<p>ಹಿಂದೂ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ದೇವಸ್ಥಾನದಲ್ಲಿ ದೇವರ ಪೂಜೆಯ ನಂತರ ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ತೀರ್ಥದ ಮಹತ್ವವೇನು ಎಂಬುದನ್ನು ತಿಳಿಯೋಣ. </p><p>ವಿಷ್ಣುವಿಗೆ ಅತ್ಯಂತ ಪ್ರಿಯವಾದ ಎಲೆ ಎಂದರೆ ತುಳಸಿ ಎಂದು ಹೇಳಲಾಗುತ್ತದೆ. ತುಳಸಿ ಗಿಡದಲ್ಲಿ ಸಕಲ ದೇವತೆಗಳು ವಾಸಿಸುತ್ತಾರೆ. ಹೀಗಾಗಿ ಪ್ರತಿ ದಿನ ಬೆಳಿಗ್ಗೆ ಸ್ನಾನವಾದ ನಂತರ ತುಳಸಿ ಪೂಜೆ ಮಾಡಿ ತದನಂತರ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.</p>.ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ.ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?.<p>ನಿತ್ಯ ತುಳಸಿ ಗಿಡವನ್ನು ಪೂಜಿಸುವುರಿಂದ ಪುಣ್ಯಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ದೈವ ಶಕ್ತಿಯನ್ನು ಹೊಂದಿರುವ ಗಿಡ. ತುಳಸಿ ಎಲೆ ಹಾಕಿದ ತೀರ್ಥ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ತುಳಸಿಯಲ್ಲಿ ಶಾಮ ತುಳಸಿ ಮತ್ತು ರಾಮ ತುಳಸಿ ಎಂಬ ಎರಡು ಪ್ರಕಾರಗಳಿವೆ.</p><p>ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅವರ ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಅಪೂರ್ಣ ಎನ್ನಲಾಗುತ್ತದೆ. </p><p>ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಸಿಕ್ಕ ಅಮೃತದ ಒಂದು ಬಿಂದು ಭೂಮಿಯ ಮೇಲೆ ಬೀಳುತ್ತದೆ. ಅದು ತುಳಸಿ ಗಿಡವಾಗಿ ಪರಿವರ್ತನೆಯಾಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ತುಳಸಿಯನ್ನು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಅರ್ಪಿಸಿದ ನಂತರ ತೀರ್ಥದಲ್ಲಿ ತುಳಸಿ ಎಲೆ ಹಾಕಿ ಭಕ್ತರಿಗೆ ನೀಡಲಾಗುತ್ತದೆ.</p><p>ಪುರಾಣ ಕಥೆಗಳ ಪ್ರಕಾರ ತೀರ್ಥ ಸ್ವೀಕರಿಸುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆ ಇದೆ. </p><p>ತುಳಸಿ ತೀರ್ಥವನ್ನು ಮೂರು ಬಾರಿ ಸ್ವೀಕರಿಸುವುದರಿಂದ ಆರೋಗ್ಯ, ಜ್ಞಾನ ಹಾಗೂ ಶಾಂತಿ ಲಭಿಸುತ್ತದೆ.</p><p>ಎಡಗೈ ಮೇಲೆ ಬಲಗೈಯನ್ನು ಇಟ್ಟು ತೋರು ಬೆರಳನ್ನು ಗೋಮುಖವಾಗಿ ಮಡಿಚಿ ತೀರ್ಥವನ್ನು ಸ್ವೀಕರಿಸಬೇಕು.</p><p>ಯಾವುದೇ ಕಾರಣಕ್ಕೂ ತೀರ್ಥವನ್ನು ಸ್ವೀಕರಿಸಿದ ನಂತರ ತಲೆಗೆ ಒರೆಸಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ತೀರ್ಥದ ಪವಿತ್ರತೆ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಕಾರಣ ನಾವು ಸ್ವೀಕರಿಸಿದ ತೀರ್ಥ ಎಂಜಲು ಆಗುವುದರಿಂದ ಆ ಎಂಜಲನ್ನು ತನ್ನ ತಲೆಯ ಮೇಲೆ ಒರೆಸಿಕೊಳ್ಳಬಾರದು.</p><p>ತುಳಸಿ ತೀರ್ಥವನ್ನು ಕಣ್ಣಿಗೆ ಹೊತ್ತಿಕೊಂಡು ಸ್ವೀಕರಿಸಬೇಕು ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿಂದೂ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ದೇವಸ್ಥಾನದಲ್ಲಿ ದೇವರ ಪೂಜೆಯ ನಂತರ ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ತೀರ್ಥದ ಮಹತ್ವವೇನು ಎಂಬುದನ್ನು ತಿಳಿಯೋಣ. </p><p>ವಿಷ್ಣುವಿಗೆ ಅತ್ಯಂತ ಪ್ರಿಯವಾದ ಎಲೆ ಎಂದರೆ ತುಳಸಿ ಎಂದು ಹೇಳಲಾಗುತ್ತದೆ. ತುಳಸಿ ಗಿಡದಲ್ಲಿ ಸಕಲ ದೇವತೆಗಳು ವಾಸಿಸುತ್ತಾರೆ. ಹೀಗಾಗಿ ಪ್ರತಿ ದಿನ ಬೆಳಿಗ್ಗೆ ಸ್ನಾನವಾದ ನಂತರ ತುಳಸಿ ಪೂಜೆ ಮಾಡಿ ತದನಂತರ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.</p>.ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ.ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?.<p>ನಿತ್ಯ ತುಳಸಿ ಗಿಡವನ್ನು ಪೂಜಿಸುವುರಿಂದ ಪುಣ್ಯಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ದೈವ ಶಕ್ತಿಯನ್ನು ಹೊಂದಿರುವ ಗಿಡ. ತುಳಸಿ ಎಲೆ ಹಾಕಿದ ತೀರ್ಥ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ತುಳಸಿಯಲ್ಲಿ ಶಾಮ ತುಳಸಿ ಮತ್ತು ರಾಮ ತುಳಸಿ ಎಂಬ ಎರಡು ಪ್ರಕಾರಗಳಿವೆ.</p><p>ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅವರ ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಅಪೂರ್ಣ ಎನ್ನಲಾಗುತ್ತದೆ. </p><p>ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಸಿಕ್ಕ ಅಮೃತದ ಒಂದು ಬಿಂದು ಭೂಮಿಯ ಮೇಲೆ ಬೀಳುತ್ತದೆ. ಅದು ತುಳಸಿ ಗಿಡವಾಗಿ ಪರಿವರ್ತನೆಯಾಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ತುಳಸಿಯನ್ನು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಅರ್ಪಿಸಿದ ನಂತರ ತೀರ್ಥದಲ್ಲಿ ತುಳಸಿ ಎಲೆ ಹಾಕಿ ಭಕ್ತರಿಗೆ ನೀಡಲಾಗುತ್ತದೆ.</p><p>ಪುರಾಣ ಕಥೆಗಳ ಪ್ರಕಾರ ತೀರ್ಥ ಸ್ವೀಕರಿಸುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆ ಇದೆ. </p><p>ತುಳಸಿ ತೀರ್ಥವನ್ನು ಮೂರು ಬಾರಿ ಸ್ವೀಕರಿಸುವುದರಿಂದ ಆರೋಗ್ಯ, ಜ್ಞಾನ ಹಾಗೂ ಶಾಂತಿ ಲಭಿಸುತ್ತದೆ.</p><p>ಎಡಗೈ ಮೇಲೆ ಬಲಗೈಯನ್ನು ಇಟ್ಟು ತೋರು ಬೆರಳನ್ನು ಗೋಮುಖವಾಗಿ ಮಡಿಚಿ ತೀರ್ಥವನ್ನು ಸ್ವೀಕರಿಸಬೇಕು.</p><p>ಯಾವುದೇ ಕಾರಣಕ್ಕೂ ತೀರ್ಥವನ್ನು ಸ್ವೀಕರಿಸಿದ ನಂತರ ತಲೆಗೆ ಒರೆಸಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ತೀರ್ಥದ ಪವಿತ್ರತೆ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಕಾರಣ ನಾವು ಸ್ವೀಕರಿಸಿದ ತೀರ್ಥ ಎಂಜಲು ಆಗುವುದರಿಂದ ಆ ಎಂಜಲನ್ನು ತನ್ನ ತಲೆಯ ಮೇಲೆ ಒರೆಸಿಕೊಳ್ಳಬಾರದು.</p><p>ತುಳಸಿ ತೀರ್ಥವನ್ನು ಕಣ್ಣಿಗೆ ಹೊತ್ತಿಕೊಂಡು ಸ್ವೀಕರಿಸಬೇಕು ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>