<p><strong>ಬಾದಾಮಿ:</strong> ನಿರಂತರ ವಾರ ಸುರಿದ ಮಳೆಯಿಂದ ಪಟ್ಟಣದ ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಗುಂಡಿಯಲ್ಲಿ ರಸ್ತೆಯೊ ಇಲ್ಲವೇ ರಸ್ತೆಯಲ್ಲಿ ಗುಂಡಿಯೋ ಎನ್ನುವಂತಾಗಿದೆ. ದ್ವಿಚಕ್ರ, ಆಟೊ ಚಾಲಕರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.</p>.<p>‘ಮುಖ್ಯ ಮಾರುಕಟ್ಟೆಯ ಸುಂಕದ ಆಂಜನೇಯ ದೇವಾಲಯ ರಸ್ತೆ, ಮ್ಯೂಜಿಯಂ ರಸ್ತೆ, ದೊಡ್ಡ ಮಾರುತಿ ದೇವಾಲಯ ರಸ್ತೆ, ಚಾಲುಕ್ಯ ನಗರ, ವಿದ್ಯಾನಗರ, ಅನಂದ ನಗರ ಸಿಸಿ ರಸ್ತೆಗಳು ಮಳೆಯಿಂದ ಗುಂಡಿಮಯವಾಗಿವೆ. ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಮಾಡಬೇಕಿದೆ.</p>.<p>‘ಮೂರ್ನಾಲ್ಕು ವರ್ಷಗಳಿಂದ ರಸ್ತೆ ಹದಗೆಟ್ಟಿವೆ. ವಾರ್ಡಿನ ಪುರಸಭೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಸಹ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿಸುತ್ತಿಲ್ಲ. ರಸ್ತೆ ಗುಂಡಿಗಳಿಂದ ಅನೇಕ ದ್ವಿಚಕ್ರ ವಾಹನ ಸವಾರರ ಅಪಘಾತಗಳು ಸಂಭವಿಸಿವೆ. ಸಿಸಿ ರಸ್ತೆ ಬೇಗ ದುರಸ್ತಿ ಮಾಡಿಸಿ ’ ಎಂದು ವಿದ್ಯಾನಗರದ ರಮೇಶ ಪಾಟೀಲ ಪುರಸಭೆಗೆ ಒತ್ತಾಯಿಸಿದ್ದಾರೆ.</p>.<p>‘2023-24ರಲ್ಲಿ ಸಿಸಿ ರಸ್ತೆ ದುರಸ್ತಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿದ್ದರು ಕೊಡಲಿಲ್ಲ. ಪುರಸಭೆ ಮುಂದೆ ಸದಸ್ಯರು ಧರಣಿ ನಡೆಸಿದರೂ 2024-25 ಸಾಲಿನ 15ನೇ ಹಣಕಾಸಿನಲ್ಲಿಯೂ ಮಂಜೂರ ಮಾಡಲಿಲ್ಲ. ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ’ ಎಂದು 8ನೇ ವಾರ್ಡಿನ ಸದಸ್ಯ ಅಶೋಕ ಯಲಿಗಾರ ಹೇಳಿದರು.</p>.<p>‘ಪುರಸಭೆ ವಿಶೇಷ ಅನುದಾನದಲ್ಲಿ ₹ 2.95 ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಸಿಸಿ ರಸ್ತೆ, ಚರಂಡಿ ಮತ್ತು ಒಳಚಂಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಗುಂಡಿ ಬಿದ್ದ ಸಿಸಿ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ನಿರಂತರ ವಾರ ಸುರಿದ ಮಳೆಯಿಂದ ಪಟ್ಟಣದ ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಗುಂಡಿಯಲ್ಲಿ ರಸ್ತೆಯೊ ಇಲ್ಲವೇ ರಸ್ತೆಯಲ್ಲಿ ಗುಂಡಿಯೋ ಎನ್ನುವಂತಾಗಿದೆ. ದ್ವಿಚಕ್ರ, ಆಟೊ ಚಾಲಕರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.</p>.<p>‘ಮುಖ್ಯ ಮಾರುಕಟ್ಟೆಯ ಸುಂಕದ ಆಂಜನೇಯ ದೇವಾಲಯ ರಸ್ತೆ, ಮ್ಯೂಜಿಯಂ ರಸ್ತೆ, ದೊಡ್ಡ ಮಾರುತಿ ದೇವಾಲಯ ರಸ್ತೆ, ಚಾಲುಕ್ಯ ನಗರ, ವಿದ್ಯಾನಗರ, ಅನಂದ ನಗರ ಸಿಸಿ ರಸ್ತೆಗಳು ಮಳೆಯಿಂದ ಗುಂಡಿಮಯವಾಗಿವೆ. ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಮಾಡಬೇಕಿದೆ.</p>.<p>‘ಮೂರ್ನಾಲ್ಕು ವರ್ಷಗಳಿಂದ ರಸ್ತೆ ಹದಗೆಟ್ಟಿವೆ. ವಾರ್ಡಿನ ಪುರಸಭೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಸಹ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿಸುತ್ತಿಲ್ಲ. ರಸ್ತೆ ಗುಂಡಿಗಳಿಂದ ಅನೇಕ ದ್ವಿಚಕ್ರ ವಾಹನ ಸವಾರರ ಅಪಘಾತಗಳು ಸಂಭವಿಸಿವೆ. ಸಿಸಿ ರಸ್ತೆ ಬೇಗ ದುರಸ್ತಿ ಮಾಡಿಸಿ ’ ಎಂದು ವಿದ್ಯಾನಗರದ ರಮೇಶ ಪಾಟೀಲ ಪುರಸಭೆಗೆ ಒತ್ತಾಯಿಸಿದ್ದಾರೆ.</p>.<p>‘2023-24ರಲ್ಲಿ ಸಿಸಿ ರಸ್ತೆ ದುರಸ್ತಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿದ್ದರು ಕೊಡಲಿಲ್ಲ. ಪುರಸಭೆ ಮುಂದೆ ಸದಸ್ಯರು ಧರಣಿ ನಡೆಸಿದರೂ 2024-25 ಸಾಲಿನ 15ನೇ ಹಣಕಾಸಿನಲ್ಲಿಯೂ ಮಂಜೂರ ಮಾಡಲಿಲ್ಲ. ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ’ ಎಂದು 8ನೇ ವಾರ್ಡಿನ ಸದಸ್ಯ ಅಶೋಕ ಯಲಿಗಾರ ಹೇಳಿದರು.</p>.<p>‘ಪುರಸಭೆ ವಿಶೇಷ ಅನುದಾನದಲ್ಲಿ ₹ 2.95 ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಸಿಸಿ ರಸ್ತೆ, ಚರಂಡಿ ಮತ್ತು ಒಳಚಂಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಗುಂಡಿ ಬಿದ್ದ ಸಿಸಿ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>