<p><strong>ಮುಂಬೈ</strong>: ಕರ್ನಾಟಕದ ಯುವ ಗಾಲ್ಫರ್ ಪ್ರಣವಿ ಅರಸ್ ಗುರುವಾರ ಇಂಡಿಯನ್ ಗಾಲ್ಫ್ ಪ್ರೀಮಿಯರ್ ಲೀಗ್ (ಐಜಿಪಿಎಲ್) ಟೂರ್ನ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ವೃತ್ತಿಪರ ಐಜಿಪಿಎಲ್ ಟೂರ್ನಿಯಲ್ಲಿ ಪುರುಷ ಸ್ಪರ್ಧಿಗಳನ್ನು ಮಣಿಸಿ ಕಿರೀಟ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.</p>.<p>ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಮೈಸೂರಿನ 22 ವರ್ಷದ ಪ್ರಣವಿ 8 ಅಂಡರ್ಗಳಲ್ಲಿ 60 ಅಂಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಒಟ್ಟು 14 ಅಂಡರ್ಗಳೊಂದಿಗೆ ಚಾಂಪಿಯನ್ ಆದ ಅವರು ಟ್ರೋಫಿ ಮತ್ತು ₹22.50 ಲಕ್ಷ ಬಹುಮಾನ ತನ್ನದಾಗಿಸಿಕೊಂಡರು. </p>.<p>ಪ್ರಣವಿ ಅವರಿಗೆ ಪ್ರಬಲ ಸ್ಪರ್ಧೆಯೊಡಿದ್ದ ಚಂಡೀಗಢದ ಕರಣ್ದೀಪ್ ಕೊಚ್ಚರ್ ರನ್ನರ್ ಅಪ್ ಆದರು. ಕೊನೆಯ ದಿನದ ಆರಂಭದ ತನಕ ಅಗ್ರಸ್ಥಾನದಲ್ಲಿದ್ದ ಕೊಚ್ಚರ್ 12 ಅಂಡರ್ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದರು. ಅವರು ₹15 ಲಕ್ಷ ಬಹುಮಾನ ಪಡೆದರು. </p>.<p>ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಪ್ರಣವಿ, ‘ಈ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ವೃತ್ತಿಪರ ಪುರುಷರೊಂದಿಗೆ ಸ್ಪರ್ಧಿಸಿದ್ದರಿಂದ ನನ್ನ ಆಟದ ಮಟ್ಟವನ್ನು ತಿಳಿಯಲು ಸಾಧ್ಯವಾಯಿತು’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಕರ್ನಾಟಕದ ಯುವ ಗಾಲ್ಫರ್ ಪ್ರಣವಿ ಅರಸ್ ಗುರುವಾರ ಇಂಡಿಯನ್ ಗಾಲ್ಫ್ ಪ್ರೀಮಿಯರ್ ಲೀಗ್ (ಐಜಿಪಿಎಲ್) ಟೂರ್ನ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ವೃತ್ತಿಪರ ಐಜಿಪಿಎಲ್ ಟೂರ್ನಿಯಲ್ಲಿ ಪುರುಷ ಸ್ಪರ್ಧಿಗಳನ್ನು ಮಣಿಸಿ ಕಿರೀಟ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.</p>.<p>ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಮೈಸೂರಿನ 22 ವರ್ಷದ ಪ್ರಣವಿ 8 ಅಂಡರ್ಗಳಲ್ಲಿ 60 ಅಂಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಒಟ್ಟು 14 ಅಂಡರ್ಗಳೊಂದಿಗೆ ಚಾಂಪಿಯನ್ ಆದ ಅವರು ಟ್ರೋಫಿ ಮತ್ತು ₹22.50 ಲಕ್ಷ ಬಹುಮಾನ ತನ್ನದಾಗಿಸಿಕೊಂಡರು. </p>.<p>ಪ್ರಣವಿ ಅವರಿಗೆ ಪ್ರಬಲ ಸ್ಪರ್ಧೆಯೊಡಿದ್ದ ಚಂಡೀಗಢದ ಕರಣ್ದೀಪ್ ಕೊಚ್ಚರ್ ರನ್ನರ್ ಅಪ್ ಆದರು. ಕೊನೆಯ ದಿನದ ಆರಂಭದ ತನಕ ಅಗ್ರಸ್ಥಾನದಲ್ಲಿದ್ದ ಕೊಚ್ಚರ್ 12 ಅಂಡರ್ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದರು. ಅವರು ₹15 ಲಕ್ಷ ಬಹುಮಾನ ಪಡೆದರು. </p>.<p>ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಪ್ರಣವಿ, ‘ಈ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ವೃತ್ತಿಪರ ಪುರುಷರೊಂದಿಗೆ ಸ್ಪರ್ಧಿಸಿದ್ದರಿಂದ ನನ್ನ ಆಟದ ಮಟ್ಟವನ್ನು ತಿಳಿಯಲು ಸಾಧ್ಯವಾಯಿತು’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>