ಪ್ರಕೃತಿ ನಮ್ಮ ಮೇಲೆ ದಯೆಯನ್ನು ತೋರಿಸಿದರೆ ಮಾತ್ರ ನಮ್ಮ ಜೀವನ ಚೆನ್ನಾಗಿ ನಡೆಯುತ್ತದೆ; ಇಲ್ಲವಾದಲ್ಲಿ ನಮಗೆ ಜೀವನವೇ ಇರುವುದಿಲ್ಲ. ಕಾಲಕಾಲಕ್ಕೆ ಮಳೆ ಆಗಬೇಕು; ಸೂರ್ಯ ಉದಯಿಸಬೇಕು; ಗಾಳಿ ಬೀಸಬೇಕು; ಬೀಜದಿಂದ ಮೊಳಕೆ ಒಡೆಯಬೇಕು; ಭೂಮಿ ತನ್ನ ಸಾರವನ್ನು ಮೊಳಕೆಗೆ ನೀಡಬೇಕು. ಹೀಗೆ ಪ್ರತಿಕ್ಷಣವೂ ನಮಗಾಗಿ ಪ್ರಕೃತಿ ದಯೆಯಿಂದ ನಡೆದುಕೊಳ್ಳುತ್ತಿರುತ್ತದೆ. ಹೀಗೆಯೇ ಹಲವರು ನಮ್ಮ ಜೀವನಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಿರುತ್ತಾರೆ. ಇದರ ಅರ್ಥ, ‘ನಾವು ಯಾರ ಮುಂದೆಯೂ ಕೈ ಒಡ್ಡುತ್ತಿಲ್ಲ, ಯಾರ ದಯೆಯೂ ನಮಗೆ ಬೇಡ; ನಾವೇನೂ ದೀನರಲ್ಲ‘ – ಹೀಗೆಂದು ತಿಳಿದುಕೊಂಡು ಅಹಂಕಾರದಿಂದ ವರ್ತಿಸುತ್ತಿರುತ್ತೇವೆ. ಆದರೆ ನಾವು ಕೇಳದಿದ್ದರೂ ಹಲವರು ನಮಗಾಗಿ ತ್ಯಾಗಮಾಡುತ್ತಲೇ ಇರುತ್ತಾರೆ; ಇದನ್ನು ನಾವು ಅರಿತುಕೊಳ್ಳಬೇಕು.