<p><strong>ಬಾಗಲಕೋಟೆ:</strong> ಇಲ್ಲಿನ ಕೂಡಲಸಂಗಮದ ಬಸವಧರ್ಮ ಪೀಠ ಮಾತೆ ಮಹಾದೇವಿ ಅವರ ಹೆಸರಿನಲ್ಲಿ ಈ ವರ್ಷ ಆರಂಭಿಸಿರುವ ‘ಬಸವಾತ್ಮಜೆ’ಪ್ರಶಸ್ತಿಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ₹51 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.</p>.<p>ಜನವರಿ 13ರಂದು ಕೂಡಲಸಂಗಮದಲ್ಲಿ ಶರಣಮೇಳ ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಸವಧರ್ಮಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಇದೇ ವೇಳೆ ಬೆಂಗಳೂರಿನ ಎನ್.ಪುಟ್ಟರುದ್ರ ಹಾಗೂ ಬೀದರ್ನ ಕಾಶಪ್ಪ ಧನ್ನೂರ ಅವರಿಗೆ ಶರಣ ಕಾಯಕ ರತ್ನ, ಹಿರಿಯ ವಕೀಲ ಜೆ.ಜೈರಾಜ್ ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದರು.</p>.<p>ಜನವರಿ 11ರಿಂದ 14ರವರೆಗೆ ಕೂಡಲಸಂಗಮದಲ್ಲಿ ಶರಣ ಮೇಳ ನಡೆಯಲಿದೆ.ಜನವರಿ 13ರಂದು ಬಸವಧರ್ಮ ಪೀಠದಲ್ಲಿಮಾತೆ ಮಹಾದೇವಿ ಅವರ ಮೂರ್ತಿಯನ್ನು ಹರಿದ್ವಾರದ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಅಧ್ಯಕ್ಷ ಬಾಬಾ ರಾಮದೇವ ಅನಾವರಣ ಮಾಡುವರು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಇಲ್ಲಿನ ಕೂಡಲಸಂಗಮದ ಬಸವಧರ್ಮ ಪೀಠ ಮಾತೆ ಮಹಾದೇವಿ ಅವರ ಹೆಸರಿನಲ್ಲಿ ಈ ವರ್ಷ ಆರಂಭಿಸಿರುವ ‘ಬಸವಾತ್ಮಜೆ’ಪ್ರಶಸ್ತಿಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ₹51 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.</p>.<p>ಜನವರಿ 13ರಂದು ಕೂಡಲಸಂಗಮದಲ್ಲಿ ಶರಣಮೇಳ ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಸವಧರ್ಮಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಇದೇ ವೇಳೆ ಬೆಂಗಳೂರಿನ ಎನ್.ಪುಟ್ಟರುದ್ರ ಹಾಗೂ ಬೀದರ್ನ ಕಾಶಪ್ಪ ಧನ್ನೂರ ಅವರಿಗೆ ಶರಣ ಕಾಯಕ ರತ್ನ, ಹಿರಿಯ ವಕೀಲ ಜೆ.ಜೈರಾಜ್ ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದರು.</p>.<p>ಜನವರಿ 11ರಿಂದ 14ರವರೆಗೆ ಕೂಡಲಸಂಗಮದಲ್ಲಿ ಶರಣ ಮೇಳ ನಡೆಯಲಿದೆ.ಜನವರಿ 13ರಂದು ಬಸವಧರ್ಮ ಪೀಠದಲ್ಲಿಮಾತೆ ಮಹಾದೇವಿ ಅವರ ಮೂರ್ತಿಯನ್ನು ಹರಿದ್ವಾರದ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಅಧ್ಯಕ್ಷ ಬಾಬಾ ರಾಮದೇವ ಅನಾವರಣ ಮಾಡುವರು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>