ಹಿಪ್ಪರಗಿ ಗ್ರಾಮದಲ್ಲಿ ಆನಂದ ನ್ಯಾಮಗೌಡ ಪ್ರತಿಭಟನೆ ಆರಂಭಿಸಿದ್ದಾರೆ. ಅವರಿಗೆ ನದಿ ಪಾತ್ರದ ಹಳ್ಳಿಗಳ ನೂರಾರು ರೈತರು ಸಾಥ್ ನೀಡಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಈಗ ಲಾಕ್ ಡೌನ್ ಆದೇಶವಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವುದು ಸಲ್ಲ. ಇದರಿಂದ ನಮ್ಮೂರಿನ ಸುರಕ್ಷತೆಗೆ ಧಕ್ಕೆಯಾಗಲಿದೆ. ಕೊರೊನಾ ಹರಡುವ ಸಾಧ್ಯತೆಯೂ ಇದೆ. ಬೇಕಿದ್ದರೆ ನೀವು ಬೇರೆ ಕಡೆ ಪ್ರತಿಭಟನೆ ನಡೆಸಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.