<p><strong>ತೇರದಾಳ</strong>: ರಾಸಾಯನಿಕ ಕೃಷಿ ತೊರೆದು 10 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತ ಆದಾಯ, ಆರೋಗ್ಯ ಸುಧಾರಣೆ ಜೊತೆಗೆ ಇತರ ರೈತರಿಗೆ ತಾಲ್ಲೂಕಿನ ಸಸಾಲಟ್ಟಿಯ ರೈತ ಪರಪ್ಪ ಮಾಲಗಾಂವಿ ಮಾದರಿಯಾಗಿದ್ದಾರೆ.</p>.<p>15 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಗೋವಿನ ಜೋಳ, ಮೂರು ಎಕರೆ ಅರಿಸಿಣ ಹಾಗೂ ಉಳಿದ ಜಮೀನಿನಲ್ಲಿ ಕಬ್ಬು ಜೊತೆಗೆ ಮನೆಗೆ ಬೇಕಾಗುವಷ್ಟು ಶೇಂಗಾ ತರಕಾರಿಗಳಾದ ಹಿರೇಕಾಯಿ, ಬದನೆಕಾಯಿ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು ಬೆಳೆಯುತ್ತಿದ್ದಾರೆ.</p>.<p>ಮಾವು, ಪೇರಲ, ಡ್ರ್ಯಾಗನ್, ಸಪೋಟದಂತಹ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದಾರೆ. ಪುತ್ರ ಪವನಕುಮಾರ, ಸಹೋದರ ಸಂಗಣ್ಣ ಹಾಗೂ ಅವರ ಮಕ್ಕಳಾದ ಮಲ್ಲು, ಬಸವರಾಜ ಕೂಡ ಇವರಿಗೆ ನೆರವಾಗಿದ್ದಾರೆ. ಆರಂಭದ ಎರಡು ವರ್ಷ ಶೇ50ರಷ್ಟು ರಾಸಾಯನಿಕ ಬಳಸಿ ಕ್ರಮೇಣ ಕೈಬಿಟ್ಟಿದ್ದಾರೆ.</p>.<p>ವ್ಯವಸಾಯಕ್ಕೆ ಪೂರಕವಾಗುವಂತೆ ಗೀರ್ ತಳಿಯ ಐದು ಹಸು, ಒಂದು ಕಿಲಾರಿ ಹಸು, ಮೂರು ಎಮ್ಮೆ ಹಾಗೂ ಏಳು ಮೇಕೆಗಳನ್ನು ಸಾಕಿದ್ದಾರೆ. ಇವುಗಳ ಸಗಣಿ, ಹಿಕ್ಕೆ ಹಾಗೂ ಗೋಮೂತ್ರ ಬಳಸಿ ಡಿ ಕಾಂಪೋಸ್ಟ್, ಗೋಕೃಪಾಮೃತ, ಎರೆಗೊಬ್ಬರ, ಎರೆಜಲ ತಯಾರಿಸಿ ಬಳಸುತ್ತಾರೆ.</p>.<p>ಹನಿ ನೀರಾವರಿ ಮೂಲಕ ಬೆಳೆಗಳಿಗೆ ಬಳಸುತ್ತಿದ್ದಾರೆ. ಇದರಿಂದ ಕೂಲಿಯಾಳುಗಳು ಬೇಕಾಗುವುದಿಲ್ಲ, ಸಮಯದ ಉಳಿತಾಯದ ಜೊತೆ ಉತ್ತಮ ಇಳುವರಿಗೆ ಅನುಕೂಲವಾಗುತ್ತದೆ. ಬಾವಿ, ಕೊಳವೆ ಬಾವಿಯ ಜತೆಗೆ ಕೃಷಿ ಹೊಂಡದ ನೀರನ್ನೂ ಬಳಸುತ್ತಾರೆ.</p>.<p>ಗೋವಿನ ಜೋಳಕ್ಕೆ ಗರಿ ಮೂಡಿದ ಮೇಲೆ ಕೀಟದ ಬಾಧೆ ಸಾಮಾನ್ಯವಾಗಿದ್ದು, ರಾಸಾಯನಿಕ ಸಿಂಪರಣೆಯೊಂದೇ ಪರಿಹಾರ ಎಂಬುದು ಹಲವರ ಭಾವನೆ. ಸಾವಯವದ ದ್ರವ ಸಿಂಪರಣೆಯಿಂದ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ಪರಪ್ಪ ಮಾಲಗಾಂವಿ.</p>.<p>ಸಾವಯವ ಕೃಷಿಯಿಂದ ಭೂಮಿ ಫಲವತ್ತತೆ ಉಳಿಯುವುದಲ್ಲದೇ, ಖರ್ಚೂ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರ ಬಳಸಿ ಕಬ್ಬು ಬೆಳೆಯಲು ₹15ರಿಂದ 20 ಸಾವಿರ, ಅರಿಸಿಣಕ್ಕೆ ₹1 ಲಕ್ಷ, ಹಾಗೂ ಗೋವಿನಜೋಳಕ್ಕೆ ₹5-6 ಸಾವಿರ ಖರ್ಚಾಗುತ್ತದೆ.</p>.<p> ಸಾವಯವ ಪದ್ಧತಿಯಲ್ಲಿ ಬೆಳೆದರೆ ಕಬ್ಬಿಗೆ ₹5 ಸಾವಿರ, ಅರಿಸಿಣಕ್ಕೆ ₹8-10 ಸಾವಿರ, ಗೋವಿನ ಜೋಳಕ್ಕೆ ₹1 ಸಾವಿರ ಖರ್ಚಾಗುತ್ತದೆ ಎಂಬ ಲೆಕ್ಕಾಚಾರ ಇವರದು.</p>.<p>ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಿಗೆ ಪ್ರತ್ಯೇಕ ಬೆಲೆ ನಿಗದಿಯಾಗಬೇಕು ಎಂಬುದು ಇವರ ಆಗ್ರಹ. ಕೃಷಿ ಇಲಾಖೆ 2022-23ನೇ ಸಾಲಿನ ‘ಆತ್ಮ ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ. </p>.<blockquote>ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತ ಸಮಯ ಉಳಿತಾಯದ ಜೊತೆ ಇಳುವರಿಗೆ ಅನುಕೂಲ ಬಾವಿ, ಕೊಳವೆ ಬಾವಿ, ಕೃಷಿಹೊಂಡದ ನೀರು ಬಳಕೆ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ</strong>: ರಾಸಾಯನಿಕ ಕೃಷಿ ತೊರೆದು 10 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತ ಆದಾಯ, ಆರೋಗ್ಯ ಸುಧಾರಣೆ ಜೊತೆಗೆ ಇತರ ರೈತರಿಗೆ ತಾಲ್ಲೂಕಿನ ಸಸಾಲಟ್ಟಿಯ ರೈತ ಪರಪ್ಪ ಮಾಲಗಾಂವಿ ಮಾದರಿಯಾಗಿದ್ದಾರೆ.</p>.<p>15 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಗೋವಿನ ಜೋಳ, ಮೂರು ಎಕರೆ ಅರಿಸಿಣ ಹಾಗೂ ಉಳಿದ ಜಮೀನಿನಲ್ಲಿ ಕಬ್ಬು ಜೊತೆಗೆ ಮನೆಗೆ ಬೇಕಾಗುವಷ್ಟು ಶೇಂಗಾ ತರಕಾರಿಗಳಾದ ಹಿರೇಕಾಯಿ, ಬದನೆಕಾಯಿ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು ಬೆಳೆಯುತ್ತಿದ್ದಾರೆ.</p>.<p>ಮಾವು, ಪೇರಲ, ಡ್ರ್ಯಾಗನ್, ಸಪೋಟದಂತಹ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದಾರೆ. ಪುತ್ರ ಪವನಕುಮಾರ, ಸಹೋದರ ಸಂಗಣ್ಣ ಹಾಗೂ ಅವರ ಮಕ್ಕಳಾದ ಮಲ್ಲು, ಬಸವರಾಜ ಕೂಡ ಇವರಿಗೆ ನೆರವಾಗಿದ್ದಾರೆ. ಆರಂಭದ ಎರಡು ವರ್ಷ ಶೇ50ರಷ್ಟು ರಾಸಾಯನಿಕ ಬಳಸಿ ಕ್ರಮೇಣ ಕೈಬಿಟ್ಟಿದ್ದಾರೆ.</p>.<p>ವ್ಯವಸಾಯಕ್ಕೆ ಪೂರಕವಾಗುವಂತೆ ಗೀರ್ ತಳಿಯ ಐದು ಹಸು, ಒಂದು ಕಿಲಾರಿ ಹಸು, ಮೂರು ಎಮ್ಮೆ ಹಾಗೂ ಏಳು ಮೇಕೆಗಳನ್ನು ಸಾಕಿದ್ದಾರೆ. ಇವುಗಳ ಸಗಣಿ, ಹಿಕ್ಕೆ ಹಾಗೂ ಗೋಮೂತ್ರ ಬಳಸಿ ಡಿ ಕಾಂಪೋಸ್ಟ್, ಗೋಕೃಪಾಮೃತ, ಎರೆಗೊಬ್ಬರ, ಎರೆಜಲ ತಯಾರಿಸಿ ಬಳಸುತ್ತಾರೆ.</p>.<p>ಹನಿ ನೀರಾವರಿ ಮೂಲಕ ಬೆಳೆಗಳಿಗೆ ಬಳಸುತ್ತಿದ್ದಾರೆ. ಇದರಿಂದ ಕೂಲಿಯಾಳುಗಳು ಬೇಕಾಗುವುದಿಲ್ಲ, ಸಮಯದ ಉಳಿತಾಯದ ಜೊತೆ ಉತ್ತಮ ಇಳುವರಿಗೆ ಅನುಕೂಲವಾಗುತ್ತದೆ. ಬಾವಿ, ಕೊಳವೆ ಬಾವಿಯ ಜತೆಗೆ ಕೃಷಿ ಹೊಂಡದ ನೀರನ್ನೂ ಬಳಸುತ್ತಾರೆ.</p>.<p>ಗೋವಿನ ಜೋಳಕ್ಕೆ ಗರಿ ಮೂಡಿದ ಮೇಲೆ ಕೀಟದ ಬಾಧೆ ಸಾಮಾನ್ಯವಾಗಿದ್ದು, ರಾಸಾಯನಿಕ ಸಿಂಪರಣೆಯೊಂದೇ ಪರಿಹಾರ ಎಂಬುದು ಹಲವರ ಭಾವನೆ. ಸಾವಯವದ ದ್ರವ ಸಿಂಪರಣೆಯಿಂದ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ಪರಪ್ಪ ಮಾಲಗಾಂವಿ.</p>.<p>ಸಾವಯವ ಕೃಷಿಯಿಂದ ಭೂಮಿ ಫಲವತ್ತತೆ ಉಳಿಯುವುದಲ್ಲದೇ, ಖರ್ಚೂ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರ ಬಳಸಿ ಕಬ್ಬು ಬೆಳೆಯಲು ₹15ರಿಂದ 20 ಸಾವಿರ, ಅರಿಸಿಣಕ್ಕೆ ₹1 ಲಕ್ಷ, ಹಾಗೂ ಗೋವಿನಜೋಳಕ್ಕೆ ₹5-6 ಸಾವಿರ ಖರ್ಚಾಗುತ್ತದೆ.</p>.<p> ಸಾವಯವ ಪದ್ಧತಿಯಲ್ಲಿ ಬೆಳೆದರೆ ಕಬ್ಬಿಗೆ ₹5 ಸಾವಿರ, ಅರಿಸಿಣಕ್ಕೆ ₹8-10 ಸಾವಿರ, ಗೋವಿನ ಜೋಳಕ್ಕೆ ₹1 ಸಾವಿರ ಖರ್ಚಾಗುತ್ತದೆ ಎಂಬ ಲೆಕ್ಕಾಚಾರ ಇವರದು.</p>.<p>ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಿಗೆ ಪ್ರತ್ಯೇಕ ಬೆಲೆ ನಿಗದಿಯಾಗಬೇಕು ಎಂಬುದು ಇವರ ಆಗ್ರಹ. ಕೃಷಿ ಇಲಾಖೆ 2022-23ನೇ ಸಾಲಿನ ‘ಆತ್ಮ ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ. </p>.<blockquote>ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತ ಸಮಯ ಉಳಿತಾಯದ ಜೊತೆ ಇಳುವರಿಗೆ ಅನುಕೂಲ ಬಾವಿ, ಕೊಳವೆ ಬಾವಿ, ಕೃಷಿಹೊಂಡದ ನೀರು ಬಳಕೆ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>