<p><strong>ಶಿರಸಿ: </strong>ಫಸಲು ಕಳೆದ ವರ್ಷಕ್ಕಿಂತ ಕಡಿಮೆಯಾದ ಚಿಂತೆಯಲ್ಲಿದ್ದ ಕೃಷಿಕರಿಗೆ ರಾಶಿ ಅಡಿಕೆ (ಕೆಂಪಡಿಕೆ) ದರ ವಾರದಿಂದ ಪ್ರತಿ ಕ್ವಿಂಟಾಲ್ಗೆ ₹40 ಸಾವಿರದ ಆಸುಪಾಸು ಸ್ಥಿರವಾಗಿರುವುದು ಸಮಾಧಾನ ತಂದಿದೆ.</p>.<p>ಜಿಲ್ಲೆಯಲ್ಲಿ ಅಡಿಕೆ ಕೊಯ್ಲು ಅರ್ಧದಷ್ಟು ಮುಗಿದಿದೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಗೆ ಹೊಸ ಕೆಂಪಡಿಕೆ ಆವಕವಾಗುತ್ತಿದೆ. ಇದರ ಬೆನ್ನಲ್ಲೇ ದರವೂ ಏರಿಕೆಯಾಗುತ್ತಿದೆ.</p>.<p>ಮಳೆಗಾಲದಲ್ಲಿ ಕೊಳೆರೋಗ, ಹಿಡಿಮುಂಡಿಗೆ ರೋಗಬಾಧೆಯಿಂದ ರೈತರು ಹೈರಾಣಾಗಿದ್ದರು. ಈಗ, ಇರುವ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಚಾಲಿ ಅಡಿಕೆ ಮಾಡುವ ಆಸಕ್ತಿಯಲ್ಲಿದ್ದ ರೈತರು ಕೂಡ ರಾಶಿ ಅಡಿಕೆಯನ್ನೇ ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.</p>.<p>ರಾಶಿ ಅಡಿಕೆಗೆ ಕಳೆದ ತಿಂಗಳು ಸರಾಸರಿ ₹ 35 ಸಾವಿರದಿಂದ ರಿಂದ ₹ 38 ಸಾವಿರ ದರವಿತ್ತು. ಹೊಸ ಅಡಿಕೆ ಆವಕವಾದ ದಿನ ₹ 39 ಸಾವಿರದವರೆಗೆ ತಲುಪಿತ್ತು. ಮಾರನೆ ದಿನ ಮತ್ತೆ ಬೆಲೆ ಇಳಿಕೆಯಾಗಿತ್ತು. ಆದರೆ, ಈಗ ಒಂದು ವಾರದಿಂದ ಸರಾಸರಿ ₹40 ಸಾವಿರದ ಆಸುಪಾಸಿನಲ್ಲಿ ಅಡಿಕೆ ವಹಿವಾಟು ನಡೆಯುತ್ತಿದೆ.</p>.<p>‘ಬೆಳೆ ಪ್ರಮಾಣ ಕಡಿಮೆ ಇದೆ. ಕೂಲಿಕಾರ್ಮಿಕರ ಕೊರತೆಯಿಂದ ಕೆಂಪಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಕಾರಣದಿಂದ ಅಡಿಕೆ ದಾಸ್ತಾನು ಹೆಚ್ಚು ಇರಲಿಲ್ಲ. ಇವೆಲ್ಲ ಕಾರಣಕ್ಕೆ ಈಗ ಹೆಚ್ಚು ದರ ಬಂದಿರಬಹುದು’ ಎನ್ನುತ್ತಾರೆ ಶಿರಸಿಯ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.</p>.<p>ಪ್ರತಿ ಬಾರಿ ಬೆಳೆಕೊಯ್ಲು ಆರಂಭದಲ್ಲಿ ಹೆಚ್ಚು ದರ ಸಿಗುತ್ತದೆ. ಆದರೆ, ಸಿದ್ಧ ಅಡಿಕೆ ಮಾರುಕಟ್ಟೆಗೆ ಹೆಚ್ಚು ಬರುತ್ತಿದ್ದಂತೆ ಬೆಲೆ ಇಳಿಕೆಯಾಗುತ್ತಿತ್ತು. ಈಗಿದ್ದ ದರ ಮುಂದುವರೆದರೆ ಕೃಷಿಕರಿಗೆ ಅನುಕೂಲವಾಗಬಹುದು ಎಂದು ಕೃಷಿಕ ರಾಘವೇಂದ್ರ ಹೆಗಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಫಸಲು ಕಳೆದ ವರ್ಷಕ್ಕಿಂತ ಕಡಿಮೆಯಾದ ಚಿಂತೆಯಲ್ಲಿದ್ದ ಕೃಷಿಕರಿಗೆ ರಾಶಿ ಅಡಿಕೆ (ಕೆಂಪಡಿಕೆ) ದರ ವಾರದಿಂದ ಪ್ರತಿ ಕ್ವಿಂಟಾಲ್ಗೆ ₹40 ಸಾವಿರದ ಆಸುಪಾಸು ಸ್ಥಿರವಾಗಿರುವುದು ಸಮಾಧಾನ ತಂದಿದೆ.</p>.<p>ಜಿಲ್ಲೆಯಲ್ಲಿ ಅಡಿಕೆ ಕೊಯ್ಲು ಅರ್ಧದಷ್ಟು ಮುಗಿದಿದೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಗೆ ಹೊಸ ಕೆಂಪಡಿಕೆ ಆವಕವಾಗುತ್ತಿದೆ. ಇದರ ಬೆನ್ನಲ್ಲೇ ದರವೂ ಏರಿಕೆಯಾಗುತ್ತಿದೆ.</p>.<p>ಮಳೆಗಾಲದಲ್ಲಿ ಕೊಳೆರೋಗ, ಹಿಡಿಮುಂಡಿಗೆ ರೋಗಬಾಧೆಯಿಂದ ರೈತರು ಹೈರಾಣಾಗಿದ್ದರು. ಈಗ, ಇರುವ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಚಾಲಿ ಅಡಿಕೆ ಮಾಡುವ ಆಸಕ್ತಿಯಲ್ಲಿದ್ದ ರೈತರು ಕೂಡ ರಾಶಿ ಅಡಿಕೆಯನ್ನೇ ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.</p>.<p>ರಾಶಿ ಅಡಿಕೆಗೆ ಕಳೆದ ತಿಂಗಳು ಸರಾಸರಿ ₹ 35 ಸಾವಿರದಿಂದ ರಿಂದ ₹ 38 ಸಾವಿರ ದರವಿತ್ತು. ಹೊಸ ಅಡಿಕೆ ಆವಕವಾದ ದಿನ ₹ 39 ಸಾವಿರದವರೆಗೆ ತಲುಪಿತ್ತು. ಮಾರನೆ ದಿನ ಮತ್ತೆ ಬೆಲೆ ಇಳಿಕೆಯಾಗಿತ್ತು. ಆದರೆ, ಈಗ ಒಂದು ವಾರದಿಂದ ಸರಾಸರಿ ₹40 ಸಾವಿರದ ಆಸುಪಾಸಿನಲ್ಲಿ ಅಡಿಕೆ ವಹಿವಾಟು ನಡೆಯುತ್ತಿದೆ.</p>.<p>‘ಬೆಳೆ ಪ್ರಮಾಣ ಕಡಿಮೆ ಇದೆ. ಕೂಲಿಕಾರ್ಮಿಕರ ಕೊರತೆಯಿಂದ ಕೆಂಪಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಕಾರಣದಿಂದ ಅಡಿಕೆ ದಾಸ್ತಾನು ಹೆಚ್ಚು ಇರಲಿಲ್ಲ. ಇವೆಲ್ಲ ಕಾರಣಕ್ಕೆ ಈಗ ಹೆಚ್ಚು ದರ ಬಂದಿರಬಹುದು’ ಎನ್ನುತ್ತಾರೆ ಶಿರಸಿಯ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.</p>.<p>ಪ್ರತಿ ಬಾರಿ ಬೆಳೆಕೊಯ್ಲು ಆರಂಭದಲ್ಲಿ ಹೆಚ್ಚು ದರ ಸಿಗುತ್ತದೆ. ಆದರೆ, ಸಿದ್ಧ ಅಡಿಕೆ ಮಾರುಕಟ್ಟೆಗೆ ಹೆಚ್ಚು ಬರುತ್ತಿದ್ದಂತೆ ಬೆಲೆ ಇಳಿಕೆಯಾಗುತ್ತಿತ್ತು. ಈಗಿದ್ದ ದರ ಮುಂದುವರೆದರೆ ಕೃಷಿಕರಿಗೆ ಅನುಕೂಲವಾಗಬಹುದು ಎಂದು ಕೃಷಿಕ ರಾಘವೇಂದ್ರ ಹೆಗಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>