<p><strong>ನವದೆಹಲಿ</strong>: ರಾಜ್ಯಗಳ ಹಣಕಾಸಿನ ಸದೃಢತೆಗೆ ಸಂಬಂಧಿಸಿದಂತೆ ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದಲ್ಲಿ ಒಡಿಶಾ, ಛತ್ತೀಸಗಢ, ಗೋವಾ ಮತ್ತು ಜಾರ್ಖಂಡ್, ‘ಅತ್ಯುತ್ತಮ ಸಾಧಕ ರಾಜ್ಯ’ ಶ್ರೇಯಕ್ಕೆ ಭಾಜನವಾಗಿವೆ.</p>.<p>ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ ಹಾಗೂ ಹಣಕಾಸಿನ ಸ್ಥಿರತೆಗೆ ರಾಜ್ಯಗಳು ನೀಡಿರುವ ಕೊಡುಗೆ ಆಧರಿಸಿ ಆಯೋಗವು ಮೊದಲ ಬಾರಿಗೆ ಈ ಹಣಕಾಸಿನ ಆರೋಗ್ಯ ಸೂಚ್ಯಂಕ– 2025 ಅನ್ನು ಸಿದ್ಧಪಡಿಸಿದೆ. </p>.<p>ಈ ಸೂಚ್ಯಂಕದಲ್ಲಿ 18 ರಾಜ್ಯಗಳಿವೆ. ಇವು ದೇಶದ ಜಿಡಿಪಿಗೆ ಶೇ 85ರಷ್ಟು ಕೊಡುಗೆ ನೀಡುತ್ತವೆ. ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರ ದತ್ತಾಂಶ ಆಧರಿಸಿ ಈ ರಾಜ್ಯಗಳ ಹಣಕಾಸಿನ ಸದೃಢತೆ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಇದರಡಿ ವಿಶೇಷ ವರ್ಗದ ರಾಜ್ಯಗಳನ್ನು ಸೇರ್ಪಡೆಗೊಳಿಸಿಲ್ಲ.</p>.<p class="bodytext">‘ರಾಜ್ಯಗಳ ಹಣಕಾಸಿನ ಸಾಮರ್ಥ್ಯದ ಅರಿಯುವುದು ಈ ವರದಿಯ ಉದ್ದೇಶವಾಗಿದೆ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ. </p>.<p>ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯದ ಹಣಕಾಸಿನ ನಿರ್ವಹಣೆಯು ಕೆಟ್ಟ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. </p>.<p>ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಕರ್ನಾಟಕವು ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.</p>.<p>ಅತಿಹೆಚ್ಚು ಗಣಿ ಸಂಪನ್ಮೂಲ ಹೊಂದಿರುವ ಒಡಿಶಾದ ಸೂಚ್ಯಂಕ ಶೇ 67.8ರಷ್ಟು ದಾಖಲಾಗಿದೆ. ಸಾಲದ ಸೂಚ್ಯಂಕ (99.0) ಮತ್ತು ಸಾಲ ಸುಸ್ಥಿರತೆಯು (64.0) ಉತ್ತಮವಾಗಿದೆ. ಸಾರ್ವಜನಿಕ ವೆಚ್ಚದ ಗುಣಮಟ್ಟ ಮತ್ತು ಆದಾಯ ಕ್ರೋಡೀಕರಣವು ಸದೃಢವಾಗಿದೆ ಎಂದು ಹೇಳಿದೆ.</p>.<p>ಒಡಿಶಾದ ವಿತ್ತೀಯ ಕೊರತೆ ಕಡಿಮೆಯಿದೆ. ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದೆ. ಆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್ಡಿಪಿ) ಹೆಚ್ಚಿದೆ ಎಂದು ವಿವರಿಸಿದೆ.</p>.<p>ಕೇರಳ ಮತ್ತು ಪಂಜಾಬ್ ರಾಜ್ಯಗಳ ಸಾರ್ವಜನಿಕ ವೆಚ್ಚ ಮತ್ತು ಸಾಲದ ಸುಸ್ಥಿರತೆಯ ಗುಣಮಟ್ಟವು ಕಡಿಮೆಯಿದೆ. ಇದನ್ನು ಸರಿದೂಗಿಸಲು ಹೋರಾಡುತ್ತಿವೆ. ಪಶ್ಚಿಮ ಬಂಗಾಳವು ವರಮಾನ ಕ್ರೋಡೀಕರಣ ಮತ್ತು ಸಾಲದ ಸುಸ್ಥಿರತೆ ಕಾಯ್ದುಕೊಳ್ಳುವ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದೆ. </p>.<p>ಆಂಧ್ರಪ್ರದೇಶದಲ್ಲಿ ವಿತ್ತೀಯ ಶಿಸ್ತಿನ ಕೊರತೆ ಇದೆ. ಆ ರಾಜ್ಯವು ಅತಿಹೆಚ್ಚು ವಿತ್ತೀಯ ಕೊರತೆ ಎದುರಿಸುತ್ತಿದೆ. ಹರಿಯಾಣವು ಸಾಲದ ಶಿಸ್ತು ಕಾಪಾಡಿಕೊಳ್ಳುವಲ್ಲಿ ಎಡವಿದೆ ಎಂದು ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಾಜ್ಯಗಳ ಹಣಕಾಸಿನ ಸದೃಢತೆಗೆ ಸಂಬಂಧಿಸಿದಂತೆ ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದಲ್ಲಿ ಒಡಿಶಾ, ಛತ್ತೀಸಗಢ, ಗೋವಾ ಮತ್ತು ಜಾರ್ಖಂಡ್, ‘ಅತ್ಯುತ್ತಮ ಸಾಧಕ ರಾಜ್ಯ’ ಶ್ರೇಯಕ್ಕೆ ಭಾಜನವಾಗಿವೆ.</p>.<p>ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ ಹಾಗೂ ಹಣಕಾಸಿನ ಸ್ಥಿರತೆಗೆ ರಾಜ್ಯಗಳು ನೀಡಿರುವ ಕೊಡುಗೆ ಆಧರಿಸಿ ಆಯೋಗವು ಮೊದಲ ಬಾರಿಗೆ ಈ ಹಣಕಾಸಿನ ಆರೋಗ್ಯ ಸೂಚ್ಯಂಕ– 2025 ಅನ್ನು ಸಿದ್ಧಪಡಿಸಿದೆ. </p>.<p>ಈ ಸೂಚ್ಯಂಕದಲ್ಲಿ 18 ರಾಜ್ಯಗಳಿವೆ. ಇವು ದೇಶದ ಜಿಡಿಪಿಗೆ ಶೇ 85ರಷ್ಟು ಕೊಡುಗೆ ನೀಡುತ್ತವೆ. ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರ ದತ್ತಾಂಶ ಆಧರಿಸಿ ಈ ರಾಜ್ಯಗಳ ಹಣಕಾಸಿನ ಸದೃಢತೆ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಇದರಡಿ ವಿಶೇಷ ವರ್ಗದ ರಾಜ್ಯಗಳನ್ನು ಸೇರ್ಪಡೆಗೊಳಿಸಿಲ್ಲ.</p>.<p class="bodytext">‘ರಾಜ್ಯಗಳ ಹಣಕಾಸಿನ ಸಾಮರ್ಥ್ಯದ ಅರಿಯುವುದು ಈ ವರದಿಯ ಉದ್ದೇಶವಾಗಿದೆ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ. </p>.<p>ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯದ ಹಣಕಾಸಿನ ನಿರ್ವಹಣೆಯು ಕೆಟ್ಟ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. </p>.<p>ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಕರ್ನಾಟಕವು ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.</p>.<p>ಅತಿಹೆಚ್ಚು ಗಣಿ ಸಂಪನ್ಮೂಲ ಹೊಂದಿರುವ ಒಡಿಶಾದ ಸೂಚ್ಯಂಕ ಶೇ 67.8ರಷ್ಟು ದಾಖಲಾಗಿದೆ. ಸಾಲದ ಸೂಚ್ಯಂಕ (99.0) ಮತ್ತು ಸಾಲ ಸುಸ್ಥಿರತೆಯು (64.0) ಉತ್ತಮವಾಗಿದೆ. ಸಾರ್ವಜನಿಕ ವೆಚ್ಚದ ಗುಣಮಟ್ಟ ಮತ್ತು ಆದಾಯ ಕ್ರೋಡೀಕರಣವು ಸದೃಢವಾಗಿದೆ ಎಂದು ಹೇಳಿದೆ.</p>.<p>ಒಡಿಶಾದ ವಿತ್ತೀಯ ಕೊರತೆ ಕಡಿಮೆಯಿದೆ. ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದೆ. ಆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್ಡಿಪಿ) ಹೆಚ್ಚಿದೆ ಎಂದು ವಿವರಿಸಿದೆ.</p>.<p>ಕೇರಳ ಮತ್ತು ಪಂಜಾಬ್ ರಾಜ್ಯಗಳ ಸಾರ್ವಜನಿಕ ವೆಚ್ಚ ಮತ್ತು ಸಾಲದ ಸುಸ್ಥಿರತೆಯ ಗುಣಮಟ್ಟವು ಕಡಿಮೆಯಿದೆ. ಇದನ್ನು ಸರಿದೂಗಿಸಲು ಹೋರಾಡುತ್ತಿವೆ. ಪಶ್ಚಿಮ ಬಂಗಾಳವು ವರಮಾನ ಕ್ರೋಡೀಕರಣ ಮತ್ತು ಸಾಲದ ಸುಸ್ಥಿರತೆ ಕಾಯ್ದುಕೊಳ್ಳುವ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದೆ. </p>.<p>ಆಂಧ್ರಪ್ರದೇಶದಲ್ಲಿ ವಿತ್ತೀಯ ಶಿಸ್ತಿನ ಕೊರತೆ ಇದೆ. ಆ ರಾಜ್ಯವು ಅತಿಹೆಚ್ಚು ವಿತ್ತೀಯ ಕೊರತೆ ಎದುರಿಸುತ್ತಿದೆ. ಹರಿಯಾಣವು ಸಾಲದ ಶಿಸ್ತು ಕಾಪಾಡಿಕೊಳ್ಳುವಲ್ಲಿ ಎಡವಿದೆ ಎಂದು ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>