<p><strong>ನವದೆಹಲಿ: </strong>ಭಾರತದಲ್ಲಿ 600 ಉದ್ಯೋಗಿಗಳನ್ನು ವಜಾ ಮಾಡಲು ಉಬರ್ ಮುಂದಾಗಿದೆ. ಇದು ಕಂಪನಿಯ ಭಾರತದಲ್ಲಿರುವ ಒಟ್ಟು ಉದ್ಯೋಗಿಗಳ ನಾಲ್ಕನೇ ಒಂದರಷ್ಟಾಗಿರಲಿದೆ. ಇದರಲ್ಲಿ ಚಾಲನೆ, ಉದ್ಯಮ ಅಭಿವೃದ್ಧಿ, ಕಾನೂನು, ಹಣಕಾಸು, ನೀತಿ ನಿರೂಪಣೆಹಾಗೂ ಮಾರ್ಕೆಟಿಂಗ್ ವಿಭಾಗದವರು ಇರಲಿದ್ದಾರೆ ಎನ್ನಲಾಗಿದೆ.</p>.<p>‘ಕೊರೊನಾ ವೈರಸ್ ಅನಿರೀಕ್ಷಿತ ಹೊಡೆತದಿಂದಾಗಿ ಉಬರ್ಗೆ ಉದ್ಯೋಗ ಕಡಿತ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ. 600 ಕಾಯಂ ಉದ್ಯೋಗಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಘೋಷಿಸಿರುವ ಜಾಗತಿಕ ಉದ್ಯೋಗ ಕಡಿತದಲ್ಲಿ ಇದೂ ಸೇರಿರಲಿದೆ’ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಉಬರ್ ತೊರೆಯುತ್ತಿರುವ ಸಹೋದ್ಯೋಗಿಗಳಿಗೆ ಮತ್ತು ಕಂಪನಿಯಲ್ಲಿರುವ ನಮಗೆಲ್ಲ ಇಂದು ಅತೀವ ದುಃಖದ ದಿನವಾಗಿದೆ. ನಾವೀಗ ಈ ನಿರ್ಧಾರ ಕೈಗೊಂಡಿರುವುದರಿಂದ ಭವಿಷ್ಯವನ್ನು ಆಶಾದಾಯಕವಾಗಿ ನೋಡಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/educationcareer/career/cmie-says-122-million-people-lost-their-jobs-in-india-during-covid-19-lockdown-725233.html" target="_blank">ಕೊರೊನಾ ಲಾಕ್ಡೌನ್ ವೇಳೆ ಭಾರತದಲ್ಲಿ 12.2 ಕೋಟಿ ಉದ್ಯೋಗ ನಷ್ಟ: ಸಿಎಂಐಇ</a></p>.<p>‘ಹೊರಹೋಗುತ್ತಿರುವ ಉದ್ಯೋಗಿಗಳ ಕ್ಷಮೆ ಕೋರುತ್ತೇನೆ. ಉಬರ್ಗಾಗಿ ಕೊಡುಗೆ ನೀಡಿದ್ದಕ್ಕೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.</p>.<p>ಪ್ರತಿಯೊಬ್ಬರಿಗೂ ಕನಿಷ್ಠ 10 ವಾರಗಳ ವೇತನ ಪಾವತಿಸಲಾಗುವುದು. ಮುಂದಿನ 6 ತಿಂಗಳುಗಳಿಗೆ ವೈದ್ಯಕೀಯ ವಿಮೆ, ಹೊರಗುತ್ತಿಗೆ ಬೆಂಬಲ ನೀಡಲಾಗುವುದು. ಅವರ ಬಳಿ ಇರುವ ಲ್ಯಾಪ್ಟಾಪ್ಗಳನ್ನು ಅವರಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡಲಾಗುವುದು. ಉಬರ್ ಟ್ಯಾಲೆಂಟ್ ಡೈರೆಕ್ಟರ್ಗೆ ಸೇರಲು ಅವಕಾಶ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಭಾರತದಲ್ಲಿ 600 ಉದ್ಯೋಗಿಗಳನ್ನು ವಜಾ ಮಾಡಲು ಉಬರ್ ಮುಂದಾಗಿದೆ. ಇದು ಕಂಪನಿಯ ಭಾರತದಲ್ಲಿರುವ ಒಟ್ಟು ಉದ್ಯೋಗಿಗಳ ನಾಲ್ಕನೇ ಒಂದರಷ್ಟಾಗಿರಲಿದೆ. ಇದರಲ್ಲಿ ಚಾಲನೆ, ಉದ್ಯಮ ಅಭಿವೃದ್ಧಿ, ಕಾನೂನು, ಹಣಕಾಸು, ನೀತಿ ನಿರೂಪಣೆಹಾಗೂ ಮಾರ್ಕೆಟಿಂಗ್ ವಿಭಾಗದವರು ಇರಲಿದ್ದಾರೆ ಎನ್ನಲಾಗಿದೆ.</p>.<p>‘ಕೊರೊನಾ ವೈರಸ್ ಅನಿರೀಕ್ಷಿತ ಹೊಡೆತದಿಂದಾಗಿ ಉಬರ್ಗೆ ಉದ್ಯೋಗ ಕಡಿತ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ. 600 ಕಾಯಂ ಉದ್ಯೋಗಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಘೋಷಿಸಿರುವ ಜಾಗತಿಕ ಉದ್ಯೋಗ ಕಡಿತದಲ್ಲಿ ಇದೂ ಸೇರಿರಲಿದೆ’ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಉಬರ್ ತೊರೆಯುತ್ತಿರುವ ಸಹೋದ್ಯೋಗಿಗಳಿಗೆ ಮತ್ತು ಕಂಪನಿಯಲ್ಲಿರುವ ನಮಗೆಲ್ಲ ಇಂದು ಅತೀವ ದುಃಖದ ದಿನವಾಗಿದೆ. ನಾವೀಗ ಈ ನಿರ್ಧಾರ ಕೈಗೊಂಡಿರುವುದರಿಂದ ಭವಿಷ್ಯವನ್ನು ಆಶಾದಾಯಕವಾಗಿ ನೋಡಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/educationcareer/career/cmie-says-122-million-people-lost-their-jobs-in-india-during-covid-19-lockdown-725233.html" target="_blank">ಕೊರೊನಾ ಲಾಕ್ಡೌನ್ ವೇಳೆ ಭಾರತದಲ್ಲಿ 12.2 ಕೋಟಿ ಉದ್ಯೋಗ ನಷ್ಟ: ಸಿಎಂಐಇ</a></p>.<p>‘ಹೊರಹೋಗುತ್ತಿರುವ ಉದ್ಯೋಗಿಗಳ ಕ್ಷಮೆ ಕೋರುತ್ತೇನೆ. ಉಬರ್ಗಾಗಿ ಕೊಡುಗೆ ನೀಡಿದ್ದಕ್ಕೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.</p>.<p>ಪ್ರತಿಯೊಬ್ಬರಿಗೂ ಕನಿಷ್ಠ 10 ವಾರಗಳ ವೇತನ ಪಾವತಿಸಲಾಗುವುದು. ಮುಂದಿನ 6 ತಿಂಗಳುಗಳಿಗೆ ವೈದ್ಯಕೀಯ ವಿಮೆ, ಹೊರಗುತ್ತಿಗೆ ಬೆಂಬಲ ನೀಡಲಾಗುವುದು. ಅವರ ಬಳಿ ಇರುವ ಲ್ಯಾಪ್ಟಾಪ್ಗಳನ್ನು ಅವರಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡಲಾಗುವುದು. ಉಬರ್ ಟ್ಯಾಲೆಂಟ್ ಡೈರೆಕ್ಟರ್ಗೆ ಸೇರಲು ಅವಕಾಶ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>