<p>ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ</p>.<p>ವಿಜ್ಞಾನಶೌರ್ಯವಿಭವಾರ್ಯಗುಣೈಃ ಸಮೇತಮ್ ।</p>.<p>ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ</p>.<p>ಕಾಕೋಪಿ ಜೀವತಿ ಚಿರಾಯ ಬಲಿಂ ಚ ಭುಂಕ್ತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಜ್ಞಾನ, ಪರಾಕ್ರಮ ಮತ್ತು ವೈಭವ – ಇಂಥ ಸದ್ಗುಣಗಳನ್ನು ಸಂಪಾದಿಸಿಕೊಂಡು ಕೀರ್ತವಂತರಾಗಿ ಒಂದೇ ಒಂದು ಕ್ಷಣ ಬದುಕಿದರೂ ಅದು ನಿಜವಾದ ಜೀವನ ಎಂದು ತಿಳಿದವರು ಹೇಳುತ್ತಾರೆ. ಆದರೆ ಕಾಗೆಯೂ ಬಹಳ ಕಾಲ ಬದುಕಿರುತ್ತದೆ – ಇತರರು ಇಟ್ಟ ಅನ್ನವನ್ನಷ್ಟೆ ಅದು ತಿನ್ನುತ್ತದೆ.’</p>.<p>ಈ ಸುಭಾಷಿತ ಇರುವುದು ಕಾಗೆಯ ಬಗ್ಗೆ ಅಲ್ಲ; ಇನ್ನೊಬ್ಬರ ಆಲಂಬನೆಯಲ್ಲಿ ತಿಂದು ಬದುಕುವವರ ಬಗ್ಗೆ.</p>.<p>ಜೀವನದಲ್ಲಿ ಸಾಧಿಸಬೇಕು. ಏನನ್ನು ಸಾಧಿಸಬೇಕು? ಕೀರ್ತಿಯನ್ನು ತಂದುಕೊಡುವಂಥದ್ದರಲ್ಲಿ ಸಾಧನೆ ಮಾಡಬೇಕು? ಹೇಗೆ ಸಾಧನೆಯನ್ನು ಮಾಡಬೇಕು? ನಮ್ಮ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಬೇಕು; ಇತರರ ಹೆಗಲಿನ ಮೇಲೆ ನಿಂತು ನಮ್ಮ ಬಾವುಟವನ್ನು ಹಾರಿಸಬಾರದು. ಇದು ಸುಭಾಷಿತದ ಸಂದೇಶ.</p>.<p>ಸುಭಾಷಿತವು ಹಲವಾರು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಚಿಸಿದೆ; ಅವುಗಳಲ್ಲಿ ಮೂರನ್ನು ಸ್ಪಷ್ಟವಾಗಿಯೇ ಹೆಸರಿಸಿದೆ; ಜ್ಞಾನ, ಪರಾಕ್ರಮ ಮತ್ತು ವೈಭವ – ಇವು ಆ ಮೂರು ಗುಣಗಳು.</p>.<p>ಜ್ಞಾನ ಎಂದರೆ ತಿಳಿವಳಿಕೆ; ಇದು ನಮ್ಮ ಬುದ್ಧಿಶಕ್ತಿಗೆ ದ್ಯೋತಕ. ಪರಾಕ್ರಮ ಎಂದರೆ ಶರೀರದ ಸಾಮರ್ಥ್ಯ; ಇದು ನಮ್ಮ ದೈಹಿಕಶಕ್ತಿಗೆ ದ್ಯೋತಕ. ವೈಭವ ಎಂದರೆ ಸಂತೋಷ, ಸಂಭ್ರಮ; ಇದು ನಮ್ಮ ಮನಸ್ಸಿಗೆ, ಪರಿಸರಕ್ಕೆ ದ್ಯೋತಕ. ನಮ್ಮ ಜೀವನವು ಸಮಗ್ರವಾಗಿ ಅರಳಬೇಕು ಎಂಬುದು ಇಲ್ಲಿರುವ ಸಂದೇಶ. ಜೀವನವನ್ನು ಹೀಗೆ ಸಮಗ್ರವಾಗಿ ಕಟ್ಟಿಕೊಂಡು ಒಂದು ಕ್ಷಣ ಬದುಕಿದರೂ ಅದು ಸಾರ್ಥಕವಾದ ಜೀವನ ಎನ್ನುವುದನ್ನು ಸುಭಾಷಿತ ಸ್ಪಷ್ಟವಾಗಿ ಹೇಳಿದೆ.</p>.<p>ನಮ್ಮ ಜೀವನಕ್ಕೆ ಸ್ಪಷ್ಟವಾದ ಗುರಿಯಿರಬೇಕು; ಆ ಗುರಿಯನ್ನು ತಲಪುವಲ್ಲಿ ಆದರ್ಶವೂ ಇರಬೇಕು. ಗುರಿ ಮತ್ತು ಮಾರ್ಗ – ಎರಡೂ ಮುಖ್ಯ. ನಮ್ಮ ಬೆವರಿನ ಸುವಾಸನೆಯಲ್ಲಿ ನಮ್ಮ ಜೀವನದ ಸೌರಭವನ್ನು ನಾಲ್ಕು ದಿಕ್ಕುಗಳಲ್ಲಿ ಪಸರಿಸಬೇಕು. ಹೀಗಲ್ಲದೆ ಇನ್ನೊಬ್ಬರ ದುಡಿಮೆಯಲ್ಲಿ ಬದುಕುವುದೋ ಅಥವಾ ಇನ್ನೊಬ್ಬರ ಹೆಸರಿನ ಮರೆಯಲ್ಲಿ ನಮ್ಮ ಕೀರ್ತಿಪತಾಕೆಯನ್ನು ಹಾರಿಸುವುದೋ ಆಗಬಾರದು; ಹೀಗೆ ಬೇರೊಬ್ಬರ ಆಶ್ರಯದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಸಲ್ಲದು ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ</p>.<p>ವಿಜ್ಞಾನಶೌರ್ಯವಿಭವಾರ್ಯಗುಣೈಃ ಸಮೇತಮ್ ।</p>.<p>ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ</p>.<p>ಕಾಕೋಪಿ ಜೀವತಿ ಚಿರಾಯ ಬಲಿಂ ಚ ಭುಂಕ್ತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಜ್ಞಾನ, ಪರಾಕ್ರಮ ಮತ್ತು ವೈಭವ – ಇಂಥ ಸದ್ಗುಣಗಳನ್ನು ಸಂಪಾದಿಸಿಕೊಂಡು ಕೀರ್ತವಂತರಾಗಿ ಒಂದೇ ಒಂದು ಕ್ಷಣ ಬದುಕಿದರೂ ಅದು ನಿಜವಾದ ಜೀವನ ಎಂದು ತಿಳಿದವರು ಹೇಳುತ್ತಾರೆ. ಆದರೆ ಕಾಗೆಯೂ ಬಹಳ ಕಾಲ ಬದುಕಿರುತ್ತದೆ – ಇತರರು ಇಟ್ಟ ಅನ್ನವನ್ನಷ್ಟೆ ಅದು ತಿನ್ನುತ್ತದೆ.’</p>.<p>ಈ ಸುಭಾಷಿತ ಇರುವುದು ಕಾಗೆಯ ಬಗ್ಗೆ ಅಲ್ಲ; ಇನ್ನೊಬ್ಬರ ಆಲಂಬನೆಯಲ್ಲಿ ತಿಂದು ಬದುಕುವವರ ಬಗ್ಗೆ.</p>.<p>ಜೀವನದಲ್ಲಿ ಸಾಧಿಸಬೇಕು. ಏನನ್ನು ಸಾಧಿಸಬೇಕು? ಕೀರ್ತಿಯನ್ನು ತಂದುಕೊಡುವಂಥದ್ದರಲ್ಲಿ ಸಾಧನೆ ಮಾಡಬೇಕು? ಹೇಗೆ ಸಾಧನೆಯನ್ನು ಮಾಡಬೇಕು? ನಮ್ಮ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಬೇಕು; ಇತರರ ಹೆಗಲಿನ ಮೇಲೆ ನಿಂತು ನಮ್ಮ ಬಾವುಟವನ್ನು ಹಾರಿಸಬಾರದು. ಇದು ಸುಭಾಷಿತದ ಸಂದೇಶ.</p>.<p>ಸುಭಾಷಿತವು ಹಲವಾರು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಚಿಸಿದೆ; ಅವುಗಳಲ್ಲಿ ಮೂರನ್ನು ಸ್ಪಷ್ಟವಾಗಿಯೇ ಹೆಸರಿಸಿದೆ; ಜ್ಞಾನ, ಪರಾಕ್ರಮ ಮತ್ತು ವೈಭವ – ಇವು ಆ ಮೂರು ಗುಣಗಳು.</p>.<p>ಜ್ಞಾನ ಎಂದರೆ ತಿಳಿವಳಿಕೆ; ಇದು ನಮ್ಮ ಬುದ್ಧಿಶಕ್ತಿಗೆ ದ್ಯೋತಕ. ಪರಾಕ್ರಮ ಎಂದರೆ ಶರೀರದ ಸಾಮರ್ಥ್ಯ; ಇದು ನಮ್ಮ ದೈಹಿಕಶಕ್ತಿಗೆ ದ್ಯೋತಕ. ವೈಭವ ಎಂದರೆ ಸಂತೋಷ, ಸಂಭ್ರಮ; ಇದು ನಮ್ಮ ಮನಸ್ಸಿಗೆ, ಪರಿಸರಕ್ಕೆ ದ್ಯೋತಕ. ನಮ್ಮ ಜೀವನವು ಸಮಗ್ರವಾಗಿ ಅರಳಬೇಕು ಎಂಬುದು ಇಲ್ಲಿರುವ ಸಂದೇಶ. ಜೀವನವನ್ನು ಹೀಗೆ ಸಮಗ್ರವಾಗಿ ಕಟ್ಟಿಕೊಂಡು ಒಂದು ಕ್ಷಣ ಬದುಕಿದರೂ ಅದು ಸಾರ್ಥಕವಾದ ಜೀವನ ಎನ್ನುವುದನ್ನು ಸುಭಾಷಿತ ಸ್ಪಷ್ಟವಾಗಿ ಹೇಳಿದೆ.</p>.<p>ನಮ್ಮ ಜೀವನಕ್ಕೆ ಸ್ಪಷ್ಟವಾದ ಗುರಿಯಿರಬೇಕು; ಆ ಗುರಿಯನ್ನು ತಲಪುವಲ್ಲಿ ಆದರ್ಶವೂ ಇರಬೇಕು. ಗುರಿ ಮತ್ತು ಮಾರ್ಗ – ಎರಡೂ ಮುಖ್ಯ. ನಮ್ಮ ಬೆವರಿನ ಸುವಾಸನೆಯಲ್ಲಿ ನಮ್ಮ ಜೀವನದ ಸೌರಭವನ್ನು ನಾಲ್ಕು ದಿಕ್ಕುಗಳಲ್ಲಿ ಪಸರಿಸಬೇಕು. ಹೀಗಲ್ಲದೆ ಇನ್ನೊಬ್ಬರ ದುಡಿಮೆಯಲ್ಲಿ ಬದುಕುವುದೋ ಅಥವಾ ಇನ್ನೊಬ್ಬರ ಹೆಸರಿನ ಮರೆಯಲ್ಲಿ ನಮ್ಮ ಕೀರ್ತಿಪತಾಕೆಯನ್ನು ಹಾರಿಸುವುದೋ ಆಗಬಾರದು; ಹೀಗೆ ಬೇರೊಬ್ಬರ ಆಶ್ರಯದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಸಲ್ಲದು ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>