<p><strong>ನಾರಾಯಣಪರಾಃ ಸರ್ವೇ ನ ಕುತಶ್ಚನ ನ ಭಿಭ್ಯತಿ ।</strong></p>.<p><strong>ಸ್ವರ್ಗಾಪವರ್ಗನರಕೇಷ್ವಪಿ ತುಲ್ಯಾರ್ಥದರ್ಶಿನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ನಾರಾಯಣನ ಭಕ್ತರೆಲ್ಲರೂ ಯಾವುದರ ದೆಸೆಯಿಂದಲೂ ಹೆದರುವುದಿಲ್ಲ. ಸ್ವರ್ಗ, ಮೋಕ್ಷ, ನರಕಗಳಲ್ಲಿಯೂ ಸಮದೃಷ್ಟಿಯನ್ನು ಉಳ್ಳವರಾಗಿರುತ್ತಾರೆ.’</p>.<p>ಭಕ್ತಿಯ ವೈಶಾಲ್ಯ ಎಂಥದ್ದು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ತಾರತಮ್ಯ ಎನ್ನುವಂಥದ್ದು ಎಲ್ಲೆಲ್ಲೂ ಇದೆ; ಹೊರಗಡೆ ಸಮಾಜದಲ್ಲಿ ಮಾತ್ರವಲ್ಲ, ನಮ್ಮ ಮನೆಗಳಲ್ಲಿಯೇ ಇರುತ್ತದೆ. ಮನೆಗಳಲ್ಲಿ ಮಾತ್ರವಲ್ಲ, ನಮ್ಮಲ್ಲಿಯೇ, ನಮ್ಮ ಬಗ್ಗೆಯೇ ತಾರತಮ್ಯ ಇದೆಯಲ್ಲವೆ? ಈ ತಾರತಮ್ಯಕ್ಕೆ ಕಾರಣಗಳೂ ಹಲವು. ಇಲ್ಲಿ ಸುಭಾಷಿತ ಅಂಥ ಒಂದು ಪ್ರಬಲ ಕಾರಣವನ್ನು ಹೇಳಿದೆ; ಅದೇ ಹೆದರಿಕೆ.</p>.<p>ಹೆದರಿಕೆಗೂ ಮೂಲಗಳು ಹಲವು. ನಮಗೆ ಏನಾದರೂ ತೊಂದರೆ ಆಗಬಹುದು ಎಂಬುದು ಈ ಹೆದರಿಕೆಯ ಮೂಲಕಾರಣಗಳಲ್ಲಿ ಒಂದು. ನನಗೆ ಸ್ವರ್ಗ ತಪ್ಪಿಹೋಗಬಹುದು ಎಂಬ ಹೆದರಿಕೆ ಇರಬಹುದು; ಮೋಕ್ಷ ಸಿಗಲಾರದು ಎಂಬ ಹೆದರಿಕೆ ಇರಬಹುದು; ಅಥವಾ ನರಕಕ್ಕೆ ಬೀಳಬೇಕಾಗಿ ಬರಬಹುದು ಎಂಬ ಹೆದರಿಕೆ ಇರಬಹುದು.</p>.<p>ಆದರೆ ಇಂಥ ಯಾವುದೇ ಹೆದರಿಕೆಗಳಿಗೂ ಹೆದರಿಬೇಕಿಲ್ಲ ಎಂದು ಸುಭಾಷಿತ ಆಶ್ವಾಸನೆ ಕೊಡುತ್ತಿದೆ. ಯಾವಾಗ ಈ ಎಲ್ಲ ಹೆದರಿಕೆಗಳೂ ಮಾಯವಾಗುತ್ತವೆ ಎಂಬುದನ್ನೂ ಅದು ಸೂಚಿಸಿದೆ. ನಾರಾಯಣನ ಭಕ್ತರು ಯಾವ ರೀತಿಯ ಹೆದರಿಕೆಗಳಿಗೂ ಬಗ್ಗುವವರಲ್ಲ ಎಂದು ಅದು ಘೋಷಿಸಿದೆ.</p>.<p>ನಾರಾಯಣ ಎಂದರೆ ವಿಷ್ಣು. ಆದರೆ ಇಲ್ಲಿ ಕೇವಲ ವಿಷ್ಣುಭಕ್ತರನ್ನು ಕುರಿತಷ್ಟೆ ಸುಭಾಷಿತ ಮಾತನಾಡುತ್ತಿಲ್ಲ; ಎಲ್ಲ ದೇವರ ಭಕ್ತರಿಗೂ ಸಲ್ಲುವಂಥ ಮಾತು ಇದು ಎಂಬುದನ್ನು ಮರೆಯಬಾರದು.</p>.<p>ಭಕ್ತಿಯ ಪಾರಮ್ಯ ಎಂಥದ್ದು ಎಂಬುದನ್ನು ಹೇಳುವುದು ಸುಭಾಷಿತದ ಉದ್ದೇಶ. ಭಕ್ತಿ ಎಂದರೆ ದೇವರಲ್ಲಿ ಅಚಲವಾದ ನಂಬಿಕೆ, ಶ್ರದ್ಧೆ; ಭಗವಂತನಲ್ಲಿ ನಾವು ಸಾಧಿಸುವ ನಿರಂತರ ತಾದತ್ಮ್ಯ. ನಮ್ಮ ಮನಸ್ಸಿನಲ್ಲೂ ಭಾವದಲ್ಲೂ ಬುದ್ಧಿಯಲ್ಲೂ ಭಗವಂತನೇ ತುಂಬಿಕೊಂಡಿರುವಾಗ ಅದು ಭಕ್ತಿ. ನಮ್ಮಲ್ಲಿ ದೇವರೊಬ್ಬನೇ ಇರುವಾಗ ಇನ್ನೊಂದು ವಸ್ತುವಿನಿಂದಲೋ ಸಂಗತಿಯಿಂದಲೋ ವ್ಯಕ್ತಿಯಿಂದಲೋ ಹೆದರಿಕೆಯಾದರೂ ಏಕೆ ಉಂಟಾದೀತು?</p>.<p>ಮಾತ್ರವಲ್ಲ, ನಮ್ಮ ಒಳಗೂ ಹೊರಗೂ ದೇವರೇ ತುಂಬಿಕೊಂಡಿರುವಾಗ ನಾವು ಇನ್ನೊಂದು ವಸ್ತುವನ್ನೋ ವ್ಯಕ್ತಿಯನ್ನೋ ನೋಡುತ್ತಿಲ್ಲ ಎಂದೇ ಅರ್ಥ ಅಲ್ಲವೆ? ಇನ್ನೊಬ್ಬ ವ್ಯಕ್ತಿಯೇ ನಮ್ಮ ದೃಷ್ಟಿಯಲ್ಲಿ ಇಲ್ಲದಿರುವಾಗ, ಕಾಣುವ ವಸ್ತು–ವ್ಯಕ್ತಿಗಳೆಲ್ಲರೂ ದೇವರೇ ಆಗಿರುವಾಗ ತಾರತಮ್ಯಕ್ಕೆ ಅವಕಾಶವಾದರೂ ಎಲ್ಲಿ? ಅಭಿನವಗುಪ್ತರ ಮಾತೊಂದು ಇಲ್ಲಿ ನೆನಪಾಗುತ್ತದೆ:</p>.<p><strong>ವಸ್ತುತಃ ಶಿವಮಯೇ ಹೃದಿ ಸ್ಫುಟಂ</strong></p>.<p><strong>ಸರ್ವತಃ ಶಿವಮಯಂ ವಿರಾಜತೇ</strong></p>.<p>(ದಿಟವಾಗಿ ಹೃದಯ ಶಿವಮಯವಾಗೆ, ಎತ್ತಲೂ ಸ್ಫುಟವಾಗಿ ಶಿವಮಯವೆ ಹೊಳೆಹೊಳೆವುದು!)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾರಾಯಣಪರಾಃ ಸರ್ವೇ ನ ಕುತಶ್ಚನ ನ ಭಿಭ್ಯತಿ ।</strong></p>.<p><strong>ಸ್ವರ್ಗಾಪವರ್ಗನರಕೇಷ್ವಪಿ ತುಲ್ಯಾರ್ಥದರ್ಶಿನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ನಾರಾಯಣನ ಭಕ್ತರೆಲ್ಲರೂ ಯಾವುದರ ದೆಸೆಯಿಂದಲೂ ಹೆದರುವುದಿಲ್ಲ. ಸ್ವರ್ಗ, ಮೋಕ್ಷ, ನರಕಗಳಲ್ಲಿಯೂ ಸಮದೃಷ್ಟಿಯನ್ನು ಉಳ್ಳವರಾಗಿರುತ್ತಾರೆ.’</p>.<p>ಭಕ್ತಿಯ ವೈಶಾಲ್ಯ ಎಂಥದ್ದು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ತಾರತಮ್ಯ ಎನ್ನುವಂಥದ್ದು ಎಲ್ಲೆಲ್ಲೂ ಇದೆ; ಹೊರಗಡೆ ಸಮಾಜದಲ್ಲಿ ಮಾತ್ರವಲ್ಲ, ನಮ್ಮ ಮನೆಗಳಲ್ಲಿಯೇ ಇರುತ್ತದೆ. ಮನೆಗಳಲ್ಲಿ ಮಾತ್ರವಲ್ಲ, ನಮ್ಮಲ್ಲಿಯೇ, ನಮ್ಮ ಬಗ್ಗೆಯೇ ತಾರತಮ್ಯ ಇದೆಯಲ್ಲವೆ? ಈ ತಾರತಮ್ಯಕ್ಕೆ ಕಾರಣಗಳೂ ಹಲವು. ಇಲ್ಲಿ ಸುಭಾಷಿತ ಅಂಥ ಒಂದು ಪ್ರಬಲ ಕಾರಣವನ್ನು ಹೇಳಿದೆ; ಅದೇ ಹೆದರಿಕೆ.</p>.<p>ಹೆದರಿಕೆಗೂ ಮೂಲಗಳು ಹಲವು. ನಮಗೆ ಏನಾದರೂ ತೊಂದರೆ ಆಗಬಹುದು ಎಂಬುದು ಈ ಹೆದರಿಕೆಯ ಮೂಲಕಾರಣಗಳಲ್ಲಿ ಒಂದು. ನನಗೆ ಸ್ವರ್ಗ ತಪ್ಪಿಹೋಗಬಹುದು ಎಂಬ ಹೆದರಿಕೆ ಇರಬಹುದು; ಮೋಕ್ಷ ಸಿಗಲಾರದು ಎಂಬ ಹೆದರಿಕೆ ಇರಬಹುದು; ಅಥವಾ ನರಕಕ್ಕೆ ಬೀಳಬೇಕಾಗಿ ಬರಬಹುದು ಎಂಬ ಹೆದರಿಕೆ ಇರಬಹುದು.</p>.<p>ಆದರೆ ಇಂಥ ಯಾವುದೇ ಹೆದರಿಕೆಗಳಿಗೂ ಹೆದರಿಬೇಕಿಲ್ಲ ಎಂದು ಸುಭಾಷಿತ ಆಶ್ವಾಸನೆ ಕೊಡುತ್ತಿದೆ. ಯಾವಾಗ ಈ ಎಲ್ಲ ಹೆದರಿಕೆಗಳೂ ಮಾಯವಾಗುತ್ತವೆ ಎಂಬುದನ್ನೂ ಅದು ಸೂಚಿಸಿದೆ. ನಾರಾಯಣನ ಭಕ್ತರು ಯಾವ ರೀತಿಯ ಹೆದರಿಕೆಗಳಿಗೂ ಬಗ್ಗುವವರಲ್ಲ ಎಂದು ಅದು ಘೋಷಿಸಿದೆ.</p>.<p>ನಾರಾಯಣ ಎಂದರೆ ವಿಷ್ಣು. ಆದರೆ ಇಲ್ಲಿ ಕೇವಲ ವಿಷ್ಣುಭಕ್ತರನ್ನು ಕುರಿತಷ್ಟೆ ಸುಭಾಷಿತ ಮಾತನಾಡುತ್ತಿಲ್ಲ; ಎಲ್ಲ ದೇವರ ಭಕ್ತರಿಗೂ ಸಲ್ಲುವಂಥ ಮಾತು ಇದು ಎಂಬುದನ್ನು ಮರೆಯಬಾರದು.</p>.<p>ಭಕ್ತಿಯ ಪಾರಮ್ಯ ಎಂಥದ್ದು ಎಂಬುದನ್ನು ಹೇಳುವುದು ಸುಭಾಷಿತದ ಉದ್ದೇಶ. ಭಕ್ತಿ ಎಂದರೆ ದೇವರಲ್ಲಿ ಅಚಲವಾದ ನಂಬಿಕೆ, ಶ್ರದ್ಧೆ; ಭಗವಂತನಲ್ಲಿ ನಾವು ಸಾಧಿಸುವ ನಿರಂತರ ತಾದತ್ಮ್ಯ. ನಮ್ಮ ಮನಸ್ಸಿನಲ್ಲೂ ಭಾವದಲ್ಲೂ ಬುದ್ಧಿಯಲ್ಲೂ ಭಗವಂತನೇ ತುಂಬಿಕೊಂಡಿರುವಾಗ ಅದು ಭಕ್ತಿ. ನಮ್ಮಲ್ಲಿ ದೇವರೊಬ್ಬನೇ ಇರುವಾಗ ಇನ್ನೊಂದು ವಸ್ತುವಿನಿಂದಲೋ ಸಂಗತಿಯಿಂದಲೋ ವ್ಯಕ್ತಿಯಿಂದಲೋ ಹೆದರಿಕೆಯಾದರೂ ಏಕೆ ಉಂಟಾದೀತು?</p>.<p>ಮಾತ್ರವಲ್ಲ, ನಮ್ಮ ಒಳಗೂ ಹೊರಗೂ ದೇವರೇ ತುಂಬಿಕೊಂಡಿರುವಾಗ ನಾವು ಇನ್ನೊಂದು ವಸ್ತುವನ್ನೋ ವ್ಯಕ್ತಿಯನ್ನೋ ನೋಡುತ್ತಿಲ್ಲ ಎಂದೇ ಅರ್ಥ ಅಲ್ಲವೆ? ಇನ್ನೊಬ್ಬ ವ್ಯಕ್ತಿಯೇ ನಮ್ಮ ದೃಷ್ಟಿಯಲ್ಲಿ ಇಲ್ಲದಿರುವಾಗ, ಕಾಣುವ ವಸ್ತು–ವ್ಯಕ್ತಿಗಳೆಲ್ಲರೂ ದೇವರೇ ಆಗಿರುವಾಗ ತಾರತಮ್ಯಕ್ಕೆ ಅವಕಾಶವಾದರೂ ಎಲ್ಲಿ? ಅಭಿನವಗುಪ್ತರ ಮಾತೊಂದು ಇಲ್ಲಿ ನೆನಪಾಗುತ್ತದೆ:</p>.<p><strong>ವಸ್ತುತಃ ಶಿವಮಯೇ ಹೃದಿ ಸ್ಫುಟಂ</strong></p>.<p><strong>ಸರ್ವತಃ ಶಿವಮಯಂ ವಿರಾಜತೇ</strong></p>.<p>(ದಿಟವಾಗಿ ಹೃದಯ ಶಿವಮಯವಾಗೆ, ಎತ್ತಲೂ ಸ್ಫುಟವಾಗಿ ಶಿವಮಯವೆ ಹೊಳೆಹೊಳೆವುದು!)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>