<p><strong>ಬಾದಾಮಿ:</strong> ಸಮೀಪದ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರವಾದ ಮಹಾಕೂಟೇಶ್ವರ ಮತ್ತು ಶಿವಯೋಗಮಂದಿರಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಮತ್ತು ಅತಿಥಿಗೃಹಗಳು ಬೀಗ ಹಾಕಿದ್ದು, ಯಾರಿಗೂ ಉಪಯೋಗಕ್ಕೆ ಬಾರದಂತಾಗಿವೆ.</p>.<p>ಮಹಾಕೂಟೇಶ್ವರ ದೇವಾಲಯದ ಸಮೀಪ 10 ವರ್ಷಗಳ ಹಿಂದೆಯೇ ಯಾತ್ರಿ ನಿವಾಸ ಕಟ್ಟಡಕ್ಕೆ ಅಂದಾಜು ₹2 ಕೋಟಿ ವೆಚ್ಚದ ಎಂಟು ಕೊಠಡಿಗಳನ್ನು ಮತ್ತು ಶಿವಯೋಗಮಂದಿರದಲ್ಲಿ 8 ವಿ.ಐ.ಪಿ ವಸತಿ ಕೊಠಡಿಗಳನ್ನು 2021ರಲ್ಲಿಯೇ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದೆ.</p>.<p>ಶಿವಯೋಗಮಂದಿರದ ಬಳಿ ಅಂದಾಜು ₹1 ಕೋಟಿ ಮೊತ್ತದಲ್ಲಿ ನಿರ್ಮಿಸಿದ ಅತಿಥಿಗೃಹವನ್ನು ಜುಲೈ 2021ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಚಿವ ಗೋವಿಂದ ಕಾರಜೋಳ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.</p>.<p>‘ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ವಸತಿ ಗೃಹಕ್ಕೆ ಹಾಕಿದ ಬೀಗ ಮುರಿದಿದೆ. ಯಾರು ಬೇಕಾದರೂ ಒಳಗೆ ಹೋಗಬಹುದಾಗಿದೆ. ಇಲ್ಲಿ ಕಾವಲುಗಾರರೂ ಇಲ್ಲ. ವಸತಿ ಗೃಹಕ್ಕೆ ನೀರು ಪೂರೈಕೆ ಇಲ್ಲದ್ದರಿಂದ ಯಾರೂ ಬಂದಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದರು.</p>.<p>ವಿಐಪಿ ಕೊಠಡಿಯಲ್ಲಿ ಲಕ್ಷಾಂತರ ಮೌಲ್ಯದ ಫರ್ನಿಚರ್, ಹಾಸಿಗೆ, ಹೊದಿಕೆಗಳು ಬಳಸದೇ ಹಾಗೇ ಬಿದ್ದಿವೆ. ಕೊಠಡಿಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೊಠಡಿಗಳಲ್ಲಿ ಆಗಾಗ ಹಾವು, ಚೇಳುಗಳು ಕಾಣಿಸಿಕೊಳ್ಳುತ್ತವೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ವಸತಿ ಕಟ್ಟಡಗಳು ಉಪಯೋಗಕ್ಕೆ ಬಾರದಂತಾಗಿದೆ.</p>.<p>‘ಸರ್ಕಾರದ ಅನುದಾನದಿಂದ ನಿರ್ಮಿಸಿದ ಕಟ್ಟಡಗಳು ಲೋಕೋಪಯೋಗಿ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಮಹಾಕೂಟದ ಯಾತ್ರಿ ನಿವಾಸ ಮತ್ತು ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ಕೊಠಡಿಗಳ ಪ್ರವಾಸಿ ಮಂದಿರ ಭೂತಬಂಗಲೆಗಳಾಗಿವೆ’ ಎಂದು ಸ್ಥಳೀಯರಾದ ಮಹಾಗುಂಡಪ್ಪ ಆರೋಪಿಸಿದರು.</p>.<p>‘ಶಿವಯೋಗಮಂದಿರ ಮತ್ತು ಮಹಾಕೂಟಕ್ಕೆ ಅನೇಕ ಪ್ರವಾಸಿಗರು ಮತ್ತು ಭಕ್ತರು ಬರುವರು. ಪ್ರವಾಸಿ ಮಂದಿರಕ್ಕೆ ನೀರಿನ ಸೌಲಭ್ಯ ಕಲ್ಪಿಸಿ, ಕಾಯಂ ನೌಕರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.</p>.<p>ಈ ಕುರಿತು ಲೋಕೋಪಯೋಗಿ ಇಲಾಖೆಯನ್ನು ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ.</p>.<div><blockquote> ಶಿವಯೋಗಮಂದಿರ ಮತ್ತು ಮಹಾಕೂಟ ಪ್ರವಾಸಿ ಮಂದಿರದಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ. </blockquote><span class="attribution">ರಾಜು ಮ್ಯಾನೇಜರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಸಮೀಪದ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರವಾದ ಮಹಾಕೂಟೇಶ್ವರ ಮತ್ತು ಶಿವಯೋಗಮಂದಿರಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಮತ್ತು ಅತಿಥಿಗೃಹಗಳು ಬೀಗ ಹಾಕಿದ್ದು, ಯಾರಿಗೂ ಉಪಯೋಗಕ್ಕೆ ಬಾರದಂತಾಗಿವೆ.</p>.<p>ಮಹಾಕೂಟೇಶ್ವರ ದೇವಾಲಯದ ಸಮೀಪ 10 ವರ್ಷಗಳ ಹಿಂದೆಯೇ ಯಾತ್ರಿ ನಿವಾಸ ಕಟ್ಟಡಕ್ಕೆ ಅಂದಾಜು ₹2 ಕೋಟಿ ವೆಚ್ಚದ ಎಂಟು ಕೊಠಡಿಗಳನ್ನು ಮತ್ತು ಶಿವಯೋಗಮಂದಿರದಲ್ಲಿ 8 ವಿ.ಐ.ಪಿ ವಸತಿ ಕೊಠಡಿಗಳನ್ನು 2021ರಲ್ಲಿಯೇ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದೆ.</p>.<p>ಶಿವಯೋಗಮಂದಿರದ ಬಳಿ ಅಂದಾಜು ₹1 ಕೋಟಿ ಮೊತ್ತದಲ್ಲಿ ನಿರ್ಮಿಸಿದ ಅತಿಥಿಗೃಹವನ್ನು ಜುಲೈ 2021ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಚಿವ ಗೋವಿಂದ ಕಾರಜೋಳ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.</p>.<p>‘ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ವಸತಿ ಗೃಹಕ್ಕೆ ಹಾಕಿದ ಬೀಗ ಮುರಿದಿದೆ. ಯಾರು ಬೇಕಾದರೂ ಒಳಗೆ ಹೋಗಬಹುದಾಗಿದೆ. ಇಲ್ಲಿ ಕಾವಲುಗಾರರೂ ಇಲ್ಲ. ವಸತಿ ಗೃಹಕ್ಕೆ ನೀರು ಪೂರೈಕೆ ಇಲ್ಲದ್ದರಿಂದ ಯಾರೂ ಬಂದಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದರು.</p>.<p>ವಿಐಪಿ ಕೊಠಡಿಯಲ್ಲಿ ಲಕ್ಷಾಂತರ ಮೌಲ್ಯದ ಫರ್ನಿಚರ್, ಹಾಸಿಗೆ, ಹೊದಿಕೆಗಳು ಬಳಸದೇ ಹಾಗೇ ಬಿದ್ದಿವೆ. ಕೊಠಡಿಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೊಠಡಿಗಳಲ್ಲಿ ಆಗಾಗ ಹಾವು, ಚೇಳುಗಳು ಕಾಣಿಸಿಕೊಳ್ಳುತ್ತವೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ವಸತಿ ಕಟ್ಟಡಗಳು ಉಪಯೋಗಕ್ಕೆ ಬಾರದಂತಾಗಿದೆ.</p>.<p>‘ಸರ್ಕಾರದ ಅನುದಾನದಿಂದ ನಿರ್ಮಿಸಿದ ಕಟ್ಟಡಗಳು ಲೋಕೋಪಯೋಗಿ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಮಹಾಕೂಟದ ಯಾತ್ರಿ ನಿವಾಸ ಮತ್ತು ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ಕೊಠಡಿಗಳ ಪ್ರವಾಸಿ ಮಂದಿರ ಭೂತಬಂಗಲೆಗಳಾಗಿವೆ’ ಎಂದು ಸ್ಥಳೀಯರಾದ ಮಹಾಗುಂಡಪ್ಪ ಆರೋಪಿಸಿದರು.</p>.<p>‘ಶಿವಯೋಗಮಂದಿರ ಮತ್ತು ಮಹಾಕೂಟಕ್ಕೆ ಅನೇಕ ಪ್ರವಾಸಿಗರು ಮತ್ತು ಭಕ್ತರು ಬರುವರು. ಪ್ರವಾಸಿ ಮಂದಿರಕ್ಕೆ ನೀರಿನ ಸೌಲಭ್ಯ ಕಲ್ಪಿಸಿ, ಕಾಯಂ ನೌಕರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.</p>.<p>ಈ ಕುರಿತು ಲೋಕೋಪಯೋಗಿ ಇಲಾಖೆಯನ್ನು ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ.</p>.<div><blockquote> ಶಿವಯೋಗಮಂದಿರ ಮತ್ತು ಮಹಾಕೂಟ ಪ್ರವಾಸಿ ಮಂದಿರದಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ. </blockquote><span class="attribution">ರಾಜು ಮ್ಯಾನೇಜರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>