<p>ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ</p>.<p>ಕವಿತ್ವಾದಿಗದ್ಯಂ ಸುಪದ್ಯಂ ಕರೋತಿ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆರು ಅಂಗಗಳೊಡನೆ ವೇದವನ್ನೂ ಶಾಸ್ತ್ರಗಳನ್ನೂ ಆಳವಾಗಿ ಅಧ್ಯಯನ ಮಾಡಬಹುದು. ಸೊಗಸಾದ ಗದ್ಯದಿಂದಲೂ ಪದ್ಯದಿಂದಲೂ ಕಾವ್ಯರಚನೆಯನ್ನೂ ಮಾಡಬಹುದು. ಆದರೆ ಯಶೋದನೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳೆಲ್ಲದುದರಿಂದ ಏನು ತಾನೆ ಪ್ರಯೋಜನ?’</p>.<p>ನಿಜವಾದ ಸಂಪತ್ತು ಎಂದರೆ ಅದು ಶ್ರೀಕೃಷ್ಣಲ್ಲಿಯ ಭಕ್ತಿಯೇ ಹೌದು ಎಂದು ಇಲ್ಲಿಯ ಶ್ಲೋಕಗಳು ಹೇಳುತ್ತಿವೆ. ಆದುದರಿಂದಲೇ ನಾವು ಸಂಪತ್ತು ಎಂದು ಸಾಮಾನ್ಯವಾಗಿ ಪರಿಗಣಿಸುವ ಎಲ್ಲವನ್ನೂ ಈ ಪದ್ಯಗಳು ನಿರಾಕರಿಸುತ್ತಿವೆ.</p>.<p>ನಾವು ವಿದ್ಯೆಯನ್ನು ಸಂಪತ್ತು ಎಂದುಕೊಳ್ಳಬಹುದು; ವೇದಾಧ್ಯಯನ, ಶಾಸ್ತ್ರಗಳು, ಕಾವ್ಯಶಕ್ತಿ – ಇಂಥವನ್ನು ನಾವು ದೊಡ್ಡ ಸಾಧನೆ ಭಾವಿಸಿಕೊಳ್ಳುತ್ತೇವೆ; ಇಂಥ ವಿದ್ಯೆಯೇ ದೊಡ್ಡ ಆಸ್ತಿ ಎಂದೂ ಅಂದುಕೊಳ್ಳುತ್ತೇವೆ. ಆದರೆ ಶ್ರೀಕೃಷ್ಣನಲ್ಲಿ ಮನಸ್ಸನ್ನು ಏಕಾಗ್ರಗೊಳಿಸದ ವಿದ್ಯೆ ಅದು ವಿದ್ಯೆಯೇ ಅಲ್ಲ ಎಂಬುದು ಇಲ್ಲಿಯ ನಿಲವು.</p>.<p>ಹೀಗೆಯೇ ನಮ್ಮ ಶರೀರಸೌಂದರ್ಯ, ಶರೀರಸುಖ, ಆಸ್ತಿ–ಅಂತಸ್ತುಗಳು – ಹೀಗೆ ಎಲ್ಲ ಬಗೆಯ ಲೌಕಿಕ ಸುಖ–ಸಂತೋಷ–ಸಾಧನೆಗಳನ್ನೂ ಇಲ್ಲಿ ನಿರಾಕರಿಸಿ, ಕೇವಲ ಶ್ರೀಕೃಷ್ಣನ ಭಕ್ತಿಯೊಂದನ್ನೇ ಎತ್ತಿಹಿಡಿಯಲಾಗಿದೆ.</p>.<p>ನ ಭೋಗೇ ನ ಯೋಗೇ ನ ವಾ ವಾಜಿರಾಜೌ</p>.<p>ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>‘ಭೋಗದಲ್ಲಾಗಲೀ ಯೋಗದಲ್ಲಾಗಲೀ ಉತ್ತಮವಾದ ಅಶ್ವಗಳಲ್ಲಾಗಲೀ ಪ್ರಿಯತಮೆಯ ಸಾಮೀಪ್ಯದಲ್ಲಿಯಾಗಲೀ ಸಂಪತ್ತಿನಲ್ಲಾಗಲೀ ಮನಸ್ಸು ನೆಡದೆ ಇರಬಹುದು. ಆದರೆ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿಯೂ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ಪ್ರಯೋಜನ?’</p>.<p>ಶರೀರಂ ಸುರೂಪಂ ತತೋ ವೈ ಕಲತ್ರಂ</p>.<p>ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>‘ಸುಂದರವಾದ ಶರೀರ, ಸುಂದರಿಯಾದ ಹೆಂಡತಿ, ಅಪರಿಮಿತವಾದ ಕೀರ್ತಿ, ಮೇರುಪರ್ವತಕ್ಕೆ ಸಮನಾದ ಸಂಪತ್ತು – ಇವೆಲ್ಲವೂ ಇದ್ದರೂ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ತಾನೆ ಪ್ರಯೋಜನ?‘</p>.<p>ಭಕ್ತಿಯೇ ನಿಜವಾದ ಸಾಮ್ರಾಜ್ಯ ಎಂಬುದನ್ನು ಸ್ಥಾಪಿಸುತ್ತಿವೆ, ಈ ಪದ್ಯಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ</p>.<p>ಕವಿತ್ವಾದಿಗದ್ಯಂ ಸುಪದ್ಯಂ ಕರೋತಿ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆರು ಅಂಗಗಳೊಡನೆ ವೇದವನ್ನೂ ಶಾಸ್ತ್ರಗಳನ್ನೂ ಆಳವಾಗಿ ಅಧ್ಯಯನ ಮಾಡಬಹುದು. ಸೊಗಸಾದ ಗದ್ಯದಿಂದಲೂ ಪದ್ಯದಿಂದಲೂ ಕಾವ್ಯರಚನೆಯನ್ನೂ ಮಾಡಬಹುದು. ಆದರೆ ಯಶೋದನೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳೆಲ್ಲದುದರಿಂದ ಏನು ತಾನೆ ಪ್ರಯೋಜನ?’</p>.<p>ನಿಜವಾದ ಸಂಪತ್ತು ಎಂದರೆ ಅದು ಶ್ರೀಕೃಷ್ಣಲ್ಲಿಯ ಭಕ್ತಿಯೇ ಹೌದು ಎಂದು ಇಲ್ಲಿಯ ಶ್ಲೋಕಗಳು ಹೇಳುತ್ತಿವೆ. ಆದುದರಿಂದಲೇ ನಾವು ಸಂಪತ್ತು ಎಂದು ಸಾಮಾನ್ಯವಾಗಿ ಪರಿಗಣಿಸುವ ಎಲ್ಲವನ್ನೂ ಈ ಪದ್ಯಗಳು ನಿರಾಕರಿಸುತ್ತಿವೆ.</p>.<p>ನಾವು ವಿದ್ಯೆಯನ್ನು ಸಂಪತ್ತು ಎಂದುಕೊಳ್ಳಬಹುದು; ವೇದಾಧ್ಯಯನ, ಶಾಸ್ತ್ರಗಳು, ಕಾವ್ಯಶಕ್ತಿ – ಇಂಥವನ್ನು ನಾವು ದೊಡ್ಡ ಸಾಧನೆ ಭಾವಿಸಿಕೊಳ್ಳುತ್ತೇವೆ; ಇಂಥ ವಿದ್ಯೆಯೇ ದೊಡ್ಡ ಆಸ್ತಿ ಎಂದೂ ಅಂದುಕೊಳ್ಳುತ್ತೇವೆ. ಆದರೆ ಶ್ರೀಕೃಷ್ಣನಲ್ಲಿ ಮನಸ್ಸನ್ನು ಏಕಾಗ್ರಗೊಳಿಸದ ವಿದ್ಯೆ ಅದು ವಿದ್ಯೆಯೇ ಅಲ್ಲ ಎಂಬುದು ಇಲ್ಲಿಯ ನಿಲವು.</p>.<p>ಹೀಗೆಯೇ ನಮ್ಮ ಶರೀರಸೌಂದರ್ಯ, ಶರೀರಸುಖ, ಆಸ್ತಿ–ಅಂತಸ್ತುಗಳು – ಹೀಗೆ ಎಲ್ಲ ಬಗೆಯ ಲೌಕಿಕ ಸುಖ–ಸಂತೋಷ–ಸಾಧನೆಗಳನ್ನೂ ಇಲ್ಲಿ ನಿರಾಕರಿಸಿ, ಕೇವಲ ಶ್ರೀಕೃಷ್ಣನ ಭಕ್ತಿಯೊಂದನ್ನೇ ಎತ್ತಿಹಿಡಿಯಲಾಗಿದೆ.</p>.<p>ನ ಭೋಗೇ ನ ಯೋಗೇ ನ ವಾ ವಾಜಿರಾಜೌ</p>.<p>ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>‘ಭೋಗದಲ್ಲಾಗಲೀ ಯೋಗದಲ್ಲಾಗಲೀ ಉತ್ತಮವಾದ ಅಶ್ವಗಳಲ್ಲಾಗಲೀ ಪ್ರಿಯತಮೆಯ ಸಾಮೀಪ್ಯದಲ್ಲಿಯಾಗಲೀ ಸಂಪತ್ತಿನಲ್ಲಾಗಲೀ ಮನಸ್ಸು ನೆಡದೆ ಇರಬಹುದು. ಆದರೆ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿಯೂ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ಪ್ರಯೋಜನ?’</p>.<p>ಶರೀರಂ ಸುರೂಪಂ ತತೋ ವೈ ಕಲತ್ರಂ</p>.<p>ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।</p>.<p>ಯಶೋದಾಕಿಶೋರೇ ಮನೋ ವೈ ನ ಲಗ್ನಂ</p>.<p>ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ।।</p>.<p>‘ಸುಂದರವಾದ ಶರೀರ, ಸುಂದರಿಯಾದ ಹೆಂಡತಿ, ಅಪರಿಮಿತವಾದ ಕೀರ್ತಿ, ಮೇರುಪರ್ವತಕ್ಕೆ ಸಮನಾದ ಸಂಪತ್ತು – ಇವೆಲ್ಲವೂ ಇದ್ದರೂ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ತಾನೆ ಪ್ರಯೋಜನ?‘</p>.<p>ಭಕ್ತಿಯೇ ನಿಜವಾದ ಸಾಮ್ರಾಜ್ಯ ಎಂಬುದನ್ನು ಸ್ಥಾಪಿಸುತ್ತಿವೆ, ಈ ಪದ್ಯಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>