<p>ಸಂಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ ।</p>.<p>ಕಾವ್ಯಾಮೃತರಸಾಸ್ವಾದಃ ಸಂಗಮಃ ಸುಜನೈಃ ಸಹ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಸಂಸಾರ ಎಂಬ ವಿಷವೃಕ್ಷದಲ್ಲಿ ಅಮೃತದಂತಿರುವ ಫಲಗಳು ಎರಡೇ; ಒಂದು ಕಾವ್ಯಾಮೃತದ ರಸಾಸ್ವಾದ, ಮತ್ತೊಂದು ಸಜ್ಜನರ ಸಹವಾಸ.‘</p>.<p>ಸಂಸಾರ ದುಃಖಮಯ ಎಂದು ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಭಗವಂತ ಹೇಳಿದ್ದಾನೆ. ಬುದ್ಧ ಹೇಳದಿದ್ದರೂ ದಿನವೂ ನಮಗೆ ಇದು ಅನುಭವವೈದ್ಯವೇ ಹೌದೆನ್ನಿ!</p>.<p>ಹಾಗಾದರೆ ಈ ದುಃಖದಿಂದ ಪಾರಾಗುವ ವಿಧಾನ ಹೇಗೆ?</p>.<p>ಬುದ್ಧ ಇದಕ್ಕೆ ಎಂಟು ಆಯಾಮಗಳ ದಾರಿಯನ್ನು ಕಾಣಿಸಿದ, ದಿಟ. ಆದರೆ ಅದು ಸಾಧಕರಿಗೆ, ನಿರ್ವಾಣ – ಎಂದರೆ ಮೋಕ್ಷವನ್ನು ಬಯಸುವವರಿಗೆ ಸಲ್ಲುವಂಥದ್ದು. ನಮಗೆ, ಸಾಮಾನ್ಯರಿಗೆ ಈ ಕೂಡಲೇ ಒದಗುವಂಥ ದಾರಿ ಏನಾದರೂ ಇದೆಯೆ – ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅಂಥವರಿಗೆ ಸುಭಾಷಿತ ಉತ್ತರವನ್ನು ಕೊಡುವಂತಿದೆ.</p>.<p>ಸಂಸಾರ ಎನ್ನುವುದು ವಿಷವೃಕ್ಷಕ್ಕೆ ಸಮ. ಮರವೇ ವಿಷಮಯವಾದರೆ ಅದರಲ್ಲಿ ಬಿಡುವ ಹಣ್ಣು ಕೂಡ ವಿಷಯುಕ್ತವೇ ಆಗಿರಬೇಕಲ್ಲವೆ? ಆದರೆ ಸುಭಾಷಿತ ಸೃಷ್ಟಿಯ ವೈಚಿತ್ರ್ಯವೊಂದನ್ನು ಗುರುತಿಸಿದೆ: ಈ ಸಂಸಾರವಿಷವೃಕ್ಷದಲ್ಲಿಯೂ ಎರಡು ಹಣ್ಣುಗಳು ಮಾತ್ರ ಅಮೃತಪ್ರಾಯವಾಗಿವೆಯಂತೆ. ಅವು ಯಾವುವು? ಒಂದು: ಕಾವ್ಯ ಎಂಬ ಅಮೃತದ ರಸಾಸ್ವಾದ; ಮತ್ತೊಂದು: ಸಜ್ಜನರ ಸಹವಾಸ.</p>.<p>ಇಲ್ಲಿ ಸಂಸಾರ ಎಂದರೆ ’ಕುಟುಂಬ‘ ಎಂಬ ಅರ್ಥ ಅಲ್ಲ, ಇಡಿಯ ಸೃಷ್ಟಿ ಎಂದು ಅರ್ಥ.</p>.<p>ಕಾವ್ಯವೇ ಈ ಸೃಷ್ಟಿಯಲ್ಲಿರುವ ಅಮೃತವಂತೆ. ಇಡಿಯ ಜಗತ್ತಿನ ಸಾರಸಾರ ವಿವೇಚನೆಯನ್ನು ಮಾಡಬಲ್ಲ ಸಾಹಿತ್ಯಕೃತಿಯೇ ದಿಟವಾದ ಕಾವ್ಯ. ರಾಮಾಯಣ, ಮಹಾಭಾರತ, ರಘುವಂಶ, ಕುಮಾರವ್ಯಾಸಭಾರತ, ಷೇಕ್ಸ್ಪಿಯರ್ ಕೃತಿಗಳು, ಹೋಮರ್, ಬ್ಲೇಕ್ – ಇಂಥವರ ಕೃತಿಗಳು ಬದುಕಿನ ದಿಟವಾದ ಅರ್ಥವಂತಿಕೆಯನ್ನು ಕಾಣಿಸಬಲ್ಲದು. ಇಂಥ ಕೃತಿಗಳ ಅನುಸಂಧಾನ ಜೀವನಕ್ಕೊಂದು ಸೊಗಸನ್ನೂ ಅರ್ಥವನ್ನೂ ಕೊಡಬಲ್ಲವು; ದುಃಖಮಯವಾದ ಸಂಸಾರದಲ್ಲೂ ಸುಖ ಇದೆ ಎಂಬುದನ್ನು ಕಾಣಿಸಬಲ್ಲದು.</p>.<p>ಈಗ ಎರಡನೆಯ ಅಮೃತಫಲದ ಬಗ್ಗೆ ನೋಡೋಣ. ಸಜ್ಜನರ ಸ್ನೇಹವೇ ಈ ಎರಡನೆಯ ಅಮೃತಫಲ. ನಮ್ಮ ಜೀವನದಲ್ಲಿ ಎದುರಾಗುವ ಕಷ್ಟದ ಸಮಯದಲ್ಲಿ ನಮಗೆ ಧೈರ್ಯವನ್ನೂ ಸಹಾಯವನ್ನೂ ಒದಗಿಸುವವರು ಈ ಸಜ್ಜನರು. ಇವರು ನಾವು ಕೆಳಕ್ಕೆ ಬಿದ್ದಾಗ ಕೈ ಹಿಡಿದು ನಮ್ಮನ್ನು ಮೇಲೆತ್ತುತ್ತಾರೆಯೇ ಹೊರತು ನಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುವುದಿಲ್ಲ. ಇಂಥವರಿಂದ ದುಃಖಮಯವಾದ ಜೀವನವೂ ಸಹನೀಯ ಎಂದೆನಿಸುತ್ತದೆ.</p>.<p>ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು:</p>.<p>ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ ।</p>.<p>ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ ।।</p>.<p>’ಕಾವ್ಯ, ಶಾಸ್ತ್ರ – ಇವುಗಳನ್ನು ಓದಿ ಸಂತೋಷಪಡುವುದರಲ್ಲಿ ಬುದ್ಧಿವಂತರ ವೇಳೆ ಕಳೆಯುತ್ತದೆ; ಆದರೆ ಮೂರ್ಖರ ಸಮಯ ಜೂಜು ಮುಂತಾದ ವ್ಯಸನಗಳಲ್ಲಿ, ನಿದ್ರೆ ಅಥವಾ ಜಗಳದಲ್ಲಿಯೇ ಕಳೆದುಹೋಗುತ್ತದೆ.‘</p>.<p>ಪ್ರಸ್ತುತ ಸಂದರ್ಭಕ್ಕೂ ಸಲ್ಲುವ ಸುಭಾಷಿತ ಇದು.</p>.<p>ಇದನ್ನು ಪಾಡ್ಕಾಸ್ಟ್ನಲ್ಲಿ ಕೇಳಲು <a href="https://anchor.fm/prajavani/episodes/ep-egt39h/a-a2nplci" target="_blank"><strong>ಇಲ್ಲಿ ಕ್ಲಿಕ್ ಮಾಡಿ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ ।</p>.<p>ಕಾವ್ಯಾಮೃತರಸಾಸ್ವಾದಃ ಸಂಗಮಃ ಸುಜನೈಃ ಸಹ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಸಂಸಾರ ಎಂಬ ವಿಷವೃಕ್ಷದಲ್ಲಿ ಅಮೃತದಂತಿರುವ ಫಲಗಳು ಎರಡೇ; ಒಂದು ಕಾವ್ಯಾಮೃತದ ರಸಾಸ್ವಾದ, ಮತ್ತೊಂದು ಸಜ್ಜನರ ಸಹವಾಸ.‘</p>.<p>ಸಂಸಾರ ದುಃಖಮಯ ಎಂದು ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಭಗವಂತ ಹೇಳಿದ್ದಾನೆ. ಬುದ್ಧ ಹೇಳದಿದ್ದರೂ ದಿನವೂ ನಮಗೆ ಇದು ಅನುಭವವೈದ್ಯವೇ ಹೌದೆನ್ನಿ!</p>.<p>ಹಾಗಾದರೆ ಈ ದುಃಖದಿಂದ ಪಾರಾಗುವ ವಿಧಾನ ಹೇಗೆ?</p>.<p>ಬುದ್ಧ ಇದಕ್ಕೆ ಎಂಟು ಆಯಾಮಗಳ ದಾರಿಯನ್ನು ಕಾಣಿಸಿದ, ದಿಟ. ಆದರೆ ಅದು ಸಾಧಕರಿಗೆ, ನಿರ್ವಾಣ – ಎಂದರೆ ಮೋಕ್ಷವನ್ನು ಬಯಸುವವರಿಗೆ ಸಲ್ಲುವಂಥದ್ದು. ನಮಗೆ, ಸಾಮಾನ್ಯರಿಗೆ ಈ ಕೂಡಲೇ ಒದಗುವಂಥ ದಾರಿ ಏನಾದರೂ ಇದೆಯೆ – ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅಂಥವರಿಗೆ ಸುಭಾಷಿತ ಉತ್ತರವನ್ನು ಕೊಡುವಂತಿದೆ.</p>.<p>ಸಂಸಾರ ಎನ್ನುವುದು ವಿಷವೃಕ್ಷಕ್ಕೆ ಸಮ. ಮರವೇ ವಿಷಮಯವಾದರೆ ಅದರಲ್ಲಿ ಬಿಡುವ ಹಣ್ಣು ಕೂಡ ವಿಷಯುಕ್ತವೇ ಆಗಿರಬೇಕಲ್ಲವೆ? ಆದರೆ ಸುಭಾಷಿತ ಸೃಷ್ಟಿಯ ವೈಚಿತ್ರ್ಯವೊಂದನ್ನು ಗುರುತಿಸಿದೆ: ಈ ಸಂಸಾರವಿಷವೃಕ್ಷದಲ್ಲಿಯೂ ಎರಡು ಹಣ್ಣುಗಳು ಮಾತ್ರ ಅಮೃತಪ್ರಾಯವಾಗಿವೆಯಂತೆ. ಅವು ಯಾವುವು? ಒಂದು: ಕಾವ್ಯ ಎಂಬ ಅಮೃತದ ರಸಾಸ್ವಾದ; ಮತ್ತೊಂದು: ಸಜ್ಜನರ ಸಹವಾಸ.</p>.<p>ಇಲ್ಲಿ ಸಂಸಾರ ಎಂದರೆ ’ಕುಟುಂಬ‘ ಎಂಬ ಅರ್ಥ ಅಲ್ಲ, ಇಡಿಯ ಸೃಷ್ಟಿ ಎಂದು ಅರ್ಥ.</p>.<p>ಕಾವ್ಯವೇ ಈ ಸೃಷ್ಟಿಯಲ್ಲಿರುವ ಅಮೃತವಂತೆ. ಇಡಿಯ ಜಗತ್ತಿನ ಸಾರಸಾರ ವಿವೇಚನೆಯನ್ನು ಮಾಡಬಲ್ಲ ಸಾಹಿತ್ಯಕೃತಿಯೇ ದಿಟವಾದ ಕಾವ್ಯ. ರಾಮಾಯಣ, ಮಹಾಭಾರತ, ರಘುವಂಶ, ಕುಮಾರವ್ಯಾಸಭಾರತ, ಷೇಕ್ಸ್ಪಿಯರ್ ಕೃತಿಗಳು, ಹೋಮರ್, ಬ್ಲೇಕ್ – ಇಂಥವರ ಕೃತಿಗಳು ಬದುಕಿನ ದಿಟವಾದ ಅರ್ಥವಂತಿಕೆಯನ್ನು ಕಾಣಿಸಬಲ್ಲದು. ಇಂಥ ಕೃತಿಗಳ ಅನುಸಂಧಾನ ಜೀವನಕ್ಕೊಂದು ಸೊಗಸನ್ನೂ ಅರ್ಥವನ್ನೂ ಕೊಡಬಲ್ಲವು; ದುಃಖಮಯವಾದ ಸಂಸಾರದಲ್ಲೂ ಸುಖ ಇದೆ ಎಂಬುದನ್ನು ಕಾಣಿಸಬಲ್ಲದು.</p>.<p>ಈಗ ಎರಡನೆಯ ಅಮೃತಫಲದ ಬಗ್ಗೆ ನೋಡೋಣ. ಸಜ್ಜನರ ಸ್ನೇಹವೇ ಈ ಎರಡನೆಯ ಅಮೃತಫಲ. ನಮ್ಮ ಜೀವನದಲ್ಲಿ ಎದುರಾಗುವ ಕಷ್ಟದ ಸಮಯದಲ್ಲಿ ನಮಗೆ ಧೈರ್ಯವನ್ನೂ ಸಹಾಯವನ್ನೂ ಒದಗಿಸುವವರು ಈ ಸಜ್ಜನರು. ಇವರು ನಾವು ಕೆಳಕ್ಕೆ ಬಿದ್ದಾಗ ಕೈ ಹಿಡಿದು ನಮ್ಮನ್ನು ಮೇಲೆತ್ತುತ್ತಾರೆಯೇ ಹೊರತು ನಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುವುದಿಲ್ಲ. ಇಂಥವರಿಂದ ದುಃಖಮಯವಾದ ಜೀವನವೂ ಸಹನೀಯ ಎಂದೆನಿಸುತ್ತದೆ.</p>.<p>ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು:</p>.<p>ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ ।</p>.<p>ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ ।।</p>.<p>’ಕಾವ್ಯ, ಶಾಸ್ತ್ರ – ಇವುಗಳನ್ನು ಓದಿ ಸಂತೋಷಪಡುವುದರಲ್ಲಿ ಬುದ್ಧಿವಂತರ ವೇಳೆ ಕಳೆಯುತ್ತದೆ; ಆದರೆ ಮೂರ್ಖರ ಸಮಯ ಜೂಜು ಮುಂತಾದ ವ್ಯಸನಗಳಲ್ಲಿ, ನಿದ್ರೆ ಅಥವಾ ಜಗಳದಲ್ಲಿಯೇ ಕಳೆದುಹೋಗುತ್ತದೆ.‘</p>.<p>ಪ್ರಸ್ತುತ ಸಂದರ್ಭಕ್ಕೂ ಸಲ್ಲುವ ಸುಭಾಷಿತ ಇದು.</p>.<p>ಇದನ್ನು ಪಾಡ್ಕಾಸ್ಟ್ನಲ್ಲಿ ಕೇಳಲು <a href="https://anchor.fm/prajavani/episodes/ep-egt39h/a-a2nplci" target="_blank"><strong>ಇಲ್ಲಿ ಕ್ಲಿಕ್ ಮಾಡಿ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>