<p>ಕಾರ್ತಿಕವನ್ನು ದೀಪಾರಾಧನೆಯ ಮಾಸ ಎಂತಲೂ ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದು ಶುಭವೆಂದು ಜ್ಯೋತಿಷ ಹೇಳುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ದೀಪವನ್ನು ಹಚ್ಚುವಾಗ ಪಾಲಿಸಬೇಕಾದ ನಿಯಮಗಳು ಯಾವುವು? ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ. </p>.ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ . <ul><li><p>ವೀಳ್ಯೆದೆಲೆಯ ಮೇಲೆ ಬಿಲ್ವಪತ್ರೆ ಇಟ್ಟು, ಬಿಲ್ವಪತ್ರೆಯ ಮೇಲೆ ದೀಪ ಹಚ್ಚುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಇದರಿಂದ ಬಡತನ ನಿವಾರಣೆಯ ಜೊತೆಗೆ ಜಾತಕದಲ್ಲಿನ ದೋಷಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ. </p></li><li><p>ಬಿಲ್ವಪತ್ರೆ ಮರದ ಕೆಳಗೆ ದೀಪ ಹಚ್ಚುವುದರಿಂದ, ಶಿವನ ಅನುಗ್ರಹ ದೊರೆಯಲಿದೆ ಎಂದು ಹೇಳಲಾಗುತ್ತದೆ. </p></li><li><p>ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ದೀಪ ಹಚ್ಚುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.</p></li><li><p>ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ಮಾಂಸಾಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.</p></li><li><p>ನುಗ್ಗೆಕಾಯಿ, ಸೋರೆಕಾಯಿ, ಬದನೆಕಾಯಿ, ಮೂಲಂಗಿ, ಅಣಬೆ ಹಾಗೂ ಕುಂಬಳಕಾಯಿ ಸೇವಿಸಬಾರದು.</p></li><li><p>ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ನಿಷ್ಠೆಯಿಂದ ನಡೆದುಕೊಳ್ಳದೆ ಇದ್ದರೆ, ರೋಗ ಪೀಡಿತರಾಗುವ, ಮಾನಸಿಕ ಚಿಂತೆಗೆ ಅನುಭವಿಸುವ, ಮನೆಯಲ್ಲಿ ಜಗಳ ಹಾಗೂ ದಾರಿದ್ರ್ಯ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷಿ ವಿವೇಕಾನಂದ ಆಚಾರ್ಯ ಹೇಳಿದ್ದಾರೆ.</p></li></ul>.ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ತಿಕವನ್ನು ದೀಪಾರಾಧನೆಯ ಮಾಸ ಎಂತಲೂ ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದು ಶುಭವೆಂದು ಜ್ಯೋತಿಷ ಹೇಳುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ದೀಪವನ್ನು ಹಚ್ಚುವಾಗ ಪಾಲಿಸಬೇಕಾದ ನಿಯಮಗಳು ಯಾವುವು? ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ. </p>.ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ . <ul><li><p>ವೀಳ್ಯೆದೆಲೆಯ ಮೇಲೆ ಬಿಲ್ವಪತ್ರೆ ಇಟ್ಟು, ಬಿಲ್ವಪತ್ರೆಯ ಮೇಲೆ ದೀಪ ಹಚ್ಚುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಇದರಿಂದ ಬಡತನ ನಿವಾರಣೆಯ ಜೊತೆಗೆ ಜಾತಕದಲ್ಲಿನ ದೋಷಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ. </p></li><li><p>ಬಿಲ್ವಪತ್ರೆ ಮರದ ಕೆಳಗೆ ದೀಪ ಹಚ್ಚುವುದರಿಂದ, ಶಿವನ ಅನುಗ್ರಹ ದೊರೆಯಲಿದೆ ಎಂದು ಹೇಳಲಾಗುತ್ತದೆ. </p></li><li><p>ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ದೀಪ ಹಚ್ಚುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.</p></li><li><p>ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ಮಾಂಸಾಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.</p></li><li><p>ನುಗ್ಗೆಕಾಯಿ, ಸೋರೆಕಾಯಿ, ಬದನೆಕಾಯಿ, ಮೂಲಂಗಿ, ಅಣಬೆ ಹಾಗೂ ಕುಂಬಳಕಾಯಿ ಸೇವಿಸಬಾರದು.</p></li><li><p>ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ನಿಷ್ಠೆಯಿಂದ ನಡೆದುಕೊಳ್ಳದೆ ಇದ್ದರೆ, ರೋಗ ಪೀಡಿತರಾಗುವ, ಮಾನಸಿಕ ಚಿಂತೆಗೆ ಅನುಭವಿಸುವ, ಮನೆಯಲ್ಲಿ ಜಗಳ ಹಾಗೂ ದಾರಿದ್ರ್ಯ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷಿ ವಿವೇಕಾನಂದ ಆಚಾರ್ಯ ಹೇಳಿದ್ದಾರೆ.</p></li></ul>.ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>