<p>ಅನುಭವೇನ ವಿನಾಧಿಗತಂ ಶ್ರುತಂ</p>.<p>ಭವತಿ ನೈವ ನೃಣಾಮುಪಕಾರಕಮ್ ।</p>.<p>ದಧನಿ ವರ್ತತ ಏವ ಹವಿಃ ಪುನಃ</p>.<p>ನ ಮಥನೇನ ವಿನಾ ತದವಾಪ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಓದಿ ಕಲಿತದ್ದಾಗಲಿ, ಕೇಳಿ ತಿಳಿದದ್ದಾಗಲಿ ಸ್ವತಃ ಅನುಭವವಿಲ್ಲದೆ ಜನರಿಗೆ ಉಪಯುಕ್ತವಾಗುವುದಿಲ್ಲ. ಮೊಸರಲ್ಲಿ ತುಪ್ಪವೇನೋ ಇದೆ; ಆದರೆ ಕಡೆಯದೆ ಅದು ದೊರೆಯುವುದಿಲ್ಲ.’</p>.<p>ಅನುಭವ ಇಲ್ಲದ ವಿದ್ಯೆ, ಅದು ಬರಿ ಶುಷ್ಕವಿದ್ಯೆ, ಪ್ರಯೋಜನಕ್ಕೆ ಬಾರದು ಎಂದು ಸುಭಾಷಿತ ಹೇಳುತ್ತಿದೆ.</p>.<p>ಅಡುಗೆ ಮಾಡುವುದು ಹೇಗೆ ಎಂದು ನಾವು ದೊಡ್ಡ ಪುಸ್ತಕಗಳನ್ನು ಬರೆಯಬಹುದು; ಅದರ ಬಗ್ಗೆ ಸಂಶೋಧನಪ್ರಬಂಧವನ್ನು ಬರೆದು ಪಿಎಚ್.ಡಿ.ಯನ್ನೂ ಸಂಪಾದಿಸಬಹುದು. ಆದರೆ ಅಡುಗೆಯ ಬಗ್ಗೆ ನಿಜವಾದ ತಿಳಿವಳಿಕೆ ಎಂದರೆ ನಮಗೆ ಅಡುಗೆ ಮಾಡಲು ಬರಬೇಕು. ನಾಲ್ಕು ಜನರು ರುಚಿಯಾಗಿದೆ ಎಂದು ಹೇಳುವಂತೆ ಅಡುಗೆಮಾಡಿದಾಗಲೇ ನಮಗೆ ನಿಜವಾಗಿಯೂ ಅಡುಗೆ ಬಗ್ಗೆ ಜ್ಞಾನ ಇದೆ ಎಂಬುದು ಸಿದ್ಧವಾಗುವುದು.</p>.<p>ಈ ಮಾತು ಎಲ್ಲ ವಿಷಯಗಳಿಗೂ ಸಲ್ಲುತ್ತದೆ. ಈಜಿನ ಬಗ್ಗೆ ಎಷ್ಟು ಓದಿದರೆ ಏನುಪ್ರಯೋಜನ? ನಮಗೆ ನೀರಿನಲ್ಲಿ ಈಜುವುದು ಬರಬೇಕು; ಅದೇ ಈಜಿನ ಬಗ್ಗೆ ದಿಟವಾದ ತಿಳಿವಳಿಕೆ. ಲೈಸೆನ್ಸ್ ಇದ್ದ ಮಾತ್ರಕ್ಕೆ ನಮಗೆ ವಾಹನವನ್ನು ನಡೆಸಲು ಬರುತ್ತದೆ ಎಂಬುದು ಸಿದ್ಧವಾಗುವುದಿಲ್ಲ; ರಸ್ತೆಯಲ್ಲಿ ನಮಗೆ ವಾಹನವನ್ನು ಡ್ರೈವ್ ಮಾಡಲು ಬರಬೇಕು.</p>.<p>ನಮ್ಮ ಸಂಸ್ಕೃತಿಯಲ್ಲಿ ಶ್ರವಣ, ಮನನ ಮತ್ತು ನಿದಿಧ್ಯಾಸನ ಎಂಬ ಕಲ್ಪನೆಯಿದೆ. ಶಿಕ್ಷಣದ ಹಂತಗಳನ್ನು ಇದು ಸೂಚಿಸುತ್ತದೆ. ಮೊದಲಿಗೆ ಓದಬೇಕು; ಇದು ಶ್ರವಣ. ಬಳಿಕ ಅದನ್ನು ಚೆನ್ನಾಗಿ ಪರಾಮರ್ಶಿಸಬೇಕು; ಇದು ಮನನ. ಅನಂತರ ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು; ಇದು ನಿದಿಧ್ಯಾಸನ. ನಮ್ಮ ಜೀವನಕ್ಕೆ ನೇರವಾಗಿ ಯಾವುದು ಒದಗುತ್ತದೆಯೋ ಅದೇ ನಿಜವಾದ ಶಿಕ್ಷಣ ಎಂಬುದು ಈ ಪರಿಕಲ್ಪನೆಯ ಹಿನ್ನೆಲೆ.</p>.<p>ಅನುಭವ ಇಲ್ಲದ ಓದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ. ಅನುಭವಕ್ಕೆ ಓದು ಹೇಗೆ ಬರುತ್ತದೆ? ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ತಾನೆ? ಒಂದು ರಸ್ತೆ ಇಂಥ ಊರಿಗೆ ಹೋಗುತ್ತದೆ – ಎಂದು ನಾವು ಹೇಳುತ್ತೇವೆ. ಆ ಊರಿಗೆ ಆ ದಾರಿ ಎಂಬುದು ಯಾವಾಗ ಸಿದ್ಧವಾಗುತ್ತದೆ? ಆ ರಸ್ತೆ ಆ ಊರಿಗೆ ಸಂಪರ್ಕವನ್ನು ಕಲ್ಪಿಸಿದಾಗಲೇ ಅಲ್ಲವೆ? ಆ ರಸ್ತೆ ಆ ಊರಿಗೆ ಸೇರುತ್ತದೆ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ನಾವು ಆ ಊರಿಗೆ ಆ ರಸ್ತೆಯಲ್ಲಿ ಹೋಗಿಬಂದಿರಬೇಕು; ಅಥವಾ ಹೋಗಿಬಂದವರು, ನಮ್ಮ ಆಪ್ತರು, ಅದನ್ನು ಬಲಪಡಿಸಬೇಕು; ಅಥವಾ ನಿಖರವಾದ ತಿಳಿವಳಿಕೆ ಇರಬೇಕು. ಈ ಮೂರು ಮಾಹಿತಿಗಳೂ ಸರಿ ಎಂದು ನಮಗೆ ಸ್ಪಷ್ಟಪಡಿಸುವುದೇ ನಮ್ಮ ಅನುಭವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನುಭವೇನ ವಿನಾಧಿಗತಂ ಶ್ರುತಂ</p>.<p>ಭವತಿ ನೈವ ನೃಣಾಮುಪಕಾರಕಮ್ ।</p>.<p>ದಧನಿ ವರ್ತತ ಏವ ಹವಿಃ ಪುನಃ</p>.<p>ನ ಮಥನೇನ ವಿನಾ ತದವಾಪ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಓದಿ ಕಲಿತದ್ದಾಗಲಿ, ಕೇಳಿ ತಿಳಿದದ್ದಾಗಲಿ ಸ್ವತಃ ಅನುಭವವಿಲ್ಲದೆ ಜನರಿಗೆ ಉಪಯುಕ್ತವಾಗುವುದಿಲ್ಲ. ಮೊಸರಲ್ಲಿ ತುಪ್ಪವೇನೋ ಇದೆ; ಆದರೆ ಕಡೆಯದೆ ಅದು ದೊರೆಯುವುದಿಲ್ಲ.’</p>.<p>ಅನುಭವ ಇಲ್ಲದ ವಿದ್ಯೆ, ಅದು ಬರಿ ಶುಷ್ಕವಿದ್ಯೆ, ಪ್ರಯೋಜನಕ್ಕೆ ಬಾರದು ಎಂದು ಸುಭಾಷಿತ ಹೇಳುತ್ತಿದೆ.</p>.<p>ಅಡುಗೆ ಮಾಡುವುದು ಹೇಗೆ ಎಂದು ನಾವು ದೊಡ್ಡ ಪುಸ್ತಕಗಳನ್ನು ಬರೆಯಬಹುದು; ಅದರ ಬಗ್ಗೆ ಸಂಶೋಧನಪ್ರಬಂಧವನ್ನು ಬರೆದು ಪಿಎಚ್.ಡಿ.ಯನ್ನೂ ಸಂಪಾದಿಸಬಹುದು. ಆದರೆ ಅಡುಗೆಯ ಬಗ್ಗೆ ನಿಜವಾದ ತಿಳಿವಳಿಕೆ ಎಂದರೆ ನಮಗೆ ಅಡುಗೆ ಮಾಡಲು ಬರಬೇಕು. ನಾಲ್ಕು ಜನರು ರುಚಿಯಾಗಿದೆ ಎಂದು ಹೇಳುವಂತೆ ಅಡುಗೆಮಾಡಿದಾಗಲೇ ನಮಗೆ ನಿಜವಾಗಿಯೂ ಅಡುಗೆ ಬಗ್ಗೆ ಜ್ಞಾನ ಇದೆ ಎಂಬುದು ಸಿದ್ಧವಾಗುವುದು.</p>.<p>ಈ ಮಾತು ಎಲ್ಲ ವಿಷಯಗಳಿಗೂ ಸಲ್ಲುತ್ತದೆ. ಈಜಿನ ಬಗ್ಗೆ ಎಷ್ಟು ಓದಿದರೆ ಏನುಪ್ರಯೋಜನ? ನಮಗೆ ನೀರಿನಲ್ಲಿ ಈಜುವುದು ಬರಬೇಕು; ಅದೇ ಈಜಿನ ಬಗ್ಗೆ ದಿಟವಾದ ತಿಳಿವಳಿಕೆ. ಲೈಸೆನ್ಸ್ ಇದ್ದ ಮಾತ್ರಕ್ಕೆ ನಮಗೆ ವಾಹನವನ್ನು ನಡೆಸಲು ಬರುತ್ತದೆ ಎಂಬುದು ಸಿದ್ಧವಾಗುವುದಿಲ್ಲ; ರಸ್ತೆಯಲ್ಲಿ ನಮಗೆ ವಾಹನವನ್ನು ಡ್ರೈವ್ ಮಾಡಲು ಬರಬೇಕು.</p>.<p>ನಮ್ಮ ಸಂಸ್ಕೃತಿಯಲ್ಲಿ ಶ್ರವಣ, ಮನನ ಮತ್ತು ನಿದಿಧ್ಯಾಸನ ಎಂಬ ಕಲ್ಪನೆಯಿದೆ. ಶಿಕ್ಷಣದ ಹಂತಗಳನ್ನು ಇದು ಸೂಚಿಸುತ್ತದೆ. ಮೊದಲಿಗೆ ಓದಬೇಕು; ಇದು ಶ್ರವಣ. ಬಳಿಕ ಅದನ್ನು ಚೆನ್ನಾಗಿ ಪರಾಮರ್ಶಿಸಬೇಕು; ಇದು ಮನನ. ಅನಂತರ ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು; ಇದು ನಿದಿಧ್ಯಾಸನ. ನಮ್ಮ ಜೀವನಕ್ಕೆ ನೇರವಾಗಿ ಯಾವುದು ಒದಗುತ್ತದೆಯೋ ಅದೇ ನಿಜವಾದ ಶಿಕ್ಷಣ ಎಂಬುದು ಈ ಪರಿಕಲ್ಪನೆಯ ಹಿನ್ನೆಲೆ.</p>.<p>ಅನುಭವ ಇಲ್ಲದ ಓದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ. ಅನುಭವಕ್ಕೆ ಓದು ಹೇಗೆ ಬರುತ್ತದೆ? ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ತಾನೆ? ಒಂದು ರಸ್ತೆ ಇಂಥ ಊರಿಗೆ ಹೋಗುತ್ತದೆ – ಎಂದು ನಾವು ಹೇಳುತ್ತೇವೆ. ಆ ಊರಿಗೆ ಆ ದಾರಿ ಎಂಬುದು ಯಾವಾಗ ಸಿದ್ಧವಾಗುತ್ತದೆ? ಆ ರಸ್ತೆ ಆ ಊರಿಗೆ ಸಂಪರ್ಕವನ್ನು ಕಲ್ಪಿಸಿದಾಗಲೇ ಅಲ್ಲವೆ? ಆ ರಸ್ತೆ ಆ ಊರಿಗೆ ಸೇರುತ್ತದೆ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ನಾವು ಆ ಊರಿಗೆ ಆ ರಸ್ತೆಯಲ್ಲಿ ಹೋಗಿಬಂದಿರಬೇಕು; ಅಥವಾ ಹೋಗಿಬಂದವರು, ನಮ್ಮ ಆಪ್ತರು, ಅದನ್ನು ಬಲಪಡಿಸಬೇಕು; ಅಥವಾ ನಿಖರವಾದ ತಿಳಿವಳಿಕೆ ಇರಬೇಕು. ಈ ಮೂರು ಮಾಹಿತಿಗಳೂ ಸರಿ ಎಂದು ನಮಗೆ ಸ್ಪಷ್ಟಪಡಿಸುವುದೇ ನಮ್ಮ ಅನುಭವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>