<p><strong>ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ</strong></p>.<p><strong>ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ ।</strong></p>.<p><strong>ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ</strong></p>.<p><strong>ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಚೆನ್ನಾಗಿ ಕಾದ ಕಬ್ಬಿಣದಲ್ಲಿರುವ ನೀರಿನ ಹೆಸರೂ ತಿಳಿಯದಂತೆ ನಾಶವಾಗುತ್ತದೆ; ಅದೇ ನೀರು ತಾವರೆಯ ಎಲೆಯ ಮೇಲೆ ಇದ್ದಾಗ ಮುತ್ತಿನಂತೆ ಹೊಳೆಯುತ್ತದೆ; ಸ್ವಾತೀಮಳೆಯಲ್ಲಿ ಸಮುದ್ರದಲ್ಲಿರುವ ಕಪ್ಪೆಚಿಪ್ಪಿನೊಳಗೆ ಬಿದ್ದದ್ದೇ ಆದರೆ ಅದು ಮುತ್ತೇ ಆಗುತ್ತದೆ. ಆದುದರಿಂದ ಪ್ರಾಯಶಃ ಅಧಮ, ಮಧ್ಯಮ ಮತ್ತು ಉತ್ತಮಗುಣವು ಸಹವಾಸದಿಂದಲೇ ಉಂಟಾಗುತ್ತದೆ.’</p>.<p>ನಮ್ಮ ಸ್ಥಿತಿ–ಗತಿಗಳು ನಮ್ಮ ಸಹವಾಸವನ್ನು ಅವಲಂಬಿಸಿರುತ್ತವೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ಸುಭಾಷಿತ ಇಲ್ಲಿ ನೀರಿನ ಉದಾಹರಣೆಯನ್ನು ತೆಗೆದುಕೊಂಡಿದೆ. ನೀರು ಎಂದಿಗೂ ನೀರಾಗಿಯೇ ಉಳಿಯುವುದಿಲ್ಲ. ಅದು ಯಾವ ವಸ್ತುವಿನೊಂದಿಗೆ ಸಹವಾಸವನ್ನು ಮಾಡುತ್ತದೆ ಎಂಬುದರ ಮೇಲೆ ಅದರ ಸ್ಥಿತಿ–ಗತಿಗಳು ನಿರ್ಧಾರವಾಗುತ್ತವೆ.</p>.<p>ಕಬ್ಬಿಣದ ಸಲಾಕೆಯೊಂದು ಚೆನ್ನಾಗಿ ಕಾದಿದೆ. ಈಗ ಅದರ ಮೇಲೆ ನೀರಿನ ಹನಿ ಬಿದ್ದರೆ ಏನಾಗುತ್ತದೆ? ಕ್ಷಣಾರ್ಧದಲ್ಲಿ ಅದು ಆವಿಯಾಗುತ್ತದೆ; ಎಂದರೆ ನೀರು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ಅದೇ ನೀರಿನ ಹನಿ ತಾವರೆಯ ಎಲೆಯ ಮೇಲೆ ಬಿದ್ದಾಗ ಏನಾಗುತ್ತದೆ? ಮುತ್ತಿನಂತೆ ಅದು ಕಂಗೊಳಿಸುತ್ತದೆ, ಅಲ್ಲವೆ? ಅದೇ ನೀರು ಸ್ವಾತೀಮಳೆಯಲ್ಲಿರುವ ಕಪ್ಪೆಯ ಚಿಪ್ಪಿನಲ್ಲಿ ಬಿದ್ದರೆ ಅದು ಸಾಕ್ಷಾತ್ ಮುತ್ತೇ ಆಗುತ್ತದೆ.</p>.<p>ನೀರಿನ ಹನಿ ಒಂದೇ. ಆದರೆ ಕಬ್ಬಿಣ, ತಾವರೆಯ ಎಲೆ, ಕಪ್ಪೆಯ ಚಿಪ್ಪು ಅದರ ಸ್ವಭಾವವನ್ನೇ ಬದಲಾಯಿಸುತ್ತದೆ. ಕಬ್ಬಿಣದಂತೆ ತಾವರೆಯ ಎಲೆ ಅದನ್ನು ಬದಲಾಯಿಸದು; ತಾವರೆಯ ಎಲೆಯಂತೆ ಕಪ್ಪೆಯ ಚಿಪ್ಪು ಮಾಡದು. ಒಂದೊಂದು ವಸ್ತುವೂ ತನ್ನ ಸ್ವಭಾವಕ್ಕೆ ಅನುಗುಣವಾಗಿ ನೀರನ್ನೂ ಬದಲಾಯಿಸುತ್ತಿರುತ್ತದೆ.</p>.<p>ನಾವು ಕೂಡ ಹೀಗೆಯೇ. ನಾವು ಯಾರ ಸಂಪರ್ಕದಲ್ಲಿರುತ್ತೇವೆಯೋ ಅವರಂತೆಯೇ ನಾವೂ ಆಗುತ್ತೇವೆ; ಅವರ ಸ್ವಭಾವ ನಮ್ಮನ್ನು ಬದಲಾಯಿಸುತ್ತದೆ. ಗಂಧದ ಜೊತೆ ನಾವು ಗುದ್ದಾಟ ನಡೆಸಿದರೆ ಗಂಧದ ಪರಿಮಳ ನಮ್ಮ ಮೈಗೂ ಅಂಟುತ್ತದೆ; ಸಗಣಿಯವನೊಂದಿಗೆ ಕಾದಾಟ ನಡೆಸಿದರೆ ಸಗಣಿಯ ವಾಸನೆಯೇ ನಮ್ಮ ಮೈಯನ್ನು ಆವರಿಸುತ್ತದೆ. ಒಳ್ಳೆಯವರ ಸಹವಾಸದಿಂದ ನಾವೂ ಒಳ್ಳೆಯವರಾಗುತ್ತೇವೆ; ಕೆಟ್ಟವರೊಂದಿಗಿನ ಒಡನಾಟ ನಮ್ಮಲ್ಲಿ ಕೆಟ್ಟಬುದ್ಧಿಯನ್ನೇ ಹುಟ್ಟಿಸುತ್ತದೆ.</p>.<p>ಹೀಗಾಗಿ ನಾವು ನಮ್ಮ ಜೀವನದಲ್ಲಿ ಯಾರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ, ಸಂಗಾತಿಗಳನ್ನಾಗಿಸಿಕೊಳ್ಳುತ್ತೇವೆ, ಆದರ್ಶವನ್ನಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಸ್ವಭಾವವನ್ನೂ ಜೀವನದ ಸಾರ್ಥಕತೆಯನ್ನೂ ನಿರ್ಧರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ</strong></p>.<p><strong>ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ ।</strong></p>.<p><strong>ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ</strong></p>.<p><strong>ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಚೆನ್ನಾಗಿ ಕಾದ ಕಬ್ಬಿಣದಲ್ಲಿರುವ ನೀರಿನ ಹೆಸರೂ ತಿಳಿಯದಂತೆ ನಾಶವಾಗುತ್ತದೆ; ಅದೇ ನೀರು ತಾವರೆಯ ಎಲೆಯ ಮೇಲೆ ಇದ್ದಾಗ ಮುತ್ತಿನಂತೆ ಹೊಳೆಯುತ್ತದೆ; ಸ್ವಾತೀಮಳೆಯಲ್ಲಿ ಸಮುದ್ರದಲ್ಲಿರುವ ಕಪ್ಪೆಚಿಪ್ಪಿನೊಳಗೆ ಬಿದ್ದದ್ದೇ ಆದರೆ ಅದು ಮುತ್ತೇ ಆಗುತ್ತದೆ. ಆದುದರಿಂದ ಪ್ರಾಯಶಃ ಅಧಮ, ಮಧ್ಯಮ ಮತ್ತು ಉತ್ತಮಗುಣವು ಸಹವಾಸದಿಂದಲೇ ಉಂಟಾಗುತ್ತದೆ.’</p>.<p>ನಮ್ಮ ಸ್ಥಿತಿ–ಗತಿಗಳು ನಮ್ಮ ಸಹವಾಸವನ್ನು ಅವಲಂಬಿಸಿರುತ್ತವೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ಸುಭಾಷಿತ ಇಲ್ಲಿ ನೀರಿನ ಉದಾಹರಣೆಯನ್ನು ತೆಗೆದುಕೊಂಡಿದೆ. ನೀರು ಎಂದಿಗೂ ನೀರಾಗಿಯೇ ಉಳಿಯುವುದಿಲ್ಲ. ಅದು ಯಾವ ವಸ್ತುವಿನೊಂದಿಗೆ ಸಹವಾಸವನ್ನು ಮಾಡುತ್ತದೆ ಎಂಬುದರ ಮೇಲೆ ಅದರ ಸ್ಥಿತಿ–ಗತಿಗಳು ನಿರ್ಧಾರವಾಗುತ್ತವೆ.</p>.<p>ಕಬ್ಬಿಣದ ಸಲಾಕೆಯೊಂದು ಚೆನ್ನಾಗಿ ಕಾದಿದೆ. ಈಗ ಅದರ ಮೇಲೆ ನೀರಿನ ಹನಿ ಬಿದ್ದರೆ ಏನಾಗುತ್ತದೆ? ಕ್ಷಣಾರ್ಧದಲ್ಲಿ ಅದು ಆವಿಯಾಗುತ್ತದೆ; ಎಂದರೆ ನೀರು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ಅದೇ ನೀರಿನ ಹನಿ ತಾವರೆಯ ಎಲೆಯ ಮೇಲೆ ಬಿದ್ದಾಗ ಏನಾಗುತ್ತದೆ? ಮುತ್ತಿನಂತೆ ಅದು ಕಂಗೊಳಿಸುತ್ತದೆ, ಅಲ್ಲವೆ? ಅದೇ ನೀರು ಸ್ವಾತೀಮಳೆಯಲ್ಲಿರುವ ಕಪ್ಪೆಯ ಚಿಪ್ಪಿನಲ್ಲಿ ಬಿದ್ದರೆ ಅದು ಸಾಕ್ಷಾತ್ ಮುತ್ತೇ ಆಗುತ್ತದೆ.</p>.<p>ನೀರಿನ ಹನಿ ಒಂದೇ. ಆದರೆ ಕಬ್ಬಿಣ, ತಾವರೆಯ ಎಲೆ, ಕಪ್ಪೆಯ ಚಿಪ್ಪು ಅದರ ಸ್ವಭಾವವನ್ನೇ ಬದಲಾಯಿಸುತ್ತದೆ. ಕಬ್ಬಿಣದಂತೆ ತಾವರೆಯ ಎಲೆ ಅದನ್ನು ಬದಲಾಯಿಸದು; ತಾವರೆಯ ಎಲೆಯಂತೆ ಕಪ್ಪೆಯ ಚಿಪ್ಪು ಮಾಡದು. ಒಂದೊಂದು ವಸ್ತುವೂ ತನ್ನ ಸ್ವಭಾವಕ್ಕೆ ಅನುಗುಣವಾಗಿ ನೀರನ್ನೂ ಬದಲಾಯಿಸುತ್ತಿರುತ್ತದೆ.</p>.<p>ನಾವು ಕೂಡ ಹೀಗೆಯೇ. ನಾವು ಯಾರ ಸಂಪರ್ಕದಲ್ಲಿರುತ್ತೇವೆಯೋ ಅವರಂತೆಯೇ ನಾವೂ ಆಗುತ್ತೇವೆ; ಅವರ ಸ್ವಭಾವ ನಮ್ಮನ್ನು ಬದಲಾಯಿಸುತ್ತದೆ. ಗಂಧದ ಜೊತೆ ನಾವು ಗುದ್ದಾಟ ನಡೆಸಿದರೆ ಗಂಧದ ಪರಿಮಳ ನಮ್ಮ ಮೈಗೂ ಅಂಟುತ್ತದೆ; ಸಗಣಿಯವನೊಂದಿಗೆ ಕಾದಾಟ ನಡೆಸಿದರೆ ಸಗಣಿಯ ವಾಸನೆಯೇ ನಮ್ಮ ಮೈಯನ್ನು ಆವರಿಸುತ್ತದೆ. ಒಳ್ಳೆಯವರ ಸಹವಾಸದಿಂದ ನಾವೂ ಒಳ್ಳೆಯವರಾಗುತ್ತೇವೆ; ಕೆಟ್ಟವರೊಂದಿಗಿನ ಒಡನಾಟ ನಮ್ಮಲ್ಲಿ ಕೆಟ್ಟಬುದ್ಧಿಯನ್ನೇ ಹುಟ್ಟಿಸುತ್ತದೆ.</p>.<p>ಹೀಗಾಗಿ ನಾವು ನಮ್ಮ ಜೀವನದಲ್ಲಿ ಯಾರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ, ಸಂಗಾತಿಗಳನ್ನಾಗಿಸಿಕೊಳ್ಳುತ್ತೇವೆ, ಆದರ್ಶವನ್ನಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಸ್ವಭಾವವನ್ನೂ ಜೀವನದ ಸಾರ್ಥಕತೆಯನ್ನೂ ನಿರ್ಧರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>