<p><strong>ನವದೆಹಲಿ</strong>: ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್ಗೆ ₹16,300 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನ್ನಡಿ ಮುಂದಿನ ಏಳು ವರ್ಷಗಳಲ್ಲಿ ₹34,300 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.</p>.<p>ಮಿಷನ್ನಡಿ 24 ಅಮೂಲ್ಯ ಖನಿಜಗಳನ್ನು ಗುರುತಿಸಲಾಗಿದೆ. ಈ ನಿರ್ಣಾಯಕ ಖನಿಜಗಳ ಪರಿಶೋಧನೆಗೆ ಆರ್ಥಿಕ ನೆರವು ಲಭಿಸಲಿದೆ.</p>.<p class="bodytext">2024–25ನೇ ಸಾಲಿನ ಬಜೆಟ್ನಲ್ಲಿ ಸರ್ಕಾರವು ಈ ಮಿಷನ್ ಅನ್ನು ಘೋಷಿಸಿತ್ತು. ಹಸಿರು ಶಕ್ತಿ ಪರಿವರ್ತನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.</p>.<p class="bodytext">ತಾಮ್ರ, ಲಿಥಿಯಂ, ನಿಕ್ಕಲ್, ಕೋಬಾಲ್ಟ್ ಸೇರಿ ಅಪರೂಪದ ಖನಿಜಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ, ವಿಂಡ್ ಟರ್ಬೈನ್, ಇ.ವಿ ವಾಹನ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಖನಿಜಗಳ ಸಚಿವಾಲಯ ಹೇಳಿದೆ.</p>.<p>ಈ ಖನಿಜಗಳ ಪರಿಶೋಧನೆಗೆ ನೆರವು ಸಿಗಲಿದೆ. ಆಮದು ಅವಲಂಬನೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಸಾಗರೋತ್ತರ ಪ್ರದೇಶಗಳಲ್ಲಿ ಈ ಖನಿಜ ಪ್ರದೇಶಗಳ ಸ್ವಾಧೀನ, ಅವುಗಳ ಸಂಸ್ಕರಣೆ ಮತ್ತು ಮರುಬಳಕೆಗೆ ತಂತ್ರಜ್ಞಾನ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸುವುದು ಈ ಮಿಷನ್ನ ಗುರಿಯಾಗಿದೆ ಹೇಳಿದೆ.</p>.<p class="bodytext">ಈ ಮಿಷನ್ಗೆ ಸಾರ್ವಜನಿಕ ಉದ್ದಿಮೆಗಳು ₹18 ಸಾವಿರ ಕೋಟಿ ನೆರವು ನೀಡಲಿವೆ. ಇದರಿಂದ ದೇಶದಲ್ಲಿ ಅಮೂಲ್ಯ ಖನಿಜಗಳ ಪರಿಶೋಧನೆಗೆ ನೆರವಾಗಲಿದೆ ಎಂದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್ಗೆ ₹16,300 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನ್ನಡಿ ಮುಂದಿನ ಏಳು ವರ್ಷಗಳಲ್ಲಿ ₹34,300 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.</p>.<p>ಮಿಷನ್ನಡಿ 24 ಅಮೂಲ್ಯ ಖನಿಜಗಳನ್ನು ಗುರುತಿಸಲಾಗಿದೆ. ಈ ನಿರ್ಣಾಯಕ ಖನಿಜಗಳ ಪರಿಶೋಧನೆಗೆ ಆರ್ಥಿಕ ನೆರವು ಲಭಿಸಲಿದೆ.</p>.<p class="bodytext">2024–25ನೇ ಸಾಲಿನ ಬಜೆಟ್ನಲ್ಲಿ ಸರ್ಕಾರವು ಈ ಮಿಷನ್ ಅನ್ನು ಘೋಷಿಸಿತ್ತು. ಹಸಿರು ಶಕ್ತಿ ಪರಿವರ್ತನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.</p>.<p class="bodytext">ತಾಮ್ರ, ಲಿಥಿಯಂ, ನಿಕ್ಕಲ್, ಕೋಬಾಲ್ಟ್ ಸೇರಿ ಅಪರೂಪದ ಖನಿಜಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ, ವಿಂಡ್ ಟರ್ಬೈನ್, ಇ.ವಿ ವಾಹನ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಖನಿಜಗಳ ಸಚಿವಾಲಯ ಹೇಳಿದೆ.</p>.<p>ಈ ಖನಿಜಗಳ ಪರಿಶೋಧನೆಗೆ ನೆರವು ಸಿಗಲಿದೆ. ಆಮದು ಅವಲಂಬನೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಸಾಗರೋತ್ತರ ಪ್ರದೇಶಗಳಲ್ಲಿ ಈ ಖನಿಜ ಪ್ರದೇಶಗಳ ಸ್ವಾಧೀನ, ಅವುಗಳ ಸಂಸ್ಕರಣೆ ಮತ್ತು ಮರುಬಳಕೆಗೆ ತಂತ್ರಜ್ಞಾನ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸುವುದು ಈ ಮಿಷನ್ನ ಗುರಿಯಾಗಿದೆ ಹೇಳಿದೆ.</p>.<p class="bodytext">ಈ ಮಿಷನ್ಗೆ ಸಾರ್ವಜನಿಕ ಉದ್ದಿಮೆಗಳು ₹18 ಸಾವಿರ ಕೋಟಿ ನೆರವು ನೀಡಲಿವೆ. ಇದರಿಂದ ದೇಶದಲ್ಲಿ ಅಮೂಲ್ಯ ಖನಿಜಗಳ ಪರಿಶೋಧನೆಗೆ ನೆರವಾಗಲಿದೆ ಎಂದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>