<p><strong>ತ್ರಯಾಣಾಮೇಕಭಾವನಾಂ ಯೋ ನ ಪಶ್ಯತಿ ವೈ ಭಿದಾಮ್ ।</strong></p>.<p><strong>ಸರ್ವಭೂತಾತ್ಮನಾಂ ಬ್ರಹ್ಮನ್ ಸ ಶಾಂತಿಮಧಿಗಚ್ಛತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಎಲ್ಲ ಪ್ರಾಣಿಗಳಿಗೂ ಆತ್ಮಸ್ವರೂಪರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಯಾರು ಭೇದವನ್ನು ಎಣಿಸುವುದಿಲ್ಲವೋ ಅವರು ಶಾಂತಿಯನ್ನು ಹೊಂದುತ್ತಾರೆ.‘</p>.<p>ನಮ್ಮದು ಒಡಕು ಬುದ್ಧಿ; ಎಲ್ಲದರಲ್ಲೂ ಭೇದವನ್ನೇ ಎಣಿಸುವವರು ನಾವು. ಇಂಥ ಬಿರುಕು ವ್ಯಕ್ತಿತ್ವ ಇದ್ದರೆ ಶಾಂತಿಯೂ ಸಿಗದು ಎನ್ನುವುದು ಸುಭಾಷಿತದ ಸಂದೇಶ.</p>.<p>ದೇವರ ಕಲ್ಪನೆಯಲ್ಲೂ ಭೇದವನ್ನು ಎಣಿಸುವವರು ನಾವು. ಶಿವನೇ ಬೇರೆ, ವಿಷ್ಣುವೇ ಬೇರೆ, ಬ್ರಹ್ಮನೇ ಬೇರೆ; ನಮ್ಮ ಹರಿಯೇ ದೊಡ್ಡವನು, ನಮ್ಮ ಹರನೇ ಶ್ರೇಷ್ಠ – ಇಂಥ ಸಂಕುಚಿತ ಬುದ್ಧಿಯಿಂದ ನೂರಾರು ವರ್ಷಗಳಿಂದ ನಮ್ಮ ಸಮಾಜವನ್ನೂ ಶಿಥಿಲ ಮಾಡುತ್ತಿದ್ದೇವೆ, ನಮ್ಮ ನೆಮ್ಮದಿಯನ್ನೂ ಹಾಳುಮಾಡಿಕೊಳ್ಳುತ್ತಿದ್ದೇವೆ.</p>.<p>ದೇವರು ಒಬ್ಬನೇ ಎನ್ನುವ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ವೇದಕಾಲದಿಂದಲೂ ಇದೆ. ಒಂದೇ ಸತ್ಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವಂತೆ, ಇರುವ ಒಬ್ಬನೇ ದೇವರನ್ನು ನಾನಾ ಹೆಸರುಗಳಿಂದ ಕರೆಯಲಾಗಿದೆ ಎಂಬುದು ಇಲ್ಲಿಯ ನಿಲವು; ಹೆಸರುಗಳು ಬೇರೆ ಎಂದಮಾತ್ರಕ್ಕೆ ಸತ್ತ್ವವೂ ಬೇರೆ ಬೇರೆಯೇ ಆಗಿರಬೇಕು ಎಂದೇನಿಲ್ಲವಷ್ಟೆ. ಆದರೆ ನಮ್ಮ ದುರ್ದೈವ, ವೈವಿಧ್ಯದ ಹಿಂದಿರುವ ಏಕತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿರುವುದರ ಪರಿಣಾಮವಾಗಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಏಕತೆಯ ಅನುಸಂಧಾನದಿಂದ ಮತ್ತೆ ಶಾಂತಿ–ಸಮಾಧಾನಗಳನ್ನು ಪಡೆಯಿರಿ ಎಂದು ಸುಭಾಷಿತ ಆಶಿಸುತ್ತಿದೆ.</p>.<p>ಕರ್ನಾಟಕರಾಜ್ಯದಲ್ಲಿರುವ ಈ ಶಾಸನಪದ್ಯ ಇಂಥ ಏಕತೆಗೆ ನಿದರ್ಶನವಾಗಿದೆ:</p>.<p>ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ |</p>.<p>ಬೌದ್ಧ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ ||</p>.<p>ಅರ್ಹನ್ನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ |</p>.<p>ಸೋsಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವಸ್ಸರ್ವದಾ ||</p>.<p>’ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮನೆಂದೂ, ಬೌದ್ಧರು ಬುದ್ಧನೆಂದೂ, ನ್ಯಾಯಪ್ರಸ್ಥಾನದವರು ಕರ್ತ ಎಂದೂ, ಜೈನರು ಅರ್ಹತ್ ಎಂದೂ, ಮೀಮಾಂಸಕರು ಕರ್ಮ ಎಂದೂ ಯಾವ ಕೇಶವನನ್ನು ಕರೆಯುತ್ತಾರೋ, ಆ ಒಬ್ಬನೇ ದೇವರು ನಮ್ಮ ಇಷ್ಟಾರ್ಥಫಲಗಳನ್ನು ಎಂದಿಗೂ ನೀಡಲಿ‘ ಎಂಬುದು ಈ ಪದ್ಯದ ತಾತ್ಪರ್ಯ.</p>.<p>ಭೇದಬುದ್ಧಿ ಅಳಿಯಲಿ, ಏಕಭಾವ ಉಳಿಯಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ರಯಾಣಾಮೇಕಭಾವನಾಂ ಯೋ ನ ಪಶ್ಯತಿ ವೈ ಭಿದಾಮ್ ।</strong></p>.<p><strong>ಸರ್ವಭೂತಾತ್ಮನಾಂ ಬ್ರಹ್ಮನ್ ಸ ಶಾಂತಿಮಧಿಗಚ್ಛತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಎಲ್ಲ ಪ್ರಾಣಿಗಳಿಗೂ ಆತ್ಮಸ್ವರೂಪರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಯಾರು ಭೇದವನ್ನು ಎಣಿಸುವುದಿಲ್ಲವೋ ಅವರು ಶಾಂತಿಯನ್ನು ಹೊಂದುತ್ತಾರೆ.‘</p>.<p>ನಮ್ಮದು ಒಡಕು ಬುದ್ಧಿ; ಎಲ್ಲದರಲ್ಲೂ ಭೇದವನ್ನೇ ಎಣಿಸುವವರು ನಾವು. ಇಂಥ ಬಿರುಕು ವ್ಯಕ್ತಿತ್ವ ಇದ್ದರೆ ಶಾಂತಿಯೂ ಸಿಗದು ಎನ್ನುವುದು ಸುಭಾಷಿತದ ಸಂದೇಶ.</p>.<p>ದೇವರ ಕಲ್ಪನೆಯಲ್ಲೂ ಭೇದವನ್ನು ಎಣಿಸುವವರು ನಾವು. ಶಿವನೇ ಬೇರೆ, ವಿಷ್ಣುವೇ ಬೇರೆ, ಬ್ರಹ್ಮನೇ ಬೇರೆ; ನಮ್ಮ ಹರಿಯೇ ದೊಡ್ಡವನು, ನಮ್ಮ ಹರನೇ ಶ್ರೇಷ್ಠ – ಇಂಥ ಸಂಕುಚಿತ ಬುದ್ಧಿಯಿಂದ ನೂರಾರು ವರ್ಷಗಳಿಂದ ನಮ್ಮ ಸಮಾಜವನ್ನೂ ಶಿಥಿಲ ಮಾಡುತ್ತಿದ್ದೇವೆ, ನಮ್ಮ ನೆಮ್ಮದಿಯನ್ನೂ ಹಾಳುಮಾಡಿಕೊಳ್ಳುತ್ತಿದ್ದೇವೆ.</p>.<p>ದೇವರು ಒಬ್ಬನೇ ಎನ್ನುವ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ವೇದಕಾಲದಿಂದಲೂ ಇದೆ. ಒಂದೇ ಸತ್ಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವಂತೆ, ಇರುವ ಒಬ್ಬನೇ ದೇವರನ್ನು ನಾನಾ ಹೆಸರುಗಳಿಂದ ಕರೆಯಲಾಗಿದೆ ಎಂಬುದು ಇಲ್ಲಿಯ ನಿಲವು; ಹೆಸರುಗಳು ಬೇರೆ ಎಂದಮಾತ್ರಕ್ಕೆ ಸತ್ತ್ವವೂ ಬೇರೆ ಬೇರೆಯೇ ಆಗಿರಬೇಕು ಎಂದೇನಿಲ್ಲವಷ್ಟೆ. ಆದರೆ ನಮ್ಮ ದುರ್ದೈವ, ವೈವಿಧ್ಯದ ಹಿಂದಿರುವ ಏಕತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿರುವುದರ ಪರಿಣಾಮವಾಗಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಏಕತೆಯ ಅನುಸಂಧಾನದಿಂದ ಮತ್ತೆ ಶಾಂತಿ–ಸಮಾಧಾನಗಳನ್ನು ಪಡೆಯಿರಿ ಎಂದು ಸುಭಾಷಿತ ಆಶಿಸುತ್ತಿದೆ.</p>.<p>ಕರ್ನಾಟಕರಾಜ್ಯದಲ್ಲಿರುವ ಈ ಶಾಸನಪದ್ಯ ಇಂಥ ಏಕತೆಗೆ ನಿದರ್ಶನವಾಗಿದೆ:</p>.<p>ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ |</p>.<p>ಬೌದ್ಧ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ ||</p>.<p>ಅರ್ಹನ್ನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ |</p>.<p>ಸೋsಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವಸ್ಸರ್ವದಾ ||</p>.<p>’ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮನೆಂದೂ, ಬೌದ್ಧರು ಬುದ್ಧನೆಂದೂ, ನ್ಯಾಯಪ್ರಸ್ಥಾನದವರು ಕರ್ತ ಎಂದೂ, ಜೈನರು ಅರ್ಹತ್ ಎಂದೂ, ಮೀಮಾಂಸಕರು ಕರ್ಮ ಎಂದೂ ಯಾವ ಕೇಶವನನ್ನು ಕರೆಯುತ್ತಾರೋ, ಆ ಒಬ್ಬನೇ ದೇವರು ನಮ್ಮ ಇಷ್ಟಾರ್ಥಫಲಗಳನ್ನು ಎಂದಿಗೂ ನೀಡಲಿ‘ ಎಂಬುದು ಈ ಪದ್ಯದ ತಾತ್ಪರ್ಯ.</p>.<p>ಭೇದಬುದ್ಧಿ ಅಳಿಯಲಿ, ಏಕಭಾವ ಉಳಿಯಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>