<p><strong>ರಬಕವಿ ಬನಹಟ್ಟಿ:</strong> ಬನಹಟ್ಟಿಯಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಆರಂಭವಾಗಿ ಎಂಟು ವರ್ಷಗಳಾದರೂ ಯಶಸ್ವಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಪರಿಣಾಮ ಜನರಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.</p>.<p>ರಬಕವಿ–ಬನಹಟ್ಟಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು 2017–18ರಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಯಿತು. ಮೊದಲ ಹಂತವಾಗಿ ಬನಹಟ್ಟಿಯಲ್ಲಿ ₹16 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಯಿತು. ಯೋಜನೆ ಸಂಪೂರ್ಣ ವಿಫಲವಾಗಿರುವುದರಿಂದ ಮನೆಗಳಿಗೆ ನೀರು ಪೂರೈಸಲು ಅಳವಡಿಸಿದ್ದ ನಳಗಳು, ಅವುಗಳಿಗೆ ಅಳವಡಿಸಿದ್ದ ಮೀಟರ್ ಡಬ್ಬಿಗಳು ಹಾಳಾಗಿವೆ. ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ.</p>.<p>ಬನಹಟ್ಟಿಯಲ್ಲಿ ವಿಫಲವಾದ ಯೋಜನೆಯನ್ನು ರಬಕವಿಯಲ್ಲಿ ಜಾರಿಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ರಬಕವಿ ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಯೋಜನೆ ಆರಂಭಿಸಲಾಗಿದೆ.</p>.<p>ನಿರ್ಹಣೆಯಾಗದ ಶುದ್ಧ ಕುಡಿಯುವ ನೀರಿನ ಘಟಕಗಳು: ರಬಕವಿ ಬನಹಟ್ಟಿಯಲ್ಲಿ 16ಕ್ಕೂ ಹೆಚ್ಚು ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಹತ್ತಾರು ಖಾಸಗಿ ಘಟಕಗಳು ಇಲ್ಲಿವೆ.</p>.<p>ಬನಹಟ್ಟಿಯಲ್ಲಿ ನಾಲ್ಕು ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ. ಈ ಭಾಗದ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ನಗರದ ನೀಲಕಂಠೇಶ್ವರ ಮಠದ ಹತ್ತಿರದ ಅಂದಾಜು ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕವು ಒಂದು ಹನಿ ನೀರು ನೀಡದೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷದಿಂದ ಹಾಳಾಗಿದೆ. ಇಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ.</p>.<p>ರಬಕವಿಯಲ್ಲಿ ನಗರಸಭೆ ಒಂದೆರಡು ಘಟಕಗಳು ಮಾತ್ರ ಇರುವುದರಿಂದ ಇಲ್ಲಿಯ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ಖಾಸಗಿಯವರು ದುಪ್ಪಟ್ಟು ಬೆಲೆಗೆ ನೀರು ನೀಡುತ್ತಿದ್ದಾರೆ. ಇದು ಆರ್ಥಿಕವಾಗಿಯೂ ಹೊರೆಯಾಗಿದೆ. </p>.<p>ಮಹಾಲಿಂಗಪುರದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿದ್ದು, ಈಗ ಮಳೆಯಾಗುತ್ತಿದ್ದು, ಕೆರೆಗಳು ತುಂಬಿದ್ದು ಮತ್ತು ಘಟಪ್ರಭಾ ನದಿಯು ಹರಿಯುತ್ತಿರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ.</p>.<p>ಗ್ರಾಮೀಣ ಪ್ರದೇಶದ ಜಗದಾಳ, ನಾವಲಗಿ ಮತ್ತು ಯಲ್ಲಟ್ಟಿಗಳ ಗ್ರಾಮಗಳಲ್ಲಿ ಸಮಪರ್ಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಅವಶ್ಯಕತೆ ಇದೆ ಎನ್ನುತ್ತಾರೆ ನಾವಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕಾಂತಿ, ಯಲ್ಲಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಮೋಪಗಾರ.</p>.<p>ರಬಕವಿ ಬನಹಟ್ಟಿ ತಾಲ್ಲೂಕಿನ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಜಿಎಲ್ಬಿಸಿ ಕಾಲುವೆಯಿಂದಾಗಿ ಕೆರೆಗಳು ತುಂಬಿರುತ್ತವೆ. ಆದರೆ, ಆ ನೀರನ್ನು ಸರಿಯಾಗಿ ತಲುಪಿಸವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.</p>.<div><blockquote>ಖಾಸಗಿ ಘಟಕಗಳು ಪೂರೈಕೆ ಮಾಡುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಯುತ್ತಿಲ್ಲ. ಪರಿಶೀಲನೆ ಮಾಡಬೇಕು </blockquote><span class="attribution">-ಬಸವರಾಜ ಗುಡೋಡಗಿ, ಸದಸ್ಯ ನಗರಸಭೆ ರಬಕವಿ–ಬನಹಟ್ಟಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ಬನಹಟ್ಟಿಯಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಆರಂಭವಾಗಿ ಎಂಟು ವರ್ಷಗಳಾದರೂ ಯಶಸ್ವಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಪರಿಣಾಮ ಜನರಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.</p>.<p>ರಬಕವಿ–ಬನಹಟ್ಟಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು 2017–18ರಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಯಿತು. ಮೊದಲ ಹಂತವಾಗಿ ಬನಹಟ್ಟಿಯಲ್ಲಿ ₹16 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಯಿತು. ಯೋಜನೆ ಸಂಪೂರ್ಣ ವಿಫಲವಾಗಿರುವುದರಿಂದ ಮನೆಗಳಿಗೆ ನೀರು ಪೂರೈಸಲು ಅಳವಡಿಸಿದ್ದ ನಳಗಳು, ಅವುಗಳಿಗೆ ಅಳವಡಿಸಿದ್ದ ಮೀಟರ್ ಡಬ್ಬಿಗಳು ಹಾಳಾಗಿವೆ. ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ.</p>.<p>ಬನಹಟ್ಟಿಯಲ್ಲಿ ವಿಫಲವಾದ ಯೋಜನೆಯನ್ನು ರಬಕವಿಯಲ್ಲಿ ಜಾರಿಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ರಬಕವಿ ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಯೋಜನೆ ಆರಂಭಿಸಲಾಗಿದೆ.</p>.<p>ನಿರ್ಹಣೆಯಾಗದ ಶುದ್ಧ ಕುಡಿಯುವ ನೀರಿನ ಘಟಕಗಳು: ರಬಕವಿ ಬನಹಟ್ಟಿಯಲ್ಲಿ 16ಕ್ಕೂ ಹೆಚ್ಚು ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಹತ್ತಾರು ಖಾಸಗಿ ಘಟಕಗಳು ಇಲ್ಲಿವೆ.</p>.<p>ಬನಹಟ್ಟಿಯಲ್ಲಿ ನಾಲ್ಕು ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ. ಈ ಭಾಗದ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ನಗರದ ನೀಲಕಂಠೇಶ್ವರ ಮಠದ ಹತ್ತಿರದ ಅಂದಾಜು ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕವು ಒಂದು ಹನಿ ನೀರು ನೀಡದೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷದಿಂದ ಹಾಳಾಗಿದೆ. ಇಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ.</p>.<p>ರಬಕವಿಯಲ್ಲಿ ನಗರಸಭೆ ಒಂದೆರಡು ಘಟಕಗಳು ಮಾತ್ರ ಇರುವುದರಿಂದ ಇಲ್ಲಿಯ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ಖಾಸಗಿಯವರು ದುಪ್ಪಟ್ಟು ಬೆಲೆಗೆ ನೀರು ನೀಡುತ್ತಿದ್ದಾರೆ. ಇದು ಆರ್ಥಿಕವಾಗಿಯೂ ಹೊರೆಯಾಗಿದೆ. </p>.<p>ಮಹಾಲಿಂಗಪುರದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿದ್ದು, ಈಗ ಮಳೆಯಾಗುತ್ತಿದ್ದು, ಕೆರೆಗಳು ತುಂಬಿದ್ದು ಮತ್ತು ಘಟಪ್ರಭಾ ನದಿಯು ಹರಿಯುತ್ತಿರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ.</p>.<p>ಗ್ರಾಮೀಣ ಪ್ರದೇಶದ ಜಗದಾಳ, ನಾವಲಗಿ ಮತ್ತು ಯಲ್ಲಟ್ಟಿಗಳ ಗ್ರಾಮಗಳಲ್ಲಿ ಸಮಪರ್ಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಅವಶ್ಯಕತೆ ಇದೆ ಎನ್ನುತ್ತಾರೆ ನಾವಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕಾಂತಿ, ಯಲ್ಲಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಮೋಪಗಾರ.</p>.<p>ರಬಕವಿ ಬನಹಟ್ಟಿ ತಾಲ್ಲೂಕಿನ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಜಿಎಲ್ಬಿಸಿ ಕಾಲುವೆಯಿಂದಾಗಿ ಕೆರೆಗಳು ತುಂಬಿರುತ್ತವೆ. ಆದರೆ, ಆ ನೀರನ್ನು ಸರಿಯಾಗಿ ತಲುಪಿಸವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.</p>.<div><blockquote>ಖಾಸಗಿ ಘಟಕಗಳು ಪೂರೈಕೆ ಮಾಡುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಯುತ್ತಿಲ್ಲ. ಪರಿಶೀಲನೆ ಮಾಡಬೇಕು </blockquote><span class="attribution">-ಬಸವರಾಜ ಗುಡೋಡಗಿ, ಸದಸ್ಯ ನಗರಸಭೆ ರಬಕವಿ–ಬನಹಟ್ಟಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>