‘ಬಂದರು ಯೇಸು ಧರೆಗೆ, ಕತ್ತಲು ತುಂಬಿದ ಜಗಕೆ, ಸೂರ್ಯ ಮುಳುಗಿ ಕತ್ತಲು ಜಗತ್ತನ್ನೇ ಆವರಿಸಿದಾಗ, ಕ್ರಿಸ್ಮಸ್ ಎಂಬ ಬೆಳಕಿನ ಆಗಮನವಾಯಿತು. ‘ನಿನಗೆ ಬೆಳಕು ಬಂದಿದೆ ಜೆರುಸಲೇಮ್ ಏಳು ಪ್ರಕಾಶಿಸು’ ಎಂಬ ಪ್ರವಾದಿ ಯೇಸುವಿನ ಮಾತುಗಳು ಕ್ರಿಸ್ತಜಯಂತಿಯಂದು ಘನೀಕೃತವಾದವು. ಕತ್ತಲ ಬದುಕಿಗೆ ಬೆಳಕಿನ ಆಹ್ವಾನವಾಯಿತು. ನೀರಸ ಬದುಕಿಗೆ ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು. ದೇವ ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿಯಾಗಿ ಆಲಂಗಿಸಿ ಪ್ರೀತಿಯ ಸಿಂಚನದ ಹಬ್ಬವಾಗಿದೆ. ಕ್ರಿಸ್ಮಸ್, ಬದುಕಿನ ಬೆಳಕಿನ ಹಬ್ಬ.