<p><strong>ಬಾದಾಮಿ:</strong> ಸ್ಥಳೀಯ ರಸ್ತೆ ಸಾರಿಗೆ ಸಂಸ್ಥೆಯ ಘಟಕವು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಸಾರಿಗೆ ಸಂಸ್ಥೆಗೆ ಹೆಮ್ಮೆ ಮತ್ತು ಪ್ರಯಾಣಿಕರಲ್ಲಿ ಅಭಿಮಾನ ಮೂಡಿಸಿದೆ.</p>.<p>ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಬಸ್ ಸಂಚಾರದ ಅನುಕೂಲ, ನಿಲ್ದಾಣದ ಹೊರಗೆ ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ಸ್ವಚ್ಛತೆ, ಐತಿಹಾಸಿಕ ಸ್ಮಾರಕಗಳ ಫ್ಲೆಕ್ಸ್ , ನಿಲ್ದಾಣದಲ್ಲಿ ನೂರಾರು ಗಿಡಗಳ ರಕ್ಷಣೆ, ಸಾರ್ವಜನಿಕರಿಗೆ ಕೆಲವು ಸೂಚನಾ ಫಲಕದಲ್ಲಿ ದೂರವಾಣಿ ಸಂಖ್ಯೆ, ಚಾಲಕರಿಗೆ ಮತ್ತು ಕಂಡಕ್ಟರಿಗೆ ಸೂಚನಾ ಫಲಕಗಳು ಹೀಗೆ ಅನೇಕ ಸೌಲಭ್ಯಗಳನ್ನು ಕಾಣಬಹುದಾಗಿದೆ.</p>.<p>ಸಾರಿಗೆ ಸಂಸ್ಥೆ ಘಟಕದಲ್ಲಿ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಬೆಳಿಗ್ಗೆ 6 ಗಂಟೆಗೆ ಬಂದರೆ ಸಂಜೆ 8 ರವರೆಗೆ ನಿಲ್ದಾಣದಲ್ಲಿಯೇ ಇದ್ದು ಎಲ್ಲ ಸಿಬ್ಬಂದಿಯ ಸಹಕಾರದೊಂದಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.</p>.<p>‘ ಪ್ರಯಾಣಿಕರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುವುದೇ ನಮ್ಮ ಧ್ಯೇಯವಾಗಿದೆ. ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಜೊತೆಗಿನ ಸಹಕಾರದಿಂದ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೊಡಲಾಗಿದೆ ’ ಎಂದು ಘಟಕ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.</p>.<p>‘ ಬಸ್ ಸಂಚಾರ ಸಮಯದಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿ ಇರಲಿ. ಅಪಘಾತ ಸಂಭವಿಸದಂತೆ ಚಾಲನೆ ಮಾಡಿ ಇಂಧನ ಉಳಿತಾಯ ಮಾಡಿದರೆ ಪ್ರಶಸ್ತಿಗಳನ್ನು ಕೊಡಲಾಗುವುದು ’ ಎಂದು ಪ್ರತಿ ನಿತ್ಯ ಬೆಳಿಗ್ಗೆ ಚಾಲಕರಿಗೆ ಇವರು ತಿಳಿವಳಿಕೆ ನೀಡುವರು. ‘ಪ್ರಯಾಣಿಕರು ದೇವರಿದ್ದಂತೆ. ಸಾರಿಗೆ ಸಂಸ್ಥೆಯಲ್ಲಿ ಜನರು ಹೆಚ್ಚು ಪ್ರಯಾಣ ಮಾಡಿದರೆ ಸಾರಿಗೆ ಸಂಸ್ಥೆಯು ಲಾಭದಲ್ಲಿ ಇರುವುದು. ಪ್ರಯಾಣಿಕರ ಜೊತೆಗೆ ಕಂಡಕ್ಟರ್ ಸಹಕಾರದಿಂದ ನಡೆದುಕೊಳ್ಳಿ’ ಎಂದೂ ಆಗಾಗ್ಗೆ ನಿರ್ವಾಹಕರಿಗೆ ಸಲಹೆ ಕೊಡುವರು. </p>.<p>‘ ಇಂಧನ ಉಳಿತಾಯ ಮಾಡಿದ ಚಾಲಕ ಮತ್ತು ನಿರ್ವಾಹಕರಿಗೆ ಘಟಕದಲ್ಲಿ ನಿತ್ಯ ಪುಷ್ಪವನ್ನು ನೀಡಿ ಗೌರವಿಸಲಾಗುವುದು. ಬೇರೆ ಬೇರೆ ಚಾಲಕರು ಇಂಧನ ಉಳಿತಾಯ ಮಾಡಿದ್ದು ಘಟಕಕ್ಕೆ ಅಧಿಕ ಆದಾಯ ತಂದಿದ್ದಾರೆ. ಶಕ್ತಿ ಯೋಜನೆಯಿಂದ ಘಟಕಕ್ಕೆ ₹ 54 ಲಕ್ಷ ಆದಾಯವಾಗಿದೆ ’ ಎಂದು ಅವರು ಹೇಳಿದರು.</p>.<p>ಅಪಘಾತ ರಹಿತ ಪ್ರಯಾಣಕ್ಕಾಗಿ ಬಸ್ ನಿಲ್ದಾಣದಲ್ಲಿ ಮತ್ತು ಊರಲ್ಲಿ ಬಸ್ ಬಂದಾಗ ಗದ್ದಲ ಮಾಡದೇ ತಾಳ್ಮೆ ಸಹನೆಯಿಂದ ಬಸ್ ಸಂಚಾರ ಮಾಡಿ ಎಂದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.</p>.<p>ಬೀಳಗಿ ಘಟಕದ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿದ್ದಾಗ ರಾಜ್ಯ ಮಟ್ಟದ ಇಂಧನ ಉಳಿತಾಯ ಪ್ರಶಸ್ತಿ ಮತ್ತು ಪಿಸಿಆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.</p>.<p>‘ ನಮ್ಮ ಘಟಕಕ್ಕೆ ಅಶೋಕ ಕೋರಿ ವ್ಯವಸ್ಥಾಪಕರಾಗಿ ಬಂದ ನಂತರ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ ’ ಎಂದು ಚಾಲಕ ಬಸವರಾಜ ಹೊದ್ಲೂರ ಮತ್ತು ನಿರ್ವಾಹಕ ನಾಗರಾಜ ಅಂಬಿಗೇರ ಪ್ರತಿಕ್ರಿಯಿಸಿದರು.</p>.<p>‘ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಮತ್ತು ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಸಹಕಾರದಿಂದ ಐತಿಹಾಸಿಕ ಬಾದಾಮಿ ರಸ್ತೆ ಸಾರಿಗೆ ಘಟಕವನ್ನು ರಾಜ್ಯದಲ್ಲಿಯೇ ಮಾದರಿ ಘಟಕವನ್ನಾಗಿ ರೂಪಿಸುವ ಯೋಜನೆ ಇದೆ ’ ಎಂದು ಘಟಕ ವ್ಯವಸ್ಥಾಪಕ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಸ್ಥಳೀಯ ರಸ್ತೆ ಸಾರಿಗೆ ಸಂಸ್ಥೆಯ ಘಟಕವು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಸಾರಿಗೆ ಸಂಸ್ಥೆಗೆ ಹೆಮ್ಮೆ ಮತ್ತು ಪ್ರಯಾಣಿಕರಲ್ಲಿ ಅಭಿಮಾನ ಮೂಡಿಸಿದೆ.</p>.<p>ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಬಸ್ ಸಂಚಾರದ ಅನುಕೂಲ, ನಿಲ್ದಾಣದ ಹೊರಗೆ ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ಸ್ವಚ್ಛತೆ, ಐತಿಹಾಸಿಕ ಸ್ಮಾರಕಗಳ ಫ್ಲೆಕ್ಸ್ , ನಿಲ್ದಾಣದಲ್ಲಿ ನೂರಾರು ಗಿಡಗಳ ರಕ್ಷಣೆ, ಸಾರ್ವಜನಿಕರಿಗೆ ಕೆಲವು ಸೂಚನಾ ಫಲಕದಲ್ಲಿ ದೂರವಾಣಿ ಸಂಖ್ಯೆ, ಚಾಲಕರಿಗೆ ಮತ್ತು ಕಂಡಕ್ಟರಿಗೆ ಸೂಚನಾ ಫಲಕಗಳು ಹೀಗೆ ಅನೇಕ ಸೌಲಭ್ಯಗಳನ್ನು ಕಾಣಬಹುದಾಗಿದೆ.</p>.<p>ಸಾರಿಗೆ ಸಂಸ್ಥೆ ಘಟಕದಲ್ಲಿ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಬೆಳಿಗ್ಗೆ 6 ಗಂಟೆಗೆ ಬಂದರೆ ಸಂಜೆ 8 ರವರೆಗೆ ನಿಲ್ದಾಣದಲ್ಲಿಯೇ ಇದ್ದು ಎಲ್ಲ ಸಿಬ್ಬಂದಿಯ ಸಹಕಾರದೊಂದಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.</p>.<p>‘ ಪ್ರಯಾಣಿಕರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುವುದೇ ನಮ್ಮ ಧ್ಯೇಯವಾಗಿದೆ. ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಜೊತೆಗಿನ ಸಹಕಾರದಿಂದ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೊಡಲಾಗಿದೆ ’ ಎಂದು ಘಟಕ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.</p>.<p>‘ ಬಸ್ ಸಂಚಾರ ಸಮಯದಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿ ಇರಲಿ. ಅಪಘಾತ ಸಂಭವಿಸದಂತೆ ಚಾಲನೆ ಮಾಡಿ ಇಂಧನ ಉಳಿತಾಯ ಮಾಡಿದರೆ ಪ್ರಶಸ್ತಿಗಳನ್ನು ಕೊಡಲಾಗುವುದು ’ ಎಂದು ಪ್ರತಿ ನಿತ್ಯ ಬೆಳಿಗ್ಗೆ ಚಾಲಕರಿಗೆ ಇವರು ತಿಳಿವಳಿಕೆ ನೀಡುವರು. ‘ಪ್ರಯಾಣಿಕರು ದೇವರಿದ್ದಂತೆ. ಸಾರಿಗೆ ಸಂಸ್ಥೆಯಲ್ಲಿ ಜನರು ಹೆಚ್ಚು ಪ್ರಯಾಣ ಮಾಡಿದರೆ ಸಾರಿಗೆ ಸಂಸ್ಥೆಯು ಲಾಭದಲ್ಲಿ ಇರುವುದು. ಪ್ರಯಾಣಿಕರ ಜೊತೆಗೆ ಕಂಡಕ್ಟರ್ ಸಹಕಾರದಿಂದ ನಡೆದುಕೊಳ್ಳಿ’ ಎಂದೂ ಆಗಾಗ್ಗೆ ನಿರ್ವಾಹಕರಿಗೆ ಸಲಹೆ ಕೊಡುವರು. </p>.<p>‘ ಇಂಧನ ಉಳಿತಾಯ ಮಾಡಿದ ಚಾಲಕ ಮತ್ತು ನಿರ್ವಾಹಕರಿಗೆ ಘಟಕದಲ್ಲಿ ನಿತ್ಯ ಪುಷ್ಪವನ್ನು ನೀಡಿ ಗೌರವಿಸಲಾಗುವುದು. ಬೇರೆ ಬೇರೆ ಚಾಲಕರು ಇಂಧನ ಉಳಿತಾಯ ಮಾಡಿದ್ದು ಘಟಕಕ್ಕೆ ಅಧಿಕ ಆದಾಯ ತಂದಿದ್ದಾರೆ. ಶಕ್ತಿ ಯೋಜನೆಯಿಂದ ಘಟಕಕ್ಕೆ ₹ 54 ಲಕ್ಷ ಆದಾಯವಾಗಿದೆ ’ ಎಂದು ಅವರು ಹೇಳಿದರು.</p>.<p>ಅಪಘಾತ ರಹಿತ ಪ್ರಯಾಣಕ್ಕಾಗಿ ಬಸ್ ನಿಲ್ದಾಣದಲ್ಲಿ ಮತ್ತು ಊರಲ್ಲಿ ಬಸ್ ಬಂದಾಗ ಗದ್ದಲ ಮಾಡದೇ ತಾಳ್ಮೆ ಸಹನೆಯಿಂದ ಬಸ್ ಸಂಚಾರ ಮಾಡಿ ಎಂದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.</p>.<p>ಬೀಳಗಿ ಘಟಕದ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿದ್ದಾಗ ರಾಜ್ಯ ಮಟ್ಟದ ಇಂಧನ ಉಳಿತಾಯ ಪ್ರಶಸ್ತಿ ಮತ್ತು ಪಿಸಿಆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.</p>.<p>‘ ನಮ್ಮ ಘಟಕಕ್ಕೆ ಅಶೋಕ ಕೋರಿ ವ್ಯವಸ್ಥಾಪಕರಾಗಿ ಬಂದ ನಂತರ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ ’ ಎಂದು ಚಾಲಕ ಬಸವರಾಜ ಹೊದ್ಲೂರ ಮತ್ತು ನಿರ್ವಾಹಕ ನಾಗರಾಜ ಅಂಬಿಗೇರ ಪ್ರತಿಕ್ರಿಯಿಸಿದರು.</p>.<p>‘ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಮತ್ತು ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಸಹಕಾರದಿಂದ ಐತಿಹಾಸಿಕ ಬಾದಾಮಿ ರಸ್ತೆ ಸಾರಿಗೆ ಘಟಕವನ್ನು ರಾಜ್ಯದಲ್ಲಿಯೇ ಮಾದರಿ ಘಟಕವನ್ನಾಗಿ ರೂಪಿಸುವ ಯೋಜನೆ ಇದೆ ’ ಎಂದು ಘಟಕ ವ್ಯವಸ್ಥಾಪಕ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>