<p><strong>ತೇರದಾಳ</strong>: ಶೂನ್ಯ ಪೀಠದ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ಮೂಲ ಗದ್ದುಗೆಯ ಜಾತ್ರೆ ಶ್ರಾವಣ ಮಾಸದ ಮೂರನೇ ಸೋಮವಾರ ಸಂಭ್ರಮದಿಂದ ಜರುಗಿತು.</p>.<p>ಜಾತ್ರೆ ಅಂಗವಾಗಿ ಮೂಲಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕರಿಂದ ರುದ್ರಾಭಿಷೇಕ, ಮಂಗಳಾರತಿ ನೆರವೇರಿದವು. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.</p>.<p>ಕಲ್ಯಾಣ ಕ್ರಾಂತಿಯ ನಂತರ ಅಲ್ಲಮಪ್ರಭು ಲೋಕ ಸಂಚಾರ ಮಾಡುತ್ತ ತೇರದಾಳಕ್ಕೆ ಬಂದು ಕಿಲ್ಲಾಭಾಗಕ್ಕೆ ಬಂದು ತಪಸ್ಸು ಮಾಡಿದರು. ಅದಕ್ಕಾಗಿ ಅಲ್ಲಿ ಮೂಲಗದ್ದುಗೆಯನ್ನು ಈಗ ನಿರ್ಮಿಸಲಾಗಿದೆ. ಅಲ್ಲಿಂದ ಹೊರಹೋಗುವಾಗ ಭೃಂಗವಾಗಿ ಹೊರಹೋದರು ಎಂಬುದಕ್ಕೆ ದೇವಸ್ಥಾನದ ಹಿಂಭಾಗದಲ್ಲಿ ಸಣ್ಣ ರಂಧ್ರ ಇರುವುದೇ ಕುರುಹು.</p>.<p>ಅಲ್ಲಮಪ್ರಭು ದೇವರು ಬೆಳಗಾವಿ ಜಿಲ್ಲೆಯ ರಾಜಾ ಲಖಮಗೌಡರ ವಂಶಸ್ಥರ ಮನೆತನದ ದೇವರಾಗಿದ್ದರಿಂದ ಅವರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ ಜಾತ್ರೆಗೂ ಅವರ ವಂಶಸ್ಥರು ಬಂದು ಹೋಗುವ ವಾಡಿಕೆಯಿದೆ ಎಂದು ಜಾತ್ರಾ ಕಮಿಟಿಯವರು ಹೇಳಿತ್ತಾರೆ. ಈಗ ದೇವಸ್ಥಾನವನ್ನು ಕಮಿಟಿಯವರು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಜಿರ್ಣೋದ್ದಾರ ಮಾಡಿದ್ದಾರೆ.</p>.<p>ಈ ವರ್ಷದ ಜಾತ್ರೆಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ಗದ್ದುಗೆಯ ದರ್ಶನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ</strong>: ಶೂನ್ಯ ಪೀಠದ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ಮೂಲ ಗದ್ದುಗೆಯ ಜಾತ್ರೆ ಶ್ರಾವಣ ಮಾಸದ ಮೂರನೇ ಸೋಮವಾರ ಸಂಭ್ರಮದಿಂದ ಜರುಗಿತು.</p>.<p>ಜಾತ್ರೆ ಅಂಗವಾಗಿ ಮೂಲಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕರಿಂದ ರುದ್ರಾಭಿಷೇಕ, ಮಂಗಳಾರತಿ ನೆರವೇರಿದವು. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.</p>.<p>ಕಲ್ಯಾಣ ಕ್ರಾಂತಿಯ ನಂತರ ಅಲ್ಲಮಪ್ರಭು ಲೋಕ ಸಂಚಾರ ಮಾಡುತ್ತ ತೇರದಾಳಕ್ಕೆ ಬಂದು ಕಿಲ್ಲಾಭಾಗಕ್ಕೆ ಬಂದು ತಪಸ್ಸು ಮಾಡಿದರು. ಅದಕ್ಕಾಗಿ ಅಲ್ಲಿ ಮೂಲಗದ್ದುಗೆಯನ್ನು ಈಗ ನಿರ್ಮಿಸಲಾಗಿದೆ. ಅಲ್ಲಿಂದ ಹೊರಹೋಗುವಾಗ ಭೃಂಗವಾಗಿ ಹೊರಹೋದರು ಎಂಬುದಕ್ಕೆ ದೇವಸ್ಥಾನದ ಹಿಂಭಾಗದಲ್ಲಿ ಸಣ್ಣ ರಂಧ್ರ ಇರುವುದೇ ಕುರುಹು.</p>.<p>ಅಲ್ಲಮಪ್ರಭು ದೇವರು ಬೆಳಗಾವಿ ಜಿಲ್ಲೆಯ ರಾಜಾ ಲಖಮಗೌಡರ ವಂಶಸ್ಥರ ಮನೆತನದ ದೇವರಾಗಿದ್ದರಿಂದ ಅವರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ ಜಾತ್ರೆಗೂ ಅವರ ವಂಶಸ್ಥರು ಬಂದು ಹೋಗುವ ವಾಡಿಕೆಯಿದೆ ಎಂದು ಜಾತ್ರಾ ಕಮಿಟಿಯವರು ಹೇಳಿತ್ತಾರೆ. ಈಗ ದೇವಸ್ಥಾನವನ್ನು ಕಮಿಟಿಯವರು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಜಿರ್ಣೋದ್ದಾರ ಮಾಡಿದ್ದಾರೆ.</p>.<p>ಈ ವರ್ಷದ ಜಾತ್ರೆಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ಗದ್ದುಗೆಯ ದರ್ಶನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>