<p><strong>ಮುಂಬೈ:</strong> ‘ದೇಶದ ಆರ್ಥಿಕತೆಯು ಚೇತರಿಸಿಕೊಳ್ಳಲು ಎರಡರಿಂದ ಮೂರು ವರ್ಷ ಹಿಡಿಯಲಿದೆ’ ಎಂದು ಹೀರೊ ಎಂಟ್ಪ್ರೈಸಸ್ನ ಅಧ್ಯಕ್ಷ ಸುನಿಲ್ ಕಾಂತ್ ಮುಂಜಲ್ ಅಭಿಪ್ರಾಯಪಟ್ಟಿದ್ದಾರೆ.</p>.<p>‘ಕೆಲವು ವಲಯಗಳು ತ್ವರಿತ ಚೇತರಿಕೆ ಕಂಡರೂ ಒಟ್ಟಾರೆ ಆರ್ಥಿಕತೆಯ ಚೇತರಿಕೆಗೆ ಎರಡರಿಂದ ಮೂರು ವರ್ಷಗಳು ಬೇಕಾಗಲಿವೆ. ಇದಕ್ಕಾಗಿ ಇನ್ನೂ ಹೆಚ್ಚಿನ ವಿತ್ತೀಯ ಬೆಂಬಲದ ಅಗತ್ಯವಿದೆ’ ಎಂದೂ ಅವರು ಹೇಳಿದ್ದಾರೆ.</p>.<p>ಎಸ್ಬಿಐ ಆಯೋಜಿಸಿದ್ದ ವರ್ಚುವಲ್ ಬ್ಯಾಂಕಿಂಗ್ ಆ್ಯಂಡ್ ಎಕಾನಮಿ ಕಾನ್ಕ್ಲೇವ್ನಲ್ಲಿ ‘ಆರ್ಥಿಕತೆ ಮತ್ತು ವ್ಯಾಪಾರದ ಮೇಲೆ ಕೋವಿಡ್ ಪರಿಣಾಮ’ ವಿಷಯದ ಕುರಿತು ಮಾತನಾಡಿದರು.</p>.<p>‘ಒಟ್ಟಾರೆಯಾಗಿ ವ್ಯವಸ್ಥೆ ಸರಿಹೋಗಲು ಕೆಲವು ಸಾಂಸ್ಥಿಕವಾದ ಮತ್ತು ದೀರ್ಘಾವಧಿಯ ಶಾಶ್ವತ ಪರಿಹಾರ ಕ್ರಮಗಳ ಅಗತ್ಯವಿದೆ. ಕೇಂದ್ರ ಸರ್ಕಾರವು ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಕೆಲವು ವ್ಯಕ್ತಿಗತವಾದ ಸಂಘ–ಸಂಸ್ಥೆಗಳು ಮತ್ತು ವಲಯವಾರು ವಿತ್ತೀಯ ಬೆಂಬಲ ನೀಡಲು ಸಿದ್ಧವಾಗಬೇಕು.</p>.<p>‘ಕೆಲವು ಕಂಪನಿಗಳು ಬಾಗಿಲು ಮುಚ್ಚಿವೆ. ಇವುಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾತ್ರದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ್ದಾಗಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಅವರು ಹೇಳಿದ್ದಾರೆ.</p>.<p>ಬೇಡಿಕೆ ಕುಸಿತ ಮತ್ತು ಉದ್ಯೋಗ ನಷ್ಟ ಆಗುತ್ತಿದ್ದು, ಉದ್ಯೋಗ ನಷ್ಟ ಪ್ರಮಾಣ ಶೇ 20ರವರೆಗೂ ತಲುಪಬಹುದು ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ‘ದೇಶದ ಆರ್ಥಿಕತೆಯು ಚೇತರಿಸಿಕೊಳ್ಳಲು ಎರಡರಿಂದ ಮೂರು ವರ್ಷ ಹಿಡಿಯಲಿದೆ’ ಎಂದು ಹೀರೊ ಎಂಟ್ಪ್ರೈಸಸ್ನ ಅಧ್ಯಕ್ಷ ಸುನಿಲ್ ಕಾಂತ್ ಮುಂಜಲ್ ಅಭಿಪ್ರಾಯಪಟ್ಟಿದ್ದಾರೆ.</p>.<p>‘ಕೆಲವು ವಲಯಗಳು ತ್ವರಿತ ಚೇತರಿಕೆ ಕಂಡರೂ ಒಟ್ಟಾರೆ ಆರ್ಥಿಕತೆಯ ಚೇತರಿಕೆಗೆ ಎರಡರಿಂದ ಮೂರು ವರ್ಷಗಳು ಬೇಕಾಗಲಿವೆ. ಇದಕ್ಕಾಗಿ ಇನ್ನೂ ಹೆಚ್ಚಿನ ವಿತ್ತೀಯ ಬೆಂಬಲದ ಅಗತ್ಯವಿದೆ’ ಎಂದೂ ಅವರು ಹೇಳಿದ್ದಾರೆ.</p>.<p>ಎಸ್ಬಿಐ ಆಯೋಜಿಸಿದ್ದ ವರ್ಚುವಲ್ ಬ್ಯಾಂಕಿಂಗ್ ಆ್ಯಂಡ್ ಎಕಾನಮಿ ಕಾನ್ಕ್ಲೇವ್ನಲ್ಲಿ ‘ಆರ್ಥಿಕತೆ ಮತ್ತು ವ್ಯಾಪಾರದ ಮೇಲೆ ಕೋವಿಡ್ ಪರಿಣಾಮ’ ವಿಷಯದ ಕುರಿತು ಮಾತನಾಡಿದರು.</p>.<p>‘ಒಟ್ಟಾರೆಯಾಗಿ ವ್ಯವಸ್ಥೆ ಸರಿಹೋಗಲು ಕೆಲವು ಸಾಂಸ್ಥಿಕವಾದ ಮತ್ತು ದೀರ್ಘಾವಧಿಯ ಶಾಶ್ವತ ಪರಿಹಾರ ಕ್ರಮಗಳ ಅಗತ್ಯವಿದೆ. ಕೇಂದ್ರ ಸರ್ಕಾರವು ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಕೆಲವು ವ್ಯಕ್ತಿಗತವಾದ ಸಂಘ–ಸಂಸ್ಥೆಗಳು ಮತ್ತು ವಲಯವಾರು ವಿತ್ತೀಯ ಬೆಂಬಲ ನೀಡಲು ಸಿದ್ಧವಾಗಬೇಕು.</p>.<p>‘ಕೆಲವು ಕಂಪನಿಗಳು ಬಾಗಿಲು ಮುಚ್ಚಿವೆ. ಇವುಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾತ್ರದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ್ದಾಗಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಅವರು ಹೇಳಿದ್ದಾರೆ.</p>.<p>ಬೇಡಿಕೆ ಕುಸಿತ ಮತ್ತು ಉದ್ಯೋಗ ನಷ್ಟ ಆಗುತ್ತಿದ್ದು, ಉದ್ಯೋಗ ನಷ್ಟ ಪ್ರಮಾಣ ಶೇ 20ರವರೆಗೂ ತಲುಪಬಹುದು ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>