<p>ದೀನಗೋಚರದಯಾಪರಿಹೀನಂ</p>.<p>ಯಸ್ಯ ಮಾನಸಮತೀವ ಕಠೋರಮ್ ।</p>.<p>ತೇನ ಭೂಮಿರತಿಭಾರವತೀಯಂ</p>.<p>ನ ದ್ರುಮೈರ್ನ ಗಿರಿಭಿರ್ನ ಸಮುದ್ರೈಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ದೀನರ ವಿಷಯದಲ್ಲಿ ದಯೆಯಿಲ್ಲದೆ ಯಾರ ಮನಸ್ಸು ಕಠೋರವಾಗಿರುತ್ತದೆಯೋ, ಅವನಿಂದ ಭೂಮಿಗೆ ಭಾರವಾಗಿದೆಯೆ ಹೊರತು ಮರಗಳು, ಬೆಟ್ಟಗಳು ಮತ್ತು ಸಮುದ್ರಗಳಿಂದ ಖಂಡಿತ ಅಲ್ಲ.’</p>.<p>ಕಷ್ಟದಲ್ಲಿರುವವರ, ಎಂದರೆ ದೀನರ ಸಹಾಯಕ್ಕೆ ಯಾರು ಮುಂದಾಗುವುದಿಲ್ಲವೋ ಅವರ ಜೀವನ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ. ಅಂಥವರು ಭೂಮಿಗೇ ಭಾರ ಎಂದು ಹೇಳುವ ಮೂಲಕ ಅವರ ಜೀವನ ಅತ್ಯಂತ ಹೇಯವಾದುದು ಎಂದೇ ಸಾರುತ್ತಿದೆ, ಸುಭಾಷಿತ.</p>.<p>ಸುಭಾಷಿತದ ಈ ಮಾತನ್ನು ಲಂಚವಿಲ್ಲದೆ ಕೆಲಸವನ್ನೇ ಮಾಡದ ಸರ್ಕಾರಿ ಅಧಿಕಾರಿಗಳು, ನೌಕರರು; ಪದವಿ, ಆಸ್ತಿಸಂಪಾದನೆಗಾಗಿ ಮಾತ್ರವೇ ರಾಜಕಾರಣಕ್ಕೆ ಬರುತ್ತಿರುವ ಪುಢಾರಿಗಳು ಗಮನಿಸಬೇಕು.</p>.<p>ಪ್ರಕೃತಿ ನಮ್ಮ ಮೇಲೆ ದಯೆಯನ್ನು ತೋರಿಸಿದರೆ ಮಾತ್ರ ನಮ್ಮ ಜೀವನ ಚೆನ್ನಾಗಿ ನಡೆಯುತ್ತದೆ; ಇಲ್ಲವಾದಲ್ಲಿ ನಮಗೆ ಜೀವನವೇ ಇರುವುದಿಲ್ಲ. ಕಾಲಕಾಲಕ್ಕೆ ಮಳೆ ಆಗಬೇಕು; ಸೂರ್ಯ ಉದಯಿಸಬೇಕು; ಗಾಳಿ ಬೀಸಬೇಕು; ಬೀಜದಿಂದ ಮೊಳಕೆ ಒಡೆಯಬೇಕು; ಭೂಮಿ ತನ್ನ ಸಾರವನ್ನು ಮೊಳಕೆಗೆ ನೀಡಬೇಕು. ಹೀಗೆ ಪ್ರತಿಕ್ಷಣವೂ ನಮಗಾಗಿ ಪ್ರಕೃತಿ ದಯೆಯಿಂದ ನಡೆದುಕೊಳ್ಳುತ್ತಿರುತ್ತದೆ. ಹೀಗೆಯೇ ಹಲವರು ನಮ್ಮ ಜೀವನಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಿರುತ್ತಾರೆ. ಇದರ ಅರ್ಥ, ‘ನಾವು ಯಾರ ಮುಂದೆಯೂ ಕೈ ಒಡ್ಡುತ್ತಿಲ್ಲ, ಯಾರ ದಯೆಯೂ ನಮಗೆ ಬೇಡ; ನಾವೇನೂ ದೀನರಲ್ಲ‘ – ಹೀಗೆಂದು ತಿಳಿದುಕೊಂಡು ಅಹಂಕಾರದಿಂದ ವರ್ತಿಸುತ್ತಿರುತ್ತೇವೆ. ಆದರೆ ನಾವು ಕೇಳದಿದ್ದರೂ ಹಲವರು ನಮಗಾಗಿ ತ್ಯಾಗಮಾಡುತ್ತಲೇ ಇರುತ್ತಾರೆ; ಇದನ್ನು ನಾವು ಅರಿತುಕೊಳ್ಳಬೇಕು.</p>.<p>ಇನ್ನೊಬ್ಬರ ಕಷ್ಟಗಳನ್ನು ಪರಿಹರಿಸಬಲ್ಲ ಸ್ಥಿತಿಯಲ್ಲಿದ್ದಾಗ ನಾವು ದಯೆಯಿಂದ ನಡೆದುಕೊಳ್ಳಬೇಕು. ನಮ್ಮ ಜೀವನ ಹಲವರಿಗೆ ಋಣಿಯಾಗಿದೆ; ಹೀಗಾಗಿ ನಾವು ಹಲವರಿಗೆ ಕೃತಜ್ಞರಾಗಿರಬೇಕು. ಈ ಋಣವನ್ನು ತೀರಿಸುವ ವಿಧಾನವೇ ಕಷ್ಟದಲ್ಲಿರುವ ದೀನರಿಗೆ ನಾವು ಸಹಾಯ ಮಾಡುವುದು. ಇದನ್ನು ನಾವು ತಿಳಿದುಕೊಳ್ಳಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀನಗೋಚರದಯಾಪರಿಹೀನಂ</p>.<p>ಯಸ್ಯ ಮಾನಸಮತೀವ ಕಠೋರಮ್ ।</p>.<p>ತೇನ ಭೂಮಿರತಿಭಾರವತೀಯಂ</p>.<p>ನ ದ್ರುಮೈರ್ನ ಗಿರಿಭಿರ್ನ ಸಮುದ್ರೈಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ದೀನರ ವಿಷಯದಲ್ಲಿ ದಯೆಯಿಲ್ಲದೆ ಯಾರ ಮನಸ್ಸು ಕಠೋರವಾಗಿರುತ್ತದೆಯೋ, ಅವನಿಂದ ಭೂಮಿಗೆ ಭಾರವಾಗಿದೆಯೆ ಹೊರತು ಮರಗಳು, ಬೆಟ್ಟಗಳು ಮತ್ತು ಸಮುದ್ರಗಳಿಂದ ಖಂಡಿತ ಅಲ್ಲ.’</p>.<p>ಕಷ್ಟದಲ್ಲಿರುವವರ, ಎಂದರೆ ದೀನರ ಸಹಾಯಕ್ಕೆ ಯಾರು ಮುಂದಾಗುವುದಿಲ್ಲವೋ ಅವರ ಜೀವನ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ. ಅಂಥವರು ಭೂಮಿಗೇ ಭಾರ ಎಂದು ಹೇಳುವ ಮೂಲಕ ಅವರ ಜೀವನ ಅತ್ಯಂತ ಹೇಯವಾದುದು ಎಂದೇ ಸಾರುತ್ತಿದೆ, ಸುಭಾಷಿತ.</p>.<p>ಸುಭಾಷಿತದ ಈ ಮಾತನ್ನು ಲಂಚವಿಲ್ಲದೆ ಕೆಲಸವನ್ನೇ ಮಾಡದ ಸರ್ಕಾರಿ ಅಧಿಕಾರಿಗಳು, ನೌಕರರು; ಪದವಿ, ಆಸ್ತಿಸಂಪಾದನೆಗಾಗಿ ಮಾತ್ರವೇ ರಾಜಕಾರಣಕ್ಕೆ ಬರುತ್ತಿರುವ ಪುಢಾರಿಗಳು ಗಮನಿಸಬೇಕು.</p>.<p>ಪ್ರಕೃತಿ ನಮ್ಮ ಮೇಲೆ ದಯೆಯನ್ನು ತೋರಿಸಿದರೆ ಮಾತ್ರ ನಮ್ಮ ಜೀವನ ಚೆನ್ನಾಗಿ ನಡೆಯುತ್ತದೆ; ಇಲ್ಲವಾದಲ್ಲಿ ನಮಗೆ ಜೀವನವೇ ಇರುವುದಿಲ್ಲ. ಕಾಲಕಾಲಕ್ಕೆ ಮಳೆ ಆಗಬೇಕು; ಸೂರ್ಯ ಉದಯಿಸಬೇಕು; ಗಾಳಿ ಬೀಸಬೇಕು; ಬೀಜದಿಂದ ಮೊಳಕೆ ಒಡೆಯಬೇಕು; ಭೂಮಿ ತನ್ನ ಸಾರವನ್ನು ಮೊಳಕೆಗೆ ನೀಡಬೇಕು. ಹೀಗೆ ಪ್ರತಿಕ್ಷಣವೂ ನಮಗಾಗಿ ಪ್ರಕೃತಿ ದಯೆಯಿಂದ ನಡೆದುಕೊಳ್ಳುತ್ತಿರುತ್ತದೆ. ಹೀಗೆಯೇ ಹಲವರು ನಮ್ಮ ಜೀವನಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಿರುತ್ತಾರೆ. ಇದರ ಅರ್ಥ, ‘ನಾವು ಯಾರ ಮುಂದೆಯೂ ಕೈ ಒಡ್ಡುತ್ತಿಲ್ಲ, ಯಾರ ದಯೆಯೂ ನಮಗೆ ಬೇಡ; ನಾವೇನೂ ದೀನರಲ್ಲ‘ – ಹೀಗೆಂದು ತಿಳಿದುಕೊಂಡು ಅಹಂಕಾರದಿಂದ ವರ್ತಿಸುತ್ತಿರುತ್ತೇವೆ. ಆದರೆ ನಾವು ಕೇಳದಿದ್ದರೂ ಹಲವರು ನಮಗಾಗಿ ತ್ಯಾಗಮಾಡುತ್ತಲೇ ಇರುತ್ತಾರೆ; ಇದನ್ನು ನಾವು ಅರಿತುಕೊಳ್ಳಬೇಕು.</p>.<p>ಇನ್ನೊಬ್ಬರ ಕಷ್ಟಗಳನ್ನು ಪರಿಹರಿಸಬಲ್ಲ ಸ್ಥಿತಿಯಲ್ಲಿದ್ದಾಗ ನಾವು ದಯೆಯಿಂದ ನಡೆದುಕೊಳ್ಳಬೇಕು. ನಮ್ಮ ಜೀವನ ಹಲವರಿಗೆ ಋಣಿಯಾಗಿದೆ; ಹೀಗಾಗಿ ನಾವು ಹಲವರಿಗೆ ಕೃತಜ್ಞರಾಗಿರಬೇಕು. ಈ ಋಣವನ್ನು ತೀರಿಸುವ ವಿಧಾನವೇ ಕಷ್ಟದಲ್ಲಿರುವ ದೀನರಿಗೆ ನಾವು ಸಹಾಯ ಮಾಡುವುದು. ಇದನ್ನು ನಾವು ತಿಳಿದುಕೊಳ್ಳಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>