<p><strong>ಬಾಗಲಕೋಟೆ:</strong> ಹಲವು ವರ್ಷಗಳ ಬೇಡಿಕೆ ಆಗಿದ್ದ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಹುದೊಡ್ಡ ಕನಸನ್ನು ಶಾಸಕ ಎಚ್.ವೈ. ಮೇಟಿ ಈಡೇರಿಸಿದ್ದು, ₹450 ಕೋಟಿ ಮಂಜೂರಾತಿಗೆ ಸರ್ಕಾರ ಅನುಮೋದನೆ ನೀಡಿದೆ. </p>.<p><strong>₹450 ಕೋಟಿ ಮಂಜೂರು:</strong> ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬಲ್ಲ, ವ್ಯಾಪಾರ-ವಹಿವಾಟಿಗೆ ನೆರವಾಗಲಿರುವ, ಸರ್ಕಾರಿ ಶುಲ್ಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗುವ ₹150 ಸೀಟುಗಳ ವೈದ್ಯಕೀಯ ಕಾಲೇಜು ನವನಗರದ ಯುನಿಟ್-1ರ ಸೆಕ್ಟರ್ ನಂ.1 ಮತ್ತು 13ರಲ್ಲಿ ತಲೆ ಎತ್ತಲಿದೆ. </p>.<p><strong>ಮಾದರಿ ಕ್ಷೇತ್ರ:</strong> ಬಾಗಲಕೋಟೆ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಶಾಸಕರು, ಹಲವಾರು ಯೋಜನೆ ಕ್ಷೇತ್ರಕ್ಕೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿಗೆ ಹಣ ಇಲ್ಲ ಎಂಬ ಆರೋಪಗಳ ಮಧ್ಯೆಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ, ಕಳೆದ ವರ್ಷ ಇದೇ ಯೋಜನೆಯಡಿ ₹12.50 ಕೋಟಿ ಅನುದಾನ ತಂದಿದ್ದಾರೆ. ಎಲ್ಲ ಧರ್ಮ-ಜಾತಿಗಳ ಸಮುದಾಯ ಭವನಕ್ಕೆ ಅನುದಾನ ಒದಗಿಸಿದ್ದಾರೆ. </p>.<p>ಹೆದ್ದಾರಿ-ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಬಾಗಲಕೋಟೆ-ನೀರಲಕೇರಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ₹20 ಕೋಟಿ, ಅಚನೂರ ಕ್ರಾಸ್ದಿಂದ ಆಲಮಟ್ಟಿವರೆಗೆ ಹೆದ್ದಾರಿ ಅಗಲೀಕರಣ-ದುರಸ್ತಿಗೆ ₹37 ಕೋಟಿ, ಕ್ಷೇತ್ರದ 18 ಗ್ರಾಮಗಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ, ₹14 ಕೋಟಿ ವೆಚ್ಚದಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಬಾಗಲಕೋಟೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ₹6.25 ಕೋಟಿ ವೆಚ್ಚದ ನಾಲ್ಕು ಮಹಡಿಯ ವಸತಿ ನಿಲಯ, ನವನಗರ, ವಿದ್ಯಾಗಿರಿ ಹಾಗೂ ಬಾಗಲಕೋಟೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ನೆರವಾಗಲು ಬಿಟಿಡಿಎದಿಂದ ₹8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಐ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.</p>.<p><strong>ಆರು ಪಥದ ರಸ್ತೆ :</strong> ಬಾಗಲಕೋಟೆ ಎಪಿಎಂಸಿ ಕ್ರಾಸ್ನಿಂದ ಹೊನ್ನಾಕಟ್ಟಿ ಕ್ರಾಸ್ ವರೆಗೆ ರೈಲ್ವೆ ಓವರ್ ಬ್ರಿಜ್ ಸಹಿತ ಆರು ಪಥದ ರಸ್ತೆಯನ್ನಾಗಿ ನಿರ್ಮಿಸಲು ಬಿಟಿಡಿಎದಿಂದ ₹67 ಕೋಟಿ ಅನುದಾನ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.</p>.<p>ಕಮತಗಿಯ ಹೆದ್ದಾರಿಯಿಂದ ಪಟ್ಟಣದ ಸೇವಾಲಾಲ ಸಂಘದ ವರೆಗೆ ₹10 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಅಮೀನಗಡದ ಪಟ್ಟಣದಲ್ಲಿ ಹಾದಿ ಬಸವೇಶ್ವರ ದೇವಾಲಯದಿಂದ ಚಿತ್ತರಗಿ ಕ್ರಾಸ್ವರೆಗೆ ರಸ್ತೆ ಅಗಲೀಕರಣಕ್ಕೆ ₹5 ಕೋಟಿ, ಕಳ್ಳಿಗುಡ್ಡ-ಕ್ರಾಸ್ದಿಂದ ಐಹೊಳೆವರೆಗೆ ರಸ್ತೆ ಅಗಲೀಕರಣಕ್ಕೆ ₹3 ಕೋಟಿ ಅನುದಾನ ತಂದಿದ್ದಾರೆ.</p>.<p><strong>ಜನಸಂಪರ್ಕ ಕಚೇರಿಯಲ್ಲಿ ಸೌಲಭ್ಯ ವಿತರಣೆ</strong> </p><p>ಶಾಸಕ ಎಚ್.ವೈ. ಮೇಟಿ ಜನ್ಮದಿನದ ಪ್ರಯುಕ್ತ ಬುಧವಾರ ₹25 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ಬಡ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಣೆ ನಡೆಯಲಿದೆ. ಶಿರೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹3 ಕೋಟಿ ಮೊತ್ತದಲ್ಲಿ ತರಗತಿ ಕೊಠಡಿಗಳು ಹಾಗೂ ಗ್ರಂಥಾಲಯ ನಿರ್ಮಾಣದ ಭೂಮಿಪೂಜೆ ಬಿಟಿಡಿಎದಿಂದ ₹8 ಕೋಟಿ ಮೊತ್ತದಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗಳಿಗೆ ಚಾಲನೆ ಜಿ.ಪಂ.ನಿಂದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಚಾಲನೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನವನಗರದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ನಡೆಯಲಿವೆ. </p>.<div><blockquote>ಬಾಗಲಕೋಟೆ ಕ್ಷೇತ್ರ ಮಾದರಿಯಾಗಿ ಮಾಡಬೇಕು ಅದಕ್ಕಾಗಿ ಬೇಕಾದ ಎಲ್ಲ ಪ್ರಯತ್ನ ಮಾಡುತ್ತಿರುವೆ. ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮೂಲಕ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬ ಗುರಿ ಇದೆ. </blockquote><span class="attribution">-ಎಚ್.ವೈ. ಮೇಟಿ ಶಾಸಕ ಅಧ್ಯಕ್ಷ ಬಿಟಿಡಿಎ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಹಲವು ವರ್ಷಗಳ ಬೇಡಿಕೆ ಆಗಿದ್ದ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಹುದೊಡ್ಡ ಕನಸನ್ನು ಶಾಸಕ ಎಚ್.ವೈ. ಮೇಟಿ ಈಡೇರಿಸಿದ್ದು, ₹450 ಕೋಟಿ ಮಂಜೂರಾತಿಗೆ ಸರ್ಕಾರ ಅನುಮೋದನೆ ನೀಡಿದೆ. </p>.<p><strong>₹450 ಕೋಟಿ ಮಂಜೂರು:</strong> ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬಲ್ಲ, ವ್ಯಾಪಾರ-ವಹಿವಾಟಿಗೆ ನೆರವಾಗಲಿರುವ, ಸರ್ಕಾರಿ ಶುಲ್ಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗುವ ₹150 ಸೀಟುಗಳ ವೈದ್ಯಕೀಯ ಕಾಲೇಜು ನವನಗರದ ಯುನಿಟ್-1ರ ಸೆಕ್ಟರ್ ನಂ.1 ಮತ್ತು 13ರಲ್ಲಿ ತಲೆ ಎತ್ತಲಿದೆ. </p>.<p><strong>ಮಾದರಿ ಕ್ಷೇತ್ರ:</strong> ಬಾಗಲಕೋಟೆ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಶಾಸಕರು, ಹಲವಾರು ಯೋಜನೆ ಕ್ಷೇತ್ರಕ್ಕೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿಗೆ ಹಣ ಇಲ್ಲ ಎಂಬ ಆರೋಪಗಳ ಮಧ್ಯೆಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ, ಕಳೆದ ವರ್ಷ ಇದೇ ಯೋಜನೆಯಡಿ ₹12.50 ಕೋಟಿ ಅನುದಾನ ತಂದಿದ್ದಾರೆ. ಎಲ್ಲ ಧರ್ಮ-ಜಾತಿಗಳ ಸಮುದಾಯ ಭವನಕ್ಕೆ ಅನುದಾನ ಒದಗಿಸಿದ್ದಾರೆ. </p>.<p>ಹೆದ್ದಾರಿ-ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಬಾಗಲಕೋಟೆ-ನೀರಲಕೇರಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ₹20 ಕೋಟಿ, ಅಚನೂರ ಕ್ರಾಸ್ದಿಂದ ಆಲಮಟ್ಟಿವರೆಗೆ ಹೆದ್ದಾರಿ ಅಗಲೀಕರಣ-ದುರಸ್ತಿಗೆ ₹37 ಕೋಟಿ, ಕ್ಷೇತ್ರದ 18 ಗ್ರಾಮಗಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ, ₹14 ಕೋಟಿ ವೆಚ್ಚದಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಬಾಗಲಕೋಟೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ₹6.25 ಕೋಟಿ ವೆಚ್ಚದ ನಾಲ್ಕು ಮಹಡಿಯ ವಸತಿ ನಿಲಯ, ನವನಗರ, ವಿದ್ಯಾಗಿರಿ ಹಾಗೂ ಬಾಗಲಕೋಟೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ನೆರವಾಗಲು ಬಿಟಿಡಿಎದಿಂದ ₹8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಐ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.</p>.<p><strong>ಆರು ಪಥದ ರಸ್ತೆ :</strong> ಬಾಗಲಕೋಟೆ ಎಪಿಎಂಸಿ ಕ್ರಾಸ್ನಿಂದ ಹೊನ್ನಾಕಟ್ಟಿ ಕ್ರಾಸ್ ವರೆಗೆ ರೈಲ್ವೆ ಓವರ್ ಬ್ರಿಜ್ ಸಹಿತ ಆರು ಪಥದ ರಸ್ತೆಯನ್ನಾಗಿ ನಿರ್ಮಿಸಲು ಬಿಟಿಡಿಎದಿಂದ ₹67 ಕೋಟಿ ಅನುದಾನ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.</p>.<p>ಕಮತಗಿಯ ಹೆದ್ದಾರಿಯಿಂದ ಪಟ್ಟಣದ ಸೇವಾಲಾಲ ಸಂಘದ ವರೆಗೆ ₹10 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಅಮೀನಗಡದ ಪಟ್ಟಣದಲ್ಲಿ ಹಾದಿ ಬಸವೇಶ್ವರ ದೇವಾಲಯದಿಂದ ಚಿತ್ತರಗಿ ಕ್ರಾಸ್ವರೆಗೆ ರಸ್ತೆ ಅಗಲೀಕರಣಕ್ಕೆ ₹5 ಕೋಟಿ, ಕಳ್ಳಿಗುಡ್ಡ-ಕ್ರಾಸ್ದಿಂದ ಐಹೊಳೆವರೆಗೆ ರಸ್ತೆ ಅಗಲೀಕರಣಕ್ಕೆ ₹3 ಕೋಟಿ ಅನುದಾನ ತಂದಿದ್ದಾರೆ.</p>.<p><strong>ಜನಸಂಪರ್ಕ ಕಚೇರಿಯಲ್ಲಿ ಸೌಲಭ್ಯ ವಿತರಣೆ</strong> </p><p>ಶಾಸಕ ಎಚ್.ವೈ. ಮೇಟಿ ಜನ್ಮದಿನದ ಪ್ರಯುಕ್ತ ಬುಧವಾರ ₹25 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ಬಡ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಣೆ ನಡೆಯಲಿದೆ. ಶಿರೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹3 ಕೋಟಿ ಮೊತ್ತದಲ್ಲಿ ತರಗತಿ ಕೊಠಡಿಗಳು ಹಾಗೂ ಗ್ರಂಥಾಲಯ ನಿರ್ಮಾಣದ ಭೂಮಿಪೂಜೆ ಬಿಟಿಡಿಎದಿಂದ ₹8 ಕೋಟಿ ಮೊತ್ತದಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗಳಿಗೆ ಚಾಲನೆ ಜಿ.ಪಂ.ನಿಂದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಚಾಲನೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನವನಗರದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ನಡೆಯಲಿವೆ. </p>.<div><blockquote>ಬಾಗಲಕೋಟೆ ಕ್ಷೇತ್ರ ಮಾದರಿಯಾಗಿ ಮಾಡಬೇಕು ಅದಕ್ಕಾಗಿ ಬೇಕಾದ ಎಲ್ಲ ಪ್ರಯತ್ನ ಮಾಡುತ್ತಿರುವೆ. ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮೂಲಕ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬ ಗುರಿ ಇದೆ. </blockquote><span class="attribution">-ಎಚ್.ವೈ. ಮೇಟಿ ಶಾಸಕ ಅಧ್ಯಕ್ಷ ಬಿಟಿಡಿಎ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>