ಹನಿ ಮಳೆ ಕಾಣದೇ ನೆತ್ತಿ ಸುಡುಲುವ ಬಿಸಿಲಿಗೆ ಬಿರುಕು ಬಿಟ್ಟು ಬೆಳೆಗಳು ಒಣಗುವ ಬರದ ಛಾಯೆ ಕಂಡವರಿಗೆ ಈಗ ಕೆಸರು ತುಂಬಿ, ಪಾಚಿಗಟ್ಟಿದ ನೆಲದಲ್ಲಿ ಕೊಳೆತು ಹೋಗುತ್ತಿರುವ ಬೆಳೆಗಳ ಕಂಡು ತತ್ತರಿಸಿದ್ದಾರೆ.ಜಮೀನುಗಳು ಒಳಗೆ ಕಾಲಿಡಲು ಸಾಧ್ಯವಾಗದ ಕೆಸರಿನ ಮಡ್ಡಿಗಳಾಗಿ ಬದಲಾಗಿವೆ. ಕೆಲವು ಕಡೆ ಬೆಳೆಗಳು ನೆಲಕಚ್ಚಿದ್ದು, ಹೊಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರು ನೀರು ನಿಂತು ಕೆರೆಗಳಂತೆ ಭಾಸವಾಗುತ್ತಿವೆ.