‘ಕಾಗೆಯಂದಗುಳ ಕಂಡರೆ ಕರೆಯದೆ ತನ್ನ ಕುಲವೆಲ್ಲವ, ಕೋಳಿ ಒಂದು ಗುಟುಕು ಕಂಡರೆ, ಕರೆಯದೆ ತನ್ನ ಬಳಗವೆಲ್ಲವ, ಮಾನವ ಭಕ್ತಿ ಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಳಿಗಿಂತ ಕರಕಷ್ಟ ಕೂಡಲಸಂಗಮದೇವಾ’ ಎಂದು ಕಾಗೆ ಕೋಳಿಗಳಲ್ಲಿರವ ಕರೆದುಕೊಂಡು ಉಣ್ಣುವ ಶ್ರೇಷ್ಠ ಗುಣ, ಪ್ರಜ್ಞಾವಂತರಾದ ಮನುಷ್ಯರಲ್ಲಿ ಇಲ್ಲದಿರುವ ದಾಸೋಹ ಭಾವ, ಹಂಚಿಕೊಂಡು ತಿನ್ನುವ ಗುಣವನ್ನು ಎತ್ತಿ ತೋರಿಸಿದರು.