<p><em><strong>ಶ್ರೀಮಾನಜನನಿಂದ್ಯಶ್ಚ ಶೂರಾಶ್ಚಾಪ್ಯವಿಕತ್ಥನಃ ।</strong></em><br /><em><strong>ಸಮದೃಷ್ಟಿಃ ಪ್ರಭುಶ್ಚೈವ ದುರ್ಲಭಾಃ ಪುರುಷಾಸ್ತ್ರಯಃ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಜನರ ನಿಂದೆಗೆ ಗುರಿಯಾಗದ ಶ್ರೀಮಂತ, ಆತ್ಮಪ್ರಶಂಸೆ ಮಾಡಿಕೊಳ್ಳದ ಶೂರ, ಸಮದೃಷ್ಟಿಯುಳ್ಳ ರಾಜ – ಈ ಮೂವರು ಸಿಗುವುದು ಕಷ್ಟ.‘</p>.<p>ಸಮಾಜದ ಗುಣ ಮತ್ತು ಮನುಷ್ಯರ ಸ್ವಭಾವ – ಇವೆರಡನ್ನೂ ಈ ಸುಭಾಷಿತ ನಿರೂಪಿಸುತ್ತಿದೆ.</p>.<p>ಜನರಿಗೆ ಯಾವಾಗಲೂ ಧನಿಕರ ಬಗ್ಗೆ ಗುಮಾನಿ. ಅವರು ಎಷ್ಟೇ ಪ್ರಾಮಾಣಿಕವಾಗಿ ಸಂಪತ್ತನ್ನು ಸಂಪಾದಿಸಿದ್ದರೂ ಜನರಿಗೆ ಅವರ ಮೇಲೆ ಸಂಶಯ; ಮೋಸದಿಂದಲೇ ಹಣವನ್ನು ಸಂಪಾದಿಸಿದ್ದಾರೆ ಎಂಬ ಅನುಮಾನ ಜನರಿಗೆ. ಹೌದು, ಸಂಪತ್ತನ್ನು ಸಂಪಾದಿಸುವುದು ಸುಲಭವಲ್ಲ. ಹೀಗೆಂದು ಎಲ್ಲ ಧನಿಕರೂ ಅದನ್ನು ಅಡ್ಡದಾರಿಯಲ್ಲಿಯೇ ಸಂಪಾದಿಸಿರುತ್ತಾರೆ ಎಂದೇನಿಲ್ಲ; ಹಲವರು ನ್ಯಾಯಮಾರ್ಗದಲ್ಲಿಯೇ ಹಣವನ್ನು ಸಂಪಾದಿಸಿರುತ್ತಾರೆ. ಆದರೆ ಸಿರಿವಂತರಿಗೆ ಮಾತ್ರ ಯಾವಾಗಲೂ ಜನರಿಂದ ನಿಂದೆ ತಪ್ಪುವುದಿಲ್ಲ; ಧನಿಕರು ಮೋಸಗಾರರು ಎಂಬ ನಿಂದೆ.</p>.<p>ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದ ಶೂರನೇ ಇರಲಾರ ಎಂದು ಸುಭಾಷಿತ ಹೇಳುತ್ತಿದೆ. ಇಲ್ಲಿ ಶೂರ ಎಂದರೆ ದೈಹಿಕವಾಗಿ ಬಲಶಾಲಿ, ಮಾನಸಿಕವಾಗಿ ಧೈರ್ಯಶಾಲಿ ಎಂದಷ್ಟೆ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನೂ ಈ ವರ್ಗಕ್ಕೆ ಸೇರಿಸಬಹುದು ಎನಿಸುತ್ತದೆ. ಈ ಸಾಧಕರು ಎಷ್ಟೇ ಸರಳರೂ ವಿನಯವಂತರೂ ಆಗಿದ್ದರೂ ಒಮ್ಮೆಯಾದರೂ ಅವರು ಆತ್ಮಪ್ರಶಂಸೆಯನ್ನು ಮಾಡಿಕೊಂಡೇ ಇರುತ್ತಾರೆ ಎನ್ನುತ್ತಿದೆ ಸುಭಾಷಿತ. ಹೀಗೆ ನಮ್ಮ ಸಾಧನೆಯನ್ನು ಒಮ್ಮೆ ಮೆಲುಕು ಹಾಕಿಕೊಳ್ಳುವುದೇನೂ ಅಪರಾಧವಲ್ಲವಷ್ಟೆ! ಆದರೆ ಅದು ಅಹಂಕಾರವಾಗದಂತೆ ಎಚ್ಚರವಾಗಿರಬೇಕಾಗುತ್ತದೆ.</p>.<p>ಸಮದೃಷ್ಟಿಯುಳ್ಳ ರಾಜನು ಸಿಗುವುದು ಕೂಡ ದುರ್ಲಭ ಎನ್ನುತ್ತಿದೆ ಸುಭಾಷಿತ. ರಾಜನಾದವನು ಪ್ರಜೆಗಳಿಗೆ ತಂದೆಯ ಸಮಾನ. ಇದರ ಅರ್ಥ, ಪ್ರಜೆಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಎಂದು. ಈಗ ರಾಜ ಎಂದಾಗ ಆ ಸ್ಥಾನದಲ್ಲಿ ಮಂತ್ರಿಯನ್ನೋ ಮುಖ್ಯಮಂತ್ರಿಯನ್ನೋ ಅಥವಾ ಇನ್ನಾವುದೇ ಜನಪ್ರತಿನಿಧಿಗಳನ್ನೋ ಕಾಣಬೇಕು. ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡುವುದು ಎಂದರೆ ಎಲ್ಲರಿಗೂ ಒಂದೇ ರೀತಿಯ ಊಟ, ಬಟ್ಟೆ, ಸಂಬಳ ಮುಂತಾದುವನ್ನು ಕೊಡುವುದು ಎಂದಲ್ಲ; ಅವರವರ ಆವಶ್ಯಕತೆಗಳಿಗೆ ತಕ್ಕ ರೀತಿಯಲ್ಲಿ ಎಲ್ಲರ ಆಗುಹೋಗುಗಳನ್ನು ಪೂರೈಸುವುದು ಎಂದು ಅರ್ಥ. ಇವನು ನಮ್ಮ ಪಕ್ಷದವನು; ಇವನಿಗೆ ಸಹಾಯ ಮಾಡಬೇಕು; ಅವನು ನಮ್ಮ ಪಕ್ಷದವನಲ್ಲ; ಅವನಿಗೆ ಸಹಾಯ ಮಾಡಬಾರದು. ಇವನು ನಮ್ಮ ಜಾತಿಯವನು; ಹೀಗಾಗಿ ಇವನು ನಮ್ಮವನು. ಅವನು ಬೇರೆ ಜಾತಿಯವನು; ಹೀಗಾಗಿ ಅವನು ನಮ್ಮವನಲ್ಲ. ಇಂಥ ಆಲೋಚನೆಗಳೂ ಜನಪ್ರತಿನಿಧಿಗಳಲ್ಲಿ ಬರಬಾರದು. ಇಂಥ ಭೇದಬುದ್ಧಿ ಇಲ್ಲದಿರುವಿಕೆಯೇ ಸಮದೃಷ್ಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಶ್ರೀಮಾನಜನನಿಂದ್ಯಶ್ಚ ಶೂರಾಶ್ಚಾಪ್ಯವಿಕತ್ಥನಃ ।</strong></em><br /><em><strong>ಸಮದೃಷ್ಟಿಃ ಪ್ರಭುಶ್ಚೈವ ದುರ್ಲಭಾಃ ಪುರುಷಾಸ್ತ್ರಯಃ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಜನರ ನಿಂದೆಗೆ ಗುರಿಯಾಗದ ಶ್ರೀಮಂತ, ಆತ್ಮಪ್ರಶಂಸೆ ಮಾಡಿಕೊಳ್ಳದ ಶೂರ, ಸಮದೃಷ್ಟಿಯುಳ್ಳ ರಾಜ – ಈ ಮೂವರು ಸಿಗುವುದು ಕಷ್ಟ.‘</p>.<p>ಸಮಾಜದ ಗುಣ ಮತ್ತು ಮನುಷ್ಯರ ಸ್ವಭಾವ – ಇವೆರಡನ್ನೂ ಈ ಸುಭಾಷಿತ ನಿರೂಪಿಸುತ್ತಿದೆ.</p>.<p>ಜನರಿಗೆ ಯಾವಾಗಲೂ ಧನಿಕರ ಬಗ್ಗೆ ಗುಮಾನಿ. ಅವರು ಎಷ್ಟೇ ಪ್ರಾಮಾಣಿಕವಾಗಿ ಸಂಪತ್ತನ್ನು ಸಂಪಾದಿಸಿದ್ದರೂ ಜನರಿಗೆ ಅವರ ಮೇಲೆ ಸಂಶಯ; ಮೋಸದಿಂದಲೇ ಹಣವನ್ನು ಸಂಪಾದಿಸಿದ್ದಾರೆ ಎಂಬ ಅನುಮಾನ ಜನರಿಗೆ. ಹೌದು, ಸಂಪತ್ತನ್ನು ಸಂಪಾದಿಸುವುದು ಸುಲಭವಲ್ಲ. ಹೀಗೆಂದು ಎಲ್ಲ ಧನಿಕರೂ ಅದನ್ನು ಅಡ್ಡದಾರಿಯಲ್ಲಿಯೇ ಸಂಪಾದಿಸಿರುತ್ತಾರೆ ಎಂದೇನಿಲ್ಲ; ಹಲವರು ನ್ಯಾಯಮಾರ್ಗದಲ್ಲಿಯೇ ಹಣವನ್ನು ಸಂಪಾದಿಸಿರುತ್ತಾರೆ. ಆದರೆ ಸಿರಿವಂತರಿಗೆ ಮಾತ್ರ ಯಾವಾಗಲೂ ಜನರಿಂದ ನಿಂದೆ ತಪ್ಪುವುದಿಲ್ಲ; ಧನಿಕರು ಮೋಸಗಾರರು ಎಂಬ ನಿಂದೆ.</p>.<p>ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದ ಶೂರನೇ ಇರಲಾರ ಎಂದು ಸುಭಾಷಿತ ಹೇಳುತ್ತಿದೆ. ಇಲ್ಲಿ ಶೂರ ಎಂದರೆ ದೈಹಿಕವಾಗಿ ಬಲಶಾಲಿ, ಮಾನಸಿಕವಾಗಿ ಧೈರ್ಯಶಾಲಿ ಎಂದಷ್ಟೆ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನೂ ಈ ವರ್ಗಕ್ಕೆ ಸೇರಿಸಬಹುದು ಎನಿಸುತ್ತದೆ. ಈ ಸಾಧಕರು ಎಷ್ಟೇ ಸರಳರೂ ವಿನಯವಂತರೂ ಆಗಿದ್ದರೂ ಒಮ್ಮೆಯಾದರೂ ಅವರು ಆತ್ಮಪ್ರಶಂಸೆಯನ್ನು ಮಾಡಿಕೊಂಡೇ ಇರುತ್ತಾರೆ ಎನ್ನುತ್ತಿದೆ ಸುಭಾಷಿತ. ಹೀಗೆ ನಮ್ಮ ಸಾಧನೆಯನ್ನು ಒಮ್ಮೆ ಮೆಲುಕು ಹಾಕಿಕೊಳ್ಳುವುದೇನೂ ಅಪರಾಧವಲ್ಲವಷ್ಟೆ! ಆದರೆ ಅದು ಅಹಂಕಾರವಾಗದಂತೆ ಎಚ್ಚರವಾಗಿರಬೇಕಾಗುತ್ತದೆ.</p>.<p>ಸಮದೃಷ್ಟಿಯುಳ್ಳ ರಾಜನು ಸಿಗುವುದು ಕೂಡ ದುರ್ಲಭ ಎನ್ನುತ್ತಿದೆ ಸುಭಾಷಿತ. ರಾಜನಾದವನು ಪ್ರಜೆಗಳಿಗೆ ತಂದೆಯ ಸಮಾನ. ಇದರ ಅರ್ಥ, ಪ್ರಜೆಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಎಂದು. ಈಗ ರಾಜ ಎಂದಾಗ ಆ ಸ್ಥಾನದಲ್ಲಿ ಮಂತ್ರಿಯನ್ನೋ ಮುಖ್ಯಮಂತ್ರಿಯನ್ನೋ ಅಥವಾ ಇನ್ನಾವುದೇ ಜನಪ್ರತಿನಿಧಿಗಳನ್ನೋ ಕಾಣಬೇಕು. ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡುವುದು ಎಂದರೆ ಎಲ್ಲರಿಗೂ ಒಂದೇ ರೀತಿಯ ಊಟ, ಬಟ್ಟೆ, ಸಂಬಳ ಮುಂತಾದುವನ್ನು ಕೊಡುವುದು ಎಂದಲ್ಲ; ಅವರವರ ಆವಶ್ಯಕತೆಗಳಿಗೆ ತಕ್ಕ ರೀತಿಯಲ್ಲಿ ಎಲ್ಲರ ಆಗುಹೋಗುಗಳನ್ನು ಪೂರೈಸುವುದು ಎಂದು ಅರ್ಥ. ಇವನು ನಮ್ಮ ಪಕ್ಷದವನು; ಇವನಿಗೆ ಸಹಾಯ ಮಾಡಬೇಕು; ಅವನು ನಮ್ಮ ಪಕ್ಷದವನಲ್ಲ; ಅವನಿಗೆ ಸಹಾಯ ಮಾಡಬಾರದು. ಇವನು ನಮ್ಮ ಜಾತಿಯವನು; ಹೀಗಾಗಿ ಇವನು ನಮ್ಮವನು. ಅವನು ಬೇರೆ ಜಾತಿಯವನು; ಹೀಗಾಗಿ ಅವನು ನಮ್ಮವನಲ್ಲ. ಇಂಥ ಆಲೋಚನೆಗಳೂ ಜನಪ್ರತಿನಿಧಿಗಳಲ್ಲಿ ಬರಬಾರದು. ಇಂಥ ಭೇದಬುದ್ಧಿ ಇಲ್ಲದಿರುವಿಕೆಯೇ ಸಮದೃಷ್ಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>