾನವು ಉತ್ತಮವಾಗಿರುತ್ತದೆ. </p><p>ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡುವುದರಿಂದ ದೂರ ಇರುವುದು ಉತ್ತಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>