<p><strong>ಕೂಡಲಸಂಗಮ:</strong> ‘ಹಿಂದೂಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ. ಬಸವ-ಅಂಬೇಡ್ಕರರ ಬೀಜವನ್ನು ಮನೆ ಮನದಲ್ಲಿ ಬಿತ್ತಿದರೆ ಹಿಂದೂತ್ವದ ಬೀಜ ನಾಶವಾಗುವುದು’ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.</p>.<p>ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಸವ-ಭೀಮ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ಬಂಧುತ್ವಕ್ಕೆ ಬೆಂಕಿ ಹಚ್ಚಿದ ಹಿಂದೂತ್ವ ಬೇಡ. ಹಿಂದೂತ್ವ ಕೇವಲ ಮತಬ್ಯಾಂಕ್ ಆಗಿದೆ. ಬಸವ-ಭೀಮರ ಸಂಗಮವಾದರೆ ವಿಧಾನಸೌಧ, ಕೆಂಪುಕೋಟೆ ಬಸವ-ಭೀಮರ ಪಾಲಾಗುವುದು . ಬಸವಣ್ಣನ ಅನುಯಾಯಿಗಳು ಹಿಂದೂತ್ವದ ಬೀಜ ನಾವು ಅಲ್ಲ, ಬಂಧುತ್ವದ ಬೀಜಗಳು ಎಂದು ಪ್ರತಿಜ್ಞೆ ಮಾಡಿ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಮಾತನಾಡಿ, ‘ ಧರ್ಮಕ್ಕೆ ಮಾನವೀಯತೆ ಅಗತ್ಯ. ದಯೆ, ಜನಕಾಳಜಿ, ಸಮಾನತೆಯಂಥ ತತ್ವಗಳ ನೆಲೆಗಟ್ಟಿನ ಮೇಲೆ ಬಸವಣ್ಣನ ವಿಚಾರಗಳಿದ್ದು ಅದರ ಅಳವಡಿಕೆಯೇ ಭಾರತ ಸಂವಿಧಾನ. ಬಸವ-ಭೀಮರ ವಿಚಾರಧಾರೆಯ ಬಂಧುತ್ವ ಅನುಕರಣೆ ಇರಲಿ’ ಎಂದು ತಿಳಿಸಿದರು. </p>.<p>ಸತ್ಯಶೋಧಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ವೈದಿಕರು ವೇದಗಳ ಮೂಲಕ ಸಮಾಜ ಒಡೆಯುವ ಕಾರ್ಯ ಮಾಡಿದರು, ಸಮಾನತೆಯ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಬಸವಣ್ಣನವರು ಮಾಡಿದರು. ಬಲಪಂಥಿಯ ಸಿದ್ಧಾಂತ ರಾಜಕಾರಣದಿಂದ ಇಂದು ಬಸವ– ಭೀಮರ ವಿಚಾರಗಳು ಭಾವಚಿತ್ರಕ್ಕೆ ಸಿಮೀತಗೊಂಡಿದ್ದು, ಚಿಂತನೆಯಲ್ಲಿ ಬರುತ್ತಿಲ್ಲ’ ಎಂದು ತಿಳಿಸಿದರು. </p>.<p>ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶರಣಪ್ಪ ಆಗಮದಿಹಾಳ, ಎಂ.ಗೋಪಿನಾಥನ, ಮಹಾಂತೇಶ ಅವಾರಿ, ಎಸ್.ಎಂ.ಪುರಾಣಿಕ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿಜಯಮಹಾಂತೇಶ ಗದ್ದನಕೇರಿ, ನಾಗರಾಜ ನಾಡಗೌಡ, ಶೇಖರಗೌಡ ಗೌಡರ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ:</strong> ‘ಹಿಂದೂಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ. ಬಸವ-ಅಂಬೇಡ್ಕರರ ಬೀಜವನ್ನು ಮನೆ ಮನದಲ್ಲಿ ಬಿತ್ತಿದರೆ ಹಿಂದೂತ್ವದ ಬೀಜ ನಾಶವಾಗುವುದು’ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.</p>.<p>ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಸವ-ಭೀಮ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ಬಂಧುತ್ವಕ್ಕೆ ಬೆಂಕಿ ಹಚ್ಚಿದ ಹಿಂದೂತ್ವ ಬೇಡ. ಹಿಂದೂತ್ವ ಕೇವಲ ಮತಬ್ಯಾಂಕ್ ಆಗಿದೆ. ಬಸವ-ಭೀಮರ ಸಂಗಮವಾದರೆ ವಿಧಾನಸೌಧ, ಕೆಂಪುಕೋಟೆ ಬಸವ-ಭೀಮರ ಪಾಲಾಗುವುದು . ಬಸವಣ್ಣನ ಅನುಯಾಯಿಗಳು ಹಿಂದೂತ್ವದ ಬೀಜ ನಾವು ಅಲ್ಲ, ಬಂಧುತ್ವದ ಬೀಜಗಳು ಎಂದು ಪ್ರತಿಜ್ಞೆ ಮಾಡಿ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಮಾತನಾಡಿ, ‘ ಧರ್ಮಕ್ಕೆ ಮಾನವೀಯತೆ ಅಗತ್ಯ. ದಯೆ, ಜನಕಾಳಜಿ, ಸಮಾನತೆಯಂಥ ತತ್ವಗಳ ನೆಲೆಗಟ್ಟಿನ ಮೇಲೆ ಬಸವಣ್ಣನ ವಿಚಾರಗಳಿದ್ದು ಅದರ ಅಳವಡಿಕೆಯೇ ಭಾರತ ಸಂವಿಧಾನ. ಬಸವ-ಭೀಮರ ವಿಚಾರಧಾರೆಯ ಬಂಧುತ್ವ ಅನುಕರಣೆ ಇರಲಿ’ ಎಂದು ತಿಳಿಸಿದರು. </p>.<p>ಸತ್ಯಶೋಧಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ವೈದಿಕರು ವೇದಗಳ ಮೂಲಕ ಸಮಾಜ ಒಡೆಯುವ ಕಾರ್ಯ ಮಾಡಿದರು, ಸಮಾನತೆಯ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಬಸವಣ್ಣನವರು ಮಾಡಿದರು. ಬಲಪಂಥಿಯ ಸಿದ್ಧಾಂತ ರಾಜಕಾರಣದಿಂದ ಇಂದು ಬಸವ– ಭೀಮರ ವಿಚಾರಗಳು ಭಾವಚಿತ್ರಕ್ಕೆ ಸಿಮೀತಗೊಂಡಿದ್ದು, ಚಿಂತನೆಯಲ್ಲಿ ಬರುತ್ತಿಲ್ಲ’ ಎಂದು ತಿಳಿಸಿದರು. </p>.<p>ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶರಣಪ್ಪ ಆಗಮದಿಹಾಳ, ಎಂ.ಗೋಪಿನಾಥನ, ಮಹಾಂತೇಶ ಅವಾರಿ, ಎಸ್.ಎಂ.ಪುರಾಣಿಕ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿಜಯಮಹಾಂತೇಶ ಗದ್ದನಕೇರಿ, ನಾಗರಾಜ ನಾಡಗೌಡ, ಶೇಖರಗೌಡ ಗೌಡರ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>