<p><strong>ಬಾಗಲಕೋಟೆ</strong>: ಮುಂಗಾರು ಮಳೆ ವಿಳಂಬವಾಗಿ ಬಂದಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 2.65 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಆ ಪೈಕಿ 1.78 ಲಕ್ಷ ಹೆಕ್ಟೇರ್ (ಶೇ67.40ರಷ್ಟು) ಬಿತ್ತನೆಯಾಗಿದೆ. ಅದರಲ್ಲಿ 1.19 ಲಕ್ಷ ಹೆಕ್ಟೇರ್ ಕಬ್ಬು ಹೊರತುಪಡಿಸಿದರೆ, ಉಳಿದ ಬೆಳೆಗಳೆಲ್ಲ ಸೇರಿದರೂ ಕೇವಲ 59 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.</p>.<p>ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದ ಗೋವಿನ ಜೋಳ 42 ಸಾವಿರ್ ಹೆಕ್ಟೇರ್ ಗುರಿಯಲ್ಲಿ 25,904 ಹೆಕ್ಟೇರ್, ಸಜ್ಜೆಯ 30,250 ಹೆಕ್ಟೇರ್ ಗುರಿಯಲ್ಲಿ 7,244 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.</p>.<p>ಹೆಸರು ಕಾಳು ಬಿತ್ತನೆ ಗುರಿ 20,250 ಹೆಕ್ಟೇರ್ ಪೈಕಿ ಕೇವಲ 6,819 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇದರ ಬಿತ್ತನೆಯ ಮಿತಿ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಸಾಧ್ಯವಿಲ್ಲ.</p>.<p>36,330 ಹೆಕ್ಟೇರ್ ಗುರಿ ಹೊಂದಿದ್ದ ತೊಗರಿ ಪೈಕಿ 12,374 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇಲ್ಲಿಯವರೆಗೆ 24,550 ಹೆಕ್ಟೇರ್ ಗುರಿ ಹೊಂದಿದ್ದ ಸೂರ್ಯಕಾಂತಿಯಲ್ಲಿ ಕೇವಲ 4,320 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.</p>.<p>ಜಿಲ್ಲೆಯಲ್ಲಿ 93,250 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 1.19 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. </p>.<p>ಮಳೆ ಕೊರತೆಯಿಂದಾಗಿ ಜಮಖಂಡಿ, ರಬಕವಿ ಬನಹಟ್ಟಿ ಭಾಗದಲ್ಲಿ ಕಬ್ಬು ಬೆಳೆ ಹಾಳಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಳೆ ಸುರಿದಿದೆ. ಜತೆಗೆ ನದಿಗಳೂ ತುಂಬಿ ಹರಿಯುತ್ತಿರುವುದರಿಂದ ಕಬ್ಬು ಬೆಳೆಗಾರರ ಆತಂಕ ದೂರವಾಗಿದೆ.</p>.<p>ಮುಧೋಳ ತಾಲ್ಲೂಕಿನಲ್ಲಿ 33,697, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 18 ಸಾವಿರ, ಜಮಖಂಡಿ ತಾಲ್ಲೂಕಿನಲ್ಲಿ 27,500, ಬೀಳಗಿ ತಾಲ್ಲೂಕಿನಲ್ಲಿ 15,170 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.</p>.<p>ಮುಧೋಳ ತಾಲ್ಲೂಕಿನ 40,600 ಹೆಕ್ಟೇರ್ ಗುರಿಯಲ್ಲಿ 36,500 ಹೆಕ್ಟೇರ್, ರಬಕವಿ ಬನಹಟ್ಟಿಯಲ್ಲಿ 22,250 ಹೆಕ್ಟೇರ್ ಗುರಿಯಲ್ಲಿ 19,750 ಹೆಕ್ಟೇರ್, ಜಮಖಂಡಿಯ 30,277 ಗುರಿಯಲ್ಲಿ 22,250 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.</p>.<p>ಇಳಕಲ್ ತಾಲ್ಲೂಕಿನ 25,100 ಗುರಿಯಲ್ಲಿ ಕೇವಲ 6,705 ಹೆಕ್ಟೇರ್, ಹುನಗುಂದದ 27,275 ಗುರಿಯಲ್ಲಿ 6,535 ಹೆಕ್ಟೇರ್, ಬೀಳಗಿಯ 24,425 ಹೆಕ್ಟೇರ್ನಲ್ಲಿ 19,070 ಹೆಕ್ಟೇರ್, ಬಾಗಲಕೋಟೆಯ 25 ಸಾವಿರ ಹೆಕ್ಟೇರ್ ಗುರಿಯಲ್ಲಿ 13,455 ಹೆಕ್ಟೇರ್ ಬಿತ್ತನೆಯಾಗಿದೆ.</p>.<p>‘ಸರಿಯಾದ ಸಮಯದಲ್ಲಿ ಮಳೆಯಾಗದ್ದರಿಂದ ಬಿತ್ತನೆಯೇ ಸಾಧ್ಯವಾಗಿಲ್ಲ. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಬಿತ್ತನೆ ಮಾಡಲಾಗಲಿಲ್ಲ’ ಎನ್ನುತ್ತಾರೆ ಕರಡಿಯ ಹನುಮಂತಪ್ಪ. ವಾರದ ಹಿಂದೆ ಉತ್ತಮ ಮಳೆಯಾಗಿರುವುದರಿಂದ ಗೋವಿನ ಜೋಳ, ತೊಗರಿ ಬಿತ್ತನೆ ಕಾರ್ಯ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಮುಂಗಾರು ಮಳೆ ವಿಳಂಬವಾಗಿ ಬಂದಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 2.65 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಆ ಪೈಕಿ 1.78 ಲಕ್ಷ ಹೆಕ್ಟೇರ್ (ಶೇ67.40ರಷ್ಟು) ಬಿತ್ತನೆಯಾಗಿದೆ. ಅದರಲ್ಲಿ 1.19 ಲಕ್ಷ ಹೆಕ್ಟೇರ್ ಕಬ್ಬು ಹೊರತುಪಡಿಸಿದರೆ, ಉಳಿದ ಬೆಳೆಗಳೆಲ್ಲ ಸೇರಿದರೂ ಕೇವಲ 59 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.</p>.<p>ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದ ಗೋವಿನ ಜೋಳ 42 ಸಾವಿರ್ ಹೆಕ್ಟೇರ್ ಗುರಿಯಲ್ಲಿ 25,904 ಹೆಕ್ಟೇರ್, ಸಜ್ಜೆಯ 30,250 ಹೆಕ್ಟೇರ್ ಗುರಿಯಲ್ಲಿ 7,244 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.</p>.<p>ಹೆಸರು ಕಾಳು ಬಿತ್ತನೆ ಗುರಿ 20,250 ಹೆಕ್ಟೇರ್ ಪೈಕಿ ಕೇವಲ 6,819 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇದರ ಬಿತ್ತನೆಯ ಮಿತಿ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಸಾಧ್ಯವಿಲ್ಲ.</p>.<p>36,330 ಹೆಕ್ಟೇರ್ ಗುರಿ ಹೊಂದಿದ್ದ ತೊಗರಿ ಪೈಕಿ 12,374 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇಲ್ಲಿಯವರೆಗೆ 24,550 ಹೆಕ್ಟೇರ್ ಗುರಿ ಹೊಂದಿದ್ದ ಸೂರ್ಯಕಾಂತಿಯಲ್ಲಿ ಕೇವಲ 4,320 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.</p>.<p>ಜಿಲ್ಲೆಯಲ್ಲಿ 93,250 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 1.19 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. </p>.<p>ಮಳೆ ಕೊರತೆಯಿಂದಾಗಿ ಜಮಖಂಡಿ, ರಬಕವಿ ಬನಹಟ್ಟಿ ಭಾಗದಲ್ಲಿ ಕಬ್ಬು ಬೆಳೆ ಹಾಳಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಳೆ ಸುರಿದಿದೆ. ಜತೆಗೆ ನದಿಗಳೂ ತುಂಬಿ ಹರಿಯುತ್ತಿರುವುದರಿಂದ ಕಬ್ಬು ಬೆಳೆಗಾರರ ಆತಂಕ ದೂರವಾಗಿದೆ.</p>.<p>ಮುಧೋಳ ತಾಲ್ಲೂಕಿನಲ್ಲಿ 33,697, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 18 ಸಾವಿರ, ಜಮಖಂಡಿ ತಾಲ್ಲೂಕಿನಲ್ಲಿ 27,500, ಬೀಳಗಿ ತಾಲ್ಲೂಕಿನಲ್ಲಿ 15,170 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.</p>.<p>ಮುಧೋಳ ತಾಲ್ಲೂಕಿನ 40,600 ಹೆಕ್ಟೇರ್ ಗುರಿಯಲ್ಲಿ 36,500 ಹೆಕ್ಟೇರ್, ರಬಕವಿ ಬನಹಟ್ಟಿಯಲ್ಲಿ 22,250 ಹೆಕ್ಟೇರ್ ಗುರಿಯಲ್ಲಿ 19,750 ಹೆಕ್ಟೇರ್, ಜಮಖಂಡಿಯ 30,277 ಗುರಿಯಲ್ಲಿ 22,250 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.</p>.<p>ಇಳಕಲ್ ತಾಲ್ಲೂಕಿನ 25,100 ಗುರಿಯಲ್ಲಿ ಕೇವಲ 6,705 ಹೆಕ್ಟೇರ್, ಹುನಗುಂದದ 27,275 ಗುರಿಯಲ್ಲಿ 6,535 ಹೆಕ್ಟೇರ್, ಬೀಳಗಿಯ 24,425 ಹೆಕ್ಟೇರ್ನಲ್ಲಿ 19,070 ಹೆಕ್ಟೇರ್, ಬಾಗಲಕೋಟೆಯ 25 ಸಾವಿರ ಹೆಕ್ಟೇರ್ ಗುರಿಯಲ್ಲಿ 13,455 ಹೆಕ್ಟೇರ್ ಬಿತ್ತನೆಯಾಗಿದೆ.</p>.<p>‘ಸರಿಯಾದ ಸಮಯದಲ್ಲಿ ಮಳೆಯಾಗದ್ದರಿಂದ ಬಿತ್ತನೆಯೇ ಸಾಧ್ಯವಾಗಿಲ್ಲ. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಬಿತ್ತನೆ ಮಾಡಲಾಗಲಿಲ್ಲ’ ಎನ್ನುತ್ತಾರೆ ಕರಡಿಯ ಹನುಮಂತಪ್ಪ. ವಾರದ ಹಿಂದೆ ಉತ್ತಮ ಮಳೆಯಾಗಿರುವುದರಿಂದ ಗೋವಿನ ಜೋಳ, ತೊಗರಿ ಬಿತ್ತನೆ ಕಾರ್ಯ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>