ಕೈಮಗ್ಗ ನೇಕಾರಿಕೆಯಲ್ಲಿ ಜಿಲ್ಲೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಇಲಾಖೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯ. ಲಕ್ಷ್ಮಣ ಅವರ ಪರಿಶ್ರಮ ಮಾದರಿ. ನೇಕಾರಿಕೆ ಉಳಿಯಬೇಕೆನ್ನುವ ಅವರ ಹಂಬಲ ಸಾರ್ಥಕವಾಗಿದೆ
ಬಿ.ಎ.ಪಿರಜಾದೆ ಉಪ ನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟೆ
ಅಂಗವೈಕಲ್ಯ ನನ್ನ ವೃತ್ತಿ ಬದುಕಿಗೆ ಅಡ್ಡಿಯಾಗಿಲ್ಲ. ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಕೈಮಗ್ಗ ನೇಕಾರಿಕೆ ಉಳಿಯಬೇಕು ಎನ್ನುವ ಹಂಬಲದೊಂದಿಗೆ ಸತತ 15 ದಿನಗಳ ಕಾಲ ವಿನೂತನ ಪರಿಕಲ್ಪನೆಯೊಂದಿಗೆ ಸೀರೆಯಲ್ಲಿ ಕೂಡಲಸಂಗಮ ಐಕ್ಯ ಮಂಟಪದ ಮಾದರಿ ರಚಿಸಿರುವೆ. ನನ್ನ ವೃತ್ತಿ ಬದುಕಿಗೆ ಪ್ರಶಸ್ತಿ ಖುಷಿ ತಂದಿದೆ.
ಲಕ್ಷ್ಮಣ ಕಕ್ಕಣ್ಣವರ ಪ್ರಶಸ್ತಿ ಪುರಸ್ಕೃತ
ನಮ್ಮ ಸಂಘದ ಸದಸ್ಯರೊಬ್ಬರು ಸತತ ಪ್ರಯತ್ನ ಮಾಡಿ ವಿನೂತನ ಶೈಲಿಯ ಕೈಮಗ್ಗ ಸೀರೆ ನೇಯುವ ಮೂಲಕ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದು ಸಂಘಕ್ಕೆ ಹೆಮ್ಮೆಯ ವಿಷಯ. ನೇಕಾರಿಕೆ ಮುಂದುವರಿಯಲು ಇದು ಪ್ರೇರಣೆಯಾಗಲಿ
ಪಾಂಡುರಂಗ ಕೋಟಿ ಕಾರ್ಯದರ್ಶಿ ಚಾಮುಂಡೇಶ್ವರಿ ರೇಷ್ಮೆ ಕೈಮಗ್ಗ ನೇಕಾರ ಸಹಕಾರ ಸಂಘ