<p><strong>ಬೆಂಗಳೂರು: </strong>ಚೀನಾದಲ್ಲಿ ಸರಣಿ ಸಾವಿಗೆ ಕಾರಣವಾಗಿರುವ ‘ಕೋವಿಡ್–19’ ವೈರಸ್ನಿಂದಾಗಿ ಭಾರತದ ಔಷಧಿ ತಯಾರಿಕೆ ಉದ್ದಿಮೆ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮಗಳು ಕಂಡು ಬಂದಿವೆ.</p>.<p>ಔಷಧಿಗಳ ತಯಾರಿಕೆಯಲ್ಲಿ ಬಳಸುವ ವಿವಿಧ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕಚ್ಚಾ ಪದಾರ್ಥಗಳ ಬೆಲೆ ಶೇ 20ರಿಂದ ಶೇ 30ರಷ್ಟು ಏರಿಕೆಯಾಗಿದೆ. ಇದರಿಂದ ಔಷಧಿ ಮತ್ತು ಸೋಂಕು ನಿವಾರಕಗಳ ಬೆಲೆ ದುಬಾರಿಯಾಗುವ ಪರಿಸ್ಥಿತಿ ಉದ್ಭವಿಸಿದೆ.</p>.<p>ದೇಶಿ ಔಷಧಿ ತಯಾರಿಕೆ ಉದ್ದಿಮೆಯು, ಔಷಧಿಗಳಿಗೆ ಚಿಕಿತ್ಸಕ ಮೌಲ್ಯ ಹೆಚ್ಚಿಸುವ ಪದಾರ್ಥಗಳು ಮತ್ತು ಇತರ ಕಚ್ಚಾ ಸರಕಿಗೆ ಚೀನಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಔಷಧಿ ಪೂರೈಸುವ ಜಾಗತಿಕ ಕಂಪನಿಗಳು ಕೂಡ ಹಲವಾರು ಔಷಧಿಗಳ ತಯಾ<br />ರಿಕೆಗೆ ಬಳಸುವ ಪದಾರ್ಥಗಳಿಗಾಗಿ ಚೀನಾವನ್ನೇ ಹೆಚ್ಚಾಗಿ ಅವಲಂಬಿಸಿವೆ.</p>.<p>‘ಕೋವಿಡ್–19’ ವೈರಸ್ ಹಾವಳಿಯ ಕೇಂದ್ರ ಬಿಂದುವಾಗಿರುವ ವುಹಾನ್ ಪ್ರಾಂತ್ಯವು ಔಷಧಿ ಪದಾರ್ಥಗಳನ್ನು ತಯಾರಿಸುವ ಅತಿದೊಡ್ಡ ಕೇಂದ್ರವಾಗಿದೆ.</p>.<p>‘ಚೀನಾದಲ್ಲಿನ ಪರಿಸ್ಥಿತಿಯು ಸದ್ಯದಲ್ಲೇ ಸುಧಾರಿಸದಿದ್ದರೆ ವಿಟಮಿನ್ಗೆ ಸಂಬಂಧಿಸಿದ ಔಷಧಿ, ಪ್ಯಾರಾಸಿಟ್ಮಲ್, ಮೊಕ್ಸಿಸಿಲಿಯನ್ನಂತಹ ಔಷಧಿಗಳ ಕಚ್ಚಾ ಸರಕಿನ ಬೆಲೆಯು ಶೇ 20ರಿಂದ ಶೇ 30ರಷ್ಟು ಏರಿಕೆಯಾಗಲಿದೆ. ಔಷಧಿಗಳ ಪೂರೈಕೆ<br />ಯಲ್ಲಿಯೂ ತೀವ್ರ ವ್ಯತ್ಯಯ ಕಂಡು ಬರಲಿದೆ ಎಂದು ಭಾರತೀಯ ಔಷಧಿ ತಯಾರಕರ ಸಂಘದ ಉಪಾಧ್ಯಕ್ಷ ಜೆ. ಜಯಸೀಲಂ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ತಯಾರಿಕೆ ಸ್ಥಗಿತ</strong>: ಕರ್ನಾಟಕದಲ್ಲಿ ಇರುವ 300 ಔಷಧಿ ತಯಾರಿಕಾ ಕಂಪನಿಗಳು ಹಲವಾರು ಔಷಧಿ ಪದಾರ್ಥಗಳ ಕೊರತೆಯಿಂದ ತಯಾರಿಕೆ ಸ್ಥಗಿತಗೊಳಿಸಿವೆ.</p>.<p>ಬ್ಯಾಕ್ಟೀರಿಯಾ ಸೋಂಕು, ಆಸ್ಥಮಾಗೆ ಚಿಕಿತ್ಸೆ ನೀಡುವ ಮತ್ತು ನೋವು ನಿವಾರಕಗಳ ತಯಾರಿಕೆಗೆ ಅಗತ್ಯವಾದ ಔಷಧಿ ಪದಾರ್ಥಗಳ ಪೂರೈಕೆ ನಿಂತು ಹೋಗಿದೆ.</p>.<p>‘ಮಾರ್ಚ್ ವೇಳೆಗೆ ಪರಿಸ್ಥಿತಿ ಸುಧಾರಿಸದಿದ್ದರೆ ಔಷಧಿಗಳ ತೀವ್ರ ಕೊರತೆ ಉಂಟಾಗಲಿದೆ’ ಎಂದು ಕರ್ನಾಟಕ ಔಷಧಿ ತಯಾರಕರ ಸಂಘದ ಅಧ್ಯಕ್ಷ ಸುನಿಲ್ ಅತ್ತಾವರ್ ಹೇಳಿದ್ದಾರೆ.</p>.<p><strong>‘ಪರಿಣಾಮ ತಡೆಗೆ ಶೀಘ್ರ ಕ್ರಮ’<br />ನವದೆಹಲಿ (ಪಿಟಿಐ): </strong>ಚೀನಾದಲ್ಲಿ ‘ಕೋವಿಡ್–19’ ವೈರಸ್ ಸೃಷ್ಟಿಸಿರುವ ಆತಂಕವು ದೇಶಿ ಕೈಗಾರಿಕೆಗಳ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಸದ್ಯದಲ್ಲೇ ಅಗತ್ಯ ಕ್ರಮಗಳನ್ನು ಪ್ರಕಟಿಸಲಿದೆ.</p>.<p>ಮಂಗಳವಾರ ಇಲ್ಲಿ ನಡೆದ ಉದ್ಯಮಿಗಳ ಜತೆಗಿನ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ತಿಳಿಸಿದರು. ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ಜತೆ ಬುಧವಾರ ಸಭೆ ನಡೆಸಿದ ನಂತರ, ಪ್ರಧಾನಿ ಕಚೇರಿ (ಪಿಎಂಒ) ಸಂಪರ್ಕಿಸಿ ಪರಿಸ್ಥಿತಿ ಎದುರಿಸಲು ಕೈಗೊಳ್ಳುವ ಕ್ರಮಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.</p>.<p><strong>ಎಲ್ಇಡಿ ಬಲ್ಬ್ ದುಬಾರಿ?</strong><br />ಚೀನಾದಿಂದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಪೂರೈಕೆಯಲ್ಲಿ ಕೊರತೆ ಕಂಡು ಬಂದಿರುವುದರಿಂದ ಮಾರ್ಚ್ನಿಂದ ಎಲ್ಇಡಿ ಬಲ್ಬ್ ಬೆಲೆ ಶೇ 10ರಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ದಿಮೆಯಂತೆ ದೇಶಿ ಬಲ್ಬ್ ಮತ್ತು ಲೈಟ್ಸ್ ಉದ್ದಿಮೆಯೂ ಬಾಧಿತವಾಗಿದೆ ಎಂದು ಉದ್ದಿಮೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಚೀನಾದಲ್ಲಿ ಸರಣಿ ಸಾವಿಗೆ ಕಾರಣವಾಗಿರುವ ‘ಕೋವಿಡ್–19’ ವೈರಸ್ನಿಂದಾಗಿ ಭಾರತದ ಔಷಧಿ ತಯಾರಿಕೆ ಉದ್ದಿಮೆ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮಗಳು ಕಂಡು ಬಂದಿವೆ.</p>.<p>ಔಷಧಿಗಳ ತಯಾರಿಕೆಯಲ್ಲಿ ಬಳಸುವ ವಿವಿಧ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕಚ್ಚಾ ಪದಾರ್ಥಗಳ ಬೆಲೆ ಶೇ 20ರಿಂದ ಶೇ 30ರಷ್ಟು ಏರಿಕೆಯಾಗಿದೆ. ಇದರಿಂದ ಔಷಧಿ ಮತ್ತು ಸೋಂಕು ನಿವಾರಕಗಳ ಬೆಲೆ ದುಬಾರಿಯಾಗುವ ಪರಿಸ್ಥಿತಿ ಉದ್ಭವಿಸಿದೆ.</p>.<p>ದೇಶಿ ಔಷಧಿ ತಯಾರಿಕೆ ಉದ್ದಿಮೆಯು, ಔಷಧಿಗಳಿಗೆ ಚಿಕಿತ್ಸಕ ಮೌಲ್ಯ ಹೆಚ್ಚಿಸುವ ಪದಾರ್ಥಗಳು ಮತ್ತು ಇತರ ಕಚ್ಚಾ ಸರಕಿಗೆ ಚೀನಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಔಷಧಿ ಪೂರೈಸುವ ಜಾಗತಿಕ ಕಂಪನಿಗಳು ಕೂಡ ಹಲವಾರು ಔಷಧಿಗಳ ತಯಾ<br />ರಿಕೆಗೆ ಬಳಸುವ ಪದಾರ್ಥಗಳಿಗಾಗಿ ಚೀನಾವನ್ನೇ ಹೆಚ್ಚಾಗಿ ಅವಲಂಬಿಸಿವೆ.</p>.<p>‘ಕೋವಿಡ್–19’ ವೈರಸ್ ಹಾವಳಿಯ ಕೇಂದ್ರ ಬಿಂದುವಾಗಿರುವ ವುಹಾನ್ ಪ್ರಾಂತ್ಯವು ಔಷಧಿ ಪದಾರ್ಥಗಳನ್ನು ತಯಾರಿಸುವ ಅತಿದೊಡ್ಡ ಕೇಂದ್ರವಾಗಿದೆ.</p>.<p>‘ಚೀನಾದಲ್ಲಿನ ಪರಿಸ್ಥಿತಿಯು ಸದ್ಯದಲ್ಲೇ ಸುಧಾರಿಸದಿದ್ದರೆ ವಿಟಮಿನ್ಗೆ ಸಂಬಂಧಿಸಿದ ಔಷಧಿ, ಪ್ಯಾರಾಸಿಟ್ಮಲ್, ಮೊಕ್ಸಿಸಿಲಿಯನ್ನಂತಹ ಔಷಧಿಗಳ ಕಚ್ಚಾ ಸರಕಿನ ಬೆಲೆಯು ಶೇ 20ರಿಂದ ಶೇ 30ರಷ್ಟು ಏರಿಕೆಯಾಗಲಿದೆ. ಔಷಧಿಗಳ ಪೂರೈಕೆ<br />ಯಲ್ಲಿಯೂ ತೀವ್ರ ವ್ಯತ್ಯಯ ಕಂಡು ಬರಲಿದೆ ಎಂದು ಭಾರತೀಯ ಔಷಧಿ ತಯಾರಕರ ಸಂಘದ ಉಪಾಧ್ಯಕ್ಷ ಜೆ. ಜಯಸೀಲಂ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ತಯಾರಿಕೆ ಸ್ಥಗಿತ</strong>: ಕರ್ನಾಟಕದಲ್ಲಿ ಇರುವ 300 ಔಷಧಿ ತಯಾರಿಕಾ ಕಂಪನಿಗಳು ಹಲವಾರು ಔಷಧಿ ಪದಾರ್ಥಗಳ ಕೊರತೆಯಿಂದ ತಯಾರಿಕೆ ಸ್ಥಗಿತಗೊಳಿಸಿವೆ.</p>.<p>ಬ್ಯಾಕ್ಟೀರಿಯಾ ಸೋಂಕು, ಆಸ್ಥಮಾಗೆ ಚಿಕಿತ್ಸೆ ನೀಡುವ ಮತ್ತು ನೋವು ನಿವಾರಕಗಳ ತಯಾರಿಕೆಗೆ ಅಗತ್ಯವಾದ ಔಷಧಿ ಪದಾರ್ಥಗಳ ಪೂರೈಕೆ ನಿಂತು ಹೋಗಿದೆ.</p>.<p>‘ಮಾರ್ಚ್ ವೇಳೆಗೆ ಪರಿಸ್ಥಿತಿ ಸುಧಾರಿಸದಿದ್ದರೆ ಔಷಧಿಗಳ ತೀವ್ರ ಕೊರತೆ ಉಂಟಾಗಲಿದೆ’ ಎಂದು ಕರ್ನಾಟಕ ಔಷಧಿ ತಯಾರಕರ ಸಂಘದ ಅಧ್ಯಕ್ಷ ಸುನಿಲ್ ಅತ್ತಾವರ್ ಹೇಳಿದ್ದಾರೆ.</p>.<p><strong>‘ಪರಿಣಾಮ ತಡೆಗೆ ಶೀಘ್ರ ಕ್ರಮ’<br />ನವದೆಹಲಿ (ಪಿಟಿಐ): </strong>ಚೀನಾದಲ್ಲಿ ‘ಕೋವಿಡ್–19’ ವೈರಸ್ ಸೃಷ್ಟಿಸಿರುವ ಆತಂಕವು ದೇಶಿ ಕೈಗಾರಿಕೆಗಳ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಸದ್ಯದಲ್ಲೇ ಅಗತ್ಯ ಕ್ರಮಗಳನ್ನು ಪ್ರಕಟಿಸಲಿದೆ.</p>.<p>ಮಂಗಳವಾರ ಇಲ್ಲಿ ನಡೆದ ಉದ್ಯಮಿಗಳ ಜತೆಗಿನ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ತಿಳಿಸಿದರು. ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ಜತೆ ಬುಧವಾರ ಸಭೆ ನಡೆಸಿದ ನಂತರ, ಪ್ರಧಾನಿ ಕಚೇರಿ (ಪಿಎಂಒ) ಸಂಪರ್ಕಿಸಿ ಪರಿಸ್ಥಿತಿ ಎದುರಿಸಲು ಕೈಗೊಳ್ಳುವ ಕ್ರಮಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.</p>.<p><strong>ಎಲ್ಇಡಿ ಬಲ್ಬ್ ದುಬಾರಿ?</strong><br />ಚೀನಾದಿಂದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಪೂರೈಕೆಯಲ್ಲಿ ಕೊರತೆ ಕಂಡು ಬಂದಿರುವುದರಿಂದ ಮಾರ್ಚ್ನಿಂದ ಎಲ್ಇಡಿ ಬಲ್ಬ್ ಬೆಲೆ ಶೇ 10ರಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ದಿಮೆಯಂತೆ ದೇಶಿ ಬಲ್ಬ್ ಮತ್ತು ಲೈಟ್ಸ್ ಉದ್ದಿಮೆಯೂ ಬಾಧಿತವಾಗಿದೆ ಎಂದು ಉದ್ದಿಮೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>