<p><strong>ಬಾಗಲಕೋಟೆ:</strong> ನಮಗೆ ಕೋವಿಡ್–19 ಗುಣಮುಖವಾಗಿದೆ. ನೆಗೆಟಿವ್ ಬಂದಿದೆ. ನಮ್ಮಿಂದ ಇನ್ನು ಯಾರಿಗೂ ತೊಂದರೆ ಇಲ್ಲ, ಎಲ್ಲರೂ ನಮ್ಮೊಂದಿಗೆ ಮಾತನಾಡುವಂತೆ ಓಣಿಯ ಎಲ್ಲರಿಗೂ ಹೇಳುವಂತೆ ಆಂಬುಲೆನ್ಸ್ ಅಣ್ಣನಿಗೆ (ಚಾಲಕ) ಹೇಳಿ..</p>.<p>ಇದು ಕೋವಿಡ್–19 ಸೋಂಕಿನಿಂದ ಗುಣಮುಖರಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾದ ಮಹಿಳೆ ಮನೆಗೆ ತೆರಳಲು ಆಂಬುಲೆನ್ಸ್ ಏರುವ ಮುನ್ನ ವೈದ್ಯರಿಗೆ ಮಾಡಿಕೊಂಡ ಮನವಿ.</p>.<p>ನಮಗೆ ಪಾಸಿಟಿವ್ ಆಗಿತ್ತು ಎಂದು ಮಗ್ಗುಲಿನ ಕಿರಾಣಿ ಅಂಗಡಿಯವರು ಸಾಮಗ್ರಿ ಸೇರಿದಂತೆ ನಮಗೆ ಏನೂ ಕೊಡೊಲ್ಲ. ನಮ್ಮ ಮನೆಯ ಮಾಲೀಕರಿಗೆ ಹೇಳಿ, ಓಣಿಯ ಎಲ್ಲರಿಗೂ ತಿಳಿಸಿ ಮನವರಿಕೆ ಮಾಡುವಂತೆ ಅವರು ಕೋರಿಕೊಂಡಾಗ ಆಕೆಯನ್ನು ಬೀಳ್ಕೊಡಲು ನಿಂತಿದ್ದ ವೈದ್ಯರು ಭಾವುಕರಾದರು. ಈ ವೇಳೆ ಡಾ.ಚಂದ್ರಕಾಂತ ಜವಳಿ ಮಹಿಳೆಯನ್ನು ಸಂತೈಸಿದರು. ’ಸ್ವಲ್ಪದಿನ ಅಕ್ಕಪಕ್ಕದವರಲ್ಲಿ ಆ ಭಾವನೆ ಇರುತ್ತದೆ. ನಂತರ ಹೋಗುತ್ತದೆ. ನೀವು ಎದೆಗುಂದಬೇಡಿ‘ ಎಂದು ಸಲಹೆ ಡಾ.ಜವಳಿ ಸಲಹೆ ನೀಡಿ ಕಳುಹಿಸಿಕೊಟ್ಟರು.</p>.<p>ನವನಗರದ ಸೆಕ್ಟರ್ ನಂ 10ರ ನಿವಾಸಿಯಾದ ಮಹಿಳೆ ಮಹಾರಾಷ್ಟ್ರದಿಂದ ಮರಳಿದ್ದರು. ನಂತರ ಕ್ವಾರೆಂಟೈನ್ಗೆ ಒಳಗಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದಾಗ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗುವಿಗೆ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆದ ನಂತರ ತಾಯಿ–ಮಗು ಇಬ್ಬರೂ ಗುಣಮುಖರಾಗಿದ್ದಾರೆ.</p>.<p>ಇಬ್ಬರ ಬಿಡುಗಡೆಯೊಂದಿಗೆ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನಮಗೆ ಕೋವಿಡ್–19 ಗುಣಮುಖವಾಗಿದೆ. ನೆಗೆಟಿವ್ ಬಂದಿದೆ. ನಮ್ಮಿಂದ ಇನ್ನು ಯಾರಿಗೂ ತೊಂದರೆ ಇಲ್ಲ, ಎಲ್ಲರೂ ನಮ್ಮೊಂದಿಗೆ ಮಾತನಾಡುವಂತೆ ಓಣಿಯ ಎಲ್ಲರಿಗೂ ಹೇಳುವಂತೆ ಆಂಬುಲೆನ್ಸ್ ಅಣ್ಣನಿಗೆ (ಚಾಲಕ) ಹೇಳಿ..</p>.<p>ಇದು ಕೋವಿಡ್–19 ಸೋಂಕಿನಿಂದ ಗುಣಮುಖರಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾದ ಮಹಿಳೆ ಮನೆಗೆ ತೆರಳಲು ಆಂಬುಲೆನ್ಸ್ ಏರುವ ಮುನ್ನ ವೈದ್ಯರಿಗೆ ಮಾಡಿಕೊಂಡ ಮನವಿ.</p>.<p>ನಮಗೆ ಪಾಸಿಟಿವ್ ಆಗಿತ್ತು ಎಂದು ಮಗ್ಗುಲಿನ ಕಿರಾಣಿ ಅಂಗಡಿಯವರು ಸಾಮಗ್ರಿ ಸೇರಿದಂತೆ ನಮಗೆ ಏನೂ ಕೊಡೊಲ್ಲ. ನಮ್ಮ ಮನೆಯ ಮಾಲೀಕರಿಗೆ ಹೇಳಿ, ಓಣಿಯ ಎಲ್ಲರಿಗೂ ತಿಳಿಸಿ ಮನವರಿಕೆ ಮಾಡುವಂತೆ ಅವರು ಕೋರಿಕೊಂಡಾಗ ಆಕೆಯನ್ನು ಬೀಳ್ಕೊಡಲು ನಿಂತಿದ್ದ ವೈದ್ಯರು ಭಾವುಕರಾದರು. ಈ ವೇಳೆ ಡಾ.ಚಂದ್ರಕಾಂತ ಜವಳಿ ಮಹಿಳೆಯನ್ನು ಸಂತೈಸಿದರು. ’ಸ್ವಲ್ಪದಿನ ಅಕ್ಕಪಕ್ಕದವರಲ್ಲಿ ಆ ಭಾವನೆ ಇರುತ್ತದೆ. ನಂತರ ಹೋಗುತ್ತದೆ. ನೀವು ಎದೆಗುಂದಬೇಡಿ‘ ಎಂದು ಸಲಹೆ ಡಾ.ಜವಳಿ ಸಲಹೆ ನೀಡಿ ಕಳುಹಿಸಿಕೊಟ್ಟರು.</p>.<p>ನವನಗರದ ಸೆಕ್ಟರ್ ನಂ 10ರ ನಿವಾಸಿಯಾದ ಮಹಿಳೆ ಮಹಾರಾಷ್ಟ್ರದಿಂದ ಮರಳಿದ್ದರು. ನಂತರ ಕ್ವಾರೆಂಟೈನ್ಗೆ ಒಳಗಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದಾಗ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗುವಿಗೆ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆದ ನಂತರ ತಾಯಿ–ಮಗು ಇಬ್ಬರೂ ಗುಣಮುಖರಾಗಿದ್ದಾರೆ.</p>.<p>ಇಬ್ಬರ ಬಿಡುಗಡೆಯೊಂದಿಗೆ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>