<p><strong>ಕಿಂ ದುಃಸಹಂ ನು ಸಾಧೂನಾಂ ವಿದುಷಾಂ ಕಿಮಪೇಕ್ಷಿತಮ್ ।</strong></p>.<p><strong>ಕಿಮಕಾರ್ಯಂ ಕದರ್ಯಾಣಾಂ ದುಸೃಜಂ ಕಿಂ ಧೃತಾತ್ಮನಾಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿದೆ? ನೀಚರಿಗೆ ಮಾಡಬಾರದ್ದು ಯಾವುದಿದೆ? ಆತ್ಮಜ್ಞಾನಿಗಳಿಗೆ ಬಿಡಲು ಅಸಾಧ್ಯವಾದುದು ಯಾವುದಿದೆ?’</p>.<p>ಕೆಲವೊಂದು ವ್ಯಕ್ತಿತ್ವಗಳಿಗೂ ಗುಣಗಳಿಗೂ ಅವಿನಾಭಾವ ಸಂಬಂಧವಿರುತ್ತದೆ; ಹೀಗೆಯೇ ವಸ್ತುಗಳಿಗೂ ಗುಣಗಳಿಗೂ ಸಂಬಂಧವಿರುತ್ತದೆ. ಹರಿಯುವುದು ನೀರಿನ ಸಹಜ ಗುಣ; ಅದನ್ನು ಎಂದಿಗೂ ತಪ್ಪಿಸಲು ಆಗದು. ಹೀಗೆಯೇ ಸುಡುವುದು ಬೆಂಕಿಯ ಗುಣ; ಬೆಂಕಿಯನ್ನೂ ಸುಡುವಿಕೆಯನ್ನೂ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಹೀಗೆಯೇ ಕೆಲವು ಗುಣಗಳನ್ನು ಕೆಲವರಿಂದ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ತಮಗೆ ಒದಗುವ ಕಷ್ಟಗಳನ್ನಾಗಲೀ ಸುಖಗಳನ್ನಾಗಲೀ ಸಹಜವಾಗಿಯೇ ಸ್ವೀಕರಿಸಬಲ್ಲವರೇ ಸಾಧುಗಳು. ಹೀಗೆ ಪ್ರತಿಯೊಂದನ್ನೂ ಸಹಿಸುವುದನ್ನೇ ಸ್ವಭಾವನ್ನಾಗಿಸಿಕೊಂಡಿರುತ್ತಾರೆ ಅವರು. ಹೀಗಾಗಿ ಅವರಿಗೆ ಯಾವುದನ್ನೂ ಸಹಿಸಬಲ್ಲ ಧೀರತೆ ಸಹಜವಾಗಿಯೇ ಸಿದ್ಧಿಸಿರುತ್ತದೆ.</p>.<p>ವಿದ್ವಾಂಸನ ಲೋಕ ನಮ್ಮ ಲೋಕಕ್ಕಿಂತಲೂ ಭಿನ್ನ. ಅವನಿಗೆ ವಿದ್ಯೆಯ ಮೇಲಿರುವ ಅಸೆ ಬೇರೆ ಯಾವುದರ ಮೇಲೂ ಇರಲು ಸಾಧ್ಯವಿಲ್ಲ. ಹೀಗಿರುವಾಗ ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿರುತ್ತದೆ?</p>.<p>ನೀಚರು ಯಾವ ಕೆಲಸವನ್ನೂ ಮಾಡಲು ಹೇಸುವುದಿಲ್ಲವಷ್ಟೆ. ಹೀಗಾಗಿಯೇ ಸುಭಾಷಿತ ಕೇಳುತ್ತಿದೆ – ನೀಚರಿಗೆ ಮಾಡಬಾರದ್ದು ಯಾವುದಿದೆ?</p>.<p>ಜೀವನದಲ್ಲಿ ಎಲ್ಲವನ್ನೂ ಬಿಡಲು ಸಿದ್ಧನಾಗಿರುವವನೇ ಆತ್ಮಜ್ಞಾನಿ. ಎಲ್ಲವನ್ನೂ ತ್ಯಜಿಸಲು ಸಿದ್ಧನಿರುವ ಆತ್ಮಜ್ಞಾನಿಗೆ ಬಿಡಲು ಮತ್ತೇನೂ ಇಲ್ಲದಿರುವಾಗ ಯಾವುದೊಂದನ್ನೂ ಅವನು ‘ನಾನು ಬಿಡಲಾರೆ‘ ಎನ್ನಲಾರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಂ ದುಃಸಹಂ ನು ಸಾಧೂನಾಂ ವಿದುಷಾಂ ಕಿಮಪೇಕ್ಷಿತಮ್ ।</strong></p>.<p><strong>ಕಿಮಕಾರ್ಯಂ ಕದರ್ಯಾಣಾಂ ದುಸೃಜಂ ಕಿಂ ಧೃತಾತ್ಮನಾಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿದೆ? ನೀಚರಿಗೆ ಮಾಡಬಾರದ್ದು ಯಾವುದಿದೆ? ಆತ್ಮಜ್ಞಾನಿಗಳಿಗೆ ಬಿಡಲು ಅಸಾಧ್ಯವಾದುದು ಯಾವುದಿದೆ?’</p>.<p>ಕೆಲವೊಂದು ವ್ಯಕ್ತಿತ್ವಗಳಿಗೂ ಗುಣಗಳಿಗೂ ಅವಿನಾಭಾವ ಸಂಬಂಧವಿರುತ್ತದೆ; ಹೀಗೆಯೇ ವಸ್ತುಗಳಿಗೂ ಗುಣಗಳಿಗೂ ಸಂಬಂಧವಿರುತ್ತದೆ. ಹರಿಯುವುದು ನೀರಿನ ಸಹಜ ಗುಣ; ಅದನ್ನು ಎಂದಿಗೂ ತಪ್ಪಿಸಲು ಆಗದು. ಹೀಗೆಯೇ ಸುಡುವುದು ಬೆಂಕಿಯ ಗುಣ; ಬೆಂಕಿಯನ್ನೂ ಸುಡುವಿಕೆಯನ್ನೂ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಹೀಗೆಯೇ ಕೆಲವು ಗುಣಗಳನ್ನು ಕೆಲವರಿಂದ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ತಮಗೆ ಒದಗುವ ಕಷ್ಟಗಳನ್ನಾಗಲೀ ಸುಖಗಳನ್ನಾಗಲೀ ಸಹಜವಾಗಿಯೇ ಸ್ವೀಕರಿಸಬಲ್ಲವರೇ ಸಾಧುಗಳು. ಹೀಗೆ ಪ್ರತಿಯೊಂದನ್ನೂ ಸಹಿಸುವುದನ್ನೇ ಸ್ವಭಾವನ್ನಾಗಿಸಿಕೊಂಡಿರುತ್ತಾರೆ ಅವರು. ಹೀಗಾಗಿ ಅವರಿಗೆ ಯಾವುದನ್ನೂ ಸಹಿಸಬಲ್ಲ ಧೀರತೆ ಸಹಜವಾಗಿಯೇ ಸಿದ್ಧಿಸಿರುತ್ತದೆ.</p>.<p>ವಿದ್ವಾಂಸನ ಲೋಕ ನಮ್ಮ ಲೋಕಕ್ಕಿಂತಲೂ ಭಿನ್ನ. ಅವನಿಗೆ ವಿದ್ಯೆಯ ಮೇಲಿರುವ ಅಸೆ ಬೇರೆ ಯಾವುದರ ಮೇಲೂ ಇರಲು ಸಾಧ್ಯವಿಲ್ಲ. ಹೀಗಿರುವಾಗ ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿರುತ್ತದೆ?</p>.<p>ನೀಚರು ಯಾವ ಕೆಲಸವನ್ನೂ ಮಾಡಲು ಹೇಸುವುದಿಲ್ಲವಷ್ಟೆ. ಹೀಗಾಗಿಯೇ ಸುಭಾಷಿತ ಕೇಳುತ್ತಿದೆ – ನೀಚರಿಗೆ ಮಾಡಬಾರದ್ದು ಯಾವುದಿದೆ?</p>.<p>ಜೀವನದಲ್ಲಿ ಎಲ್ಲವನ್ನೂ ಬಿಡಲು ಸಿದ್ಧನಾಗಿರುವವನೇ ಆತ್ಮಜ್ಞಾನಿ. ಎಲ್ಲವನ್ನೂ ತ್ಯಜಿಸಲು ಸಿದ್ಧನಿರುವ ಆತ್ಮಜ್ಞಾನಿಗೆ ಬಿಡಲು ಮತ್ತೇನೂ ಇಲ್ಲದಿರುವಾಗ ಯಾವುದೊಂದನ್ನೂ ಅವನು ‘ನಾನು ಬಿಡಲಾರೆ‘ ಎನ್ನಲಾರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>