<p><strong>ಬಾದಾಮಿ</strong>: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಗುಡುಗಿನೊಂದಿಗೆ ಗಂಟೆ ಕಾಲ ರಭಸದಿಂದ ಮಳೆ ಸುರಿಯಿತು. ಮಧ್ಯಾಹ್ನ ಒಂದು ಗಂಟೆಯವರೆಗೆ ಜಿಟಿ ಜಿಟಿ ಮಳೆ ಮುಂದುವರೆಯಿತು.</p>.<p>ಮಳೆಯಿಂದ ಮಾರುಕಟ್ಟೆಗೆ ಗ್ರಾಹಕರು ಬರಲಿಲ್ಲ. ವ್ಯಾಪಾರ ವಹಿವಾಟು ಮಧ್ಯಾಹ್ನದವರೆಗೆ ಸ್ಥಗಿತವಾಗಿತ್ತು ಸತತ ಮಳೆಯಿಂದ ಬೆಟ್ಟದ ಜೋಡಿ ಜಲಧಾರೆಗಳು ಮತ್ತು ಕಾರಂಜಿಯ ನೀರು ನಿರಂತರ ಐದು ಗಂಟೆ ಕಾಲ ಧುಮ್ಮಿಕ್ಕುತ್ತ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಗ್ರಹವಾಯಿತು.</p>.<p>ಹಿಂಗಾರು ಕೃಷಿ ಚಟುವಟಿಕೆಗಳು ವಾರದಿಂದ ಸ್ಥಗಿತಗೊಂಡಿವೆ. ‘ಮಳಿ ಆಗಿ ಹೊಲದಾಗ ನೀರು ನಿಂತಾವ ಹೊಲಕ ಹೋಗುವಂಗಿಲ್ಲ. ಹೊಲದ ಕೆಲಸ ಎಲ್ಲಾವೂ ನಿಂತಬಿಟ್ಟಾವ ’ ಎಂದು ರೈತ ಬಸಪ್ಪ ಹೇಳಿದರು.</p>.<p>‘ಪ್ರಾಥಮಿಕ ವರದಿಯಂತೆ ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರದ ಮಳೆಗೆ ಅಂದಾಜು 11 ಮನೆಗಳು ಭಾಗಶಃ ಹಾನಿಯಾಗಿವೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 8 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ನೀರು ಕಡಿಮೆಯಾದ ನಂತರ ಬೆಳೆ ಹಾನಿ ಸರ್ವೇ ಮಾಡಲಾಗುವುದು’ ಎಂದು ತಹಶೀಲ್ದಾರ್ ಮಧುರಾಜ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಗುಡುಗಿನೊಂದಿಗೆ ಗಂಟೆ ಕಾಲ ರಭಸದಿಂದ ಮಳೆ ಸುರಿಯಿತು. ಮಧ್ಯಾಹ್ನ ಒಂದು ಗಂಟೆಯವರೆಗೆ ಜಿಟಿ ಜಿಟಿ ಮಳೆ ಮುಂದುವರೆಯಿತು.</p>.<p>ಮಳೆಯಿಂದ ಮಾರುಕಟ್ಟೆಗೆ ಗ್ರಾಹಕರು ಬರಲಿಲ್ಲ. ವ್ಯಾಪಾರ ವಹಿವಾಟು ಮಧ್ಯಾಹ್ನದವರೆಗೆ ಸ್ಥಗಿತವಾಗಿತ್ತು ಸತತ ಮಳೆಯಿಂದ ಬೆಟ್ಟದ ಜೋಡಿ ಜಲಧಾರೆಗಳು ಮತ್ತು ಕಾರಂಜಿಯ ನೀರು ನಿರಂತರ ಐದು ಗಂಟೆ ಕಾಲ ಧುಮ್ಮಿಕ್ಕುತ್ತ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಗ್ರಹವಾಯಿತು.</p>.<p>ಹಿಂಗಾರು ಕೃಷಿ ಚಟುವಟಿಕೆಗಳು ವಾರದಿಂದ ಸ್ಥಗಿತಗೊಂಡಿವೆ. ‘ಮಳಿ ಆಗಿ ಹೊಲದಾಗ ನೀರು ನಿಂತಾವ ಹೊಲಕ ಹೋಗುವಂಗಿಲ್ಲ. ಹೊಲದ ಕೆಲಸ ಎಲ್ಲಾವೂ ನಿಂತಬಿಟ್ಟಾವ ’ ಎಂದು ರೈತ ಬಸಪ್ಪ ಹೇಳಿದರು.</p>.<p>‘ಪ್ರಾಥಮಿಕ ವರದಿಯಂತೆ ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರದ ಮಳೆಗೆ ಅಂದಾಜು 11 ಮನೆಗಳು ಭಾಗಶಃ ಹಾನಿಯಾಗಿವೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 8 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ನೀರು ಕಡಿಮೆಯಾದ ನಂತರ ಬೆಳೆ ಹಾನಿ ಸರ್ವೇ ಮಾಡಲಾಗುವುದು’ ಎಂದು ತಹಶೀಲ್ದಾರ್ ಮಧುರಾಜ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>