‘ಜಿಎಸ್ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗಿರುವ ಕೊರತೆ ನೀಗಿಸಲು ಕೆಂದ್ರ ಸರ್ಕಾರವು ವಿಶೇಷ ಸಾಲ ಯೋಜನೆಯಡಿ ಇಲ್ಲಿಯವರೆಗೆ ₹ 84 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. 2020ರ ಏಪ್ರಿಲ್–ಮೇ ಅವಧಿಗೆ ಸಂಪೂರ್ಣ ಪರಿಹಾರವನ್ನು ನೀಡಲು ಜಿಎಸ್ಟಿ ಪರಿಹಾರ ನಿಧಿ ಸಮರ್ಪಕವಾಗಿಲ್ಲದ ಕಾರಣ, ಈ ಅವಧಿಗೆ ಭಾಗಶಃ ದ್ವೈಮಾಸಿಕ ಪರಿಹಾರವನ್ನು ಪೂರೈಸಲು ₹ 40,000 ಕೋಟಿ ಮೊತ್ತವನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.