<p>ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ</p>.<p>ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ ।</p>.<p>ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ</p>.<p>ರಾಜ್ಯಂ ಪ್ರಮತ್ತಸಚಿವಸ್ಯ ನರಾಧಿಪಸ್ಯ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಲೋಭಿಯ ಯಶಸ್ಸು ನಾಶವಾಗುತ್ತದೆ; ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಜಿಪುಣನಿಗೆ ಸುಖ ಸಿಗುವುದಿಲ್ಲ; ಹೀಗೆಯೇ, ಮೈಮರೆತ ಮಂತ್ರಿಯನ್ನು ಹೊಂದಿರುವಂಥ ರಾಜನ ರಾಜ್ಯ ನಾಶವಾಗುತ್ತದೆ.’</p>.<p>ಈ ಸುಭಾಷಿತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಇಲ್ಲ. ನಾವು ಯಾವುದೋ ಒಂದು ಗುರಿಯನ್ನು ಇಟ್ಟುಕೊಂಡು, ಅದೇ ಸರ್ವಶ್ರೇಷ್ಠ ಎಂದುಕೊಂಡು ಮುನ್ನಡೆಯುತ್ತಿರುತ್ತೇವೆ. ನಾವು ಆ ಗುರಿಯನ್ನೂ ಮುಟ್ಟಬಹುದು. ಆದರೆ ನಾವು ನಮ್ಮ ದಾರಿಯನ್ನು ಸರಿಯಾಗಿ ಗಮನಿಸದಿದ್ದರೆ ಆಗ ಹಲವು ಬೆಲೆಬಾಳುವ ವಿವರಗಳನ್ನು ನಮ್ಮ ಪ್ರಯಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಮೊದಲಿಗೆ ಸುಭಾಷಿತದ ಕೊನೆಯ ಮಾತನ್ನು ನೋಡೋಣ: ’ಮೈಮರೆತ ಮಂತ್ರಿಯನ್ನು ಹೊಂದಿರುವ ರಾಜನ ರಾಜ್ಯ ನಾಶವಾಗುತ್ತದೆ.’</p>.<p>ಈ ಮಾತನ್ನು ಇಂದಿನ ಸಂದರ್ಭಕ್ಕೆ ಹೇಗೆ ಹೊಂದಿಸುವುದು? ಸುಲಭ. ನಮ್ಮ ಕಾಲದಲ್ಲಿ ರಾಜ ಯಾರು? ಪ್ರಜೆಗಳೇ ಪ್ರಭುಗಳು ಅಲ್ಲವೆ? ಹೀಗಾಗಿ ಮೈಮರೆತ ಮಂತ್ರಿಗಳನ್ನು ಪಡೆದಿರುವ ರಾಜರು ಎಂದರೆ ಪ್ರಭುಗಳೇ, ಎಂದರೆ ನಾವೇ. ಆದುದರಿಂದ ಇಂಥ ಮಂತ್ರಿಗಳಿರುವ ನಮ್ಮ ರಾಜ್ಯವೇ ನಾಶವಾಗುತ್ತದೆ – ಎಂದು ಸುಭಾಷಿತ ಹೇಳುತ್ತಿದೆ. ನಮ್ಮ ಕಾಲದ ಮಂತ್ರಿಗಳು ಎಂದರೆ ಕಾರ್ಪೊರೇಟರ್ಗಳು, ಎಂಎಲ್ಎಗಳು, ಎಂಪಿಗಳು, ರಾಜ್ಯ–ಕೇಂದ್ರ ಸರ್ಕಾರದ ಮಂತ್ರಿಗಳು – ಇವರಲ್ಲಿ ಬಹುಪಾಲು ಜನರು ಮೈಮರೆತಿದ್ದಾರೆಂದು ತಿಳಿಸಿಕೊಡಲು ಸುಭಾಷಿತವೇ ಬೇಕಾಗಿಲ್ಲವಷ್ಟೆ. ಈಗಾಗಲೇ ದಿಕ್ಕು ತಪ್ಪಿರುವರುವ ನಮ್ಮ ವ್ಯವಸ್ಥೆಯನ್ನು ಅನುಭವಿಸುತ್ತಿರುವ ನಮ್ಮೆಲ್ಲರಿಗೂ ಇದು ಸ್ವಯಂ ಅನುಭವವೇದ್ಯವೇ ಆಗಿದೆ.</p>.<p>ಲೋಭಿಯ ಯಶಸ್ಸು ನಾಶವಾಗುತ್ತದೆ; ಏಕೆಂದರೆ ಅವನಿಗೆ ಇನ್ನೊಬ್ಬರಿಗೆ ಕೊಡುವ ಗುಣವೇ ಇರುವುದಿಲ್ಲ. ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಏಕೆಂದರೆ ಇಂಥ ಅಪಯಕಾರಿ ವ್ಯಕ್ತಿಯ ಜೊತೆ ಯಾರು ತಾನೆ ಸ್ನೇಹವನ್ನು ಉಳಿಸಿಕೊಳ್ಳಲು ಬಯಸುತ್ತಾರೆ? ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಏಕೆಂದರೆ ಒಬ್ಬ ತಪ್ಪು ಮಾಡಿದರೂ ಅದರ ಫಲವನ್ನು ಇಡಿಯ ಕುಟುಂಬ ಅನುಭವಿಸಬೇಕಾಗುತ್ತದೆ. ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಏಕೆಂದರೆ ಹಣದ ಗಳಿಕೆಯೇ ಮುಖ್ಯವಾದವನಿಗೆ ಧರ್ಮ–ಅಧರ್ಮಗಳ ತಿಳಿವಳಿಕೆಯೇ ಬೇಡವಾಗಿರುತ್ತದೆ. ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಏಕೆಂದರೆ ನಾವು ಹೇಗೆ ಜೀವನದಲ್ಲಿ ನಡೆದುಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಗೆ ಮುಖ್ಯ ದಾರಿಯಾಗಿರುತ್ತದೆ. ಜಿಪುಣನಿಗೆ ಸುಖ ಸಿಗುವುದಿಲ್ಲ; ಏಕೆಂದರೆ ಅವನು ತನ್ನ ಸಂಪತ್ತನ್ನು ಅವನೂ ಅನುಭವಿಸುವುದಿಲ್ಲ, ಇನ್ನೊಬ್ಬರಿಗೂ ಕೊಡುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ</p>.<p>ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ ।</p>.<p>ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ</p>.<p>ರಾಜ್ಯಂ ಪ್ರಮತ್ತಸಚಿವಸ್ಯ ನರಾಧಿಪಸ್ಯ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಲೋಭಿಯ ಯಶಸ್ಸು ನಾಶವಾಗುತ್ತದೆ; ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಜಿಪುಣನಿಗೆ ಸುಖ ಸಿಗುವುದಿಲ್ಲ; ಹೀಗೆಯೇ, ಮೈಮರೆತ ಮಂತ್ರಿಯನ್ನು ಹೊಂದಿರುವಂಥ ರಾಜನ ರಾಜ್ಯ ನಾಶವಾಗುತ್ತದೆ.’</p>.<p>ಈ ಸುಭಾಷಿತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಇಲ್ಲ. ನಾವು ಯಾವುದೋ ಒಂದು ಗುರಿಯನ್ನು ಇಟ್ಟುಕೊಂಡು, ಅದೇ ಸರ್ವಶ್ರೇಷ್ಠ ಎಂದುಕೊಂಡು ಮುನ್ನಡೆಯುತ್ತಿರುತ್ತೇವೆ. ನಾವು ಆ ಗುರಿಯನ್ನೂ ಮುಟ್ಟಬಹುದು. ಆದರೆ ನಾವು ನಮ್ಮ ದಾರಿಯನ್ನು ಸರಿಯಾಗಿ ಗಮನಿಸದಿದ್ದರೆ ಆಗ ಹಲವು ಬೆಲೆಬಾಳುವ ವಿವರಗಳನ್ನು ನಮ್ಮ ಪ್ರಯಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಮೊದಲಿಗೆ ಸುಭಾಷಿತದ ಕೊನೆಯ ಮಾತನ್ನು ನೋಡೋಣ: ’ಮೈಮರೆತ ಮಂತ್ರಿಯನ್ನು ಹೊಂದಿರುವ ರಾಜನ ರಾಜ್ಯ ನಾಶವಾಗುತ್ತದೆ.’</p>.<p>ಈ ಮಾತನ್ನು ಇಂದಿನ ಸಂದರ್ಭಕ್ಕೆ ಹೇಗೆ ಹೊಂದಿಸುವುದು? ಸುಲಭ. ನಮ್ಮ ಕಾಲದಲ್ಲಿ ರಾಜ ಯಾರು? ಪ್ರಜೆಗಳೇ ಪ್ರಭುಗಳು ಅಲ್ಲವೆ? ಹೀಗಾಗಿ ಮೈಮರೆತ ಮಂತ್ರಿಗಳನ್ನು ಪಡೆದಿರುವ ರಾಜರು ಎಂದರೆ ಪ್ರಭುಗಳೇ, ಎಂದರೆ ನಾವೇ. ಆದುದರಿಂದ ಇಂಥ ಮಂತ್ರಿಗಳಿರುವ ನಮ್ಮ ರಾಜ್ಯವೇ ನಾಶವಾಗುತ್ತದೆ – ಎಂದು ಸುಭಾಷಿತ ಹೇಳುತ್ತಿದೆ. ನಮ್ಮ ಕಾಲದ ಮಂತ್ರಿಗಳು ಎಂದರೆ ಕಾರ್ಪೊರೇಟರ್ಗಳು, ಎಂಎಲ್ಎಗಳು, ಎಂಪಿಗಳು, ರಾಜ್ಯ–ಕೇಂದ್ರ ಸರ್ಕಾರದ ಮಂತ್ರಿಗಳು – ಇವರಲ್ಲಿ ಬಹುಪಾಲು ಜನರು ಮೈಮರೆತಿದ್ದಾರೆಂದು ತಿಳಿಸಿಕೊಡಲು ಸುಭಾಷಿತವೇ ಬೇಕಾಗಿಲ್ಲವಷ್ಟೆ. ಈಗಾಗಲೇ ದಿಕ್ಕು ತಪ್ಪಿರುವರುವ ನಮ್ಮ ವ್ಯವಸ್ಥೆಯನ್ನು ಅನುಭವಿಸುತ್ತಿರುವ ನಮ್ಮೆಲ್ಲರಿಗೂ ಇದು ಸ್ವಯಂ ಅನುಭವವೇದ್ಯವೇ ಆಗಿದೆ.</p>.<p>ಲೋಭಿಯ ಯಶಸ್ಸು ನಾಶವಾಗುತ್ತದೆ; ಏಕೆಂದರೆ ಅವನಿಗೆ ಇನ್ನೊಬ್ಬರಿಗೆ ಕೊಡುವ ಗುಣವೇ ಇರುವುದಿಲ್ಲ. ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಏಕೆಂದರೆ ಇಂಥ ಅಪಯಕಾರಿ ವ್ಯಕ್ತಿಯ ಜೊತೆ ಯಾರು ತಾನೆ ಸ್ನೇಹವನ್ನು ಉಳಿಸಿಕೊಳ್ಳಲು ಬಯಸುತ್ತಾರೆ? ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಏಕೆಂದರೆ ಒಬ್ಬ ತಪ್ಪು ಮಾಡಿದರೂ ಅದರ ಫಲವನ್ನು ಇಡಿಯ ಕುಟುಂಬ ಅನುಭವಿಸಬೇಕಾಗುತ್ತದೆ. ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಏಕೆಂದರೆ ಹಣದ ಗಳಿಕೆಯೇ ಮುಖ್ಯವಾದವನಿಗೆ ಧರ್ಮ–ಅಧರ್ಮಗಳ ತಿಳಿವಳಿಕೆಯೇ ಬೇಡವಾಗಿರುತ್ತದೆ. ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಏಕೆಂದರೆ ನಾವು ಹೇಗೆ ಜೀವನದಲ್ಲಿ ನಡೆದುಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಗೆ ಮುಖ್ಯ ದಾರಿಯಾಗಿರುತ್ತದೆ. ಜಿಪುಣನಿಗೆ ಸುಖ ಸಿಗುವುದಿಲ್ಲ; ಏಕೆಂದರೆ ಅವನು ತನ್ನ ಸಂಪತ್ತನ್ನು ಅವನೂ ಅನುಭವಿಸುವುದಿಲ್ಲ, ಇನ್ನೊಬ್ಬರಿಗೂ ಕೊಡುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>