<p><strong>ರಬಕವಿ ಬನಹಟ್ಟಿ:</strong> ಭಾರತೀಯ ಗುರು ಮತ್ತು ಶಿಷ್ಯ ಪರಂಪರೆ ಶ್ರೇಷ್ಠವಾದುದು, ಜಗತ್ತಿನ ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಗಳಿಗೆ ಗುರುವೇ ಮೂಲ ಶಕ್ತಿಯಾಗಿರುತ್ತಾರೆ. ಗುರು ಶಕ್ತಿಯ ಮೂಲವಾಗಿರುತ್ತಾರೆ. ಆದರೆ ಕೆಲವರಿಗೆ ಅರಿವೇ ಗುರು ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ 2006-09ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶನಿವಾರ ಪದವಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಿವೃತ್ತ ಪ್ರಾಚಾರ್ಯ ಎಸ್.ಎಸ್. ಹೂಲಿ ಮಾತನಾಡಿ, ವಿದ್ಯಾರ್ಥಿ ಸಮುದಾಯಕ್ಕೆ ಗುರು ಯಾವಾಗಲೂ ಒಳ್ಳೆಯದನ್ನೆ ಬಯಸುತ್ತಾನೆ. ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.</p>.<p>ವಿದ್ಯಾರ್ಥಿಗಳಾದ ರಾಜು ಗೊಂದಕರ್, ಶಿವಾನಂದ ಹಳ್ಯಾಳ, ಸೀಮಾ ಬರಗಡಗಿ, ಸಂಗೀತಾ ಇಂಗಳೆ, ವಿನಾಯಕ ಜತ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಬಿ.ಮಟೋಳ್ಳಿ, ಬಿ.ಆರ್.ಬಿರಾದಾರ, ಎಂ.ಪಿ.ತಾನಪ್ಪಗೋಳ, ವೈ.ಡಿ.ಬಾಗಿ, ಗೋಕುಲ ಕಾಬರಾ, ರಮೇಶ ಮಾಗುರಿ, ಗೀತಾ ಸಜ್ಜನ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಾಚಾರ್ಯ ಜಿ.ಅರ್.ಜುನ್ನಾಯ್ಕರ್, ದಯಾನಂದ ಸವದತ್ತಿ, ನಯೀಮ ತಾಂಬೋಳಿ, ರಾಕು ಖಡಕಬಾವಿ, ಪ್ರವೀಣ ಅಬಕಾರ, ಭಕ್ತಿ ಸೋಮಯ್ಯ, ಆನಂದ ಪಟ್ಟಣ, ವಿಶ್ವನಾಥ ಬಂದಿ, ಬಸವರಾಜ ಹೊಸಮನಿ, ಶೀಲಾ ಸಾಬೋಜಿ, ಪ್ರಮಿಳಾ ಮಗದುಮ್, ಸುಪ್ರಿಯಾ ಸವದತ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ಭಾರತೀಯ ಗುರು ಮತ್ತು ಶಿಷ್ಯ ಪರಂಪರೆ ಶ್ರೇಷ್ಠವಾದುದು, ಜಗತ್ತಿನ ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಗಳಿಗೆ ಗುರುವೇ ಮೂಲ ಶಕ್ತಿಯಾಗಿರುತ್ತಾರೆ. ಗುರು ಶಕ್ತಿಯ ಮೂಲವಾಗಿರುತ್ತಾರೆ. ಆದರೆ ಕೆಲವರಿಗೆ ಅರಿವೇ ಗುರು ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ 2006-09ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶನಿವಾರ ಪದವಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಿವೃತ್ತ ಪ್ರಾಚಾರ್ಯ ಎಸ್.ಎಸ್. ಹೂಲಿ ಮಾತನಾಡಿ, ವಿದ್ಯಾರ್ಥಿ ಸಮುದಾಯಕ್ಕೆ ಗುರು ಯಾವಾಗಲೂ ಒಳ್ಳೆಯದನ್ನೆ ಬಯಸುತ್ತಾನೆ. ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.</p>.<p>ವಿದ್ಯಾರ್ಥಿಗಳಾದ ರಾಜು ಗೊಂದಕರ್, ಶಿವಾನಂದ ಹಳ್ಯಾಳ, ಸೀಮಾ ಬರಗಡಗಿ, ಸಂಗೀತಾ ಇಂಗಳೆ, ವಿನಾಯಕ ಜತ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಬಿ.ಮಟೋಳ್ಳಿ, ಬಿ.ಆರ್.ಬಿರಾದಾರ, ಎಂ.ಪಿ.ತಾನಪ್ಪಗೋಳ, ವೈ.ಡಿ.ಬಾಗಿ, ಗೋಕುಲ ಕಾಬರಾ, ರಮೇಶ ಮಾಗುರಿ, ಗೀತಾ ಸಜ್ಜನ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಾಚಾರ್ಯ ಜಿ.ಅರ್.ಜುನ್ನಾಯ್ಕರ್, ದಯಾನಂದ ಸವದತ್ತಿ, ನಯೀಮ ತಾಂಬೋಳಿ, ರಾಕು ಖಡಕಬಾವಿ, ಪ್ರವೀಣ ಅಬಕಾರ, ಭಕ್ತಿ ಸೋಮಯ್ಯ, ಆನಂದ ಪಟ್ಟಣ, ವಿಶ್ವನಾಥ ಬಂದಿ, ಬಸವರಾಜ ಹೊಸಮನಿ, ಶೀಲಾ ಸಾಬೋಜಿ, ಪ್ರಮಿಳಾ ಮಗದುಮ್, ಸುಪ್ರಿಯಾ ಸವದತ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>